Connect with us

ರಾಜಕೀಯ

‘ಸೋನಿಯಾ ಗಾಂಧಿ’ ಮನುಜಪಥದ ಅಪ್ರತಿಮ ರಾಯಭಾರಿ..!

Published

on

  • ಗ್ಲಾಡ್ಸನ್ ಅಲ್ಮೇಡಾ

ಪ್ಪತ್ತು ವರುಷಗಳಿಂದ ಆಕೆಯ ಮೇಲೆ ಸತತವಾಗಿ ದಾಳಿ ಮಾಡಿದರೂ, ಆಕೆಯ ಚಾರಿತ್ರ್ಯವಧೆ ಮಾಡಿದರೂ, ಆಕೆಯ ಮಕ್ಕಳು, ಮೊಮ್ಮಕ್ಕಳನ್ನೂ ಬಿಡದೇ ಹೀಯಾಳಿಸಿದರೂ, ಇಲ್ಲಿನ ರಾಜಕೀಯ, ಇಲ್ಲಿನ ಪಕ್ಷಗಳು ಇದ್ಯಾವದರೊಂದಿಗೆ ಸಂಬಂಧನೇ ಇರದ ಆಕೆಯ ಹೆತ್ತವರನ್ನೂ ಬಿಡದೆ ನಿಂದಿಸಿದರೂ ಆ ತಾಯಿ ಒಮ್ಮೆಯೂ ತಿರುಗಿ ಉತ್ತರಿಸಿದ್ದಿಲ್ಲ.

ಅದೆಷ್ಟು ಆರೋಪಗಳು, ಅದೆಷ್ಟು ನಿಂದನೆಗಳು, ಅದೆಷ್ಟು ಕುಹಕಗಳು, ಅದೆಷ್ಟು ಕ್ರೌರ್ಯ. ಊಹುಂ! ಏನು ಮಾಡಿದರೂ ಆಕೆಯನ್ನು ಧೃತಿಗೆಡಿಸಲು ಆಗಿಲ್ಲ. ಎಂಥೆಂಥಾ ಫೊಟೋಶಾಪ್‍ಗಳು, ವಿಡಿಯೋಗಳು. ಆಕೆಯನ್ನು ಅರೆನಗ್ನಳನ್ನಾಗಿ ಚಿತ್ರಿಸಿ, ಯಾರ ಯಾರ ತೊಡೆಮೇಲಿ ಕುಳ್ಳಿರಿಸಿ, ಹಾಸಿಗೆ ಮೇಲೆ ಹೀಗೆ ಆಕೆಯ ಚಾರಿತ್ರ್ಯವಧೆಗೆ ಸಂಸ್ಕೃತಿ ರಕ್ಷಕರು, ದೇಶಭಕ್ತರೆನ್ನುವವರು ಇಳಿದಿರುವ ಆಳ ಇದೆಯಲ್ವಾ, ಅದು ತಮ್ಮ ಸಮಕಾಲೀನ ಮಾತ್ರವಲ್ಲ ಗತಕಾಲದಲ್ಲೂ ಯಾರೂ ಇಳಿದಿರಲಿಕ್ಕಿಲ್ಲ. ಆಕೆಯನ್ನು ಬಾರ್ ಡ್ಯಾನ್ಸರ್, ಅಪವಿತ್ರೆ, ಸೂಳೆ, ಕೀಪ್, ಜೆರ್ಸಿ ದನ, ಆಕೆಯ ಮಕ್ಕಳ ಹೈಬ್ರಿಡ್ ಕರುಗಳು ಎಂದೆಲ್ಲಾ ಜರಿದರು. ಅಬ್ಬಾ! ಎಂಥೆಂಥಾ ಬೈಗುಳಗಳು, ಎಂಥಾ ಅವಮಾನ. ಆದರೂ ಆ ತಾಯಿಯದ್ದು ಮಾತ್ರ ದಿವ್ಯ ನಿರ್ಲಕ್ಷ್ಯ.

ಇಂಥ ಅವಮಾನ, ನಿಂದನೆ, ಚಾರಿತ್ರ್ಯವಧೆ, ಹೀಯಾಳಿಕೆಯನ್ನೆದುರಿಸಿ, ತನ್ನನ್ನು ಹೀಯಾಳಿಸುತ್ತಿರುವವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಅವರ ಕಣ್ಣೆದುರಿನಲ್ಲೇ, ಅವರನ್ನೇ ಮಣಿಸಿ, ತನ್ನ ಪಕ್ಷವನ್ನು ಸತತ ಎರಡು ಬಾರಿ ಅಧಿಕಾರಕ್ಕೆ ತರಲು, ಸತತ ಇಪ್ಪತ್ತು ವರುಷಗಳ ಕಾಲ ಪಕ್ಷವನ್ನು ನಡೆಸಲು ಧೃಢ ನಿಶ್ಚಲ, ಅಟಲ ಮನೋಭಾವ, ಧೀಮಂತಿಕೆ ಹಾಗೂ ಎದೆಗಾರಿಕೆ ಬೇಕು.

ಆಕೆಯ ವಿದೇಶಿ ಮೂಲ, ಆಕೆಯ ಗಂಡನ ಕುಟುಂಬ ಇವೆಲ್ಲದಕ್ಕಿಂತ ಆಕೆಯನ್ನು ಮೂದಲಿಸುವವರಿಗೆ ಚುಚ್ಚುತ್ತಿರುವುದು ಆಕೆ ಮಹಿಳೆ ಎನ್ನುವ ಸತ್ಯ. ಯಾವುದೋ ದೇಶದಿಂದ, ಮದುವೆಯಾಗಿ ಈ ದೇಶಕ್ಕೆ ಬಂದು, ಈ ದೇಶದ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ, ಜನಜೀವನ ಎಲ್ಲವನ್ನೂ ಅಪ್ಪಿ, ತನ್ನ ಕಣ್ಣ ಮುಂದೆಯೇ ತನ್ನ ಮೈದುನ, ಅತ್ತೆ, ಗಂಡ ಎಲ್ಲರನ್ನೂ ಏಳೆಂಟು ವರುಷಗಳೊಳಗೆ ಭೀಕರವಾಗಿ ಕಳೆದುಕೊಂಡರೂ, ಒಮ್ಮೆಯೂ ವಿಚಲಿತರಾಗದೇ, ಒಮ್ಮೆಯೂ ತನ್ನ ಬೊಗಸೆ ಕಣ್ಣುಗಳಲ್ಲಿ ಹರಿದು ಬಂದ ಕಣ್ಣೀರಿನ ಒಂದೇ ಒಂದು ಹನಿ ಸಾರ್ವಜನಿಕರಿಗೆ ತೋರ್ಪಡಿಸದೇ, ತನ್ನವರೆಂದು ಯಾರೂ ಇಲ್ಲದಿದ್ದರೂ ತನ್ನ ಮಕ್ಕಳನ್ನು ಸಾಕಿ, ಸಲಹಿ, ಅವರಿಗೆ ವಿದ್ಯೆ, ಸಂಸ್ಕಾರ ಕೊಟ್ಟು ಬೆಳೆಸಿದ ಪರಿಯಿದೆಯಲ್ವಾ ಅದು ಅನನ್ಯ.

ತನ್ನ ಮೈದುನನ ದೇಹದ ಒಂಚೂರೂ ನೋಡಲು ಸಿಗಲಿಲ್ಲ ಆಕೆಗೆ, ಎಂಟೆದೆಯ ಅತ್ತೆಯ ಎದೆಯನ್ನೇ ಸೀಳಿದ ಗುಂಡುಗಳು ಆಕೆಯ ಕಣ್ಣೆದುರಲ್ಲೇ ಇದ್ದವು, ಕೊನೆಗೆ ತನ್ನ ಗಂಡನ ದೇಹ ಕೂಡಾ ಸಿಕ್ಕಿದ್ದು ಛಿದ್ರ ಛಿದ್ರವಾಗಿ. ಎಂಥಾ ಧೈರ್ಯವಂತರನ್ನೂ ಶಾಶ್ವತವಾಗಿ ಕಂಗೆಡಿಸಬಹುದಾದ ಘಟನೆಗಳಿವು.

ಆದರೆ ಆಕೆಯನ್ನಲ್ಲ. ತನ್ನ ಮನೆಯ ನಾಲ್ಕು ಗೋಡೆಗಳೊಳಗೆ ಆಕೆ ಅದೆಷ್ಟು ಬಾರಿ ಗಳಗಳನೇ ಅತ್ತಿದ್ದಾರೋ, ಅದೆಷ್ಟು ಬಾರಿ ತನ್ನೊಡಲ ಕುಡಿಗಳನ್ನು ಎದೆಗಪ್ಪಿ ಕಣ್ಣೀರಲ್ಲೇ ಮಿಂದಿದ್ದಾರೋ, ಅದೆಷ್ಟು ಬಾರಿ ಕನ್ನಡಿಯಲ್ಲಿ ತನ್ನನ್ನೇ ತಾನು ನೋಡುತ್ತಾ, ಕಣ್ಣುಗಳನ್ನು ತೇವ ಮಾಡಿಕೊಂಡಿದ್ದಾರೋ. ಆದರೆ ಹೊರಜಗತ್ತಿಗೆ ಆಕೆ ತನ್ನ ಯಾವುದೇ ನೋವನ್ನು, ಯಾವುದೇ ಅಂಜಿಕೆಯನ್ನು, ಯಾವುದೇ ಅಭದ್ರತೆಯನ್ನು ಎಂದೂ ತೋರ್ಪಡಿಸಿಲ್ಲ.

ಆಕೆಯದ್ದು ಅಸಾಧಾರಣ ವ್ಯಕ್ತಿತ್ವ, ಅತಿಮಾನುಷ ಸಹನೆ, ಅದ್ಭುತ ಜೀವನೋಲ್ಲಾಸ. ತನ್ನ ಪಾಲಿಗೆ ಬಂದದೆಲ್ಲವನ್ನೂ ಸಮಚಿತ್ತದಿಂದ ಒಪ್ಪಿ, ತನ್ನ ಗಂಡನ ಕೊಲೆಗಾರರನ್ನೇ ಕ್ಷಮಿಸಿ, ಎಂದೂ, ಯಾರನ್ನೂ ತೆಗಳದೇ, ಯಾರನ್ನೂ ನೋಯಿಸದೇ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಹೇಗಿರಬೇಕೆಂಬ ಅಲ್ಟಿಮೇಟ್ ಉದಾಹರಣೆಯನ್ನು ನಮ್ಮ ಮುಂದೆ ಇಟ್ಟಿರುವ ಈ ಶತಮಾನದ ಶ್ರೇಷ್ಟ ಮಹಿಳೆ ಆಕೆ.

ಆಕೆಯ ಜಾಗದಲ್ಲಿ ಇನ್ಯಾರಿದ್ದರೂ ಯಾವತ್ತೋ ಮಂಡಿಯೂರಿ ಬಿಡುತ್ತಿದ್ದಾರೇನೋ, ಯಾವತ್ತೋ ಸೋಲೊಪ್ಪಿ ಈ ದೇಶ, ಈ ಜನಗಳು, ಈ ಸಮಾಜದ ಸಹವಾಸವೇ ಬೇಡವೆಂದು ತನ್ನ ತವರು ಸೇರುತ್ತಿದ್ದರೇನೋ? ಮೈದುನನ ಅಂತ್ಯಸಂಸ್ಕಾರ, ಅತ್ತೆಯ ಅಂತ್ಯ ಸಂಸ್ಕಾರ ಹಾಗೂ ತನ್ನ ಗಂಡನ ಅಂತ್ಯಸಂಸ್ಕಾರದ ಸಮಯದಲ್ಲಿ ಆಕೆ ನಡೆದುಕೊಂಡಿರುವ ರೀತಿ ಕಣ್ಣಮುಂದೆ ಶಾಶ್ವತವಾಗಿ ಉಳಿಯಲಿದೆ. ಯಾಕೆಂದರೆ ಚಿನ್ನ ಶಬ್ದ ಮಾಡುವುದಿಲ್ಲ. ಶಬ್ದ ಮಾಡುವುದು ತಗಡು.

ತನ್ನನ್ನು ನಿಂದಿಸುತ್ತಿರುವವರನ್ನು, ಹೀಯಾಳಿಸುತ್ತಿರುವವರ ಬಗ್ಗೆ,ಅವಮಾನಿಸುತ್ತಿರುವವರ ಬಗ್ಗೆ ಆಕೆ ತಾಳಿರುವ ದಿವ್ಯ ನಿರ್ಲಕ್ಷ್ಯವೇ ಆಕೆಯ ವಿರೋಧಿಗಳ ಅವರನ್ನು ಧೃತಿಗೆಡಿಸಿದೆ, ಅವರ ಹುಚ್ಚಿನ, ಕ್ರೌರ್ಯದ ಸೀಮೆಗಳನ್ನು ದಾಟಿ ಅವರನ್ನು ಮೃಗಗಳನ್ನಾಗಿ ಮಾಡಿದೆ. ಏನೇನೂ ಮಾಡಿದರೂ ಆಕೆಯನ್ನು ವಿಚಲಿತರನ್ನಾಗಿಸಲು ಆಗದೇ, ಧೃತಿಗೆಡಿಸಲಾಗದೇ, ಅವರು ಹೊಡೆದ ಚೆಂಡು, ಹೊಡೆದ ವೇಗಕ್ಕಿಂತ ನೂರಿನ್ನೂರು ಪಟ್ಟು ಹೆಚ್ಚಿನ ವೇಗದಲ್ಲಿ ಹಿಂದೆ ಬಂದು ಅವರನ್ನೇ ನೆಲಕ್ಕಪ್ಪಳಿಸಿದೆ. Yet she is silent, she is resolute and she just keeps walking with her head held high.

ಆಕೆಯೇ ನಮ್ಮ ನಡುವಿನ ಕೌತುಕ ಹಾಗೂ ಅದ್ಬುತ ಸೋನೀಯಾ ಗಾಂಧಿ. ಆಕೆ ಕಾಂಗ್ರೇಸ್ ಅಲ್ಲ ಯಾವುದೇ ಪಕ್ಷದಲ್ಲಿದ್ದರೂ, ರಾಜಕೀಯದಲ್ಲಿಲ್ಲದಿದ್ದರೂ ನಾನು ಆಕೆಯ, ಆಕೆಯ ಗುಳಿಗೆನ್ನೆಯ, ನಿಷ್ಕಳಂಕ ಮುಗುಳ್ನಗೆಯ ಶಾಶ್ವತ ಫ್ಯಾನ್ ಆಗಿರುತ್ತಿದ್ದೆ ಯಾಕೆಂದರೆ ಆಕೆ ಬರೀ ಭಾರತೀಯಳಲ್ಲ, ಕೇವಲ ಮಹಿಳೆಯಲ್ಲ, ಬದಲಾಗಿ ಮನುಷತ್ವದ ಹಾಗೂ ಮನುಜಪಥದ ಅಲ್ಟಿಮೇಟ್ ಹಾಗೂ ಅಪ್ರತಿಮ ರಾಯಭಾರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending