ದಿನದ ಸುದ್ದಿ
ಬೆಂಗಳೂರಿನ ಬಾನಿನಲ್ಲಿ ‘ಆಕಾಶಕಂಪನ’..?
- ನಾಗೇಶ್ ಹೆಗಡೆ
ನನಗೆ ಆ ಸದ್ದು ಕೇಳಲಿಲ್ಲ. ನನ್ನ ಕಿವಿಯಲ್ಲಿ ಇಯರ್ಫೋನ್ ಇತ್ತು. ಯಾವ ಕರೆಯೂ ಬಾರದಂತೆ ಮೊಬೈಲನ್ನು ಏರೋಪ್ಲೇನ್ ಮೋಡ್ನಲ್ಲಿ ಇಟ್ಟುಕೊಂಡು ಸಂಗೀತವನ್ನು ಕೇಳುತ್ತಿದ್ದೆ. ಆದರೆ ಮೂರುಗಂಟೆಗೆ ಮೊಬೈಲನ್ನು ಹೊರಜಗತ್ತಿಗೆ ತೆರೆದಾಗ ‘ಈ ಬೂಮ್ ಸದ್ದು ಕೇಳಿದಿರಾ?’ ಏನು ಕಾರಣ?’ ಅಂತ ಅನೇಕ ಸಂದೇಶಗಳು ಬಂದವು. ಬೆಂಗಳೂರಿನ ಎಲ್ಲ ಸುದ್ದಿ ವಾಹಿನಿಗಳಲ್ಲೂ ಈ ಸದ್ದಿನದ್ದೇ ಸುದ್ದಿ. ವಿಜ್ಞಾನ ನಗರಿ ಎನ್ನಿಸಿಕೊಂಡರೂ ಯಾಕೋ ಯಾವ ತಜ್ಞರೂ ಕಾರಣ ಕೊಡುತ್ತಿಲ್ಲ. ಅದಲ್ಲ, ಇದಲ್ಲ ಎಂಬುದಕ್ಕೆ ಸಾಕಷ್ಟು ಕಾರಣಗಳಿವೆ. ಹಾಗಿದ್ದರೆ ಬೇರೆ ಯಾವುದು ಕಾರಣ?
ಬೇರೆ ಯಾವ ಕಾರಣಗಳೂ ಹೊಳೆಯದಿದ್ದಾಗ ಇಂಥ ಭಾರೀ ಸದ್ದಿಗೆ ‘ಆಕಾಶಕಂಪನ’ವೇ ಕಾರಣ ಎನ್ನಬಹುದು. ನೆಲದ ಮೇಲೆ ಭೂಕಂಪನ ಮತ್ತು ಸಾಗರದಾಳದಲ್ಲಿ ಜಲಕಂಪನ ಆಗುವ ಹಾಗೆ ಬಾನಿನಲ್ಲಿ ಆಕಾಶಕಂಪನ ಆಗುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ.
ಇಂಥ ಆಕಾಶಕಂಪನಕ್ಕೆ ಅನೇಕ ಕಾರಣಗಳನ್ನು ಕೊಡಲಾಗುತ್ತದೆ:-
1. ಉಲ್ಕಾಪಾತ: ಕ್ಷುದ್ರಗ್ರಹ ಅಥವಾ ಅದಕ್ಕೂ ಚಿಕ್ಕ ಆಕಾಶಕಾಯಗಳು ಅತಿ ವೇಗದಲ್ಲಿ ಭೂಮಿಗೆ ಬರುತ್ತಿರುವಾಗ ವಾಯುಮಂಡಲವನ್ನು ಪ್ರವೇಶಿಸುವಾಗ ಸ್ಫೋಟಿಸಿದರೆ ಇಂಥ ಸದ್ದು ಕೇಳುತ್ತದೆ. ಕಣ್ಣಿಗೆ ಏನೂ ಕಾಣುವುದಿಲ್ಲ. ಅದು ಮೂರು ನಾಲ್ಕು ಕಿ.ಮೀ. ಎತ್ತರದಲ್ಲಿ ಸ್ಫೋಟಿಸಿದರೆ ಹೊಗೆ-ಬೂದಿಯೂ ಚದುರಿ ಹೋಗುತ್ತದೆ.
2. ಕೊರೊನಾ (ವೈರಸ್ ಅಲ್ಲ) ಮಾಸ್ ಇಜೆಕ್ಷನ್ CME ಎಂಬ ವಿದ್ಯಮಾನ ಸೂರ್ಯನಲ್ಲಿ ಘಟಿಸಬಹುದು. ನೀರಿನಿಂದ ಹೊರಡುವ ಗುಳ್ಳೆಯ ಹಾಗೆ ಸೂರ್ಯನ ಹೊರವಲಯದಿಂದ ಆಗೊಮ್ಮೆ ಈಗೊಮ್ಮೆ ಪ್ಲಾಸ್ಮಾ ಮೇಘ ಅತಿ ವೇಗದಲ್ಲಿ ಹೊಮ್ಮುತ್ತದೆ (ಇದೂ ವೈರಸ್ಗೆ ಸಂಬಂಧಿಸಿದ ಪ್ಲಾಸ್ಮಾ ಅಲ್ಲ).
ಅದು ತೀರ ದೊಡ್ಡ ಗುಳ್ಳೆಯಾಗಿದ್ದರೆ ಅರ್ಧ ಭೂಮಿಯನ್ನೇ ಆವರಿಸಬಹುದು. ತೀರ ಚಿಕ್ಕ ಗುಳ್ಳೆ ಆಗಿದ್ದರೆ ಚಿಕ್ಕ ಪ್ರದೇಶಕ್ಕೆ ಅಪ್ಪಳಿಸಬಹುದು. ಅದು ಭೂಮಿಯ ವಿದ್ಯುತ್ಕಾಂತೀಯ ವಲಯವನ್ನು ಪ್ರವೇಶ ಮಾಡಿದಾಗ ಸದ್ದು ಹೊಮ್ಮಬಹುದು. ಇದು ಅಪ್ಪಳಿಸಿದಾಗ ಎಲ್ಲ ಬಗೆಯ ವಿದ್ಯುತ್ ಮತ್ತು ವಿದ್ಯುನ್ಮಾನ ಸಲಕರಣೆಗಳೂ ಧ್ವಂಸ ಆಗುತ್ತವೆ ಎಂದು ಕೇಳಿದ್ದೇನೆ. ಇಲ್ಲಿ ಅಂಥದ್ದೇನೂ ಆಗಿಲ್ಲ. ಹಾಗಾಗಿ ನಾವು ಇದನ್ನೂ ಅಲ್ಲಗಳೆಯಬಹುದು.
3. ತುಂಬ ಎತ್ತರದ ವಾಯುಮಂಡಲದಲ್ಲಿ ತೀರಾ ಶಕ್ತಿಶಾಲಿ ಸಿಡಿಲು ಹೊಮ್ಮಿದರೆ ಇಂಥ ಸದ್ದು ಹೊಮ್ಮುತ್ತದೆ. ಆದರೆ ಒಮ್ಮೆ ಮಾತ್ರ ಇದು ಕೇಳಿದೆ. ಆದ್ದರಿಂದ ಅದೂ ನಂಬಲರ್ಹ ಅಲ್ಲ.
ಆಕಾಶಕಂಪನಕ್ಕೆ ಸಂಬಂಧಿಸಿದ, ಆದರೆ ಬೆಂಗಳೂರಿನಲ್ಲಿ ಸಾಕ್ಷ್ಯ ಸಿಗದ ಇತರ ಸಾಧ್ಯತೆ ಏನೆಂದರೆ: (1) ಭೂಗರ್ಭದಿಂದ/ಗಣಿಯಿಂದ ಅಥವಾ ಕೊಳಕು ಸರೋವರದ ತಳದಿಂದ ಮೀಥೇನ್ ಅನಿಲ ಬಿಡುಗಡೆ ಆಗುವುದು; (2) ಸೂಪರ್ ಸಾನಿಕ್ ವಿಮಾನ ಆಕಾಶಕ್ಕೆ ಜಿಗಿದು ತನ್ನ ವೇಗವನ್ನು ಹಠಾತ್ತಾಗಿ ಹೆಚ್ಚಿಸಿಕೊಂಡಾಗ ಹೀಗಾಗುತ್ತದೆ.
ಉಲ್ಕಾಪಾತವೇ ಆಗಿದೆ ಎನ್ನುವುದಾದರೂ ಅದು ಸ್ಫೋಟವಾಗುವುದು ಹೇಗೆ? ಸುಮ್ಮನೇ ಉರಿದು ಬೂದಿಯಾಗಿ ಕಣ್ಮರೆ ಆಗಬೇಕಲ್ಲವೆ? ಸದ್ದು ಹೊಮ್ಮಿಸಲು ಅದೇನು ಹೊರಲೋಕದಿಂದ ಪಟಾಕಿಯೆ? ಇದಕ್ಕೆ ಉತ್ತರ ಹೀಗಿದೆ: ತೀರ ಅಪರೂಪಕ್ಕೆ ಉಲ್ಕೆಯ ಗರ್ಭದಲ್ಲಿ ಅನಿಲ ಅಥವಾ ನೀರಾವಿ ಇದ್ದರೆ ಅದು ಸ್ಫೋಟ ಆಗುತ್ತದೆ. ಆದರೆ ಅಂಥ ಸಾಧ್ಯತೆಯೂ ತೀರ ಅಪರೂಪ.
ವೈಜ್ಞಾನಿಕ ವಿವರಣೆಗೆ ಸಿಗದ ಇಂಥ ಸ್ಫೋಟದ ಸದ್ದು ಕೇಳಿದ್ದಕ್ಕೆ ನಮ್ಮ ರಾಜ್ಯದಲ್ಲೇ ಬೇರೆಬೇರೆ ಜಿಲ್ಲೆಗಳಲ್ಲಿ ಅನೇಕ ಉದಾಹರಣಗಳಿವೆ. ಈಚೆಗೆ ಏಪ್ರಿಲ್ 11ರಂದು ಜಕಾರ್ತಾತದಲ್ಲಿ ಮತ್ತು 23ರಂದು ಮೆಕ್ಸಿಕೋದಲ್ಲಿ ಇಂಥ ಸದ್ದು ಹೊಮ್ಮಿದೆ. ಇತಿಹಾಸದುದ್ದಕ್ಕೂ ಇಂಥ ಘಟನೆಗಳು ಮತ್ತೆಮತ್ತೆ ಘಟಿಸಿವೆ.
ಯಾರಿಗೂ ಯಾವ ವಿಧದಲ್ಲೂ ಅದು ಹಾನಿ ಮಾಡಿಲ್ಲವೆಂದೇ ಪ್ರಾಯಶಃ ವಿಜ್ಞಾನಿಗಳು ಇದನ್ನು ತೀರ ಗಂಭೀರವಾಗಿ ಪರಿಗಣಿಸಿಲ್ಲವೆಂದು ಕಾಣುತ್ತದೆ. ಸದ್ಯಕ್ಕೆ ಸೂರ್ಯನ ಕೊರೊನಾ ಮತ್ತು ಪ್ಲಾಸ್ಮಾ ತಾಡನವೇ ಇದು ಕಾರಣವೆಂದು ಭಾವಿಸಬಹುದು (ಇನ್ನೂ ಉತ್ತಮ, ನಂಬಲರ್ಹ ಕಾರಣಗಳು ಸಿಗುವವರೆಗೂ). ಕೊರೊನಾ ವೈರಸ್ ಮತ್ತು ಪ್ಲಾಸ್ಮಾಕ್ಕೂ ಇದಕ್ಕೂ ಸಂಬಂಧ ಕಲ್ಪಿಸಬೇಡಿ. ಹಾಗೇನಾದರೂ ಅಸಂಬದ್ಧ ಸಂಬಂಧ ಹುಡುಕುವುದೇ ಆದರೆ ಇನ್ನೂ ಉತ್ತಮ ಉದಾಹರಣೆ ಬೇಕೆ?
ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ‘ಅಂಫನ್‘ ಚಂಡಮಾರುತ ಅಪ್ಪಳಿಸಿದ ಕ್ಷಣದಲ್ಲೇ ಇಲ್ಲಿ ಇದು ಸಂಭವಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು