ದಿನದ ಸುದ್ದಿ
ಬಹುಜನ ನಾಯಕನ ‘ದಾದಾಸಾಹೇಬ್ ಕಾನ್ಸಿರಾಂ’ ಪರಿನಿಬ್ಬಾಣದ ಸ್ಮರಣೆ
ಭಾರತದ ಬಹುಜನ ರಾಜಕಾರಣ ಕಟ್ಟಿ ಯಶಸ್ವಿಯಾದ ರಾಜಕೀಯ ಸಾಮಾಜಿಕ ವಿಜ್ಞಾನಿ ‘ದಾದಾಸಾಹೇಬ್ ಕಾನ್ಸಿರಾಂ ಜೀ’ ಅವರನ್ನು ‘ಪೊಲಿಟಿಕಲ್ ಲೆಜೆಂಡ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ರಾಜಕಾರಣ ಎಂದರೆ ನಮಗೆ ಬೇಡವೇ ಬೇಡ ಎನ್ನುವ ಅಸಮರ್ಥ ಅಸಹಾಯಕ ಸಮುದಾಯದ ಎದೆಯೊಳಗೆ ಅರಸೊತ್ತಿಗೆಯ ಕನಸು ಬಿತ್ತಿದ ಮಹಾನ್ ಚೇತನ ಕಾನ್ಸಿರಾಮ್ ಜಿ.
ಭಾರತದಲ್ಲಿ ಯಾವುದಾದರೂ ಒಂದು ಹಿಂದೂಳಿದ ವರ್ಗ ದಲಿತ,ಅಲ್ಪಸಂಖ್ಯಾತ, ಎಂದು ಬಹುಜನ ಪರಿವರ್ತನಾ ಚಳವಳಿ ಯಶಸ್ವೀ ಆಗಿದೆ ಅಧಿಕಾರ ಇಡಿದ ರಾಜಕಾರಣ ಮಾದರಿ ಇದ್ದರೆ ಅದೊಂದು BSP ಎಂದು ಹೇಳಬಹುದು. ಭಾರತಾದ್ಯಂತ ಕಾನ್ಸಿರಾಂ ಜೀ ರಾಜಕಾರಣ ವಿದ್ಯೆ ಬಳಸಿಕೊಂಡು ಇಂದಿಗೂ ರಾಜಕಾರಣ ಮಾಡಿ ಕಡಿಮೆ ಸಂಖ್ಯೆಯ ಶಾಸಕರು ಆಯ್ಕೆಯಾದರು ಮುಖ್ಯಮಂತ್ರಿ ಪದವಿ ಪಡೆಯಬಹುದು ಎಂದು ತೋರಿಸಿಕೊಟ್ಟರು.
ಇಂದಿಗೂ ಭಾರತದಲ್ಲಿ ಬ್ರಾಹ್ಮಣಶಾಹಿ ವ್ಯವಸ್ಥೆ ಅಡಿಯಲ್ಲಿ ಹುಟ್ಟಿದ ಪಕ್ಷಗಳಾದ CONGRESS,BJP, ಅಂತಹ ಪಕ್ಷಗಳು ಪರ್ಯಾಯವಾಗಿ ರಾಜಕಾರಣ ಮಾಡಬಹುದು ಮತ್ತು ಅತಿ ಕಡಿಮೆ ಸಮಯದಲ್ಲಿ BSP ರಾಷ್ಟ್ರದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ಹಿಂದೂಳಿದ ವರ್ಗದ ಮಹಾತ್ಮರ ಬಗ್ಗೆ ಸಂಶೋಧನೆ ನಡೆಸಿ ಇವತ್ತಿಗೂ ಸಂತ ರವಿದಾಸ್, ಜ್ಯೋತಿ ಬಾಹುಪುಲೆ ದಂಪತಿಗಳ ಶಾಹುಮಹರಾಜ್,ಸಯ್ಯಾಜಿ ಗಾಯಕವಾಡ,ನಾಲ್ವಡಿ ಕೃಷ್ಣರಾಜ ಒಡೆಯರ್,ಪೆರಿಯಾರ್ ನಾರಯಣಗುರು,ಬುದ್ದ ಬಸವ ಬಾಬಾಸಾಹೇಬ್ ಸಂವಿಧಾನವನ್ನು ಅಂತಹ ಮಹನೀಯರು ವಿಚಾರಧಾರೆ ತನ್ನ ಮೊದಲ ತತ್ವ ಸಿದ್ದಾಂತ ಚಳವಳಿಯನ್ನು ಮುನ್ನಡೆಗೆ ಕಾರಣವಾದ ಬಹುಜನ ಚಳವಳಿ ಒಂದು ಪರಿವರ್ತನಾ ಹಾದಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಬಹುಶಃ ಭಾರತದಲ್ಲಿ ಕಾಂಗ್ರೆಸ್ ಬಿಜೆಪಿ ಹೊರತುಪಡಿಸಿ ಶೋಷಿತ ವರ್ಗದ ಜನರು ಕೂಡ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂದು ತೊರೊಸಿಕೊಟ್ಟ ರಾಜಕೀಯ ನಿಪುಣ ಕಾನ್ಸಿರಾಮ್ ಜೀ.
ದಲಿತ,ಅಲ್ಪಸಂಖ್ಯಾತ, ಹಿಂದೂಳಿದ ವರ್ಗಗಳು ಅಧಿಕಾರ ವಂಚಿತ ಸಣ್ಣಪುಟ್ಟ ಸಮುದಾಯದವರು ನಾವು ಕೂಡ ಸ್ವಂತ ಪವರ್ ಪಾಲಿಟಿಕ್ಸ್ ಮಾಡಬೇಕು ಅದನ್ನು ತಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕು ಎಂದು ಪಣತೊಟ್ಟ ದಾದಾಸಾಹೇಬ್ ಕಾನ್ಸಿರಾಮ್ ದೇಶ ಬಹುದೊಡ್ಡ ಪ್ರಮಾಣದ ಜನಸಂಖ್ಯೆಯುಳ್ಳ ಉತ್ತರ ಪ್ರದೇಶದಲ್ಲಿ ಕುಮಾರಿ ಮಾಯಾವತಿ ಮೇಡಂ ಅವರಿಗೆ ನಾಲ್ಕು ಸಾರಿ ಮುಖ್ಯಮಂತ್ರಿ ಮಾಡೋದು ಎಂದರೆ ಸಾಮಾನ್ಯ ಕಾರ್ಯವಲ್ಲ.
ಬಹುತೇಕ ಇತ್ತೀಚೆನ ವರ್ಷಗಳ ರಾಜಕಾರಣದಲ್ಲಿ ಕಾನ್ಸಿರಾಮ್ ಜೀ ಅವರ ರಾಜಕೀಯ ಲೆಕ್ಕಾಚಾರ ಮಾದರಿ ಬಳಸಿಕೊಂಡು ಇಪ್ಪತ್ತೈದು ಶಾಸಕರನ್ನು ಹೊಂದಿರುವ ಪಕ್ಷಗಳು ಕೂಡ ಮುಖ್ಯಮಂತ್ರಿ ನಾನೆ ಆಗುವೆ ಎಂದು ಆತ್ಮವಿಶ್ವಾಸದಿಂದ ಹೇಳಬಹುದು ಎಂದರೆ ಆದರ ಮೂಲಪುರುಷ ಕಾನ್ಸಿರಾಮ್ ರಾಜಕಾರಣ ಮಾದರಿ ಕೊನೆಗೆ ಉ.ಪ್ರ.ಬಿಹಾರ್,ಕರ್ನಾಟಕದ ಜೆಡಿಎಸ್ ಪಕ್ಷ ಕೂಡ ಅಲ್ಪಸ್ವಲ್ಪ ಶಾಸಕರು ಹೊಂದಿದ್ದರೂ ಕೂಡ ಮುಖ್ಯಮಂತ್ರಿ ಗಾದಿಯನ್ನು ಅನುಭವಿಸಲು ಸಾಧ್ಯವಾಗಿದೆ ಎಂದರೆ ಕಾನ್ಸಿರಾಮ್ ರಾಜಕಾರಣ ತಂತ್ರ ನೀತಿಗಳನ್ನು ಇವೆಲ್ಲವೂ ಪಕ್ಷಗಳು ಅವರು ನಾಯಕರು ಅನುಸರಿಸಿ ಅಧಿಕಾರ ಪಡೆದುಕೊಂಡರು.
ಕರ್ನಾಟಕದಲ್ಲಿ ಒಂದೂವರೆ ಕೋಟಿಗೂ ಅಧಿಕ
ಜನಸಂಖ್ಯೆ ಅಸ್ಪೃಶ್ಯರಾದ ದಲಿತ ವರ್ಗದವರು
ಇದ್ದಾರೆ ಹಾಗೂ ವಾಲ್ಮೀಕಿ, ಅಲ್ಪಸಂಖ್ಯಾತ,ಗೊಲ್ಲರ ಸಮುದಾಯ,ಮಡಿವಾಳ,ಉಪ್ಪಾರ,ಸವಿತಾ,ಇನ್ನಿತರ ಸಣ್ಣಪುಟ್ಟ ಸಮುದಾಯದವರು ಕೂಡಿಕೊಂಡು ಬಹುಜನ ಸಮಾಜದ ಚಳುವಳಿ ಮುನ್ನಡೆಸಿದರೆ ಕೇವಲ ಹತ್ತು ವರ್ಷಗಳಲ್ಲಿ ಒಬ್ಬ ಮುಖ್ಯಮಂತ್ರಿಯಾದರು ಆಗಬಹುದು.
ಆದರೆ ಈ ಸಮುದಾಯದವರು ಕೇವಲ ಹಲವು ಪಕ್ಷಗಳಿಗೆ ಮತಬ್ಯಾಂಕ್ ಆಗಿವೆ ಸ್ವಂತ ಅಧಿಕಾರ ಗದ್ದುಗೆ ಹಿಡಿಯಬಹುದು ಎನ್ನುವ ಆಶಭಾವನೆ ಕಳಕೊಂಡು ಕಮರಿ ಹೋಗಿವೆ ಆದರೆ ನಮ್ಮ ಮುಂದೆ ಇರುವ ಒಕ್ಕಲಿಗರ ಸಮುದಾಯದವರು ತಮ್ಮದೆ ಜಾತಿ ಜನಸಂಖ್ಯೆ ಇಟ್ಟುಕೊಂಡು ಪಕ್ಷ ಕಟ್ಟಿ ಎರಡು ಬಾರಿ ಮುಖ್ಯಮಂತ್ರಿ, ಒಂದು ಬಾರಿ ದೇಶದ ಪ್ರಧಾನಿ ಆದರೂ ಇದೇ ರೀತಿ ಸಂಘಪರಿವಾರದ ಪೋಷಕ ಪಾತ್ರದಲ್ಲಿ ವಹಿಸಿಕೊಂಡ ಲಿಂಗಾಯತರು ಸತತ ಮುಖ್ಯಮಂತ್ರಿ ಗಾದಿ ಅನುಭವಿಸುತ್ತಲೇ ಇದ್ದಾರೆ ಆದರೆ ಜನಸಂಖ್ಯೆನೆ ಇಲ್ಲದ ಬ್ರಾಹ್ಮಣರು ಎಲ್ಲಾ ಸಚಿವ ಸಂಪುಟದಲ್ಲಿ ನಾಲ್ಕು ಖಾತೆಯನ್ನು ಹೊಂದಬಹುದು.
ಈ ದಲಿತರಲ್ಲೆ ಬಲಾಡ್ಯ ಸಮುದಾಯಗಳಾದ,ವಾಲ್ಮಿಕಿ,ಮಾದಿಗರು,ಹೊಲೆಯರು, ಗಳು,ಮುಸ್ಲಿಂರು,ಸದಾಕಾಲವೂ BJP,CONG,ಪಕ್ಷಗಳು ಕಾಲಕೆಳಗೆ ಅಧಿಕಾರ ಪಡೆದು ತನ್ನದೆ ಸಮುದಾಯದ ಜನರ ಮೇಲೆ ದಿನ ನಿತ್ಯ ನಡೆಯುವ ದೌರ್ಜನ್ಯ ಹಿಂಸೆ ಕೊಲೆ ಅತ್ಯಾಚಾರ ಮಾಡುವುದನ್ನು ಕನಿಷ್ಟ ವಿರೋಧ ವ್ಯಕ್ತಪಡಿಸದಷ್ಟು ನಿಷ್ಪ್ರಯೋಜಕ ಅಸಹಾಯಕ ಜೀವಂತ ಸಮಾಧಿ ಆಗಿದ್ದಾರೆ.
ಕರ್ನಾಟಕದಲ್ಲಿ ಬಹುಸಂಖ್ಯಾತರಾದ ದಲಿತ,
ಅತಿ ಹಿಂದೂಳಿದ ವರ್ಗ,ಅಲ್ಪಸಂಖ್ಯಾತರು ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅಧಿಕಾರದಿಂದ ವಂಚಿತ ಈ ಸಮುದಾಯಗಳು ಅಧಿಕಾರವನ್ನು ಹಿಡಿಯಬಹುದು ಏಕೆಂದರೆ ಈ ಚಳವಳಿ ಮರೆಮಾಚಿದ ಇತಿಹಾಸವನ್ನು ಪೂರ್ವಿಕರು ಬಗ್ಗೆ ತನ್ನ ಚಳವಳಿ ಭಾಗವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಬಹುಜನ ಚಳುವಳಿ ನೇತೃತ್ವವನ್ನು ಅಹಿಂದ ವರ್ಗಕ್ಕೆ ಕೈಗೆ ಕೊಟ್ಟು ತ್ಯಾಗ ಮನೋಭಾವ ಇಟ್ಟುಕೊಂಡು ರಾಜಕಾರಣ ಯುದ್ಧನೀತಿ ನಿರೂಪಿಸಿದರೆ ಅನೇಕ ಸಣ್ಣಪುಟ್ಟ ಅಧಿಕಾರ ವಂಚಿತ ಸಮುದಾಯಗಳು ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರೆ
ಈ ರಾಜ್ಯದ ಸುಧಾರಣೆ ಕಾಣಲು ಸಾದ್ಯ ಜೊತೆಗೆ ಕಾನ್ಸಿರಾಂ ಜೀ ಅವರ ರಾಜಕೀಯ ವಿಚಾರಧಾರೆ ಪ್ರಸ್ತುತ ರಾಜಕಾರಣದಲ್ಲಿ ಸಮೀಕರಣವನ್ನು ಬಳಸಿಕೊಂಡು ಒಂದು ಅದ್ಭುತ ಯಶಸ್ಸನ್ನು ದಾಖಲಿಸಬಹುದು ಸಕ್ಸಸ್ ಮಾದರಿ ರಾಜಕಾರಣ ಬಗ್ಗೆ ಹೆಚ್ಚು ಗಮನ ಹರಿಸಿದರೆ ಈ ಮಾದರಿ ರಾಜಕಾರಣ ಸಕ್ಸಸ್ ಆಗಬಹುದು.
-ಹನುಮೇಶ್ ಗುಂಡೂರು, ವಕೀಲರು
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
-
ದಿನದ ಸುದ್ದಿ1 day ago
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ