ರಾಜಕೀಯ
ಪ್ರಮಾಣ ವಚನ ಸ್ವೀಕರಿಸಿದ 25 ಸಚಿವರುಗಳ ಪಟ್ಟಿ
ಸುದ್ದಿದಿನ.ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ನೇತ್ರತ್ವದ ಮೈತ್ರಿ ಸರ್ಕಾರವು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ (ಇಂದು) ಬುಧವಾರ ಸಚಿವ ಸಂಪುಟ ವಿಸ್ತರಣೆ ಸಮಾರಂಭ ರಾಜಭವನದಲ್ಲಿ ನಡೆಯಿತು.
ರಾಜಪಾಲರಾದ ವಜುಭಾಯಿವಾಲಾ ಅವರು ನೂತನ ಸಚಿವರುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಚಿವರುಗಳು ಈ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದವರ ಪಟ್ಟಿ ಹೀಗಿದೆ
01.ಹೆಚ್ ಡಿ ರೇವಣ್ಣ- ಸಂಪುಟ ದರ್ಜೆಯ ಸಚಿವರು – ಒಕ್ಕಲಿಗ- ಜೆಡಿಎಸ್
02. ಆರ್ ವಿ ದೇಶಪಾಂಡೆ ಸಂಪುಟ ದರ್ಜೆ- ಬ್ರಾಹ್ಮಣ- ಕಾಂಗ್ರೆಸ್
03. ಬಂಡಪ್ಪ ಕಾಶಂಪುರ- ಸಂಪುಟ ದರ್ಜೆ -ಕುರುಬ- ಜೆಡಿಎಸ್
04. ಡಿ ಕೆ ಶಿವಕುಮಾರ್- ಸಂಪುಟ ದರ್ಜೆ- ಒಕ್ಕಲಿಗ ಕಾಂಗ್ರೆಸ್
05. ಜಿ ಟಿ ದೇವೇಗೌಡ -ಸಂಪುಟ ದರ್ಜೆ- ಒಕ್ಕಲಿಗ- ಜೆಡಿಎಸ್
06. ಕೆ.ಜೆಜಾರ್ಜ್ -ಸಂಪುಟ ದರ್ಜೆ ಸಚಿವ- ಕ್ರಿಶ್ಚಿಯನ್- ಕಾಂಗ್ರೆಸ್
07 ಡಿ ಸಿ ತಮ್ಮಣ್ಣ -ಸಚಿವ ಸಂಪುಟ ದರ್ಜೆ- ಒಕ್ಕಲಿಗ-ಜೆಡಿಎಸ್
08. ಕೃಷ್ಣ ಭೈರೇಗೌಡ -ಸಂಪುಟ ದರ್ಜೆ-ಒಕ್ಕಲಿಗ- ಕಾಂಗ್ರೆಸ್
09. ಎಂಸಿ ಮನಗುಳಿ -ಸಂಪುಟ ದರ್ಜೆ- ಲಿಂಗಾಯತ-ಜೆಡಿಎಸ್
10. H N ಶಿವಶಂಕರ್ ರೆಡ್ಡಿ – ಸಂಪುಟ ದರ್ಜೆ-ರೆಡ್ಡಿ ಒಕ್ಕಲಿಗ- ಕಾಂಗ್ರೆಸ್
11. ಗುಬ್ಬಿ ಶ್ರೀನಿವಾಸ್ -ಸಂಪುಟ ದರ್ಜೆ- ಜೆಡಿಎಸ್- ಒಕ್ಕಲಿಗ
12. ರಮೇಶ್ ಜಾರಕಿಹೊಳಿ -ಸಂಪುಟ ದರ್ಜೆ- ಕಾಂಗ್ರೆಸ್-ಎಸ್ಟಿ
13. ವೆಂಕಟರಾವ್ ನಾಡಗೌಡ -ಸಂಪುಟ ದರ್ಜೆ- ಜೆಡಿಎಸ್-ಲಿಂಗಾಯತ
14. ಪ್ರಿಯಾಂಕ್ ಖರ್ಗೆ -ಕ್ಯಾಬಿನೆಟ್ ದರ್ಜೆ- ಎಸ್ಸಿ- ಕಾಂಗ್ರೆಸ್
15. ಸಿ ಎಸ್ ಪುಟ್ಟರಾಜು -ಕ್ಯಾಬಿನೆಟ್ ದರ್ಜೆ ಒಕ್ಕಲಿಗ- ಜೆಡಿಎಸ್
16. ಯು ಟಿ ಖಾದರ್ – ಕ್ಯಾಬಿನೆಟ್ ದರ್ಜೆ ಮುಸ್ಲಿಂ (ಕಾಂಗ್ರೆಸ್)
17. ಸಾ ರಾ ಮಹೇಶ್ – ಕ್ಯಾಬಿನೆಟ್ ದರ್ಜೆ- ಒಕ್ಕಲಿಗ-(ಜೆಡಿಎಸ್)
18. ಜಮೀರ್ ಅಹಮ್ಮದ್ ಖಾನ್ – ಸಂಪುಟ ದರ್ಜೆ – ಮುಸ್ಲಿಂ
19. ಎನ್ ಮಹೇಶ್ – ಸಂಪುಟ ದರ್ಜೆ ಬಿಎಸ್ಪಿ- ಎಸ್ಸಿ
20. ಶಿವಾನಂದ ಪಾಟೀಲ್ -ಸಂಪುಟ ದರ್ಜೆ ಕಾಂಗ್ರೆಸ್-ಲಿಂಗಾಯತ
21. ವೆಂಕಟರಮಣಪ್ಪ – ಸಂಪುಟ ದರ್ಜೆ -ಕಾಂಗ್ರೆಸ್- ಎಸ್ಟಿ
22. ವೆಂಕಟರಮಣಪ್ಪ – ಸಂಪುಟ ದರ್ಜೆ-ಎಸ್ಸಿ- ಕಾಂಗ್ರೆಸ್
23. ಪುಟ್ಟರಂಗಶೆಟ್ಟಿ – ಸಂಪುಟ ದರ್ಜೆ- ಉಪ್ಪಾರ- ಕಾಂಗ್ರೆಸ್
24. ರಾಜಶೇಖರ್ ಬಸವರಾಜ್ ಪಾಟೀಲ್ -ಸಂಪುಟ ದರ್ಜೆ- ಲಿಂಗಾಯತ- ಕಾಂಗ್ರೆಸ್
25. ಆರ್.ಶಂಕರ್- ಕೆಪಿಜೆಪಿ- ಕುರುಬ
26. ಜಯಮಾಲಾ- ಬಿಲ್ಲವ- ಪರಿಷತ್ ಸದಸ್ಯರು
ಒಟ್ಟು ಜಾತಿ ಲೆಕ್ಕಾಚಾರ
01. ಒಕ್ಕಲಿಗ-9
02. ಲಿಂಗಾಯತ-4
03. ಪರಿಶಿಷ್ಟ ಜಾತಿ-3
04. ಕುರುಬ-2
05. ಮುಸ್ಲಿಂ-2
06. ಬ್ರಾಹ್ಮಣ-1
07. ಎಸ್ಟಿ-1
08. ಕ್ರಿಶ್ಚಿಯನ್-1
09. ಉಪ್ಪಾರ-1
10. ಬಿಲ್ಲವ-1
ಒಟ್ಟು-25 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243