Connect with us

ದಿನದ ಸುದ್ದಿ

36 ದಿನಗಳಲ್ಲಿ 13 ಕೋಟಿ ಉದ್ಯೋಗ ನಷ್ಟ ಆದರೂ ಮೋದಿ ಸರಕಾರಕ್ಕೆ ಪರಿವೆಯೇ ಇಲ್ಲ..?!

Published

on

ಪ್ರತಿವಾರ ಉದ್ಯೋಗದ ಸರ್ವೆ ನಡೆಸುವ ಸಿಎಂಐಇ ಸಂಸ್ಥೆಯ ಎಪ್ರಿಲ್ ತಿಂಗಳ ವರದಿ ಈಗ ಬಂದಿದೆ. ಇಡೀ ಎಪ್ರಿಲ್ ತಿಂಗಳಲ್ಲಿ 12.12 ಕೋಟಿ ಉದ್ಯೋಗ ನಷ್ಟ ಸಂಭವಿಸಿದೆ ಎಂದು ಅದು ತೋರಿಸಿದೆ. ಮಾರ್ಚ್ ಕೊನೆಯ ವಾರದಲ್ಲಿ ಅಂದರೆ ಲಾಕ್ಡೌನಿನ ಮೊದಲ ವಾರದಲ್ಲಿ 85 ಲಕ್ಷ ಉದ್ಯೋಗಗಳು ನಷ್ಟ ಆದವು ಎಂದು ಈ ಹಿಂದೆ ಅದರ ಸವೇ ಹೇಳಿತ್ತು. ಅಂದರೆ ಲಾಕ್ ಡೌನಿನ 36 ದಿನಗಳಲ್ಲಿ ಒಟ್ಟು 13 ಕೋಟಿ ಉದ್ಯೋಗ ನಷ್ಟವಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಸರಾಸರಿ ಉದ್ಯೋಗಿಗಳ ಸಂಖ್ಯೆಯ 30ಶೆ.ದಷ್ಟು. ಅಂದರೆ ಸುಮಾರು ಪ್ರತಿ ಮೂರರಲ್ಲಿ ಎರಡು ಉದ್ಯೋಗಗಳಷ್ಟೇ ಉಳಿದಿವೆ.

ನಿಜ, ಇವು ಅಂದಾಜು ಅಂಕಿ-ಅಂಶಗಳಷ್ಟೇ. ಆದರೆ ದೇಶ, ಅದರಲ್ಲೂ ಜನಸಾಮಾನ್ಯರು ಎಂತಹ ಆರ್ಥಿಕ ಸಂಕಟವನ್ನು ಎದುರಿಸಬೇಕಾಗಿ ಬಂದಿದೆ ಎಂಬುದನ್ನು ಇದು ಖಂಡಿತವಾಗಿಯೂ ಸೂಚಿಸುತ್ತದೆ ಎನ್ನುತ್ತಾರೆ ಪರಿಣಿತರು.ಎಪ್ರಿಲ್ ತಿಂಗಳ ಸರ್ವೆಯ ಅಂಕಿ-ಅಂಶಗಳ ವಿವರಗಳಿಗೆ ಹೋದಾಗ ಇನ್ನಷ್ಟು ಆಘಾತಕಾರೀ ಚಿತ್ರಗಳು ಮೂಡಿ ಬರುತ್ತವೆ.


ವಿಭಾಗವಾರು ಏರಿಳಿಕೆಗಳನ್ನು ನೋಡಿ

  • ಸಣ್ಣ ವ್ಯಾಪಾರಿಗಳು ಮತ್ತು ಕೂಲಿಗಳು -9.1 ಕೋಟಿ
  • ಉದ್ಯಮಿಗಳು -1.8 ಕೋಟಿ
  • ಸಂಬಳದಾರ ನೌಕರರು -1.8 ಕೋಟಿ
  • ರೈತರು +58 ಲಕ್ಷ

ಒಟ್ಟು -12.12 ಕೋಟಿ


ಮುಕ್ಕಾಲು ಪಾಲು ಉದ್ಯೋಗ ನಷ್ಟ ಆಗಿರುವುದು ಸಣ್ಣ ವ್ಯಾಪಾರಿಗಳು ಮತ್ತು ಕೂಲಿಗಳಿಗೆ. ಇದರಲ್ಲಿ ಬೀದಿ ಮಾರಾಟಗಾರರು, ಸಣ್ಣ-ಪುಟ್ಟ ವ್ಯಾಪಾರಿಗಳು, ಅಂಗಡಿದಾರರು, ಅಲ್ಲಿ ಕೆಲಸ ಮಾಡುವವರು ಮತ್ತು ದಿನಗೂಲಿಗಳು ಸೇರುತ್ತಾರೆ. ಇವರು ನಮ್ಮ ಉದ್ಯೋಗ ಪಿರಮಿಡ್ಡಿನ ತಳಬಾಗದಲ್ಲಿರುವ ದೊಡ್ಡ ವಿಭಾಗ, ಅದಕ್ಕನುಗುಣವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಉದ್ಯಮಿಗಳು ಎನ್ನುವಾಗ ಇಲ್ಲಿ ಹೆಚ್ಚಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳವರು(ಎಂಎಸ್‌ಎಂಇ), ಕೆಲವು ದೊಡ್ಡ ಪ್ರಮಾಣದ ಉದ್ದಿಮೆದಾರರು ನಷ್ಟ ಅನುಭವಿಸಿರಬಹುದು. ಆದರೂ ಬಹುಪಾಲು ಈ ಎಂಎಸ್‌ಎಂಇ ಗಳದ್ದೇ.

ಮಾಸಿಕ ಸಂಬಳ ಪಡೆಯುವ ನೌಕರರಲ್ಲೂ 1.8 ಕೋಟಿ ಜನ ಉದ್ಯೋಗ ಕಳಕೊಂಡಿದ್ದಾರೆ ಎಂಬುದು ಗಮನಾರ್ಹ. ರೈತರ ಸಂಖ್ಯೆ, ಅಂದರೆ ಕೃಷಿಯಲ್ಲಿ ತೊಡಗಿರುವವವರ ಸಂಖ್ಯೆ ಮಾತ್ರ ಸುಮಾರು 58ಲಕ್ಷದಷ್ಟಾದರೂ ಹೆಚ್ಚಾಗಿದೆ. ಆದರೆ ಇದರರ್ಥ ಕೃಷಿ ರಂಗದಲ್ಲಿ ಉದ್ಯೋಗಾವಕಾಶ ಹೆಚ್ಚಿದೆಯೆಂದೇನಲ್ಲ. ನಗರಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ಮರಳಿದವರಲ್ಲಿ ಕೆಲವರು ಮತ್ತೆ ಕೃಷಿರಂಗದಲ್ಲೇ ಏನೋ ಕೆಲಸ ಹುಡುಕಿಕೊಂಡಿದ್ದಾರೆ ಎಂದರ್ಥ.

ಅಂದರೆ ಕೃಷಿರಂಗದ ಒಟ್ಟು ಆದಾಯ ಈಗ ಈ ಹೆಚ್ಚುವರಿ 58 ಲಕ್ಷ ಜನಗಳ ನಡುವೆಯೂ ಹಂಚಿ ಹೋಗುತ್ತದೆ, ವಾಸ್ತವಿಕವಾಗಿ ರೈತರ ತಲಾ ಆದಾಯ ಇಳಿಯುತ್ತದೆ. ಅಲ್ಲದೆ ಇದು ಕಟಾವಿನ ಸಮಯವಾದ್ದರಿಂದ ಸದ್ಯಕ್ಕೆ ಇವರಿಗೆ ಏನೋ ತುಸು ಆದಾಯ ಬರುವ ಕೆಲಸ ಸಿಕ್ಕಿದೆ. ಮುಂದೇನು ಎಂಬ ಚಿಂತೆ ಇದ್ದೇ ಇದೆ.

ಒಟ್ಟಾರೆಯಾಗಿ, ಲಾಕ್‌ಡೌನಿನಿಂದಾಗಿ ಆಗಿರುವ 13 ಕೊಟಿ ಉದ್ಯೋಗನಷ್ಟಗಳಲ್ಲಿ 8.5 ಕೋಟಿ ನಗರ ಪ್ರದೇಶಗಳಲ್ಲಿ, 4.5 ಕೊಟಿ ಗ್ರಾಮೀಣ ಪ್ರದೇಶಗಳಲ್ಲಿ. ಕೃಷಿ ಚಟುವಟಿಕೆಗಲಲ್ಲಿ ತೊಡಗಿರುವವರ ಸಂಖ್ಯೆ ತಸು ಹೆಚ್ಛಾಗಿದ್ದರ ಅರ್ಥ, ಗ್ರಾಮೀಣ ಪ್ರದೇಶದ ಉಳಿದ ವಲಯಗಳಲ್ಲಿ. ಮುಖ್ಯವಾಗಿ ಚಿಲ್ಲರೆ ವ್ಯಾಪಾರಗಳಲ್ಲಿ, ಸಾರಿಗೆ ಮುಂತಾದವುಗಳಲ್ಲಿ ಇನ್ನಷ್ಟು ಹೆಚ್ಚು ನಷ್ಟಗಳು ಉಂಟಾಗಿವೆ. ಇವರು ಈ ಮೊದಲಿನಂತೆ ನಗರಗಳಿಗೂ ಹೋಗುವಂತಿಲ್ಲ.

ಇವೆಲ್ಲ ಅನಿರೀಕ್ಷಿತವೇನಲ್ಲ. ಇದನ್ನು ಮುಂಗಂಡು ಸರಕಾರ ಸರಿಯಾದ ಯೋಜನೆಯೊಂದಿಗೆ ಲಾಕ್‌ಡೌನ್ ಹಾಕಿದ್ದರೆ ಜನಸಾಮಾನ್ಯರು ಅದರಲ್ಲೂ ಕೋಟ್ಯಂತರ ವಲಸೆ ಕಾರ್ಮಿಕರು ಈಗ ಕಾಣುತ್ತಿರುವಂತೆ ಹಸಿವು, ಅವಮಾನ, ಸಾವುಗಳನ್ನು ಎದುರಿಸಬೇಕಾಗಿ ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಮತ್ತು ಪ್ರಜಾಪ್ರಭುತ್ವವಾದಿಗಳು ಆಗ್ರಹಿಸಿರುವಂತೆ ಅಗತ್ಯ ಇರುವ ಎಲ್ಲರಿಗೆ 10 ಕೆ.ಜಿ. ಆಹಾರಧಾನ್ಯಗಳು ಸೇರಿದಂತೆ ಆವಶ್ಯಕ ವಸ್ತುಗಳನ್ನು ಮತ್ತು ಸ್ಥಬ್ಧಗೊಂಡ ಅರ್ಥವ್ಯವಸ್ಥೆ ಮತ್ತೆ ಚಾಲನೆ ಪಡೆಯುವ ವರೆಗೆ,ಅಂದರೆ ಮುಂದಿನ ಮೂರು ತಿಂಗಳಾದರೂ ಒಂದು ಕುಟುಂಬಕ್ಕೆ ತಿಂಗಳಿಗೆ 7500 ರೂ. ಕೊಡುವ ವ್ಯವಸ್ಥೆ ಮಾಡಿದ್ದರೆ ದೇಶದ ಜನಸಾಮಾನ್ಯರು ಇಷ್ಟೊಂದು ಸಂಕಟ ಪಡುವ ಅಗತ್ಯ ಬರುತ್ತಿರಲಿಲ್ಲ. ಇದಕ್ಕೆ ಹೆಚ್ಚೆಂದರೆ ಜಿಡಿಪಿಯ 3ಶೇ. ವೆಚ್ಚ ತಗಲುತ್ತದಷ್ಟೇ.

ಹಿಡಿಯಷ್ಟು ಸೂಪರ್ ಶ್ರೀಮಂತರಿಗೆ, ನಮ್ಮ ಬ್ಯಾಂಕುಗಳಿಗೆ ನಷ್ಟ ಉಂಟುಮಾಡಿ ಆರಾಮವಾಗಿ ಇರುವ, ದೇಶ ಬಿಟ್ಟು ಪಲಾಯನ ಮಾಡಿದ ಮಂದಿಗೂ 69 ಸಾವಿರ ಕೋಟಿ ರೂ.ಗಳನ್ನು ಇತ್ತೀಚೆಗಷ್ಟೇ ಕೊಟ್ಟಿರುವ ಸರಕಾರಕ್ಕೆ ಇದು ಖಂಡಿತಾ ಅಸಾಧ್ಯವೇನಲ್ಲ. ಆದರೆ ಅದು ಪರಿಹಾರದ ಹೆಸರಲ್ಲಿ ಕೊಟ್ಟದ್ದು ಜಿಡಿಪಿಯ 0.7ಶೇ.ದಷ್ಟು ಮಾತ್ರ. ಇದರಿಂದ ಜನಧನ ಖಾತೆಗಳಿಗೆ ಕೇವಲ ಒಮ್ಮೆ 500ರೂ. ಕೊಡುವುದಾಗಿ ಸರಕಾರ ಹೇಳಿತು. ಅದೂ ಬಹಳಷ್ಟು ಮಂದಿಗೆ ತಲುಪಿಲ್ಲ ಎಂದು ವರದಿಯಾಗಿದೆ.

ನಂತರ ಯಾವುದೇ ಪರಿಹಾರ ಪ್ರಕಟವಾಗಲಿಲ್ಲ, ಲಾಕ್‌ಡೌನನ್ನು ವಿಸ್ತರಿಸಿದಾಗಲೂ ಯಾವುದೇ ಪರಿಹಾರದ ಮಾತೂ ಪ್ರಧಾನಿಗಳ ಮನದಿಂದಲೇ ಆಗಲಿ, ಬಾಯಿಂದಲೇ ಆಗಲಿ ಬರಲೇ ಇಲ್ಲ. ಲಾಕ್‌ಡೌನಿನ ಮೂರನೇ ಘಟ್ಟ ಮುಗಿರುವ ಒಮದು ವಾರದ ಮೊದಲು, ಮೇ 11ರಂದು ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೊ ಕಾನ್ಫರೆನ್ಸಿನಲ್ಲೂ ಹಲವು ಮುಖ್ಯಮಂತ್ರಿಗಳು ಕೇಳಿದರೂ ಅದಕ್ಕೆ ಉತ್ತರ ದೊರೆತಿಲ್ಲ. ಬದಲಿಗೆ, ಉದ್ಯೋಗದಾತರೆನಿಸಿಕೊಳ್ಳುವ ಮಾಲಕರಿಗೆ ಕಾರ್ಮಿಕ ಕಾನೂನುಗಳಲ್ಲಿ ಭಾರೀ ರಿಯಾಯ್ತಿ/ವಿನಾಯ್ತಿಗಳನ್ನು ನೀಡುವ ಮೂಲಕ ನೇರ ರಿಟ್ರೆಂಚ್‌ಮೆಂಟ್ ಇತ್ಯಾದಿಗಳ ಮೂಲಕ ಇನ್ನಷ್ಟು ಉದ್ಯೋಗ ನಷ್ಟಗಳಿಗೆ ಅವಕಾಶವನ್ನು ತೆರೆದು ಕೊಡಲಾಗುತ್ತಿದೆ.

  • ಕೃಪೆ : ಜನಶಕ್ತಿ ಮೀಡಿಯಾ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending