ರಾಜಕೀಯ
ಮೋದಿ ಅಮೆರಿಕದ ಮುಂದೆ ತೆಪ್ಪಗೆ ತಲೆಬಾಗುತ್ತಿದ್ದಾರೆ
- ಮಹಾನ್ ರಾಷ್ಟ್ರೀಯವಾದಿ ಎಂದು ಬಿಂಬಿಸಲಾಗಿರುವ ನರೇಂದ್ರ ಮೋದಿ, ಒಂದಾದ ಮೇಲೆ ಒಂದರಂತೆ ಅಮೆರಿಕದ ಆದೇಶಗಳ ಎದುರು ಮಂಡಿಯೂರುತ್ತಿದ್ದಾರೆ.ಮೋದಿ ಸರಕಾರ ತನ್ನನ್ನು ಒಂದು ಅಡಿಯಾಳು ಮಿತ್ರನಾಗಿ ಕಟ್ಟಿಸಿಕೊಂಡಿರುವುದರಿಂದಾಗಿಯೇ ಅಮೆರಿಕವನ್ನು ಪ್ರತಿರೋಧಿಸಿ ನಿಲ್ಲಲು ಅಸಮರ್ಥವಾಗಿರುವುದು. ಟ್ರಂಪ್ ಆಡಳಿತದ ಭಂಡ ಆಗ್ರಹಗಳಿಗೆ ಮೋದಿ ಸರಕಾರದ ಹಲ್ಲುಗಿಂಜುವ ಇದುವರೆಗಿನ ಧೋರಣೆಯನ್ನು ಗಮನಿಸಿದರೆ ಅದು ಅಮೆರಿಕದ ಕಿರಿಯ ಮಿತ್ರನ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂಬುದು ಗೋಚರಿಸುತ್ತದೆ.ಭಾರತದ ರಾಷ್ಟ್ರೀಯ ಹಿತಗಳನ್ನು ಸಾಮ್ರಾಜ್ಯಶಾಹಿ ಸೂಪರ್ ಪವರ್ನ ಹಿತಾಸಕ್ತಿಗಳಿಗೆ ಒತ್ತೆಯಿಡಲಾಗುವುದು.
ಮೋದಿ ಸರಕಾರದ ಎರಡನೇ ಅವಧಿಯು ಅಮೆರಿಕದ ಕಿರಿಯ ಪಾಲುದಾರನಾಗಿ ಭಾರತದ ಪಾತ್ರವನ್ನು ಇನ್ನಷ್ಟು
ಗಟ್ಟಿಗೊಳಿಸುವಂತದ್ದಾಗುತ್ತದೆ ಎನ್ನುವುದಕ್ಕೆ ಆಗಲೇ ಎಲ್ಲ ಸುಳಿವುಗಳು ಸಿಕ್ಕಿವೆ. ಪರಿಣಾಮವಾಗಿ ಇದು ನವ-ಉದಾರವಾದಿ ಅಜೆಂಡಾದ ಅನುಷ್ಠಾನವನ್ನು ಇನ್ನಷ್ಟು ತ್ವರಿತಗೊಳಿಸುತ್ತದೆ, ಮತ್ತು ಅದರಿಂದಾಗಿ ಜನತೆಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
2014-2019ರ ಅವಧಿಯಲ್ಲಿ ಮೋದಿ ಸರಕಾರವು ಭಾರತವನ್ನು ಅಮೆರಿಕದೊಂದಿಗೆ ವ್ಯೂಹಾತ್ಮಕವಾಗಿಯೂ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಮತ್ತಷ್ಟು ಜೋಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ಮಿಲಿಟರಿ ಸಾಗಾಣಿಕೆ ಬೆಂಬಲ ಮತ್ತು ಸೇನಾ ಸಂಪರ್ಕ ಸಾಧನಗಳನ್ನು ಸಮಗ್ರೀಕರಿಸುವ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತು ಅಮೆರಿಕ ಒಳಗೊಂಡ ಚತುಷ್ಪಕ್ಷೀಯ ಮೈತ್ರಿಕೂಟ ಮಾಡಿಕೊಳ್ಳುವ ಬಗ್ಗೆ ಅಮೆರಿಕ ಮಾಡಿದ್ದ ಪ್ರಸ್ತಾವನೆಗೆ ಭಾರತವೂ ಕೈಜೋಡಿಸಿತ್ತು.
ಈ ವ್ಯೂಹಾತ್ಮಕ ಅಪ್ಪುಗೆಯು ಏಷ್ಯಾ-ಶಾಂತಸಾಗರ ವಲಯದಲ್ಲಿ ಅಮೆರಿಕದ ಭೌಗೋಳಿಕ-ರಾಜಕೀಯ ಹಿತಗಳಿಗೆ ಸಂಪೂರ್ಣವಾಗಿ ಅನುಕೂಲಕರವಾದ ಒಂದು ವಿದೇಶಾಂಗ ನೀತಿಯನ್ನು ಭಾರತವು ಅನುಸರಿಸುವಂತೆ ಮಾಡಿತು.
ಈ ಹಿಂದೆ ರಷ್ಯಾ ಭಾರತಕ್ಕೆ ಶಸ್ತ್ರಾಸ್ತ್ರಗಳ ಮತ್ತು ಸಾಧನಗಳ ಪ್ರಮುಖ ಪೂರೈಕೆದಾರನಾಗಿತ್ತು. ಈಗ ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾವನ್ನು ಬಿಟ್ಟು ಅಮೆರಿಕದಿಂದ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆಗೆ ಭಾರತ ವೇಗವನ್ನು ನೀಡಿತು. ಆಂತರಿಕ ನೀತಿಗಳ ಬಗ್ಗೆ ಹೇಳುವುದಾದರೆ, ಮೋದಿ ಸರಕಾರವು ಅಮೆರಿಕದ ಬಹುರಾಷ್ಟ್ರೀಯ ಕಾರ್ಪೊರೇಟ್ಗಳು ಮತ್ತು ಹಣಕಾಸು ಹಿತಗಳಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿತು.
ಡೊನಾಲ್ಡ್ ಟ್ರಂಪ್ 2018ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಟ್ರಂಪ್ರ ಅಮೆರಿಕ ಮೊದಲು ಹಾಗೂ ಸ್ವರಕ್ಷಣಾತ್ಮಕ ನೀತಿಗಳಿಗೆ ಅನುಗುಣವಾಗಿ ಭಾರತದ ಮೇಲೆ ಅನೇಕ ಒತ್ತಡಗಳನ್ನು ಹೇರಲಾಯಿತು.
250 ಬಿಲಿಯ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಸುಂಕವನ್ನು ಹೆಚ್ಚಿಸುವ ಮೂಲಕ ಹಾಗೂ ಇನ್ನೂ 325 ಬಿಲಿಯ ಡಾಲರ್ ವಸ್ತುಗಳಿಗೆ ಹಾಗೇ ಮಾಡುವುದಾಗಿ ಬೆದರಿಸುವ ಮೂಲಕ ಚೀನಾದ ವಿರುದ್ಧ ಟ್ರಂಪ್ ವಾಣಿಜ್ಯ ಸಮರವನ್ನು ಸಾರಿದರು. ಚೀನಾದ ಮಾರುಕಟ್ಟೆಯಲ್ಲಿ ಹೆಚ್ಚು ಅವಕಾಶಗಳನ್ನು ನೀಡಬೇಕು ಹಾಗೂ ಅಮೆರಿಕದ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ರಕ್ಷಣೆಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಟ್ರಂಪ್ ಭಾರತವನ್ನು ಕೂಡ ಬಿಡಲಿಲ್ಲ. ಭಾರತದೊಂದಿಗಿನ ವಾಣಿಜ್ಯ ಕೊರತೆಯನ್ನು ತಿರುಗು-ಮುರುಗು ಮಾಡಬೇಕು ಹಾಗೂ ಭಾರತವು ಸುಂಕಗಳನ್ನು ಇಳಿಸಬೇಕು ಮತ್ತು ಅಮೆರಿಕದ ವಸ್ತುಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ವಿಷಯದಲ್ಲಿ ಮೊದಲ ಹೆಜ್ಜೆಯಾಗಿ ಅವರು ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದ ಭಾರತದ ಅಲ್ಯುಮಿನಿಯಮ್ ಮತ್ತು ಉಕ್ಕಿನ ಮೇಲಿನ ಸುಂಕಗಳನ್ನು ಹೆಚ್ಚಿಸಿದರು. ಅದರ ಬೆನ್ನಲ್ಲೇ ಸುಂಕಗಳಿಲ್ಲದೆ ಭಾರತವು ಅನೇಕ ವಸ್ತುಗಳನ್ನು ರಫ್ತು ಮಾಡಲು ಅವಕಾಶ ನೀಡುವ ಪ್ರಾಶಸ್ತ್ಯದ ವ್ಯಾಪಾರ ಎಂದು ಪರಿಗಣಿಸುವುದನ್ನು ಕೊನೆಗೊಳಿಸಲು ಅವರು ನಿರ್ಧರಿಸಿದರು. ಈ ವ್ಯವಸ್ಥೆಯನ್ನು ತೆಗೆದು ಹಾಕಿದ್ದರಿಂದ ಭಾರತದಿಂದ ರಫ್ತಾಗುವ 1900 ವಸ್ತುಗಳಿಗೆ ಈಗ ಕಸ್ಟಮ್ಸ್ ಸುಂಕ ತೆರಬೇಕಾಗಿದೆ.
ಮಾರ್ಚ್ ಆರಂಭದಲ್ಲಿ ಅಮೆರಿಕ ಈ ಪ್ರಕಟಣೆಯನ್ನು ಮಾಡಿತು ಹಾಗೂ 60 ದಿನಗಳ ನಂತರ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದಾಗ್ಯೂ ಈ ಪ್ರತಿಕೂಲ ಕ್ರಮವನ್ನು ನಿಲ್ಲಿಸಲು ಮೋದಿ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಅಥವಾ ಪ್ರತಿ-ಕ್ರಮಗಳಿಗೂ ಮುಂದಾಗಲಿಲ್ಲ. ಸುಂಕ ಹೇರಿದ್ದನ್ನು ಚೀನಾ ಯಾವ ರೀತಿಯಲ್ಲಿ ನಿರ್ವಹಿಸಿತು ಎನ್ನುವುದಕ್ಕೆ ಪೂರ್ತಿ ವ್ಯತಿರಿಕ್ತವಾದ ನಡೆ ಭಾರತದ್ದಾಗಿದೆ. ಚೀನಾವನ್ನು ಪ್ರವೇಶಿಸುವ ಅಮೆರಿಕದ ವಸ್ತುಗಳ ಮೇಲೆ ಸುಂಕವನ್ನು ಹೇರುವ ಮೂಲಕ ಚೀನಾ ತಿರುಗೇಟು ನೀಡಿತು.
ಮೋದಿ ಸರಕಾರ ತನ್ನನ್ನು ಒಂದು ಅಡಿಯಾಳು ವ್ಯೂಹಾತ್ಮಕ ಮಿತ್ರನಾಗಿ ಕಟ್ಟಿಸಿಕೊಂಡಿರುವುದರಿಂದಾಗಿಯೇ ಅಮೆರಿಕವನ್ನು ಪ್ರತಿರೋಧಿಸಿ ನಿಲ್ಲಲು ಅಸಮರ್ಥವಾಗಿರುವುದು.
ಮಹಾನ್ ರಾಷ್ಟ್ರೀಯವಾದಿ ಎಂದು ಬಿಂಬಿಸಲಾಗಿರುವ ನರೇಂದ್ರ ಮೋದಿ, ಒಂದಾದ ಮೇಲೆ ಒಂದರಂತೆ ಅಮೆರಿಕದ ಆದೇಶಗಳಿಗೆ ಮಂಡಿಯೂರುತ್ತಿದ್ದಾರೆ. ಇರಾನ್ನಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಅಮೆರಿಕ ಆದೇಶಿಸಿತು. ಅದನ್ನು ಶಿರಸಾವಹಿಸಿ ಪಾಲಿಸಲಾಯಿತು. ಇದರಿಂದಾಗಿ ಭಾರತಕ್ಕೆ ತುಂಬಾ ನಷ್ಟವಾಗಲಿದೆ. ಯಾಕೆಂದರೆ ಅಂತಾರ್ರಾಷ್ಟ್ರೀಯ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಇರಾನ್ನಿಂದ ಎಣ್ಣೆಯನ್ನು ತರಿಸಿಕೊಳ್ಳಲಾಗುತ್ತಿತ್ತು. ಅದಾದ ನಂತರ, ವೆನಿಜುವೆಲಾ ವಿರುದ್ಧದ ಆರ್ಥಿಕ ಸಮರದ ಭಾಗವಾಗಿ ಅಮೆರಿಕವು ವೆನಿಜುವೆಲಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತಕ್ಕೆ ಒತ್ತಾಯಿಸಿತು. ಮೋದಿ ಸರಕಾರ ಇದನ್ನು ಕೂಡ ತಡ ಮಾಡದೆ ಪಾಲಿಸಿತು.
ರಷ್ಯಾದ ಟ್ರೈಯಂಫ್ ಎಸ್-400 ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ದಿಗ್ಬಂಧನಗಳನ್ನು ಹೇರದಂತೆ ಅಮೆರಿಕಕ್ಕೆ ಭಾರತ ಅಂಗಲಾಚುತ್ತಿದೆ. ಆದರೆ ಭಾರತದ ವಿರುದ್ಧ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕುತ್ತಲೇ ಇದೆ. ಪರಿಹಾರವಾಗಿ ಅಮೆರಿಕದಿಂದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.
ಲಾಕ್ಹೀಡ್ ನಿರ್ಮಿತ ಎಫ್-21 ಯುದ್ಧ ವಿಮಾನಗಳನ್ನು ಖರೀದಿಸುವಂತೆ ಭಾರತದ ಮೇಲೆ ಅಪಾರ ಒತ್ತಡ ಹೇರಲಾಗುತ್ತಿದೆ. 110 ಯುದ್ಧ ವಿಮಾನಗಳ ಖರೀದಿಗೆ (ರಫೇಲ್ ಯುದ್ಧ ವಿಮಾನ ಖರೀದಿಯನ್ನು 36ಕ್ಕೆ ಇಳಿಸಿದ ನಂತರ) ಭಾರತದ ಒಂದು ಟೆಂಡರ್ ಪ್ರಕಟಿಸಿದೆ. ಬಿಲಿಯಗಟ್ಟಲೆ ಡಾಲರ್ ಮೌಲ್ಯದ ಈ ಗುತ್ತಿಗೆಯನ್ನು ಪಡೆಯಲು ಅಮೆರಿಕ ಭಾರತವನ್ನು ಪೀಡಿಸುತ್ತಿದೆ.
ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೊ ಜೂನ್ ಮೂರನೇ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಅಧಿಕಾರಕ್ಕೆ ಮರಳಿದ ನಂತರದ ಮೊದಲ ಭೇಟಿಯಿದು. ವಾಣಿಜ್ಯ ವಿಚಾರದಲ್ಲಿ ಕಠಿಣ ಮಾತು, ರಷ್ಯಾದ ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ಪರಿಹಾರವಾಗಿ ಅಮೆರಿಕದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವಂತೆ ಒತ್ತಾಯಿಸುವುದು, ಚೀನಾದ ಬೃಹತ್ ಕಂಪೆನಿಯಾದ ಹುವೈ ಭಾರತದಲ್ಲಿ ನಡೆಯುವ 5ಜಿ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಷೇಧಿಸುವುದು- ಇವೆಲ್ಲ ಪಾಂಪಿಯೊ ಭೇಟಿ ವೇಳೆ ಇರಲಿರುವ ಕಾರ್ಯಸೂಚಿಯಾಗಿದೆ.
ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಇದೀಗ ಮೋದಿ ಸರಕಾರದ ಹೊಸ ವಿದೇಶ ಸಚಿವರು. ಒಬ್ಬ ವೃತ್ತಿನಿರತ ರಾಜತಾಂತ್ರಿಕನನ್ನು ನೇರವಾಗಿ ಸಚಿವ ಸಂಪುಟಕ್ಕೆ ಬಡ್ತಿ ನೀಡಿದ್ದು ಇದೇ ಮೊದಲ ಸಲವಾಗಿದೆ. ಅಮೆರಿಕ-ಪರ ಚಟುವಟಿಕೆಗಳಿಗೆ ಜೈಶಂಕರ್ ಖ್ಯಾತರು. ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿನ ಹಾಗೂ ವಿದೇಶಾಂಗ ಕಾರ್ಯದರ್ಶಿಯಾಗಿ ಅವರ ಕಾರ್ಯಗಳ ದಾಖಲೆಗಳು ಹೇಗೆ ಅವರು ಅಮೆರಿಕದೊಂದಿಗೆ ನಿಕಟ ವ್ಯೂಹಾತ್ಮಕ ಮೈತ್ರಿಗೆ ಒತ್ತು ನೀಡಿದ್ದರು ಎನ್ನುವುದನ್ನು ತೋರಿಸುತ್ತವೆ.
ಟ್ರಂಪ್ ಆಡಳಿತದ ಭಂಡ ಆಗ್ರಹಗಳಿಗೆ ಮೋದಿ ಸರಕಾರದ ಹಲ್ಲುಗಿಂಜುವ ಇದುವರೆಗಿನ ಧೋರಣೆಯನ್ನು ಗಮನಿಸಿದರೆ ಅದು ಅಮೆರಿಕದ ಕಿರಿಯ ಮಿತ್ರನ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂಬುದು ಗೋಚರಿಸುತ್ತದೆ. ಭಾರತದ ರಾಷ್ಟ್ರೀಯ ಹಿತಗಳನ್ನು ಸಾಮ್ರಾಜ್ಯಶಾಹಿ ಸೂಪರ್ ಪವರ್ನ ಹಿತಾಸಕ್ತಿಗಳಿಗೆ ಒತ್ತೆಯಿಡಲಾಗುವುದು.
ಇರಾನ್ನಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಅಮೆರಿಕ ಆದೇಶಿಸಿತು. ಅದನ್ನು ,ದೇಶಕ್ಕೆತುಂಬಾನಷ್ಟವಾಗುತ್ತಿದ್ದರೂಶಿರಸಾವಹಿಸಿ ಪಾಲಿಸಲಾಯಿತು. ನಂತರ, ವೆನಿಜುವೆಲಾ ವಿರುದ್ಧದ ಆರ್ಥಿಕ ಸಮರದ ಭಾಗವಾಗಿ ಅಮೆರಿಕವು ವೆನಿಜುವೆಲಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತಕ್ಕೆ ಒತ್ತಾಯಿಸಿತು. ಮೋದಿ ಸರಕಾರ ಇದನ್ನು ಕೂಡ ತಡ ಮಾಡದೆ ಪಾಲಿಸಿತು. ರಷ್ಯಾದ ಟ್ರೈಯಂಫ್ ಎಸ್-೪೦೦ ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ದಿಗ್ಬಂಧನಗಳನ್ನು ಹೇರದಂತೆ ಅಮೆರಿಕಕ್ಕೆ ಭಾರತ ಅಂಗಲಾಚುತ್ತಿದೆ. ಆದರೆ ಭಾರತದ ವಿರುದ್ಧ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕುತ್ತಲೇ ಇದೆ. ಪರಿಹಾರವಾಗಿ ಅಮೆರಿಕದಿಂದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.
–ಪ್ರಕಾಶ್ ಕಾರಟ್
ಅನು: ವಿಶ್ವ
(ಕೃಪೆ : ಜನಶಕ್ತಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ