ರಾಜಕೀಯ
ಬಹುಜನ ಸಮಾಜ ಪಕ್ಷ ನಿಜಕ್ಕೂ ಬಹು ಜನರನ್ನು ಒಳಗೊಂಡಿದೆಯೇ..?
- ವಿವೇಕಾನಂದ. ಹೆಚ್.ಕೆ
ಭಾರತದಲ್ಲಿ ಅಸ್ತಿತ್ವದಲ್ಲಿರುವ ಬಹುಮುಖ್ಯ ರಾಷ್ಟ್ರೀಯ ಪಕ್ಷಗಳಲ್ಲಿ ಒಂದು. ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ನಂತರ ಹೆಚ್ಚು ಜನಪ್ರಿಯತೆ ಗಳಿಸಿರುವ ಪಕ್ಷ. ಉತ್ತರ ಪ್ರದೇಶದಲ್ಲಿ ಮೂರು ಬಾರಿ ಅಧಿಕಾರವನ್ನು ನಡೆಸಿದೆ ಮತ್ತು ಕೆಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರದ ಭಾಗವೂ ಆಗಿದ್ದಿತು.ಕಾನ್ಷಿರಾಂ ಎಂಬುವವರು ಬಹು ಶ್ರಮದಿಂದ ಕಟ್ಟಿದ ಮತ್ತು ಈಗ ಮಾಯಾವತಿಯವರು ಅಧ್ಯಕ್ಷರಾಗಿರುವ ಪಕ್ಷವದು.ಅಂಬೇಡ್ಕರ್ ಮತ್ತು ಅವರ ವಿಚಾರಗಳ ಆಧಾರದ ಮೇಲೆ ಈ ಪಕ್ಷ ಹೋರಾಟ ಮಾಡುತ್ತಿದೆ ಎಂಬುದು ಅದರ ಅನುಯಾಯಿಗಳ ಸಮರ್ಥನೆ ಮತ್ತು ಮೂಲ ಆಶಯ.
ಹಾಗಾದರೆ ಇದು ವಾಸ್ತವವೇ ?
ಅದರ ಒಟ್ಟು ಇತಿಹಾಸದ ರಾಜಕೀಯ ನಡೆಗಳನ್ನು ಗಮನಿಸಿದಾಗ ನಮ್ಮ ಕರ್ನಾಟಕದ ಜನತಾದಳ ಪಕ್ಷದಂತೆ ಬಹುತೇಕ ಅಧಿಕಾರದ ಲಾಭ ನಷ್ಟಗಳನ್ನು ನೋಡಿಕೊಂಡು ಎಲ್ಲಾ ಕಡೆಯೂ ಸಲ್ಲುವ ಅನುಕೂಲಕರ ನಿರ್ಧಾರಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ತನ್ನ ಸಿದ್ದಾಂತಗಳಿಗೆ ವಿರುದ್ಧ ನಿಲುವಿನ ಬಿಜೆಪಿಯ ಜೊತೆಗೂ, ತನ್ನ ಮೇಲೆ ಹಲ್ಲೆ ಮಾಡಿದ ಪ್ರಬಲ ಯಾದವ ಜಾತಿಯ ಸಮಾಜವಾದಿ ಪಕ್ಷದ ಜೊತೆಗೂ, ಕೆಲವು ಕಡೆ ತಾವು ವಿರೋಧಿಸುವ ಗಾಂಧಿ ತತ್ವದ ನೆಲೆಯ ಕಾಂಗ್ರೆಸ್ ಪಕ್ಷದ ಜೊತೆಯೂ ಸೇರುತ್ತಾರೆ.
ಅಂದರೆ ಅಂಬೇಡ್ಕರ್ ಶೋಷಿತರ ಜಾಗೃತಿಗಾಗಿ ಘೋಷಿಸಿದ ಶಿಕ್ಷಣ ಸಂಘಟನೆ ಹೋರಾಟ ಎಂಬ ತ್ರಿವಳಿ ಸಂದೇಶಕ್ಕೆ ಎಲ್ಲವೂ ಅಧಿಕಾರಕ್ಕಾಗಿ ಎಂಬುದನ್ನು ಹೊಸದಾಗಿ ಸೇರ್ಪಡೆಯಾದಂತೆ ಆಗುತ್ತದೆ. ಅಂಬೇಡ್ಕರ್ ರಾಜಕೀಯ ಅಧಿಕಾರದ ಪ್ರಾಮುಖ್ಯತೆ ಬಗ್ಗೆ ಖಂಡಿತ ಹೇಳಿದ್ದಾರೆ. ಅದರ ಜೊತೆಗೆ ಮಾರ್ಗವೂ ಮುಖ್ಯವಾಗಬೇಕಾಗುತ್ತದೆ.
ವಿಶಾಲ ತಳಹದಿಯ ಮೇಲೆ ಒಂದು ಪಕ್ಷ ಮತ್ತು ಸಂಘಟನೆ ದೊಡ್ಡದಾಗಿ ಬೆಳೆಯಬೇಕಾದರೆ ದೀರ್ಘಕಾಲದಲ್ಲಿ ಹೇಗೆಂದರೆ ಹಾಗೆ ತತ್ ಕ್ಷಣದ ಲಾಭವನ್ನು ನೋಡಬಾರದು. ಒಂದು ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೂಡ ಆ ಪಕ್ಷದ ಬಗ್ಗೆ ಅದರ ನ್ಯಾಯ ನೀತಿ ಧರ್ಮದ ಬಗ್ಗೆ ಸಹಜ ಗೌರವ ಮೂಡುವಂತಿರಬೇಕು. ಅದರಲ್ಲಿ ಬಿಎಸ್ಪಿ ವಿಫಲವಾಗಿದೆ ಎಂದು ಹೇಳಬಹುದು.
ಮಾಯಾವತಿ ಹೊರತುಪಡಿಸಿ ಮತ್ತೊಂದಿಷ್ಟು ನಾಯಕರಗಳನ್ನು ಅವರ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸಲಿಲ್ಲ ಅಥವಾ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದಂತೆ ಕಾಣುತ್ತದೆ . ಅಂಬೇಡ್ಕರ್ ವಾದದ ಹಿನ್ನೆಲೆಯ ಅನೇಕ ಯುವ ಮತ್ತು ಅನುಭವಿ ಸಂಘಟಕರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸದೆ ಪರ್ಯಾಯ ನಾಯಕತ್ವದ ಅಸೂಯೆಯಿಂದ ಅವರಿಗೆ ಪ್ರೋತ್ಸಾಹ ನೀಡಲಿಲ್ಲ.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಸಿದ್ಧವಾಗುತ್ತಿರುವಾಗಲೇ ರಾಜಕೀಯ ಪ್ರವೇಶಿಸಿದ ವಿದ್ಯಾವಂತೆ ಮತ್ತು ಬುದ್ದಿವಂತೆಯಾದ ಮಾಯಾವತಿಯರ ಬಹುದೊಡ್ಡ ಸಮಸ್ಯೆ ಸರ್ವಾಧಿಕಾರಿ ಮನೋಭಾವ, ಅಧಿಕಾರ ಲಾಲಸೆ ಮತ್ತು ಹೊಂದಾಣಿಕೆಯ ಮನೋಭಾವದ ಕೊರತೆ. ಜೊತೆಗೆ ಆಡಳಿತಾತ್ಮಕ ದಕ್ಷತೆಯೂ ಕಡಿಮೆ.
ಸರಿಯೋ ತಪ್ಪೋ ಆದರೆ ಜನರ ಬೆಂಬಲವನ್ನು ನಿರಂತರವಾಗಿ ಗಳಿಸಿದ ದೆಹಲಿಯ ಶೀಲಾ ದೀಕ್ಷಿತ್, ಪಶ್ಚಿಮ ಬಂಗಾಳದ ಜ್ಯೋತಿ ಬಸು, ಗುಜರಾತಿನ ನರೇಂದ್ರ ಮೋದಿ, ಒರಿಸ್ಸಾದ ನವೀನ್ ಪಾಟ್ನಾಯಕ್ ಮುಂತಾದವರ ಸಾಲಿನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.
ಅಧಿಕಾರಕ್ಕೆ ಏರುವುದು ಒಂದು ಸಾಧನೆಯಾದರೆ ಅದನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಅದರಲ್ಲೂ ಒಬ್ಬ ದಲಿತ ಹೆಣ್ಣು ಮಗಳು ತಮಗೆ ಸಿಕ್ಕಿದ ಅಪರೂಪದ ಅವಕಾಶವನ್ನು ಇನ್ನಷ್ಟು ಜನರಿಗೆ ಹತ್ತಿರವಾಗುವ ರೀತಿ ಬಳಸಬಹುದಿತ್ತು.ಹೌದು, ಅದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಜನರಿಗೆ ಅನುಕೂಲಕರ ಕೆಲಸ ಮಾಡುವಾಗ ಖಂಡಿತ ಜನರಿಂದ ಪ್ರೋತ್ಸಾಹ ಸಿಕ್ಕೇ ಸಿಗುತ್ತದೆ.
ನಮ್ಮ ಜನರ ಮನಸ್ಥಿತಿ ಹೇಗಿದೆ ಎಂದರೆ, ನೀವು ಸಾರ್ವಜನಿಕವಾಗಿ ಒಳ್ಳೆಯ ಉದ್ದೇಶಕ್ಕೇ ಆದರೂ ಸ್ವಲ್ಪ ಕೆಟ್ಟ ಅಥವಾ ತಪ್ಪು ನಿರ್ಧಾರ ಕೈಗೊಂಡರೇ ಜನ ಅದನ್ನೇ ಉದಾಹರಣೆಯಾಗಿ ತೆಗೆದುಕೊಂಡು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗೆ ಇದನ್ನೇ ನಿದರ್ಶನವಾಗಿ ಉಪಯೋಗಿಸಿಕೊಳ್ಳುತ್ತಾರೆ.
ಇದೇ ಬಹುಮುಖ್ಯವಾಗಿ ಇಂದು ಅಂಬೇಡ್ಕರ್ ವಾದದ ಬಹುಜನ ಚೆಲ್ಲಾಪಿಲ್ಲಿಯಾಗಿ ಒಂದೊಂದು ಪಕ್ಷ ಅಥವಾ ಸಂಘಟನೆಯ ದಾರಿ ಹಿಡಿದಿದ್ದಾರೆ. ಸಹಜವಾಗಿ ಅದರ ವಿರೋಧಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಬಹುಜನರ ಪಕ್ಷ ಆಂತರಿಕವಾಗಿಯೂ ಬಹುಜನರ ಪಕ್ಷವಾಗೇ ಇರಬೇಕೆ ಹೊರತು ಹೆಸರಿಗೆ ಮಾತ್ರ ಇದ್ದು ಸಂಘಟನೆಯಲ್ಲಿ ನೆಪ ಮಾತ್ರದ ನಡವಳಿಕೆ ಇದ್ದರೆ ಖಂಡಿತ ಬಹುಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ.
ಜೊತೆಗೆ ಹೋರಾಟ ಸಿದ್ದಾಂತಗಳೊಂದಿಗೆ ಆಡಳಿತಾತ್ಮಕ ದಕ್ಷತೆ ಸಹ ಮುಖ್ಯವಾಗುತ್ತದೆ. ಅಧಿಕಾರಕ್ಕೆ ಬರುವವರೆಗೂ ಚಳವಳಿ ಮುಖ್ಯ. ಬಂದ ನಂತರ ಆಡಳಿತ ಮಾಡುವುದು ಅತಿಮುಖ್ಯ ಇಲ್ಲದಿದ್ದರೆ ಜನ ಬಹುಬೇಗ ನಿರಾಸೆಗೊಳಗಾಗಿ ಪಕ್ಷ ತಿರಸ್ಕರಿಸಲ್ಪಡುತ್ತದೆ. ಆಗ ಪಕ್ಷ ಬೆಳೆಸಲು ಅಡ್ಡ ದಾರಿ ಹಿಡಿಯುವ ಅವಶ್ಯಕತೆ ಬರುತ್ತದೆ. ಅದು ಒಂದು ಸಿದ್ಧಾಂತದ ಅವಸಾನಕ್ಕೆ ದಾರಿ ಮಾಡಿಕೊಡುತ್ತದೆ.
ಬಹುಶಃ ಇಂದು ಕವಲು ದಾರಿಯಲ್ಲಿ ಸಾಗುತ್ತಿರುವ ಬಹುಜನ ಸಮಾಜ ಪಕ್ಷದ ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯವೆಂದು ಭಾವಿಸಬಹುದು.ಯಾವುದೇ ವ್ಯಕ್ತಿ ಪಕ್ಷ ಸಂಘಟನೆ ಸಿದ್ಧಾಂತ ಸಾಮಾಜಿಕ ಮೌಲ್ಯಗಳನ್ನು ಸದಾ ಪ್ರತಿನಿಧಿಸುವಂತಿರಬೇಕು. ಅದರ ಸ್ವಾರ್ಥದ ನಡೆಯನ್ನು ಜನ ಗಮನಿಸುತ್ತಿರುತ್ತಾರೆ. ಅಧಿಕಾರವೇ ಎಲ್ಲವೂ ಅಲ್ಲ. ಅದರಲ್ಲೂ ಶೋಷಿತ ಸಮುದಾಯಗಳ ಒಂದು ಪಕ್ಷ ಅತ್ಯಂತ ಶುದ್ದ ಪ್ರಾಮಾಣಿಕ ದೂರದೃಷ್ಟಿಯ ನಿಲುವುಗಳನ್ನು ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಪರ್ಯಾಯ ವ್ಯವಸ್ಥೆ ಇರುವುದಕ್ಕಿಂತ ಮತ್ತಷ್ಟು ಉತ್ತಮವಾಗಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ಇದು ಬಹಳ ಮುಖ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.
ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಹೇಳಿಕೆ
- ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
| ಸಚಿವ ದಿನೇಶ್ ಗುಂಡೂರಾವ್
ಟ್ವೀಟ್
In consideration of public health, we are banning the use of artificial colours in Gobi Manchurian and cotton candy. Violation of this ban may result in imprisonment for up to 7 years and a fine of up to 10 lakhs.
Following reports of substandard quality and the presence of… pic.twitter.com/z2KWHi8Jbd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243