Connect with us

ಸಿನಿ ಸುದ್ದಿ

ರಾನು ಮೊಂಡಾಲ್ ಗಾಯನಕ್ಕೆ‌ ಮನಸೋತು 55 ಲಕ್ಷದ ಪ್ಲಾಟ್ ನೀಡಿದ ಸಲ್ಮಾನ್ ಖಾನ್

Published

on

ಸುದ್ದಿದಿನ,ಮುಂಬೈ: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಸೋಷಿಯಲ್ ಮಿಡಿಯಾಗಳದ್ದೆ ಹವಾ. ಅದರಲ್ಲೂ ಒಂದಿಷ್ಟು ಯವಕ ಯುವತಿಯರು ತಾವು ಮೈಮರೆತು ಸೋಷಿಯಲ್ ಮಿಡಿಯಾದಲ್ಲಿ ತಲ್ಲೀನರಾಗುತ್ತಾರೆ. ಹಾಡು ಮೋಜು ಮಸ್ತಿಗಳನ್ನು ಸೋಷಿಯಲ್ ಮಿಡಿಯಾಗಳಲ್ಲಿ ಹರಿಬಿಟ್ಟು ಎಷ್ಟೋ ಜನ ಸೆಲಬ್ರಿಟಿ ಆಗಿದ್ದು ಊಂಟು. ಅಂತಹದ್ದೆ ಘಟನೆ ಒಂದು ಟ್ರೈನ್ ಗಾಯಕಿಯ ಜೀವನವನ್ನೇ ಬದಲಿಸಿತ್ತು. ಆ ಅದ್ಭುತ ಸಂಗೀತದ ಪದ ಪುಂಜಗಳು.

ಹೌದು ಮುಂಬೈ ರೈಲ್ವೆ ನಿಲ್ದಾಣದಲ್ಲಿ ತನ್ನ ದಿನದ ಒಂದು ಹೊತ್ತಿನ ಊಟಕ್ಕೆ ಪರದಾಟ ಮಾಡುತ್ತಿದ್ದ ಮಹಿಳೆ ಇವತ್ತು ಸ್ಟಾರ್ ಗಾಯಕಿಯಾಗಿದ್ದು ರಾತ್ರೋ ರಾತ್ರಿ ತನ್ನ ಹಸಿವು ನೀಗಿಸಲು ರೈಲ್ವೆ ನಿಲ್ದಾಣದಲ್ಲಿ ಹಾಡು ಹೇಳಿಕೊಂಡು ಜೀವನ ನಡೆಸುತ್ತಿದ್ದ ಆಕೆಯ ಕಂಠಕ್ಕೆ ಇವತ್ತು ಲಕ್ಷಗಟ್ಟಲೆ ಸಂಭಾವನೆ ಅದು ಬೇರೆಯಾರು ಅಲ್ಲ. ರಾನು ಮೊಂಡಾಲ್.

ಇನ್ನು ಮುಂದೆ ಆಕೆಯ ಪರಿಚಯದ ಅಗತ್ಯವಿಲ್ಲ. ಅವರು ಒಂದು ತಿಂಗಳ ಹಿಂದೆ ರೈಲ್ವೆ ನಿಲ್ದಾಣವೊಂದರಲ್ಲಿ ಪತ್ತೆಯಾದಾಗಿನಿಂದ, ಇಡೀ ದೇಶಕ್ಕೆ ಅವರ ಪರಿಚಯವಾಗಿತ್ತು. ಹಿಮೇಶ್ ರೇಶಮ್ಮಿ ಅವರ ಮುಂದಿನ ಚಿತ್ರಕ್ಕಾಗಿ ಹಾಡಲು ಸಹಿ ಹಾಕಿದ ಅವರು ರಾತ್ರೋರಾತ್ರಿ ಖ್ಯಾತಿ ಗಳಿಸಿದರು. 59 ವರ್ಷ ವಯಸ್ಸಿನಲ್ಲಿ ರಾನುಗೆ ಒಲಿದು ಬಂದ ಭಾಗ್ಯ ಇದಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ರಾನು ಅವರ ಗಾಯನಕ್ಕೆ ಮನಸೋತು 55 ಲಕ್ಷದ ಮನೆ ಉಡುಗೊರೆಯಾಗಿ ನೀಡಿದ್ದಾರೆ. ಲೋಕೋಪಕಾರಿ ಎಂದು ಕರೆಯಲ್ಪಡುವ ಸಲ್ಮಾನ್, ರಾನು ಅವರ ಉತ್ತಮ ಪ್ರತಿಭೆಗೆ ಉಡುಗೊರೆಯಾಗಿ ಮನೆ ನೀಡಿ, ರಾನುಗೆ ಹೊಸ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು. ಸೂಪರ್ ಸ್ಟಾರ್ ಸಲ್ಲು ಬಾಯ್ ತಮ್ಮ ಚಿತ್ರವಾದ ದಬಾಂಗ್ 3 ಗೆ ರಾನು ಅವರು ಹಾಡಲು ಸಹಿ ಹಾಕಲು ಹೇಳಿದ್ದು ಇದರಲ್ಲಿ ಅವರು ಕನಿಷ್ಠ ಎರಡು ಹಾಡುಗಳನ್ನು ರಾನು ಅವರಿಂದ ಹಾಡಿಸಲು ಯೋಜಿಸಿದ್ದಾರೆ.

ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ರಾನುನನ್ನು ಕಂಡುಹಿಡಿದಾಗ, ಅವಳು ಸೋಷಿಯಲ್ ಮಿಡಿಯಾಗಳಿಗೆ ಮಾತ್ರ ಸೀಮಿತವಾಗಿದ್ದರು. ಆದರೆ ಇವರಿಂದ ಗಾಯಕಿಯಾಗುವ ಸಾಮರ್ಥ್ಯವಿದೆ ಎಂದು ಭಾವಿಸಿದ ಕೂಡಲೇ ಅವರಿಗೆ ಮೇಕ್ ಓವರ್ ನೀಡಲಾಯಿತು ಮತ್ತು ಹಲವು ಮಾಧ್ಯಮ ಸಂಸ್ಥೆಗಳು ಸಂದರ್ಶನ ಮಾಡಿದ್ದವು ಮತ್ತು ರಿಯಾಲಿಟಿ ಶೋಗಳನ್ನು ಹಾಡುವಲ್ಲಿ ಭಾಗವಹಿಸುವ ಭರವಸೆ ನೀಡಿದರು.

ಸಲ್ಮಾನ್ ಅವರ ಉತ್ತಮ ಚಿಂತನಶೀಲತೆ ಪ್ರಶಂಸನೀಯವಾದ ಕೆಲಸ ಎಲ್ಲರ ಮೆಚ್ಚುಗೆ ಪಡೆದಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ, ಹಿಮೇಶ್ ಅವರು ರಾನು ಅವರಿಗೆ ಮೊದಲ ದೊಡ್ಡ ಬ್ರೇಕ್ ನೀಡಿದರು. ಡ್ಯಾನ್ಸ್ ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಹಿಮೇಶ್ ಅವರಿಗೆ ರಾನು ಅವರನ್ನು ಪರಿಚಯಿಸಲಾಯಿತು. ಇದು ಒಬ್ಬ ಉತ್ತಮ ಗಾಯಕಿಗೆ ಸಿಕ್ಕ ಮೊದಲ ಮೆಟ್ಟಿಲು ಆಗಿತ್ತು. ಆ ರಿಯಾಲಿಟಿ ಶೋನಲ್ಲಿ ಹಾಡಲು ಅವಕಾಶ ನೀಡಿದರು.
ರಾನು ಬಗ್ಗೆ ತಿಳಿದುಕೊಂಡ ನಂತರ ಮತ್ತು ಅವರ ಲೈವ್ ಹಾಡನ್ನು ಕೇಳಿದ ನಂತರ, ವೇದಿಕೆಯಲ್ಲಿ ನ್ಯಾಯಾಧೀಶರಾಗಿರುವ ಹಿಮೇಶ್ ರಾನು ಗಾಯನಕ್ಕೆ ಮನಸೋತು ಸಂತೋಷ ವ್ಯಕ್ತಪಡಿಸಿದರು. ರಾನು ಅವರಿಗೆ ಈ ಸ್ವರ “ದೇವರು ಕೊಟ್ಟ ಉಡುಗೊರೆ” ಎಂದು ಹೋಗಳಿದರು ತನ್ನ ಮುಂದಿನ ಚಿತ್ರ, ಹ್ಯಾಪಿ, ಹಾರ್ಡಿ ಮತ್ತು ಹೀರ್ ಎಂಬ ರೊಮ್ಯಾಂಟಿಕ್ ಹಾಸ್ಯ ಚಿತ್ರಕ್ಕೆ ರಾನುಗೆ ಹಾಡಲು ಸಹಿ ಹಾಕಲು ನಿರ್ಧರಿಸಿದರು.

“ಸಲ್ಮಾನ್ (ಖಾನ್) ಭಾಯ್ ಅವರ ತಂದೆ ಸಲೀಮ್ ಚಿಕ್ಕಪ್ಪ ಒಮ್ಮೆ ನನಗೆ ಸಲಹೆ ನೀಡಿದ್ದು, ಜೀವನದಲ್ಲಿ ನಾನು ಪ್ರತಿಭಾವಂತ ವ್ಯಕ್ತಿಯನ್ನು ಕಂಡಾಗ, ನಾನು ಎಂದಿಗೂ ಆ ವ್ಯಕ್ತಿಯನ್ನು ಪ್ರತಿಭೆ ಸಾಯಲು ಬಿಡಬಾರದು. ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು” ಎಂದರು.

ಆದರೆ ಇವತ್ತು ರಾನು ಅವರ ಕಂಠವನ್ನು ದೇಶಕ್ಕೆ ಪರಿಚಯಿಸಿ ಉತ್ತಮ ಸಂಭಾವನೆ ನೀಡಿದ ಹಿಮೇಶ್ ಒಂದು ಕಡೆಯದಾರೆ ರಾನುಗೆ ಸೂರು ಮಾಡಿಕೊಟ್ಟ ಕಲಾವಿದರ ಪ್ರೇಮಿ ಸಲ್ಮಾನ್ ಖಾನ್ ಹೃದಯವಂತಿಕೆ ಎಲ್ಲ ನಟರಿಗೂ ಮಾದರಿ ಎನಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಸುದ್ದಿಮುಖ್ಯಾಂಶಗಳು

  1. ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
  2. ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
  3. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  4. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
  5. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
  6. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಹಾಲಿವುಡ್‌ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
  7. ಐಸಿಸಿ ವಿಶ್ವ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್‌ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
  8. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

Published

on

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್‍ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್‍ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್‍, ಅಚ್ಯುತ್‍ ಕುಮಾರ್‍, ರಮೇಶ್‍ ಅರವಿಂದ್‍ ಮುಂತಾದವರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

Published

on

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್‍ ಮತ್ತು ಸುಮಲತಾ ಅಂಬರೀಷ್‍ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್‍, ಅಭಿ ಬೆನ್ನಿಗೆ ‘ನಿಮ್ಮ‌ಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.

“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್‍ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್‍ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending