Connect with us

ದಿನದ ಸುದ್ದಿ

ಭಾಷಿಕ ಮೂಲಭೂತವಾದ ಹೆಚ್ಚು ಅಪಾಯಕಾರಿ‌ : ಡಾ.ಎ.ಬಿ. ರಾಮಚಂದ್ರಪ್ಪ

Published

on

ಸುದ್ದಿದಿನ, ದಾವಣಗೆರೆ:ಕನ್ನಡ ಆಡಳಿತ ಭಾಷೆಯಾಗಬೇಕು ಎಂಬುದು ನಮ್ಮೆಲ್ಲರ ಬಹುಕಾಲದ ಬೇಡಿಕೆ. ಆದರೆ ಇವತ್ತಿಗೂ ಕನ್ನಡವನ್ನು ಆಡಳಿತ ಭಾಷೆಯಾಗಿ ಪರಿಪೂರ್ಣವಾಗಿ ತಂದುಕೊಳ್ಳ ಲಕ್ಕೆ ಆಗಿಲ್ಲ ಎಂಬ ಆತಂಕದಲ್ಲಿ ನಾವಿದ್ದೇವೆ ಎಂದು ಪ್ರಾಧ್ಯಾಪಕ ಡಾ.ಎ.ಬಿ ರಾಮಚಂದ್ರಪ್ಪನವರು ಎಚ್ಚರಿಸಿದರು.

ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ10 ನೇ ದಿನದ ಅಂತರ್ಜಾಲ ಮೂಲಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಡಳಿತ ಭಾಷೆಯಾಗಿ ಕನ್ನಡವನ್ನು ತರಬೇಕು ಎಂದು 1963 ರಿಂದ 2002 ರವರೆಗೂ ಒಟ್ಟು 25 ಸುತೋಲೆಗಳು ಸರ್ಕಾರದಿಂದ ಹೊರಬಿದ್ದಿವೆ. ಆದರೂ ಕೂಡ ಆಡಳಿತ ಭಾಷೆಯಾಗಿ ಕನ್ನಡವನ್ನು ಸಂಪೂರ್ಣವಾಗಿ ಇನ್ನೂ ಒಪ್ಪಿಕೊಂಡಿಲ್ಲ ಕಾರಣಗಳೇನು ಎಂದು ನೋಡಿದಾಗ ಕನ್ನಡ ನೆಲದಲ್ಲೇ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲು ಇಷ್ಟೆಲ್ಲಾ ಹೋರಾಟಗಳನ್ನು ಮಾಡಬೇಕಾದ ಸಂದರ್ಭ ಬಂದೊದಗಿದೆ‌ ಎಂದರು.

ಕನ್ನಡ ಇಂದು ಬೇರೆ ಬೇರೆ ಆಯಾಮಗಳ ಗೆ ಎದುರಿಸುತ್ತಿರುವ ಸವಾಲುಗಳು ಏನು ಎಂಬುದನ್ನು ನೋಡಿದಾಗ, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದು. ಪ್ರಾಚೀನ ಕವಿಗಳು ಕನ್ನಡವನ್ನು ಸಂಭ್ರಮದಿಂದ ಹಾಡಿಹೊಗಳಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಆರಂಭಕ್ಕೆ ಅರುಣೋದಯ ಮತ್ತು ನವೋದಯ ಕಾಲಕ್ಕೆ ಅಭಿಮಾನದ ಸಾಧ್ಯತೆಗಳನ್ನು ಪ್ರಧಾನವಾಗಿ ಅಭಿವ್ಯಕ್ತಿಸಿದಂತಹ ಸಾಧ್ಯತೆಯನ್ನು ಗಮನಿಸಬಹುದು ಎಂದು ಹೇಳಿದರು.

ಇವತ್ತು ಕನ್ನಡ ಎದುರಿಸುತ್ತಿರುವ ಸವಾಲುಗಳೇನು?

ವಾಸ್ತವಿಕವಾಗಿ ಜಗತ್ತಿನ ಯಾವುದೇ ಭಾಷೆಗೂ, ಧರ್ಮಕ್ಕೂ ಸಂಬಂಧವಿಲ್ಲ. ಇರಬಾರದು. ಆದ್ದರಿಂದ ಕನ್ನಡವನ್ನು ಒಂದು ಜಾತ್ಯಾತೀತ ಧರ್ಮದಿಂದ ನೋಡುವಂತಹ ಒಂದು ಮನೋಧರ್ಮ ರೂಪಗೊಳ್ಳ ಬೇಕಾಗಿರುವುದು ಬಹಳ ಮುಖ್ಯವಾದುದಾಗಿದೆ.

ಕನ್ನಡವನ್ನು ಯಾವುದೋ ಒಂದು ಜನವರ್ಗಕ್ಕೆ ಕಟ್ಟಾಕಿ ನೋಡುವಂತಹ ಪರಿಕಲ್ಪನೆ ನಮ್ಮ ನಡುವೆ ಇದೆ. ಇದು ಒಂದು ಕಡೆಯಾದರೆ, ಇನ್ನೊಂದೆಡೆ ಕನ್ನಡ ಭಾಷೆಯೆಂದರೆ ರಾಜಕೀಯ ಗಡಿಗೆ ಸೀಮಿತಗೊಳಿಸುವಂತ ಮನಸ್ಸು ನಮ್ಮಗಳ ನಡುವೆ ರೂಪಗೊಳ್ಳುತ್ತಿದೆ. ಹಾಗಾಗಿ ಭಾಷೆಗೂ ರಾಜಕೀಯ ಗಡಿಗೂ ಸಂಬಂಧಗಳನ್ನು ಕಲ್ಪಿಸಬಾರದು ನಮ್ಮ ಕನ್ನಡವನ್ನು ನಾವುಅಭಿವೃದ್ಧಿಗೊಳಿಸಬೇಕಾಗುತ್ತದೆ. ಬೆಳೆಸಬೇಕಾಗುತ್ತದೆ ಎಂಬ ಸವಾಲುಗಳು ನಮ್ಮ ಮುಂದಿವೆ.

ಕನ್ನಡವನ್ನು ಯಾವುದೇ ಧರ್ಮದ ಮೂಲದಿಂದ ನೋಡುವ ಪರಿಕಲ್ಪನೆಯಿಂದ ನಾವು ಬಿಡುಗಡೆಹೊಂದಿ ಬೇಕಾಗಿದೆ. ಇಂದು ನಾವೂ ಬಹು ದೊಡ್ಡ ಸವಾಲನ್ನು ನಾವು ಎದುರಿಸುತ್ತಿದ್ದೇವೆ. ಅದೆಂದರೆ ಮಾಧ್ಯಮದ್ದು. ಕನ್ನಡ ಮಾಧ್ಯಮವಾಗಿ ನಾವು ಇವತ್ತಿಗೂ ಕೂಡಾ ಅದನ್ನು ಸಕ್ರಿಯವಾಗಿ ಜನಮಾನಸದಲ್ಲಿ ಬಿತ್ತಲಿಕ್ಕೆ ಸಾಧ್ಯವಾಗುತ್ತಿಲ್ಲವೆಂಬ ಆತಂಕ ಇತ್ತೀಚಿನ ದಶಮಾನಗಳಲ್ಲಿ ಆರಂಭವಾಗಿದೆ.

ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳೇ ಹೆಚ್ಚಾಗುತ್ತಾ ಇವೆ. ಸರ್ಕಾರಗಳೂ ಕೂಡಾ ಪರೋಕ್ಷವಾಗಿ ಅದಕ್ಕೆ ಸಹಕಾರ ನೀಡುತ್ತಿದ್ದವೆಂದರೆ ತಪ್ಪಾಗಲಿಕ್ಕಿಲ್ಲ.

ಯಾವುದೇ ಭಾಷೆಯ ತಿಳುವಳಿಕೆ ನಮಗೆ ಬೇಕೆಂದಲ್ಲಿ ಇಂಗ್ಲೀಷು ಬೇಕು, ಇನ್ನೊಂದು ಭಾಷೆಯೂ ಬೇಕು. ಅದನ್ನು ಭಾಷೆಯಾಗಿ ಓದಬೇಕೇ ವಿನಃ ಮಾಧ್ಯಮವಾಗಿ ಓದುವುದಲ್ಲ.ಮಾಧ್ಯಮ ಕನ್ನಡದಲ್ಲೇ ಇರಬೇಕು.

ಪ್ರಜಾಪ್ರಭುತ್ವದ ಆಶಯಗಳು ಜನಮನಕ್ಕೆ ತಲುಪಬೇಕಾದರೆ ಶಿಕ್ಷಣ ಕೂಡ ಆಯಾ ಪ್ರದೇಶದ ಮಾತೃಭಾಷೆಯಲ್ಲಿ ಇರಬೇಕು. ಜನರಿಗೆ ಅದು ಅರಿವಿಗೆ ಬರಬೇಕು. ಆ ಕಾರಣಕ್ಕೆ ಕನ್ನಡ ಮಾಧ್ಯಮ ಎನ್ನುವುದು ಹೆಚ್ಚು ಹೆಚ್ಚಾಗಿ ನಮ್ಮಲ್ಲಿ ಸಾಧ್ಯವಾಗಿದೆ ಎಂದರೆ ಅಷ್ಟರ ಮಟ್ಟಿಗೆ ನಾವು ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ಯಶಸ್ವಿಗೊಳಿಸುತ್ತಿದ್ದೇವೆಂದೇ ಅರ್ಥ.

ಕನ್ನಡ ಮಾಧ್ಯಮವನ್ನು ನಾವು ಜನರ ನಡುವೆ ಹೊತ್ತೊಯ್ಯುವ ಕ್ರಮ ಹೇಗೆ ಎನ್ನುವುದನ್ನು ನಮ್ಮ ಆಡಳಿತಾರೂಢ ಸರ್ಕಾರಗಳು ಗಂಭೀರವಾಗಿ ಆಲೋಚನೆ ಮಾಡಬೇಕಾದ ಸಂದರ್ಭ ಇವತ್ತು ನಮ್ಮ ಕಣ್ಣೆದುರಿಗೆ ಇದೆ.

ಪ್ರಾದೇಶಿಕ ಭಾಷೆಗಳ ಮತ್ತು ನಮ್ಮ ನಡುವೆ ಒಂದು ದೊಡ್ಡ ತೊಡಕೆಂದರೆ, ಕನ್ನಡ ಎಂದರೆ ಒಂದೇ ಕನ್ನಡವಿಲ್ಲ. ಕನ್ನಡದೊಂದಿಗೆ ಹಲವು ಕನ್ನಡಗಳಿವೆ. ಧಾರವಾಡ ಕನ್ನಡ, ಮಂಗಳೂರು ಕನ್ನಡ, ಮೈಸೂರು ಕನ್ನಡ ಇರಬಹುದು ಇವುಗಳ ನಡುವೆ ಯಾವ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಪ್ರಮಾಣಿಕೃತ ಭಾಷೆಯಾಗಿ ಸ್ವೀಕರಿಸಿದ್ದೇವೆ. ಪ್ರಮಾಣಿಕೃತ ಭಾಷೆಯೆಂದರೆ ಎಲ್ಲಾ ಜನರಿಗೆ ಯಾವ ಭಾಷೆ ಸರಳವಾಗಿ ಸಂವಹನವಾಗಬಲ್ಲದೋ ಅಂತಹದ್ದೊಂದು ಭಾಷೆಯನ್ನು ನಾವು ಪ್ರಮಾಣಿಕೃತ ಭಾಷೆಯೆಂದು ಸ್ವೀಕರಿಸಿದ್ದೇವೆ.

ಇದಕ್ಕಿಂತಲೂ ವಾಸ್ತವವಾಗಿ ಯಾವ ಪ್ರದೇಶದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಂಡಿರುವರೋ ಅವರ ಭಾಷೆಗೆ ಮಾನ್ಯತೆ ಇರುವಂತಹ ಸಾಧ್ಯತಯು ಕೂಡ ಹೆಚ್ಚಾಗಿದೆ. ನಮ್ಮಲ್ಲಿ ಹಲವು ಉಪ ಭಾಷೆಗಳು ಹಲವು ಸಾಮಾಜಿಕ ಭಾಷೆಗಳು ಅವಘನಗೊಳಗಾಗಿದ್ದವೆ. ಯಾವ ಜನಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಗೊಂಡಿದ್ದವೊ ಅವರ ಭಾಷೆಯನ್ನು ಆಸ್ವಾದಿಸುವಂತಹ, ಅದನ್ನೇ ಆಡಳಿತ ಕನ್ನಡವಾಗಿ ಸ್ವೀಕರಿಸುವ ಅಥವಾ ಅದನ್ನು ಪ್ರಮಾಣಿಕೃತ ಕನ್ನಡವಾಗಿ ಸ್ವೀಕರಿಸುವ ರಾಜಕೀಯ ಹುನ್ನಾರವೇ ನಮ್ಮ ನಡುವೆ ಇದೆ.

ಸಾಮಾಜಿಕ ಅಸಮಾನತೆಗಳು, ಆರ್ಥಿಕ ಅಸಮಾನತೆಗಳು, ಪ್ರಾದೇಶಿಕ ಅಸಮಾನತೆಗಳು ಇವು ಭಾಷಿಕ ನೆಲೆಗಳೊಳಗೂ ವ್ಯಕ್ತವಾಗುತ್ತಿರುತ್ತದೆ. ಹಾಗಾಗಿ ಭಾಷಿಕ ನೆಲೆಯ ತಾರತಮ್ಯತೆ ನಮ್ಮಲ್ಲಿ ಇಲ್ಲವಾಗಬೇಕಾದರೆ ನಮ್ಮ ನಡುವಿನ ತಾರತಮ್ಯಗಳನ್ನೂ ನಾವು ಹೋಗಲಾಡಿಸಬೇಕಾಗಿದೆ.

ಭಾಷಿಕ ಮೂಲಭೂತವಾದ ಹೆಚ್ಚು ಅಪಾಯಕಾರಿ. ಭಾಷಿಕ ಮೂಲಭೂತವಾದದ ಬೋನಿನಲ್ಲಿ ಇವತ್ತು ಕನ್ನಡ ನರಳುತ್ತಾ ಇದೆ ಆದ್ರಿಂದ ಬಿಡುಗಡೆಗೊಳಿಸಬೇಕಾದ್ದು ನಮ್ಮೆಲ್ಲರ ಮುಂದಿರುವ ಸವಾಲು.ವಿಶ್ವದ ಜ್ಞಾನವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ ಕನ್ನಡವನ್ನು ಒಂದು ಭಾಷೆಯಾಗಿ ಮಾಡಬೇಕಾದರೆ ನಾವು ಭಾಷಿಕ ಮೂಲಭೂತವಾದದಿಂದ ಹೊರಬಂದು ಜಗತ್ತಿನ ಎಲ್ಲಾ ಭಾಷೆಗಳನ್ನು ದಕ್ಕಿಸಿಕೊಳ್ಳಬೇಕಾಗಿದೆ. ಅಲ್ಲಿನ ಅರಿವನ್ನು ನಮ್ಮದಾಗಿ ಮಾಡಿಕೊಳ್ಳಬೇಕಾಗಿದೆ. ಆ ಮುಖೇನ ಕನ್ನಡವನ್ನು ನಾವು ನೀವು ಅಭಿವೃದ್ಧಿಗೊಳಿಸಲು ಸಾಧ್ಯ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ನವರು ಕನ್ನಡಕ್ಕೆ ಕುತ್ತು ತಂದೊಡ್ಡುತ್ತಿರುವ ಅನ್ಯ ಭಾಷಿಕರ ಮಧ್ಯೆ ಕನ್ನಡ ಸಿಡಿದೇಳುತ್ತದೆ. ಕನ್ನಡ ನಾಡು ವೈಭವದ ನಾಡು. ನಿನ್ನೆಯನು ಮರೆತವನು ಇಂದು ಬದುಕಲಾರ.ನಾಳೆಯನ್ನು ಕಟ್ಟಲಾರ. ನಮ್ಮ ನಾಡು ನುಡಿಯ ಇತಿಹಾಸ ತಿಳಿಯಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಏಕೆಂದರೆ ಕನ್ನಡ ಕಟ್ಟುವ ಕೆಲಸ ನಮ್ಮಿಂದ ಆಗಬೇಕಾಗಿದೆ. ವಿವಿಧತೆಯಲ್ಲಿ ಏಕತೆ ಸಾಧಿಸುವ ನಾವು ಸುಂದರ ಭವ್ಯ ಕನ್ನಡದ ಬೆಳವಣಿಗೆಗೆ ಕಂಕಣಕಟ್ಟಿ ದುಡಿಯೋಣ ಎಂದು ಕರೆಕೊಟ್ಟರು.

ಆರಂಭದಲ್ಲಿ ಎಚ್ಕೆ ಸತ್ಯಭಾಮ ಇವರು ಸರ್ವರನ್ನು ಸ್ವಾಗತಿಸಿದರು ವೇದಿಕೆಯ ಶಾರದಾ ತಂಡದವರು ಸುಗಮ ಸಂಗೀತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending