ರಾಜಕೀಯ
ಆಪರೇಷನ್ ‘ಹಸ್ತ’..?

ಸುದ್ದಿದಿನ, ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ ನಡೆಯುವ ಲಕ್ಷಣಗಳು ಕಾಣುತ್ತಿದ್ದು, ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಲು ತೀರ್ಮಾನಿಸಿದೆ.
ಇದಕ್ಕಾಗಿ ‘ಸೂಸೈಡ್ ಸ್ಕಾಡ್ ಅನ್ನು ಆರಂಭಿಸಿರುವ ಕಾಂಗ್ರೆಸ್, ಕಮಲ ಪಾಳಯದ ಶಾಸಕರನ್ನು ಕಾಂಗ್ರೆಸ್ಗೆ ಸೆಳೆಯಲು ರಣತಂತ್ರ ಹೆಣೆದಿದೆ. ಸದ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಈ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಈ ಆಪರೇಷನ್ ಹಸ್ತಕ್ಕೆ ಜೆಡಿಎಸ್ ಸಹಕಾರ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಉತ್ತರ ಕರ್ನಾಟಕದ ಬಿಜೆಪಿ ಶಾಸಕರಿಗೆ ಬಲಿ ಬೀಸಿದ್ದು, ಅದಲ್ಲಿ ಹೊಳಲ್ಕೆರೆ ಶಾಸಕ ಗೂಳಿಹಟ್ಟಿ ಶೇಖರ್, ಜಗಳೂರು ಶಾಸಕ ರಾಮಚಂದ್ರಪ್ಪ ಸೇರಿ ಹಲವರನ್ನು ಕಾಂಗ್ರೆಸ್ಗೆ ಬರಮಾಡಿಕೊಳ್ಳಲು ಸಚಿವ ಡಿ.ಕೆ. ಶಿವಕುಮಾರ್ ತಂತ್ರ ಹೆಣೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ಸಚಿವ ಡಿ.ಕೆ. ಶಿವಕುಮಾರ್, ಬಿಜೆಪಿ ಶಾಸಕರೇ ನಮ್ಮ ವಶದಲ್ಲಿದ್ದಾರೆ. ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟರೆ ಏನು ಮಾಡಬೇಕೆಂಬುದು ನಮಗೆ ಗೊತ್ತು ಎಂದು ಹೇಳಿರುವುದು ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಸಿಎಂ ಕುಮಾರಸ್ವಾಮಿ ಸಹ ನಮಗೆ ಜತೆಗೆ ಬಿಜೆಪಿಯ 6 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ‘ಸೂಸೈಡ್ ಸ್ಕ್ವಾಡ್ ಆಪರೇಷನ್ ಹಸ್ತ ಆರಂಭಿಸಿರುವುದು ಸ್ಪಷ್ಟವಾಗಿದೆ.
ರಾಜಕೀಯ
ಲೋಕಸಭಾ ಚುನಾವಣೆ | ಸ್ಥಾನ ಹಂಚಿಕೆ ಇನ್ನು ನಿರ್ಧರಿಸಿಲ್ಲ : ಸಿದ್ದರಾಮಯ್ಯ

ಸುದ್ದಿದಿನ,ಬೆಂಗಳೂರು : ಮೈತ್ರಿ ನಮ್ಮ ಸರ್ಕಾರದ ಒಕ್ಕೂಟದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ನಾವು ಕುಳಿತು ಕೊಂಡು ಮತ್ತು ಸ್ನೇಹಪರವಾಗಿ ಚರ್ಚಿಸುತ್ತೇವೆ. ಆದರೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ, ನಾವು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಆದರೆ ಗೆಲ್ಲುವ ಸಮರ್ಥ ಅಭ್ಯರ್ಥಿಯ ಸಾಮರ್ಥ್ಯಕ್ಕೆ ಬಿಟ್ಟದ್ದು.
ಸೀಟು ಹಂಚಿಕೆ ವಿಚಾರದಲ್ಲಿ ನಾವು ಇನ್ನೂ ಏನನ್ನೂ ನಿರ್ಧರಿಸಿಲ್ಲ. ಆದರೆ ಜೆಡಿಎಸ್ ಮುಖಂಡರು ಸ್ಥಾನ ಹಂಚಿಕೆಯ ವಿಚಾರದಲ್ಲಿ ನಿರಾಶೆ ಉಂಟುಮಾಡಿದ್ದಾರೆ. ಸ್ಥಾನಹಂಚಿಕೆಯಲ್ಲಿ ನಾವು ಇನ್ನು ನಿರ್ಣಯ ಮಾಡುವ ಪ್ರಕ್ರಿಯೆಯ ಪ್ರಾಥಮಿಕ ಹಂತದಲ್ಲಿದ್ದು, ಇದರ ಬಗ್ಗೆ ದೇವೇಗೌಡರ ಹತ್ತಿರ ಚರ್ಚೆಮಾಡುತ್ತೇವೆ.
We have started our preparation for the upcoming lok sabha elections. Our election committee had also met once but we have not decided anything about seat allocation & candidate selection. We will meet once again in 2 days.@INCKarnataka
— Siddaramaiah (@siddaramaiah) February 21, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಲಿಂಗಾಯತ-ವೀರಶೈವ ಎರಡೂ ಒಂದೇ : ಶಾಮನೂರು ಶಿವಶಂಕರಪ್ಪ

ಸುದ್ದಿದಿನ, ದಾವಣಗೆರೆ : ಲೋಕಸಭೆ ಚುನಾವಣೆಗೆ ನನಗಾಲಿ ಅಥವಾ ನನ್ನ ಪುತ್ರನಿಗಾಗಲಿ ಟಿಕೇಟ್ ಕೇಳಲ್ಲ.ಪಕ್ಷದ ಹೈಕಮಾಂಡ ಮನೆಗೆ ಟಿಕೇಟ್ ತಂದುಕೊಟ್ರೆ ನೋಡೋಣ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಬುಧವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಟಿಕೇಟ್ ಕೇಳಲ್ಲ. ನಾನೇ ಸ್ಪರ್ಧಿಸುತ್ತೇನೆ ಅಂತಲು ಗೊತ್ತಿಲ್ಲ. ಈ ವಿಚಾರಕ್ಕೆ ಇಷ್ಟರಲ್ಲಿ ಪಕ್ಷದ ವರಿಷ್ಠರು ಸ್ಪಷ್ಟ ಪಡಿಸಲಿದ್ದಾರೆ. ಯಾರೇ ನಿಲ್ಲಲಿ, ಕಾಂಗ್ರೆಸ್ ಪಕ್ಪದ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ನನ್ನ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಲ್ಲಿ ಕನಿಷ್ಟ 50 ಸಾವಿರ ಮತಗಳ ಲೀಡ್ ಕೊಡುವೆ ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಬಂದು ಸ್ಪರ್ಧಿಸಿದರೇ ಸ್ಪರ್ಧಿಸಲಿ. ಆದ್ರೆ ನಾನು ಮಾತ್ರ ಟಿಕೇಟ್ ಕೇಳಲು ಹೋಗಲ್ಲ. ಅವರಾಗಿಯೇ ಕೊಟ್ಟರೇ ನೋಡೋಣ ಎಂದು ನುಡಿದರು.
ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ
ನನ್ನದು ಸ್ಪಷ್ಟ ನಿಲುವು. ಲಿಂಗಾಯತ ಮತ್ತು ವೀರಶೈವ ಎರಡು ಒಂದೇ. ಮತ್ತೆ ಲೋಕ ಸಭೆ ಚುನಾವಣೆ ಬಂದ ಹಿನ್ನಲೆ ಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಶುರುವಾಗಿದೆ. ಆದ್ರೆ ಎನು ಆಗಲ್ಲ. ಹಾಗೆ ಹೋರಾಟ ಮಾಡುವರು ಅಲ್ಲಿಯೇ ಸಾಯುತ್ತಾರೆ ಎಂದರು ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ.
ನಾನು ಹೇಳಿದಂತೆ ವೀರಶೈವರು ಲಿಂಗಾಯತರು ಒಂದಾಗಿದ್ದಾರೆ. ಒಂದಾಗಿಯೇ ಇರುತ್ತಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಪ್ರಭಾವ ಬಿರಲ್ಲ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ರಾಜಕೀಯ
ಸುಮಲತ ಅಂಬರೀಶ್ ಸಿದ್ದರಾಮಯ್ಯ ಭೇಟಿ : ಸ್ವತಂತ್ರ ಅಭ್ಯರ್ಥಿಯಾಗಿ ಲೋಕ ಸಭೆಗೆ ಸುಮಲತಾ ಸ್ಪರ್ಧೆ..!?

ಸುದ್ದಿದಿನ, ಬೆಂಗಳೂರು : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಲ್ಲಿನ ಜನತೆ ಅಪಾರವಾದ ಪ್ರಮಾಣದಲ್ಲಿ ಪ್ರೀತಿಯಿಂದ ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಲ್ಲಿ ಜನತೆಯ ಅಪೇಕ್ಷೆ, ಅಭಿಪ್ರಾಯವನ್ನು ನನ್ನ ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಮನ್ವಯ ಸಮಿತಿಯ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ ಎಂದು ಸುಮಲತ ಅಂಬರೀಶ್ ಹೇಳಿದರು.
ಇಂದು (ಬುಧವಾರ) ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಭೇಟಿಮಾಡಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಅಂಬರೀಶ್ ಅಭಿಮಾನಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿದ ಕಾರಣ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಹಲವು ದಿನಗಳಿಂದ ಮಂಡ್ಯದ ಜನತೆ ಈ ವಿಷಯವಾಗಿ ಪ್ರಸ್ತಾಪವನ್ನು ಇಟ್ಟಿರುವುದು ನಿಮಗೇ ಗೊತ್ತಿದೆ. ಆದರೆ ನಾನು ಈ ವಿಷಯವಾಗಿ ಪ್ರತಿಕ್ರಿಯೆ ನೀಡದೆ ಇರುವುದು ಮಂಡ್ಯ ಜನತೆಗೆ ತಪ್ಪು ಮಾಹಿತಿ ಲಭಿಸಬಹಿದು. ಅವರ ಋಣ ನಮ್ಮ ಕುಟುಂಬದ ಮೇಲೆ ತುಂಬಾ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಜೆಡಿಎಸ್ ಅಭ್ಯರ್ಥಿಗೆ ಲೋಕಸಭಾ ಚುನಾವಣೆ ಟಿಕೆಟ್ ಘೋಷಣೆಯಾದರೆ,ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮಂಡ್ಯ ಜನತೆ ಅಭಿಪ್ರಾಯ ಪಟ್ಟಿದ್ದು ಈ ವಿಷಯವಾಗಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಯಿತು ಎಂದರು.
ಸಿದ್ದರಾಮಯ್ಯ ಅವರು ಈ ವಿಷಯವಾಗಿ ಹೈ ಕಮಾಂಡ್ ಜತೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.
ಸುಮಲತಾ ಅಂಬರೀಶ್ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ ಕ್ಷಣ.@INCKarnataka pic.twitter.com/gyYO11KWLS
— Siddaramaiah (@siddaramaiah) February 20, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401
-
ರಾಜಕೀಯ5 days ago
ಸಿದ್ದರಾಮಯ್ಯ ಈಗಲೂ ನನ್ನ ಮುಖ್ಯಮಂತ್ರಿ ; ಕರ್ನಾಟಕದ ಬೊಬ್ಬುಲಿ ಪುಲಿ : ರಮೇಶ್ ಕುಮಾರ್
-
ದಿನದ ಸುದ್ದಿ5 days ago
‘ಕಾಶ್ಮೀರ ಸಮಸ್ಯೆ’ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ‘ಇಂದಿರಾಗಾಂಧಿ ಮತ್ತು ವಾಜಪೇಯಿ’..!
-
ರಾಜಕೀಯ6 days ago
ಯೋಧರ ಸಂತಾಪ ಸಭೆಯನ್ನು ಸ್ವಾರ್ಥ ರಾಜಕೀಯಕ್ಕೆ ಬಳಸುವ ದೇಶದ್ರೋಹಿಗಳಿಗೆ ಧಿಕ್ಕಾರ : ಪ್ರಕಾಶ್ ರೈ ಆಕ್ರೋಶ
-
ಬಹಿರಂಗ3 days ago
ಜಾತಿ ಹೃದಯ ವೈಶಾಲ್ಯತೆಯನ್ನು ಹಾಳುಮಾಡಿದೆ : ಡಾ.ಬಿ.ಆರ್.ಅಂಬೇಡ್ಕರ್ ಓದಿ ಈ ಬರಹ
-
ಬಹಿರಂಗ6 days ago
ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು : ಮರೆಯದೆ ಓದಿರಿ ಡಾ. ಬಿ.ಆರ್.ಅಂಬೇಡ್ಕರ್ ಈ ಬರಹ
-
ದಿನದ ಸುದ್ದಿ7 days ago
ಪ್ರಕಾಶ್ ರೈ,ಯಶ್,ದರ್ಶನ್ ರಿಂದ ಹುತ್ಮಾತ ಯೋಧರಿಗೆ ನಮನ
-
ಲೈಫ್ ಸ್ಟೈಲ್3 days ago
‘ತುಳಸಿ’ ಮನೆ ಮದ್ದು..!
-
ಬಹಿರಂಗ5 days ago
‘ಉಪೇಕ್ಷಾ ಮನೋವೃತ್ತಿ’, ಹಿಂದೂಗಳಿಗಿರುವ ಮಹಾರೋಗ : ಡಾ.ಬಿ.ಆರ್. ಅಂಬೇಡ್ಕರ್ ಈ ಲೇಖನ ಓದಿ