ದಿನದ ಸುದ್ದಿ
ವಿಶ್ವ ಪಶುವೈದ್ಯ ದಿನ | ಪಶುವೈದ್ಯ ವೃತ್ತಿಯ ಸುತ್ತ ಒಂದು ಪಕ್ಷಿ ನೋಟ
- ಡಾ. ಕಮಲೇಶ್ ಕುಮಾರ್ ಕೆ ಎಸ್,ಪಶುವೈದ್ಯಾಧಿಕಾರಿಗಳು,ಪಶುಚಿಕಿತ್ಸಾಲಯ, ಮತ್ತೂರು,ಶಿವಮೊಗ್ಗ
ಎಲ್ಲಾ ವರ್ಷದ ಏಪ್ರಿಲ್ ಕಡೆಯ ಶನಿವಾರ ವಿಶ್ವ ಪಶುವೈದ್ಯ ದಿನಾಚರಣೆ ಆಚರಿಸುವ ವಿಶ್ವದ ಪಶುವೈದ್ಯರು ಇಡೀ ವಿಶ್ವವೇ ಕರೋನದಿಂದ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಈ ಬಾರಿ ಒಂದು ಉತ್ತಮ ಗುರಿಯಾದ “ಪರಿಸರ ಸಂರಕ್ಷಣೆಯಿಂದ ಪ್ರಾಣಿ ಹಾಗು ಮನುಷ್ಯರ ಆರೋಗ್ಯ ಸುಧಾರಣೆ” (“Environmental protection for improving animal and human health”) ಎಂಬ ವಿಷಯವನ್ನು ಉತ್ತೇಜಿಸುತ್ತಿದ್ದಾರೆ. ಪರಿಸರ ಸಂರಕ್ಷಣೆಯಿಂದ ಆಗುವ ಮಾಲಿನ್ಯ ತಡೆ, ಕಡಿಮೆ ರೋಗ ಹರಡುವಿಕೆ ಹಾಗೂ ಹೆಚ್ಚುವ ರೋಗ ನಿರೋಧಕ ಶಕ್ತಿಯಿಂದ ಖಂಡಿತವಾಗಿಯೂ ಎಲ್ಲಾ ಜೀವಿಗಳ ಆರೋಗ್ಯ ಸುಧಾರಣೆ ಸಾಧ್ಯವಾಗುತ್ತದೆ.
ರೈತರ ಏಳಿಗೆಗಾಗಿ ಕರೋನಾದಲ್ಲೂ ಪಶುವೈದ್ಯರ ಹೋರಾಟ
ಕರೋನದಿಂದ ಆಗಿರುವ ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲ ಉದ್ಯಮಗಳು ಸ್ಥಗಿತವಾಗಿ ದೇಶದ ಆರ್ಥಿಕತೆ ಕುಸಿಯುತ್ತಿದ್ದರು ಸಹ ಹೈನುಗಾರಿಕೆ ಬಡ ರೈತರ ಕೈ ಹಿಡಿದಿದೆ, ನೆಮ್ಮದಿಯಾಗಿ ಜೀವನ ನಡೆಸಿ ನಿಟ್ಟುಸಿರು ಬಿಡಲು ಸಹಾಯ ಹಸ್ತ ನೀಡಿದೆ, ಇದಕ್ಕೆ ಪಶುವೈದ್ಯರು ಎಗ್ಗಿಲ್ಲದೆ ನೀಡುತ್ತಿರುವ ಅಗತ್ಯ ಸೇವೆಯು ಬೆನ್ನೆಲುಬಾಗಿದೆ.
ಪಶುವೈದ್ಯ ವೃತ್ತಿಯ ಇತಿಹಾಸ
ಇತಿಹಾಸದ ಪ್ರಕಾರ ಮೊಟ್ಟಮೊದಲು ಪಶು ವೈದ್ಯಕೀಯ ವಿಜ್ಞಾನದಲ್ಲಿ ಪಾಂಡಿತ್ಯವನ್ನು ಪಡೆದ ವ್ಯಕ್ತಿಯು ಭಾರತೀಯ, ಅವನು ಹಯಘೋಷ ಎಂಬ ಋಷಿಯ ಮಗನಾದ ಶಾಲಿಹೋತ್ರ (2350 BCE) ಎಂಬ ಉಲ್ಲೇಖವಿದೆ.
ಫ್ರಾನ್ಸನ ಜಾನುವಾರುಗಳಲ್ಲಿ ಏಕಾಏಕಿ ಪಿಡುಗು ರೋಗ ಕಾಣಿಸಿಕೊಂಡಾಗ, ಅದಕ್ಕೆ ಪರಿಹಾರ ಕಂಡುಹಿಡಿಯಲೆಂದೇ ಕ್ಲಡ್ ಬೊರ್ಗಲಟ್ (Claude Bourgelat) ಎಂಬಾತನು ಮೊಟ್ಟಮೊದಲ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿದರು ತದ ನಂತರ ಇನ್ನುಳಿದ ದೇಶಗಳಲ್ಲಿ ಪ್ರಾರಂಭವಾದವು. ಹೀಗೆ ಪಶುವೈದ್ಯ ವಿಜ್ಞಾನವು ಬೆಳೆಯತೊಡಗಿತು.
ಪಶುವೈದ್ಯರು ಹೀಗೆ ಉತ್ತಮರು
ಜಾನುವಾರುಗಳೇ ದೇವರು ಎಂದು ಕಲ್ಪಿಸಿಕೊಂಡಿರುವ ನಮ್ಮ ದೇಶದಲ್ಲಿ, ಕೇವಲ ಪೂಜೆಯ ವಸ್ತುವೆಂದು ನೋಡದೆ ಜಾನುವಾರುಗಳಿಂದ ಆರ್ಥಿಕವಾಗಿ ಸದೃಢತೆ ಹೊಂದಿದ ಸಾಕಷ್ಟು ರೈತರು ನಮ್ಮ ಸುತ್ತಲೂ ಇರುವುದನ್ನು ನಾವೆಲ್ಲರೂ ಗಮನಿಸಿಯೇ ಇರುತೇವೆ. ಅದೆಷ್ಟೋ ಸಣ್ಣ ಹಾಗೂ ಅತೀ ಸಣ್ಣ ರೈತರು ತಮ್ಮಲ್ಲಿರುವ ಬೆರಳೆಣಿಕೆಯಷ್ಟು ಕೋಳಿ, ಕುರಿ, ಮೇಕೆ, ಹಸುಗಳನ್ನು ಕಟ್ಟಿಕೊಂಡು ಉತ್ತಮ ರೀತಿಯಲ್ಲಿ ಜೀವನ ಸಾಗಿಸುತಿರುವುದಕ್ಕೆ ಲೆಕ್ಕವಿಲ್ಲದಷ್ಟು ಉದಾಹರಣೆ ನಮ್ಮ ಬಳಿ ಇವೆ. ಪಶುವೈದ್ಯರು ಜಾನುವಾರು ಸಾಗಾಣಿಕೆ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರ ಏಳಿಗೆಗೆ ನೀಡುತ್ತಿರುವ ಸಹಕಾರ ಬಹಳಷ್ಟು.
ಪಶುವೈದ್ಯರಾಗಲು ಇರಲೇಬೇಕಾದ ಗುಣಗಳು
ನಟ ವಿಲ್ ರೋಜರ್ಸ್ಸ ಎಂಬಾತನ “Best doctor in the world is a veterinarian. He can’t ask his patients what’s the matter. He’s just got to know.” ಹೇಳಿಕೆಯಂತೆ ನಮಗೆಲ್ಲ ತಿಳಿದಿರುವ ಹಾಗೆ ಸಾಮಾನ್ಯವಾಗಿ ಪ್ರಾಣಿಗಳು ರೋಗದ ಲಕ್ಷಣಗಳನ್ನು ತೋರಿಸುವುದಿಲ್ಲ, ಪ್ರಾಣಿಯ ವಾರಸುದಾರರ ಹೇಳಿಕೆಯ ಮೇಲೆ ಅವಲಂಬಿತವಾಗಿಯೋ ಇಲ್ಲವಾದಲ್ಲಿ ತಾವಾಗಿಯೇ ಪರೀಕ್ಷಿಸಿ ಅದನ್ನು ಕಂಡು ಹಿಡಿಯ ಬೇಕಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಚಿಕಿತ್ಸೆಯ ಅನುಭವ, ಜಾಣ್ಮೆ, ತಾಳ್ಮೆ, ಉತ್ತಮ ದೃಷ್ಟಿ, ಸ್ಪರ್ಶ ಸಂವೇದನೆ ಹಾಗು ಪ್ರಾಣಿಗಳ ಮೇಲಿನ ಪ್ರೀತಿ ಸಾಕಷ್ಟು ಇರಬೇಕಾಗುತ್ತದೆ.
ಪಶುವೈದ್ಯರು ಕೇವಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಲ್ಲದೆ ಸಾಕಷ್ಟು ಬಾರಿ ಜಾನುವಾರು ಮಾಲೀಕರ ಮನೆಯ ಬಾಗಿಲಿಗೆ ಹೋಗಿ ಚಿಕಿತ್ಸೆಯನ್ನು ನೀಡಬೇಕಾಗಿರುತ್ತದೆ ಆದ್ದರಿಂದ
ಕೇವಲ ಮಾನಸಿಕರೀತಿಯಿಂದ ಅಲ್ಲದೆ ದೈಹಿಕವಾಗಿಯೂ ಸದೃಢವಾಗಿರಬೇಕಾಗಿರುತ್ತದೆ.
ಪಶುವೈದ್ಯರ ಶ್ರೇಷ್ಠತೆ ಹಾಗು ವೈವಿಧ್ಯತೆ
ವೈದ್ಯರೆಂದರೆ ಅವರ ಜೀವನಾದ್ಯಂತ ಕಲಿಕೆಯು ಅವರ ಜೊತೆಗೂಡಿರುತ್ತದೆ, ಅದೇ ರೀತಿ ಮನುಷ್ಯನನ್ನು ಬಿಟ್ಟು ಬೇರೆಲ್ಲಾ ಜೀವಿಗಳ ಎಲ್ಲ ರೀತಿಯ ರೋಗಗಳಿಗೂ ಚಿಕಿತ್ಸೆ ನೀಡಬಲ್ಲ ಪಶುವೈದ್ಯರು ದಿನನಿತ್ಯವೂ ಸಾಕಷ್ಟು ಕಲಿಯುತ್ತಿರಬೇಕಾಗಿರುತ್ತದೆ. ಹೇಳಬೇಕೆಂದರೆ ಸಾಕಷ್ಟು ಪಶುವೈದ್ಯರು ಸಾಮಾನ್ಯ ಜ್ವರದ ಚಿಕಿತ್ಸೆಯಿಂದ ಹಿಡಿದು ಎಂತಹ ಅರವಳಿಕೆಯಿಂದ ಕೂಡಿದ ಶಾಸ್ತ್ರಚಿಕಿತ್ಸೆಯನ್ನು ಕೂಡ ಮಾಡಬಲ್ಲರು ಹಾಗೂ ತಮ್ಮ ಕಾರ್ಯ ವ್ಯಾಪ್ತಿಯ ಸ್ಥಳದಲ್ಲಿ ಕಂಡು ಬರುವ ರೋಗಗಳನ್ನು ಚಾಣಾಕ್ಷ ರೀತಿಯಿಂದ ಕಂಡು ಹಿಡಿದು ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡಬಲ್ಲರು.
ವಿಶ್ವದಲ್ಲಿ ಪಶು ವೈದ್ಯಕೀಯ ವಿಜ್ಞಾನವು ಸಾಕಷ್ಟು ಮುಂದುವರೆದಿದೆ ಆದರೂ ಭಾರತವು ಅದರಲ್ಲೇನು ಮಿಗಿಲಿಲ್ಲ. ಆದರೆ ವಾಸ್ತವ ಸ್ಥಿತಿ ಗಮನಿಸಿದರೆ ಇಂದಿಗೂ ಭಾರತದಲ್ಲಿ ಸುಸಜ್ಜಿತವಾದ ಸಲಕರಣೆಗಳನ್ನು ಹೊಂದಿರುವ ಪಶು ಆಸ್ಪತ್ರೆ ಬೆರಳೆಣಿಕೆಯಷ್ಟು ಮಾತ್ರ. ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಕೂಡ ಒಬ್ಬ ಪಶುವೈದ್ಯನೇ ನೀಡಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲೂ ಕೂಡ ನಮ್ಮ ಪಶುವೈದ್ಯರು ದೃತಿಗೆಡದೆ ಸಾಕಷ್ಟು ಮೇಲುಗೈ ಸಾಧಿಸಿದ್ದಾರೆ.
ಜನರಿಗೆ ಸೇವೆಯನ್ನು ಒದಗಿಸುವ ಅಧಿಕಾರಿಗಳಲ್ಲಿ ಸಾಕಷ್ಟು ಹತ್ತಿರವಾಗಿರುವ ಪಶುವೈದ್ಯರು ರೈತರ ಏಳಿಗೆಗೆ ಸಾಕಷ್ಟು ಮಾಹಿತಿಯನ್ನು ನೀಡಬಲ್ಲರು ಹಾಗೂ ಅವರ ದಿನನಿತ್ಯ ಜೀವನದಲ್ಲಿ ವೈಜ್ಞಾನಿಕ ಜೀವನವನ್ನು ಅಳವಡಿಸಿಕೊಳ್ಳಲು ಉಪಕಾರಿಯಾಗಿದ್ದಾರೆ. ಪಶುವೈದ್ಯರು ಕೇವಲ ವೈದ್ಯಕೀಯ ಸೇವೆ ಅಲ್ಲದೆ ಇನ್ನಿತರ ಸೇವೆಯನ್ನು ಒಡಗಿಸುತ್ತಿದ್ದಾರೆ.
- ಪ್ರಾಣಿಗಳಿಂದ ಮಾನವನಿಗೆ ಬರುವ ರೋಗ ತಡೆಗಟ್ಟುವಿಕೆ ಹಾಗೂ ಅದರ ಕುರಿತು ಸಂಶೋಧನೆ (ಉದಾ: ರೇಬಿಸ್, ಹಕ್ಕಿ ಜ್ವರ, ಬ್ರುಸೆಲೋಸಿಸ್)
- ಎಲ್ಲಾ ತರಹದ ಪ್ರಾಣಿ, ಕಾಡು ಪ್ರಾಣಿಗಳ ರಕ್ಷಣೆ, ಚಿಕಿತ್ಸೆ ಹಾಗೂ ರೋಗ ತಡೆಗಟ್ಟುವಿಕೆ.
- ಸಸಾರ ಜನಕ ಆಹಾರ ಪದಾರ್ಥಗಳಾದ ಹಾಲು, ಮಾಂಸ ಹಾಗೂ ಮೊಟ್ಟೆಗಳ (ಪ್ರೊಟೀನ್) ಉತ್ಪಾದನೆಯಿಂದ ಪೌಷ್ಟಿಕ ಆಹಾರ ಉತ್ಪಾದನೆ.
- ಮನುಷ್ಯರ ಔಷಧ ಉತ್ಪಾದನೆ.
- ಜಾನುವಾರುಗಳ ಔಷಧ ಉತ್ಪಾದನೆ.
- ಯಾವುದೇ ರೀತಿಯ ಹೊಸ ಸಂಶೋಧನೆಯು ಮೊದಲು ಪ್ರಾಣಿಗಳೇ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಇದ್ದಲ್ಲಿ ನಂತರ ಮಾನವರ ಉಪಯೋಗಕ್ಕೆ ಬಳಕೆ. (ಉದಾ: ಬಾಡಿಗೆ ತಾಯಿಯಿಂದ ಮಗುವಿನ ಜನನ)
- ಸತ್ತ ಜಾನುವಾರುಗಳಿಂದ ವ್ಯವಸಾಯಕ್ಕಾಗಿ ಉತ್ತಮವಾದ ರಾಸಾಯನಿಕ ಉತ್ಪಾದನೆ.
- ಗೊಬ್ಬರ ಉತ್ಪಾದನೆ.
- ಗೋಮೂತ್ರದ ಔಷಧೀಯ ಉಪಯೋಗದ ಕುರಿತು ಸಂಶೋಧನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು