Connect with us

ದಿನದ ಸುದ್ದಿ

ಬುದ್ದನ ಬಗ್ಗೆ ಸತ್ಯಗೊತ್ತಿದ್ದರೂ ಎಲ್ಲಿಯವರೆಗೂ ಸುಳ್ಳನ್ನ ಓದುವಿರಿ..?

Published

on

ಬುದ್ದ ಎಂದಾಕ್ಷಣ ನೆನಪಿಗೆ ಬರುವುದು ನಾಲ್ಕು ಸನ್ನಿವೇಶಗಳನ್ನು ಮುದುಕ, ರೋಗಿ, ಸನ್ಯಾಸಿ ಮತ್ತು ಶವಗಳನ್ನು ನೋಡಿ ರಾಜ್ಯ ತ್ಯಜಿಸಿದ, ಹೆಂಡತಿ ಮತ್ತು ಮಗು ರಾಹುಲನನ್ನು ರಾತ್ರಿಯೇ ಬಿಟ್ಟು ಹೋಗಿ ಸನ್ಯಾಸಿಯಾದ ಎಂದು ಇಲ್ಲಿಯವರೆಗೂ ಓದಿದ್ದೇವೆ ಅಥವಾ ಓದುತ್ತಿದ್ದೇವೆ ಇದು ಅಶ್ವಘೋಷನ ‘ಬುದ್ದ ಚರಿತೆ” ಕೃತಿ ಆಧರಿತವಾಗಿದೆ.

ಆದರೆ ಇತಿಹಾಸಕಾರನು ಪೂರ್ವಾಗ್ರಹಕ್ಕೆ ಒಳಗಾಗದೇ, ವಸ್ತುನಿಷ್ಠ ದೃಷ್ಟಿಕೋನದಲ್ಲಿ ನೋಡುವ ಮೂಲಕ ಸತ್ಯಾಸತ್ಯತೆಗಳನ್ನು ಪರಮರ್ಶನೆ ಮಾಡುತ್ತಾ ಸಂಶೋಧನಾತ್ಮಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ನೈಜ ಇತಿಹಾಸದ ಮೇಲೆ ಸತ್ಯದ ಬೆಳಕನ್ನು ಚೆಲ್ಲುವುದು.

ಈ ನಿಟ್ಟಿನಲ್ಲಿ ಭಾರತದ ಶ್ರೇಷ್ಠ ಇತಿಹಾಸಕಾರರಲ್ಲಿ ಒಬ್ಬರಾದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸತತ ಏಳೆಂಟು ವರ್ಷಗಳ ಗಂಭೀರ ಅಧ್ಯಯನ, ಸಂಶೋಧನೆ ಮೂಲಕ ಪಾಲಿ, ಪ್ರಾಕೃತ ಮತ್ತು ಸಂಸ್ಕøತ ಗ್ರಂಥಗಳನ್ನು ಜಾಲಾಡಿ ಬರೆದ ಕೃತಿಯಾದ “ಬುದ್ಧ ಅಂಡ್ ಹಿಸ್ ಧಮ್ಮ” ಎಂಬ ಕೃತಿಯು ಬುದ್ಧನು ಈ ಜಗತ್ತು ಕಂಡ ಅತಿ ಶ್ರೇಷ್ಠ ದಾರ್ಶನಿಕ ಎಂದು ವಿವರಿಸುವ ಮೂಲಕ ತಮ್ಮ ಸಂಶೋಧನಾತ್ಮಕ ಕೃತಿಯಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಸಿದ್ಧಾರ್ಥ ಸನ್ಯಾಸತ್ವ ಸ್ವೀಕರಿಸಿದ್ದು 29ನೇ ವಯಸ್ಸಿನಲ್ಲಿ ಅಲ್ಲಿಯವರೆಗೂ ಮುದುಕ, ರೋಗಿ, ಸನ್ಯಾಸಿ ಮತ್ತು ಶವವನ್ನು ನೋಡಿರಲಿಲ್ಲವೇ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ನಾವುಗಳು. ಸಿದ್ಧಾರ್ಥ ತನ್ನ ಮಡದಿ ಮತ್ತು ಮಕ್ಕಳನ್ನ ನಡುರಾತ್ರಿಯಲ್ಲಿ ಬಿಟ್ಟುಹೋಗಲಿಲ್ಲ. ಇಡೀ ಜಗತ್ತು ಗೌತಮನನ್ನು ಗೌರವಯುತವಾಗಿ ನೋಡುವಂತೆ ಇತಿಹಾಸವಿದೆ.

ಕ್ರಿ.ಪೂ. ಆರನೆಯ ಶತಮಾನದ ಪೂರ್ವಕ್ಕೂ ಭಾರತ ದೇಶವು ಅನೇಕ ರಾಜ್ಯಗಳಾಗಿ ವಿಂಗಡಿಸಿ ಹೋಗಿತ್ತು. ಅವುಗಳಲ್ಲಿ ಸಣ್ಣ ಮತ್ತು ದೊಡ್ಡ ರಾಜ್ಯಗಳು ಸಹ ಅಸ್ತಿತ್ವದಲ್ಲಿದ್ದವು. ಕೆಲವು ರಾಜ್ಯಗಳು ಪ್ರಭುತ್ವಕ್ಕೆ ಒಳಪಟ್ಟಿದ್ದರೆ, ಇನ್ನು ಕೆಲವು ಒಳಪಟ್ಟಿರಲಿಲ್ಲ. ಒಳಪಟ್ಟವುಗಳೆಂದರೆ-(16) ಅಂಗ, ಮಗಧ ಕಾಶಿ, ಕೋಸಲ, ವ್ರಜ, ಮಲ್ಲ, ಛೇದಿ, ವತ್ಸ, ಕುರು, ಪಾಂಚಾಲ, ಮತ್ಸ್ಯ, ಶೌರಸೇನ, ಅಸ್ಸಾಕ, ಅವಂತಿ, ಗಾಂಧಾರ, ಕಾಂಭೋಜ.

ರಾಜಪ್ರಭುತ್ವ ವ್ಯವಸ್ಥೆಗೆ ಹೊರತಾಗಿ ಕಪಿಲವಸ್ತುವಿನ ಶಾಕ್ಯರು, ಪವದ ಮಲ್ಲರು, ಕುಶಿನಾರರು, ವೈಶಾಲಿಯ ಲಿಚ್ಛವಿಗಳು, ಮಿಥಿಲೆಯ ವಿದೇಹಿಗರು, ರಾಮಗಾಮದ ಕೊಲಿಯರು, ಅಲ್ಲಕಪದ ಬುಲಿಗಳು, ರೇಸಪುಟ್ಟದ ಕಳಿಂಗರು, ಪಿಪ್ಪಲವದ ಮೌರ್ಯರು ಹಾಗೂ ಭಗ್ಗರು ಮುಖ್ಯರಾಗಿದ್ದರು.

ಶಾಕ್ಯರಲ್ಲಿ ಆಡಳಿತ ನಡೆಸುತ್ತಿದ್ದ ಅನೇಕ ಕುಟುಂಬಗಳು ಸರದಿಯ ಮೇಲೆ ರಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಗೌತಮಬುದ್ಧನು ಸಿದ್ಧಾರ್ಥನಾಗಿ ಜನಿಸಿದ ಪೂರ್ವದಲ್ಲಿ ಅವನ ತಂದೆ ಶಾಕ್ಯರ ಗಣರಾಜ್ಯವಾದ ಕಪಿಲ ವಸ್ತುವಿನ ರಾಜನಾಗಿ ಕಾರ್ಯನಿರ್ವಸುತ್ತಿದ್ದನು. ಶುದ್ಧೋಧನನಿಗೆ ಮಹಾಮಯೆ ಎಂಬುವರೊಡನೆ ವಿವಾಹವಾಯಿತು.

ಮಹಾಮಯೆಯು ಅಂಜನ ಮತ್ತು ಸುಲಕ್ಷಣಾ ಎಂಬ ದಂಪತಿಗಳ ಪುತ್ರಿಯಾಗಿದ್ದಳು. ಶುದ್ಧೋಧನನು ಮಹಾಪರಾಕ್ರಮಿಯಾಗಿದ್ದನ್ನು ಹಾಗೂ ಬಹುದೊಡ್ಡ ಸೈನ್ಯದ ಒಡೆಯನಾಗಿದ್ದನು. ತನ್ನ ಶೌರ್ಯ ಸಾಹಸಗಳಿಂದಾಗಿ ಎರಡನೆಯ ವಿವಾಹದ ಅನುಮತಿಯು ದೊರೆಯಿತು. ಹೀಗಾಗಿ ತನ್ನ ಪತ್ನಿ ಮಹಾಮಾಯೆಯ ಹಿರಿಯ ಸಹೋದರಿಯಾದ ಮಹಾಪ್ರಜಾಪತಿ ಎಂಬಾಕೆಯನ್ನು ವಿವಾಹವಾದನು.

ಕ್ರಿ.ಪೂ. 563 ನೇ ವರ್ಷದ ವೈಶಾಖ ಪೂರ್ಣಿಮೆಯ ದಿನದಂದು ಮಹಾಮಾಯೆಗೆ ಗಂಡುಮಗುವಿಗೆ ಜನ್ಮ ನೀಡಿದ್ದಳು. ಆ ಸಂದರ್ಭದಲ್ಲಿ ‘ಅಸಿತ’ ಎಂಬ ಮಹನ್ ಋಷಿಯು ತನ್ನ ಸೋದರಳಿಯನಾದ ನರದತ್ತನೊಂದಿಗೆ ಹಿಮಾಲಯದಿಂದ ಹೊರಟು ಕಪಿಲವಸ್ತು ಅರಮನೆಗೆ ಬಂದು ಮಗುವನ್ನು ಕೂಲಂಕುಷವಾಗಿ ಪರೀಕ್ಷಿಸಿ, ಮಹಾಪುರುಷನಿಗಿರಬೇಕಾದ ಮೂವತ್ತೆರಡು ಲಕ್ಷಣಗಳು ಮತ್ತು ಎಂಬತ್ತು ಉಪಲಕ್ಷಣಗಳನ್ನು ಮಗು ಪಡೆದಿರುವುದು.

ಹಾಗೂ ಶುಕ್ರಬ್ರಹ್ಮರ ಶರೀರಕ್ಕಿಂತಲ್ಲೂ ಶ್ರೇಷ್ಠವಿದ್ದು, ಅವರಿಗಿಂತಲೂ ಕೋಟ್ಯಂತರ ಹೆಚ್ಚು ದಿವ್ಯಪ್ರಭೆಯನ್ನು ಹೊಂದಿದೆ ಎಂದು ತಮ್ಮ ದಿವ್ಯದೃಷ್ಟಿಯಿಂದ ಕಂಡುಕೊಂಡರು. “ಇದು ಈ ಜಗತ್ತಿನಲ್ಲಿ ಅಪರೂಪಕ್ಕೆ ಜನಿಸಿದ ಒಂದು ಅದ್ಭುತ ಶಿಶು” ಎಂದು ಹೇಳಿದರು. ಮೇಲೆದ್ದು ಮಗು ಸುತ್ತ ಪ್ರದರ್ಶನ ಮಾಡಿ, ಅದರ ಪಾದಕ್ಕೆ ನಮಿಸಿದನು. ಶುದ್ಧೋಧನನ ಕೈಯಿಂದ ಮಗುವನ್ನು ಎತ್ತಿಕೊಂಡು ಧ್ಯಾನಾಸಕ್ತನಾಗಿ “ಇವನು ಭವಿಷ್ಯದಲ್ಲಿ ಗೃಹಸ್ಥನಾದರೆ ಈ ಲೋಕದ ಚಕ್ರಾಧಿಪತಿ ಆಗುತ್ತಾನೆ.

ಅಕಸ್ಮಾತ್ ಗೃಹಸ್ಥ ಜೀವನವನ್ನು ತ್ಯಾಗ ಮಾಡಿ ಸನ್ಯಾಸಿಯಾದರೆ ಬೋಧಿಸತ್ವನಾದ ಪೂರ್ಣ ಬುದ್ಧನಾಗುತ್ತಾನೆ” ಎಂಬ ಮನದಟ್ಟಾಯಿತು. ಆದರೆ ಮುಂದೆ ಗೃಹಸ್ಥನಾಗಿ ಜೀವಿಸಲಾರ ಎಂಬುದು ಮನಗಂಡರು. ಸ್ವಲ್ಪ ಸಮಯದ ನಂತರ ಅಸಿತ ಮುನಿ ಕಣೀರಿಟ್ಟನ್ನು ಇದನ್ನು ನೋಡಿ ಶುದ್ಧೋಧನ ಗಾಬತಿಯಾದನು.
ಆಗ ಮುನಿಗಳು “ಓ ರಾಜನೇ ಈ ಮಗುವಿಗೆ ಭವಿಷ್ಯದಲ್ಲಿ ಭಯವಿಲ್ಲ. ಆದರೆ ನಾನು ನನಗಾಗಿ ಕಣ್ಣೀರಿಡುತ್ತಿದ್ದೇನೆ” ಎಂದು ಹೇಳಿದರು. ಏಕೆ ಸ್ವಾಮಿ ಎಂದು ಶುದ್ಧೋಧನ ಪ್ರಶ್ನಿಸಿದಾಗ, ಅಸಿತ ಮುನಿಗಳು “ನಾನು ವೃದ್ಧನಾಗಿದ್ದೇನೆ.

ಈ ಬಾಲಕಮುಂದೆ ಬುದ್ಧನಾಗಿ ಈ ಜಗತ್ತಿನ ಪರಿಪೂರ್ಣ ಜ್ಞಾನಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಮುಂದೆ ಲೋಕಜ್ಞಾನಿಯಾಗುವ ಇವನು ಜಗತ್ತಿನಲ್ಲಿ ಈ ಹಿಂದೆ ಯಾರೊಬ್ಬ ಮಾನವರು ಮಾಡಿರದ ರೀತಿಯಲ್ಲಿ ತಾನು ಮನಗಂಡ ಸತ್ಯ ಮತ್ತು ಸಿದ್ಧಾಂತಗಳನ್ನು ಬೋಧನೆಯ ಮಾರ್ಗದ ಮೂಲಕ ಮಾಡುತ್ತಾ ಬದುಕಿನ ಪೂರ್ಣಚಕ್ರವನ್ನು ತಿರುಗಿಸುತ್ತಾನೆ. ಅವನ ಜ್ಞಾನದಿಂದಲೇ ಅಸಂಖ್ಯಾತ ಜನರನ್ನು ದುಃಖಸಾಗರದಿಂದ ಪಾರುಮಾಡಿ ಅವರನ್ನು ಸುಖಿಗಳನ್ನಾಗಿ ಮಾಡುತ್ತಾನೆ. ನಾನು ಈ ಬುದ್ಧನನ್ನು ನೋಡಲಾರೆನು.

ಆದ್ದರಿಂದ ಅವನನ್ನು ಪೂಜಿಸಲಾರೆನಲ್ಲಾ ಎಂಬ ದುಃಖದಿಂದ ನಿಟ್ಟುಸಿರುಬಿಟ್ಟು ಕಣ್ಣೀರು ಹಾಕುತ್ತಿದ್ದೇನೆ” ಎಂದು ಆಸಿತ ಮುನಿಗಳು ನುಡಿದರು. ನಂತರ ಶುದ್ಧೋಧನನ ಆತಿಥ್ಯ ಸ್ವೀಕತಿಸಿ ನಿರ್ಗಮಿಸಿದರು. ಮಗು ಜನಿಸಿದ ಐದನೆಯ ದಿನ ‘ಸಿದ್ಧಾರ್ಥ’ ಎಂಬ ಹೆಸರಿಡಲಾಯಿತು. ಶುದ್ಧೋಧನನ ಗೋತ್ರದ ಹೆಸರು ಗೌತಮ ಎಂಬುದಾಗಿತ್ತು. ಆದ್ದರಿಂದ ‘ಸಿದ್ಧಾರ್ಥ ಗೌತಮ’ ಎಂದು ಕರೆಯಲಾಯಿತು.

ತಾಯಿ ಮಹಾಮಾಯೆಯು ಏಳನೆ ದಿನದಲ್ಲಿ ಅನಾರೋಗ್ಯ ಕಾರಣ ಸಿದ್ಧಾರ್ಥನನ್ನು ಪ್ರತಾಪತಿಗೆ ವಶಕ್ಕೊಪ್ಪಿಸಿ ಚಿರನಿದ್ರೆಗೆ ಜಾರಿದಳು. ಸಿದ್ಧಾರ್ಥನಿಗೆ ‘ನಂದ’ ಎಂಬ ಕಿರಿಯ ಸಹೋದರನೂ ಇದ್ದನು (ಶುದ್ಧೋಧನ ಮತ್ತು ಪ್ರಜಾಪತಿಯ ಪುತ್ರ). ಚಿಕ್ಕಪ್ಪ ಶುಕ್ಲೋಧರನ ಮಕ್ಕಳಾದ ಮಹಾನಾಮ (ಸಿದ್ಧಾರ್ಥನಿಗಿಂತ ಹಿರಿಯ) ಮತ್ತು ಅನುರುದ್ಧ. ಮತ್ತೊಬ್ಬ ಚಿಕ್ಕಪ್ಪನಾದ ಅಮಿತೋಧನ ಮಗನಾದ ಆನಂದ, ಚಿಕ್ಕಮ್ಮನ ಮಗನಾದ ದೇವದತ್ತ ಮತ್ತು ಅಮಿತಾ ಎಂಬುವರಾಗಿದ್ದರು. ಸಿದ್ಧಾರ್ಥನು ಇವರುಗಳ ಸಹವಾಸದಲ್ಲಿಯೇ ಬೆಳೆದನು.

ಸಿದ್ಧಾರ್ಥನು ಎಂಟನೇ ವಯಸ್ಸಿನಲ್ಲಿ ಅರಮನೆಯ ಶಿಕ್ಷಣ ಆರಂಭಿಸಿದನು. ಎಂಟು ಬ್ರಾಹ್ಮಣರು ಪ್ರಥಮ ಗುರುಗಳಾಗಿದ್ದರು. ಸಬ್ಬಮಿತ್ತನು ಎರಡನೆಯ ಗುರುವಾಗಿದ್ದನು. ಅಲಾರಕಮನ ಮುನಿಯ ಶಿಷ್ಯನಾದ ಭಾರದ್ವಾಜ ಎಂಬಾತನಿಂದ ಸಿದ್ಧಾರ್ಥನು ಏಕಾಗ್ರತೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿದನು.

ಸಿದ್ಧಾರ್ಥನು ಮೂಲತಃ ಮೃದು ಸ್ವಭಾವದನಾಗಿದ್ದು, ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಶೋಷಿಸುವುದನ್ನು ಸಹಿಸುತ್ತಿರಲಿಲ್ಲ. ಒಮ್ಮೆ ಕಾರ್ಮಿಕನು ದುಡಿಯುವುದನ್ನು ನೋಡಿ “ಕಾರ್ಮಿಕರು ದುಡಿಯಬೇಕು; ಯಜಮಾನ ಮಾತ್ರ ಅದರ ಶ್ರಮದ ಫಲವನ್ನು ಅನುಭವಿಸಬೇಕು ಎಂಬುದು ಎಂತಹ ನ್ಯಾಯ” ಎಂದು ಪ್ರಶ್ನಿಸಿದನು.
ಸಿದ್ಧಾರ್ಥನು ಬೇಟೆಯಾಡುವುದನ್ನು ಸಹಿಸುತ್ತಿರಲಿಲ್ಲ. ಏಕೆಂದರೆ ಮನುಷ್ಯ ಮನುಷ್ಯನನ್ನು ಕೊಲ್ಲುವುದು ಮತ್ತು ಪ್ರಾಣಿಗಳನ್ನು ಕೊಲ್ಲುವುದು ತರವಲ್ಲ, ಎಂದು ಬೇಟೆಯಾಡುವುದನ್ನು ನಿರಾಕರಿಸಿದ್ದನು.

ಕ್ಷತ್ರಿಯನಾಗಿ ಇದೆಲ್ಲ ಕಲಿಯಬೇಕು ಎಂದು ಪ್ರಜಾಪತಿ ಮತ್ತು ಶುದ್ಧೋಧನನ ಬಯಕೆಯೆಯಾಗಿತ್ತು. ಆದರೆ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಸಿದ್ಧಾರ್ಥನ ಇಚ್ಚೆಯಾಗುತ್ತಿತ್ತು. ಧ್ಯಾನಕ್ಕೆ ಸ್ನೇಹಿತರನ್ನು ಪ್ರೇರೇಪಿಸುತ್ತಿದ್ದನು. ಸೂಕ್ತ ಆಸನಗಳನ್ನು ಕಲಿಸುವುದರ ಜೊತೆಗೆ “ನನಗೆ ಸುಖ ದೊರೆಯಲಿ, ನನ್ನ ಬಂಧು-ಬಾಂಧವರೆಲ್ಲರೂ ಸುಖವಾಗಿರಲಿ, ಜಗತ್ತಿನ ಎಲ್ಲಾ ಜೀವರಾಶಿಗಳು ಸುಖವಾಗಿರಲಿ” ಎಂಬ ವಿಷಯಗಳನ್ನು ಕುರಿತು ಧ್ಯಾನಿಸುವಂತೆ ಸ್ನೇಹಿತರಿಗೆ ಸಲಹೆ ನೀಡುತ್ತ ಪಾಲಿಸುತ್ತಿದ್ದನು. ಆದರೆ ಸ್ನೇಹಿತರು ಗಂಭೀರವಾಗಿ ಪಾಲಿಸುತ್ತಿರಲಿಲ್ಲ.
ದಂಡಪಾಣಿ ಎಂಬ ಶಾಕ್ಯನ 16 ವರ್ಷದ ಮಗಳಾದ ಯಶೋಧರೆಯನ್ನ 18 ವರ್ಷದ ಸಿದ್ಧಾರ್ಥನು ವಿವಾಹವಾದನು. ಹಲವು ವರ್ಷಗಳ ನಂತರ ರಾಹುಲ ಎಂಬ ಗಂಡು ಮಗುವಿಗೆ ಜನ್ಮ ನೀಡಿದಳು.

ಆಗಾಗ ಶೂದ್ಧೋಧನನಿಗೆ ಅಸಿತ ಮುನಿಗಳು ಹೇಳಿದ ಮಾತು ನೆನಪಾಗುತ್ತಿತ್ತು. ಸಿದ್ಧಾರ್ಥನು ಸನ್ಯಾಸಿಗಿಂತಲು ಚಕ್ರವರ್ತಿಯಾಗಿ ನೋಡುವುದು ಇಷ್ಟವಾಗುತ್ತಿತ್ತು. ಆದ್ದರಿಂದ ಸಿದ್ಧಾರ್ಥನ ಭೋಗ ಜೀವನಕ್ಕೆ ಋತುಮಾನಗಳಿಗೆ ಅನುಸಾರ ಚಳಿಗಾಲ, ಬೇಸಿಗೆ ಮತ್ತು ಮಳೆಗಾಲಕ್ಕೆ ತಕ್ಕಂತೆ ಮೂರು ಅರಮನೆಗಳನ್ನು ಕಟ್ಟಿ ಸುಂದರ ಯುವತಿಯರನ್ನ ಅಂತಃಪುರದಲ್ಲಿ ಇಟ್ಟಿದ್ದನು. ಆ ಮೋಹಕ ತಾರೆಯರು ಸಿದ್ಧಾರ್ಥನ ಮುಂದೆ ಸೋತೋದರು.

ಶಾಕ್ಯ ಜನಾಂಗದ ನಿಯಮದ ಪ್ರಕಾರ ಇಪ್ಪತ್ತು ವರ್ಷ ತುಂಬಿದ ಪ್ರತಿಯೊಬ್ಬ ಶಾಕ್ಯ ಯುವಕನೂ ಶಾಕ್ಯರ ಸಂಘದ ಸದಸ್ಯನಾಗಬೇಕಿತ್ತು. ಸಂಘದ ನಿಯಮಗಳಿಗೆ ಬದ್ಧನಾಗಿರಬೇಕಿತ್ತು. ಅದರಂತೆ ಸಿದ್ಧಾರ್ಥನು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಶಾಕ್ಯರ ಸಂಘದ ಸದಸ್ಯತ್ವವನ್ನು ಸ್ವೀಕರಿಸಿದನು. ನಂತರ ಎಂಟು ವರ್ಷಗಳ ಕಾಲ ಯಾವುದೇ ಗಂಭೀರ ಸಮಸ್ಯೆಯು ಬರಲಿಲ್ಲ ಎಂಟು ವರ್ಷಗಳು ಕಳೆದ ನಂತರ ಅಂದರೆ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಕಪಿಲವಸ್ತು ನಗರದ ಮಗ್ಗುಲಲ್ಲಿ ಹರಿಯುತ್ತಿದ್ದ ‘ರೋಹಿಣಿ’ ಎಂಬ ನದೀ ನೀರಿನ ಹಂಚಿಕೆಯ ವಿಚಾರವಾಗಿ ‘ಶಾಕ್ಯರಿಗೂ’ ಹಾಗೂ ಪಕ್ಕದ ಗಣರಾಜ್ಯವಾದ ‘ಕೋಲಿಯ’ ಎಂಬ ಸಮುದಾಯ ನಡುವೆ ಘರ್ಷಣೆ ಏರ್ಪಟ್ಟಿತು.

ಈ ಕುರಿತು ಶಾಕ್ಯರ ಸಂಘದ ಅಧಿವೇಶನದಲ್ಲಿ ಚರ್ಚೆನಡೆಯಿತು. ಪದೇ ಪದೇ ಜಗಳವಾಡುವ ಕೋಲಿಯರಿಗೆ ಬುದ್ದಿ ಕಲಿಸುವ ಉದ್ದೇಶದಿಂದ ಅವರ ಮೇಲೆ ಯುದ್ಧ ಮಾಡಬೇಕೆಂದು ಸಂಘ ತೀರ್ಮಾನ ತೆಗೆದುಕೊಂಡಿತು. ಈ ತೀರ್ಮಾನವನ್ನು ಮತಕ್ಕೆ ಹಾಕಿದಾಗ ಸಿದ್ಧಾರ್ಥನು ಎದ್ದು ನಿಂತು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬಹುದಾದ ನೀರಿನ ವಿಷಯದಲ್ಲಿ ನಮ್ಮ ಸಹೋದರರಂತೆ ಇರುವ ಕೋಲಿಯರ ಮೇಲೆ ಯುದ್ಧ ಬೇಡವೆಂದು ತನ್ನ ಅಭಿಪ್ರಾಯವನ್ನು ಮಂಡಿಸಿದರು.

ಸಿದ್ಧಾರ್ಥನ ಅಭಿಪ್ರಾಯಕ್ಕೆ ಬಹುಮತಬಾರದೇ ಬಿದ್ದು ಹೋಯಿತು. ಆ ಸಂದರ್ಭದಲ್ಲಿ ತನ್ನ ನಿಲುವಿಗೆ ಅಂಟಿಕೊಂಡ ಸಿದ್ಧಾರ್ಥನು ನಾನು ಯುದ್ಧ ಮತ್ತು ಹಿಂಸೆಯ ವಿರೋಧಿ. ಹಾಗಾಗಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದನು. ಏಕೆಂದರೆ ಯುದ್ಧ ಮಾಡುವುದರಿಂದ ನಮ್ಮ ಉದ್ದೇಶಗಳನ್ನು ಈಡೇರುವುದಿಲ್ಲ. ಬದಲಾಗಿ ಮತ್ತೊಂದು ಯುದ್ಧಕ್ಕೆ ಬೀಜವನ್ನು ಬಿತ್ತುತ್ತವೆ. ಎಂಬುದು ಸಿದ್ಧಾರ್ಥನ ಚಿಂತೆನೆಯಾಗಿತ್ತು.

ಶಾಕ್ಯರ ನಿಯಮದ ಪ್ರಕಾರ ಸಂಘದ ಸದಸ್ಯನಾದವನು ಮೂರು ನಿಯಮಗಳಲ್ಲಿ ಒಂದನ್ನು ಕಡ್ಡಾಯವಾಗಿ ಪಾಲಿಸ ಬೇಕಿತ್ತು. ಅವುಗಳೆಂದರೆ- ಒಂದು ಯುದ್ಧ ಮಾಡುವುದು ಎರಡು ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವುದು. ಮೂರು ಗಡಿಪಾರು ಶಿಕ್ಷೆಗೆ ಗುರಿಯಾಗಿ ದೇಶಭ್ರಷ್ಟನಾಗಿ ರಾಜ್ಯದಿಂದ ಹೊರ ಹೋಗುವುದು. ಈ ಮೂರು ಅವಕಾಶಗಳಲ್ಲಿ ಸಿದ್ಧಾರ್ಥನು ಯುದ್ಧ ಮತ್ತು ಹಿಂಸೆಯನ್ನು ವಿರೋಧಿಸಿ, ಗಡಿಪಾರಿನ ಶಿಕ್ಷೆಯನ್ನು ಆಯ್ಕೆ ಮಾಡಿಕೊಂಡನು.

ಇದಾದ ನಂತರ ತನ್ನ ಅರಮನೆಗೆ ತಲುಪುವ ಮೊದಲೇ ಆತನ ತಂದೆ-ತಾಯಿಯರಿಗೆ ವಿಷಯ ತಿಳಿದು ತೀವ್ರ ದುಃಖತಪ್ತರಾಗಿದ್ದರು. “ನೀನೇ ಇಲ್ಲದಿರುವಾಗ ನಮಗೆ ಈ ಭೂಮಿಯಿಂದ ಪ್ರಯೋಜನವಾದರೂ ಏನು?” ಎಂದು ಶುದ್ಧೋಧನ ಕಣ್ಣೀರಿಟ್ಟನು. ಪ್ರಜಾಪತಿ ಗೌತಮಿಯು ಶುದ್ಧೋಧನ ಮಾತಿಗೆ ಧ್ವನಿಗೂಡಿಸಿ “ನಾನು ಸಹ ಅವರ ಮಾತನ್ನು ಒಪ್ಪುತ್ತೇನೆ. ನಮ್ಮನೆಲ್ಲ ತೊರೆದು ನೀನು ಏಕಾಂಗಿಯಾಗಿ ಹೇಗೆ ಹೋಗಬಲ್ಲೆ?” ಎಂದು ಮಗನನ್ನು ಪ್ರಶ್ನಿಸಿದಳು.

ಸಿದ್ಧಾರ್ಥನು ತನ್ನ ತಾಯಿಯನ್ನು ಸಂತೈಸುತ್ತಾ, “ಅಮ್ಮಾ, ನೀನು ಕ್ಷತ್ರಿಯನ ತಾಯಿಯೆಂದು ಯಾವಾಗಲೂ ಹೇಳಿಕೊಳ್ಳುತ್ತಿರಲಿಲ್ಲವೇ? ಆದ್ದರಿಂದ ನೀನು ಈಗ ಒಬ್ಬ ಧೀರ ತಾಯಿಯಂತೆ ವರ್ತಿಸಬೇಕು. ಈ ರೀತಿ ದುಃಖಿಸುವುದು ನಿನ್ನಂತಹವಳಿಗೆ ಶೋಭೆ ತರುವುದಿಲ್ಲ. ನಾನು ಯುದ್ಧರಂಗಕ್ಕೆ ಹೋಗಿ ಮರಣ ಹೊಂದಿದ್ದರೆ ಏನು ಮಾಡುತ್ತಿದ್ದೇ? ಆಗಲೂ ನೀನು ಈ ರೀತಿ ದುಃಖಿಸುತ್ತಿದ್ದೆಯಾ?” ಎಂದು ಪ್ರಶ್ನಿಸಿದನು.

ಆಗ ಪ್ರಜಾತಿಯು “ಯುದ್ಧರಂಗದಲ್ಲಿ ಅಂತಹ ಸಾವು ಕ್ಷತ್ರಿಯನಿಗೆ ಶೋಭೆ ತರುವುದು. ಆದರೆ, ನೀನು ನಿರ್ಜನ ಅರಣ್ಯಕ್ಕೆ ತೆರಳಿ ಜನಸಮೂಹದಿಂದ ದೂರವಿದ್ದು ಬದುಕಲು ಹೊರಟಿದ್ದೀಯ!. ನಾವು ಇಲ್ಲಿ ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ? ನಮ್ಮನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು ಎಂದು ಹೇಳುತ್ತಿದ್ದೇನೆ” ಎಂದಂಳು.

“ಅಮ್ಮಾ ನೀನು ದಯವಿಟ್ಟು ನನ್ನ ದಾರಿಗೆ ಅಡ್ಡ ಬರಬೇಡ. ನನಗೆ ಅನುಮತಿಯಿತ್ತು, ಆಶೀರ್ವದಿಸು. ಈಗ ನಡೆಯುತ್ತಿರುವುದೆಲ್ಲವೂ ಒಳ್ಳೆಯದಕ್ಕೆ ಎಂದು ಭಾವಿಸು” ಎಂದು ಸಿದ್ಧಾರ್ಥನು ಒತ್ತಾಯಿಸಿದನು. ಗೌತಮಿ ಮತ್ತು ಶುದ್ಧೋಧನ ಮೌನಕ್ಕೆ ಶರಣಾದರು.
ನಂತರ ಸಿದ್ಧಾರ್ಥನು ಪತ್ನಿ ಯಶೋಧರೆ ವಾಸಗೃಹದತ್ತ ನೆಡೆದನು. ವಿಷಯ ಹೇಳಿ ಹೇಗೆ ಒಪ್ಪಿಸಲಿ ಎಂದು ಮೌನವಾಗಿ ಯಶೋಧರೆ ಮುಂದೆ ನಿಂತನು. ಆಗ ಯಶೋಧರೆ “ಕಪಿಲವಸ್ತುವಿನ ಸಂಘದ ಸಭೆಯಲ್ಲಿ ನಡೆದ ಸಂಗತಿಯೆಲ್ಲ ನನಗೆ ಗೊತ್ತಿದೆ” ಎಂದಳು. ಹಾಗಾದರೆ ‘ಪರಿವ್ರಾಜಕನಾಗಬೇಕೆಂಬ ನನ್ನ ನಿರ್ಣಯವ ಬಗ್ಗೆ ನಿನ್ನ ಅಭಿಪ್ರಾಯವೇನು?’ ಎಂದು ಕೇಳಿದನು.

ಯಶೋಧರೆಯು “ನಿನ್ನ ಸ್ಥಾನದಲ್ಲಿ ನಾನಿದ್ದರೂ ಇದನ್ನೇ ಮಾಡಬೇಕಿತ್ತು. ಇದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿತ್ತು? ಕೋಲಿಯರ ಮೇಲಿನ ಯುದ್ಧದಲ್ಲಿ ಭಾಗವಹಿಸಲು ನಾನು ಒಪ್ಪುತ್ತಿರಲಿಲ್ಲ. ನಿಮ್ಮ ತೀರ್ಮಾನ ಸರಿಯಾಗಿದೆ. ಇದಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ ಜೊತೆಗೆ ಸಹಕಾರವೂ ಇದೆ. ನಾನು ನಿಮ್ಮೊಂದಿಗೆ ಪರಿವ್ರಾಜಕತ್ವವನ್ನು ಸ್ವೀಕರಸಬಹುದಿತ್ತು. ಆದರೆ, ರಾಹುಲನನ್ನು ನೋಡಿಕೊಳ್ಳಬೇಕಾಗಿರುವುದರಿಂದ ನಾನು ಹಾಗೆ ಮಾಡಲಾರೆ.

ನೀವು ನಿಮ್ಮ ತಂದೆ ತಾಯಿ ಮತ್ತು ಮಗುವಿನ ವಿಚಾರದಲ್ಲಿ ಆತಂಕ ಪಡಬೇಡಿ. ನನ್ನ ಕೊನೆಯ ಉಸಿರು ಇರುವ ವರೆಗೂ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ನೀವು ನಿಮ್ಮ ಬಂಧುಬಾಂಧವರನ್ನೆಲ್ಲ ತ್ಯಜಿಸಿ ಪರಿವ್ರಾಜಕ ದೀಕ್ಷೆಯನ್ನು ಸ್ವೀಕರಿಸುತ್ತಿರುವದರಿಂದ ನಿಮ್ಮ ಜೀವನದ ಹೊಸಪಥದ ಅನ್ವೇಷಣೆಯಲ್ಲಿ ಮನುಕುಲಕ್ಕೆ ಶ್ರೇಯಸ್ಸು ಸಿಗುವಂತಾಗಲಿ ಎಂದು ಹಾರೈಸುತ್ತೇನೆ” ಎಂದು ಉತ್ತರಿಸಿದಳು.

ಯಶೋಧರೆಯ ಮಾತನ್ನು ಕೇಳಿ ಸಿದ್ಧಾರ್ಥನು ತುಂಬಾ ಪ್ರಭಾವಿತನಾದನು. ಯಶೋಧರೆಯು ಎಂತಹ ಉದಾರಶೀಲಳು, ಶೌರ್ಯಸಂಪನ್ನಳು, ದೃಢಚಿತ್ತಳು ಎಂಬುದು ಅವನಿಗೆ ಮನದಟ್ಟಾಯಿತು. ತಾನು ಎಂಹತ ಅದೃಷ್ಟಶಾಲಿ. ಆದರೆ, ವಿಧಿ ತಮ್ಮಿಬ್ಬರನ್ನೂ ಬೇರ್ಪಡಿಸುತ್ತಿದೆ ಎಂದುಕೊಂಡನು. ಅನಂತರ ರಾಹುಲನನ್ನು ಕರೆತರುವಂತೆ ಆಕೆಗೆ ತಿಳಿಸಿದನು. ಪಿತೃವಾತ್ಸಲ್ಯ ತುಂಬಿದ ನೋಟದಿಂದ ಮಗುವನ್ನು ಒಮ್ಮೆ ನೋಡಿ ಅಲ್ಲಿಂದ ನಿರ್ಗಮಿಸಿದನು.

ಹೀಗೆ ತಂದೆ ತಾಯಿ ಪತ್ನಿ ಯಶೋಧರೆಗೆ ತಾನು ಪಾರಿವ್ರಾಜಕ ಪಡೆಯುವುದಾಗಿ ಒಪ್ಪಿಗೆಯನ್ನು ಪಡೆದನು. ಮರುದಿನ ಪ್ರೀತಿಯ ಕುದುರೆ ಕಂಥಕವನ್ನು ಏರಿ, ಸೇವಕನಾದ ಚನ್ನನ ಜೊತೆ ಕಪಿಲವಸ್ತು ಸಮೀಪವಿದ್ದ ಭಾರಧ್ವಜ ಎಂಬ ಮುನಿಯ ಆಶ್ರಮದತ್ತ ನಡೆದರು. ತಾನು ಧರಿಸಿದ್ದ ವಸ್ತ್ರಾಭರಣಗಳನ್ನು ಕಳಚಿ ಚನ್ನನಿಗೆ ನೀಡಿ ತಲೆ ಕೂದಲನ್ನು ತೆಗೆಸಿ, ಬಿಕ್ಷೆ ಪಾತ್ರೆಯನ್ನು ಹಿಡಿದು ಪಾರಿವ್ರಾಜಕವನ್ನು ತನ್ನ 29 ವಯಸ್ಸಿನಲ್ಲಿ ಸ್ವೀಕರಿಸಿದನು.

ಮುಂದೊಂದು ಕೆಲವು ದಿನಗಳ ನಂತರ ಐದು ಜನ ಪರಿವ್ರಾಜಕ ಪಡೆದ ಬಿಕ್ಕುಗಳು ಗೌತಮನ ಕುಟಿರವ ಬಳಿ ತಮ್ಮ ಕುಟಿರವನ್ನು ನಿರ್ಮಿಸಿಕೊಳ್ಳಲು ಬಂದಾಗ, ಸಿದ್ಧಾರ್ಥನ ಪರಿವ್ರಾಜಕದ ಹಿನ್ನೆಲೆ ತಿಳಿದು. ನೀವು ಕಪಿಲವಸ್ತುವನ್ನು ತ್ಯಜಿಸಿ ಬಂದಾಗ ಶಾಕ್ಯರು ಕೋಲಿಯರ ವಿರುದ್ಧ ಯುದ್ಧ ಮಾಡಬಾರದೆಂದು ದೊಡ್ಡ ಚಳುವಳಿಯೇ ನಡೆಯಿತು.

“ಕೋಲಿಯರು ನಮ್ಮ ಸಹೋದರರು, ಸಹೋದರರಾದವರು ಪರಸ್ಪರ ಕಾದಾಡುವುದು ತಪ್ಪು, ಸಿದ್ಧಾರ್ಥ ಗೌತಮನ ದೇಶತ್ಯಾಗವನ್ನು ಮರೆಯಬೇಡಿ” ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿ ಶಾಂತಿಯುತವಾಗಿ ‘ರೋಹಿಣಿ’ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡರು. ನೀವು ಪರಿವ್ರಾಜಕ ಬಿಟ್ಟು ನಿಮ್ಮ ಕುಟುಂಬವನ್ನು ಸೇರಬಹುದಲ್ಲ ಎಂದರು.

ಅದಕ್ಕೆ ಸಿದ್ಧಾರ್ಥನು ಈ ಶುಭಾವಾರ್ತೆಯನ್ನು ತಿಳಿಸಿದ್ದು ನನಗೆ ಸಂತೊಷವಾಗಿದೆ ಇದು ನನಗಾದ ಗೆಲುವು ನಿಜ. ಆದರೆ ನಾನು ಹಿಂದಿರುಗಲಾರೆ. ನಾನು ಪರಿವ್ರಾಜಕವನ್ನು ಮುಂದುವರೆಸುವೆ. ಎಂದು ಮುಂದೆ ದೀರ್ಘ ತಪಸ್ಸಿನಿಂದ ಸಿದ್ಧಾರ್ಥ ಗೌತಮ ಬದಲಾಗಿ ಗೌತಮ ಬುದ್ದನಾಗುತ್ತಾನೆ.
ಇದಾದ ಏಳು ವರ್ಷಗಳ ನಂತರ ತಂದೆ ತಾಯಿ ಶುದ್ಧೋದನ (ಕೊನೆಯ ಭೇಟಿ), ಪ್ರಜಾಪತಿ ಗೌತಮಿ, ಪತ್ನಿ ಯಶೋಧರೆ ಮತ್ತು ಮಗ ರಾಹುಲನನ್ನು ಭೇಟಿ ಮಾಡುತ್ತಾನೆ.

ಬುದ್ಧನಿಗೆ ಎಂಬತ್ತು ವರ್ಷದ ವಯಸ್ಸಿನಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿದನು. ಕೊನೆಯಲ್ಲಿ ಮಗನನ್ನು ಭೇಟಿ ಮಾಡಿ ಉಪದೇಶವನ್ನು ಹೇಳಿದನು.ಬುದ್ಧನ ಕೊನೆಯ ದಿನಗಳೆಂದರೆ ಕ್ರಿ.ಪೂ. 482 ನೇ ವೈಶಾಖ ಪೌರ್ಣಿಮೆಯ ನಡುರಾತ್ರಿಯಲ್ಲಿ ಬುದ್ಧನು ಅಸುನೀಗಿದನು.
ಪಠ್ಯಪುಸ್ತಕಗಳಲ್ಲಿ ವಿಷಯಗಳನ್ನು ಸೇರಿಸುವಾಗ ಸತ್ಯಾಸತ್ಯತೆಗಳನ್ನು ಪರಮರ್ಶನ ಮಾಡಬೇಕು.

ಇತಿಹಾಸಕಾರರು ಇತಿಹಾಸವನ್ನು ವ್ಯಕ್ತಿನಿಷ್ಟತೆಗೆ ಅಥವಾ ವಸ್ತುನಿಷ್ಟತೆಗ ಆಧ್ಯತೆ ನೀಡಿರುವರೆ ಎಂಬುದನ್ನು ವಿಮರ್ಶೆಗೆ ಒಳಪಡಿಸಿದಾಗ ನೈಜ ಇತಿಹಾಸ ಅನಾವರಣಗೊಳ್ಳುವುದು. ಈ ಪ್ರಯತ್ನ ಪಠ್ಯಕ್ರಮ ರಚನೆಕಾರರು ಮಾಡಬೇಕು. ಶಿಕ್ಷಕರು ವಿಮರ್ಶಿಸಿ ವಿದ್ಯಾರ್ಥಿಗಳಿಗೆ ಹೇಳಿದಾಗ ಮಾತ್ರ ವಿದ್ಯಾರ್ಥಿಗಳು ಸತ್ಯಾಸತ್ಯತೆಗಳನ್ನು ಪರಮರ್ಶನೆ ಮಾಡುವ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಲು ಸಾಧ್ಯ. ಈ ರೀತಿ ವಿದ್ಯಾರ್ಥಿಗಳು ಸತ್ಯಾನ್ವೇಷಣೆ ಮೂಲಕ ಸಂಶೋಧನಾ ಪ್ರವೃತ್ತಿಗಳು ಬೆಳೆಸಿಕೊಳ್ಳುವರು.

ಕೃತಿ : “ಬುದ್ಧ ಅಂಡ್ ಹಿಸ್ ಧಮ್ಮ” – ಡಾ.ಬಿ.ಆರ್. ಅಂಬೇಡ್ಕರ್

-ಸಂಪಾದನೆ
ವೆಂಕಟೇಶ್ ಎಸ್
ಸಹಾಯಕ ಪ್ರಾಧ್ಯಾಪಕರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending