ದಿನದ ಸುದ್ದಿ
ಆಸೆಯೇ ದುಃಖಕ್ಕೆ ಕಾರಣ ಇದು ಎಷ್ಟು ಸರಿ..?
- ಶಿವಸ್ವಾಮಿ,ಬೌದ್ಧ ಉಪಾಸಕರು
ಆಸೆಯೇ ದುಃಖ್ಖಕ್ಕೆ ಕಾರಣ ಎಂದೂ ಯಾರಾದ್ರೂ ಥಟ್!ಅಂತಾ ! ಹೇಳಿದರೆ ಮನಸ್ಸಿಗೆ ಮೊದಲು ಬರುವವರೇ ಬುದ್ಧ. ಹಾಗಾದರೆ ಮನುಷ್ಯನಾದವನು ಆಸೆಗಳನ್ನು ಹೊಂದಾಬಾರದೆ? ಆಸೆಗಳಿಲ್ಲಾದಿದ್ದರೆ ಮನುಷ್ಯ ಜೀವಿಸುವುದಾದರೂ ಏತಕ್ಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ, ಪ್ರತಿಯೊಬ್ಬರೂ ಬದುಕಬೇಕಾದ ರೇ ತಮ್ಮದೇ ಆದ ಆಸೆಗಳನ್ನು ಹೊಂದುತ್ತಾರೆ.
ಆದರೆ ತಮ್ಮ ಅತಿಯಾದ ಆಸೆಗಳಿಗೆ ಮಿತಿ ಇರಬೇಕಷ್ಟೇ !ಅತಿಯಾದರೆ ಅಮೃತವು ವಿಷವಾಗುತ್ತದೆ ಎಂಬಂತೆ ಜೀವನದಲ್ಲಿ ಸಮಸ್ಥಿತಿಯಿಂದ ಇರಬೇಕಾಗುತ್ತದೆ, ಆಸೆಯೇ ದುಃಖ್ಖಕ್ಕೆ ಕಾರಣವೆಂದು ಭಗವಾನ್ ಬುದ್ಧ ಹೇಳಿದರೆಂದು ಹಲವರು ಹೇಳುತ್ತಲೇ ಬಂದಿದ್ದಾರೆ, ಆದರೆ ಯಾವುದೇ ತ್ರಿಪಿಟಕಗಳಲ್ಲಿ ಕಂಡು ಬರುವುದಿಲ್ಲ, ಆದ್ದರಿಂದ “ಆಸೆಯೇ ದುಃಖ್ಖಕ್ಕೆ ಕಾರಣ” ಇದು ಸಮರ್ಪಕವಾದ ಹೇಳಿಕೆಯಲ್ಲ, ಪಾಳಿ ಭಾಷೆಯಲ್ಲಿ ತನ್ಹಾ ಎಂಬ ಪದವನ್ನು ಬಳಸುತ್ತಾರೆ.
ಇದು ಆಸೆಗೆ ಪರ್ಯಾಯ ಪದವಲ್ಲ ಇದಕ್ಕೆ ಇಂಗ್ಲಿಷ್ನಲ್ಲಿ ಆಸೆಗೆ ಹತ್ತಿರವಾದ Craving ಎಂಬ ಪದವನ್ನು ಬಳಸುತ್ತಾರೆ Craving ಎಂದರೆ ದುರಾಸೆ ಅಥವಾ ತೃಶ್ನೆ ಎಂದಾಗುತ್ತದೆ “ಆದ್ದರಿಂದ ದುರಾಸೆಯೇ ದುಃಖ್ಖಕ್ಕೆ ಕಾರಣವೆನ್ನಬಹುದು” . ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ದುಃಖ್ಖ ನಿರೋಧ, ದುಃಖ್ಖ ನಿರೋಧ ಮಾರ್ಗ ಎಂಬ ನಾಲ್ಕು ಆರ್ಯ ಸತ್ಯಗಳ ಮೂಲಕ, ನೈತಿಕತೆಯ ಆಧಾರದ ಮೇಲೆ ತನ್ನ ಅನುಭವದ ಮೂಲಕ ಮಾನವ ಪರವಾದ ಸತ್ಯವನ್ನು ಕಂಡು ಹಿಡಿದ ಅದೇ ನಿಜವಾದ ಬುದ್ಧನ ಧಮ್ಮ
4 ಆರ್ಯ ಸತ್ಯಗಳು
1.ದುಃಖ್ಖ
ಲೋಕದಲ್ಲಿ ದುಃಖ್ಖವಿದೆ ಹುಟ್ಟು ದುಃಖ್ಖ, ರೋಗ ದುಃಖ್ಖ, ವಯಸ್ಸಾಗುವುದು ದುಃಖ್ಖ, ಸಾವು ದುಃಖ್ಖ, ಬಯಸಿದ್ದು ಸಿಗದಿದ್ದರೆ ದುಃಖ್ಖ, ನೋವು, ಯಾತನೆ, ಕೊರಗು, ದೈಹಿಕವಾಗಿರಲಿ ಮಾನಸಿಕವಾಗಿರಲಿ ಅದೆಲ್ಲಾ ದುಃಖ್ಖ,.
2.ದುಃಖ್ಖಕ್ಕೆ ಕಾರಣ
ದುರಾಸೆ ಅಥವಾ ತೃಶ್ನೆ ಮೂರು ವಿಧವಾದ ದುರಾಸೆ ಅಥವಾ ತೃಶ್ನೆಗಳಿವೆ.
ಅ. ಕಾಮ ತೃಶ್ನೆ : ಪಂಚ ಇಂದ್ರಿಯಗಳ ವಿಷಯಗಳನ್ನು ಅನುಭವಿಸಬೇಕೆನ್ನುವ ಇಚ್ಛೆಯೇ ಕಾಮ ತೃಶ್ನೆ.
ಬ. ಭವ ತೃಶ್ನೆ : ನಾನು ಶಾಶ್ವತವಾಗಿ ಜೀವಿಸಬೇಕೆಂಬುದೇ ಭವ ತೃಶ್ನೆ, ನಾನು ದೊಡ್ಡ ಶ್ರೀಮಂತನಾಗಬೇಕು, ಸದಾ ಭೋಗಜೀವನದಲ್ಲಿರ ಬೇಕೇಂಬುದೇ ಆಗಿದೆ.
ಕ. ವಿಭವ ತೃಶ್ನೆ : ನಾನು ಈ ಪ್ರಪಂಚದಲ್ಲಿ ಇರಲೇಭಾರದು ಎಂಬ ಹತಾಶೆಯ ಸ್ಥಿತಿ.
3. ದುಃಖ್ಖ ನಿರೋಧ
ಲೋಕದಲ್ಲಿ ದುಃಖ್ಖವಿದೆ, ದುಃಖ್ಖ ಕ್ಕೆ ಕಾರಣವು ಇದೆ, ಎಂದ ಮೇಲೆ ದುಃಖ್ಖ ನಿರೋಧವು ಸಾಧ್ಯವಿದೆ ದುಃಖ್ಖ ನಿರೋಧದ ಮೂಲಗಳಾದ ಅಜ್ಞಾನ ಮತ್ತು ದುರಾಸೆಗಳಿಂದ ಹೊರ ಬಂದರೆ ದುಃಖ್ಖವು ದೂರವಾಗುತ್ತದೆ.
4.ದುಃಖ್ಖ ನಿರೋಧ ಮಾರ್ಗ
ನಾಲ್ಕನೇ ಆರ್ಯ ಸತ್ಯವೇ ದುಃಖ್ಖ ನಿರೋಧ ಮಾರ್ಗ ಅಥವಾ ಅಷ್ಠ ಮಾರ್ಗ ಅಥವಾ ಮದ್ಯಮ ಮಾರ್ಗ, ಪಂಚ ಇಂದ್ರಿಯಗಳ ಸುಖಕ್ಕಾಗಿ ಭೋಗಜೀವನದಲ್ಲಿ ತೊಡಗುವುದು ಮತ್ತು ನೋವಿನಿಂದ ಕೂಡಿದ ಕಠಿಣ ತಪಸ್ಸು ದೇಹ ದಂಡನೆ ಎಂಬ ಎರಡು ಅತೀರೇಖಾ ಮಾರ್ಗಗಳನ್ನು ಬುದ್ಧ ಕೈಬಿಟ್ಟಿದ್ದೆ ಅಲ್ಲದೆ ಸುಖ ಶಾಂತಿ ಪ್ರಜ್ಞೆಯ ಮಾರ್ಗವಾದ ಮನುಷ್ಯರನ್ನು ನಿಬ್ಬಾಣದ ಕಡೆಗೆ ಕರೆದೊಯ್ಯುವ ಮಾರ್ಗ ಕಂಡು ಹಿಡಿದರು ಅದುವೇ ಮದ್ಯಮ ಮಾರ್ಗ ಅಥವಾ ಅಷ್ಟಮಾರ್ಗ.
ದುಃಖ್ಖ ನಿವಾರಣೆಗಾಗಿ ಮದ್ಯಮ ಮಾರ್ಗವು 8 ಅಂಶಗಳನ್ನು ಹೊಂದಿದೆ.
- ಸರಿಯಾದ ದೃಷ್ಟಿ
- ಸರಿಯಾದ ಸಂಕಲ್ಪ
- ಸರಿಯಾದ ಮಾತು
- ಸರಿಯಾದ ಕೆಲಸ
- ಸರಿಯಾದ ಜೀವನೋಪಾಯ
- ಸರಿಯಾದ ಪ್ರಯತ್ನ
- ಸರಿಯಾದ ಅರಿವು
- ಸರಿಯಾದ ಏಕಾಗ್ರೆತೆ
ಪ್ರಕೃತಿಗೆ ಹತ್ತಿರವಾದ, ತಮ್ಮ ಅನುಭವದ ಮೂಲಕ ಕಂಡು ಕೊಂಡ ಬುದ್ಧರ ಅಂತಿಮ ಸತ್ಯವೇ ಅವರ ಧಮ್ಮ, ಧಮ್ಮ ಎಂಬ ಪಾಳಿ ಪದಕ್ಕೆ ಧರ್ಮ ಎಂಬ ಪದವು ಪದವಲ್ಲ, ಧಮ್ಮವೆಂದರೆ ಸರ್ವರ ಹಿತ ಸರ್ವರ ಸುಖ,’ನಾನು ಹೇಳಿದೆ ಎಂದೂ ಒಪ್ಪಿಕೊಳ್ಳಬೇಡಿ, ಬನ್ನೀ… ನಿಮ್ಮ ಅನುಭವದ ಮೂಲಕ ಇಲ್ಲಿ ಈಗಲೇ ಪರೀಕ್ಷಿಸಿ ಇಷ್ಟವಾದರೆ ಒಪ್ಪಿಕೊಳ್ಳಿ, ಇಲ್ಲಾವಾದರೆ ಬಿಟ್ಟುಬಿಡಿ ಎಂಬ ಮಾತನ್ನು ಬುದ್ಧರನ್ನು ಬಿಟ್ಟರೆ ಜಗತ್ತಿನ ಯಾವ ಧರ್ಮಗುರುಗಳು ಹೇಳಿರುವುದು ಕಂಡು ಬರುವುದಿಲ್ಲ.
ಮುಂದುವರಿದು ನಾನು
ದೇವಾಮಾನವನಲ್ಲ, ಯಾವುದೇ ನಾನು ಮುಕ್ತಿಧಾತನಲ್ಲ, ಕೇವಲ ಮಾರ್ಗಧಾತನಷ್ಟೇ, ನಿಮಗೆ ನೀವೇ ಬೆಳಕಾಗಿ, ಎಂದೂ ನೈತಿಕತೆಯ ಸತ್ಯದ ನಡೆ, ಕತ್ತಲಿನಿಂದ ಬೆಳಕಿನಡೆ, ಅಸತ್ಯದಿಂದ ಸತ್ಯದ ಕಡೆಗೆ ಕರೆದೊಯ್ಯುವ ಜ್ಞಾನದ ದೀಪವೇ ಬುದ್ಧರ ಧಮ್ಮ, ಬುದ್ಧರ ನಂತರ ಉತ್ತರಾಧಿಕಾರಿ ಯಾರು? ಎಂಬ ಶಿಷ್ಯ ಆನಂದನ ಪ್ರಶ್ನೆಗೆ ಉತ್ತರವಾಗಿ ಭಗವಾನ್ ಬುದ್ಧರು “ಧಮ್ಮಕ್ಕೆ ಧಮ್ಮವೇ ಉತ್ತರಾಧಿಕಾರಿ”ಎಂದೂ ಇಡೀ ವಿಶ್ವವನ್ನು ಧಮ್ಮವೇ ಮುನ್ನಡೆಸಲಿದೆ ಎಂದರು. ಬಹುಜನರಿಗೆ ಹಿತವಾದ, ಬಹುಜನರಿಗೆ ಸುಖವಾದ, ಲೋಕಕ್ಕೆ ಧಮ್ಮವನ್ನು ನೀಡಿ ಇಡೀ ಜಗತ್ತಿಗೆ ಬೆಳಕಾಗಿ ಇಂದಿಗೂ ಪ್ರಜ್ವಲಿಸುತಿದ್ದಾರೆ. ಬಂಧುಗಳೇ ಇಂದು ಅವರ ಜನ್ಮದಿನ, ಅವರ ತತ್ವ ಸಿದ್ಧಾಂತಗಳು ಸರ್ವರಿಗೂ ದಾರಿ ದೀಪಾವಾಗಿ, ಇಡೀ ವಿಶ್ವವು ಸುಖ ಶಾಂತಿ ನೆಮ್ಮದಿಯಿಂದ ನೆಲಸುವಂತಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ2 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ