ಸಿನಿ ಸುದ್ದಿ
ಪ್ರೇಮ ಹಳತಾಗಲ್ಲ ; ಪ್ರೇಮಿಸುತ್ತಲೇ ಇರಲಾಗೊಲ್ಲ
ಮನುಷ್ಯನ ಭಾವನಾತ್ಮಕ ವಿಷಯಗಳು ಯಾವಾಗಲೂ ಬದಲಾಗುವುದಿಲ್ಲ. ಹಾಗೆಯೇ ಪ್ರೇಮವೂ ಬದಲಾಗಿಲ್ಲ. ಆ ಎಲ್ಲ ಭಾವನೆಗಳಿಗೂ ಅವಸರ ಸೇರಿಕೊಳ್ಳುತ್ತದಷ್ಟೆ. ಅವಸರದ ಪ್ರೇಮ, ಅವಸರದ ವಿರಹ, ಅವಸರದ ಬ್ರೇಕ್ಅಪ್, ಅವಸರದ ಪ್ಯಾಥೋ ಸಾಂಗ್ ಹೀಗೆ…
ಮುಂಚೆ ಒಂದು ಪ್ರೇಮ, ವಿರಹ, ಮರುಸಂಗಮ ನಡೆಯಬೇಕು ಎಂದರೆ ಆರೆಂಟು ವರ್ಷ ತಗೊಳ್ತಿತ್ತು. ಅದೀಗ ಆರೆಂಟು ತಿಂಗಳಿಗೆ ಬಂದು ನಿಂತಿದೆ. ಮೊದಲು ಪ್ರೇಮ ಒಬ್ಬರ ಜತೆಗೆ ಆಗುವುದೇ ದೊಡ್ಡ ವಿಷಯ ಆಗಿತ್ತು. ಆದರೆ ಈಗ ಮೊಬೈಲಿನಲ್ಲಿ ಭೇಟಿಯೇ ಆಗದೇ ಹಲವರ ಜತೆಯಲ್ಲಿ ಪ್ರೇಮ–ಕಾಮ ನಡೆಯುತ್ತಿರುತ್ತದೆ. ಹೀಗೆ ಪ್ರೇಮಕ್ಕೆ ಅವಸರ ಸೇರಿಕೊಂಡಿರುವುದು ಈ ದಶಕದ ಒಂದು ಕುತೂಹಲಕಾರಿ ಬದಲಾವಣೆ.
ಇವೆಲ್ಲ ಸರಿ ಅಥವಾ ತಪ್ಪು ಎಂದು ಖಡಾಖಂಡಿತವಾಗಿ ಹೇಳುವುದು ಸಾಧ್ಯವಿಲ್ಲ. ಯಾಕೆಂದರೆ ಇವೆಲ್ಲವೂ ನಮಗೆ ಬೇಕಂತ ನಾವೇ ಮಾಡಿಕೊಂಡಿದ್ದಲ್ಲವೇ? ಎಲ್ಲವನ್ನೂ ನಮಗೆ ಬೇಕಂತಲೇ ಮಾಡುವುದು, ಅವುಗಳನ್ನು ಬಳಸಿಕೊಂಡು, ಅನುಸರಿಸಿಕೊಂಡು ಮೇಲಿಂದ ಅವಕ್ಕೇ ಬೈಯುವುದು ಮಾನವನ ಸಹಜಗುಣ. ಮೊಬೈಲ್ ಮತ್ತು ತಂತ್ರಜ್ಞಾನ ಮುಂದುವರಿದಿರುವುದು ತಪ್ಪು, ಅದರಿಂದ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎನ್ನುವುದನ್ನೂ ನಾವು ಮೊಬೈಲ್ನಲ್ಲಿಯೇ ನೋಡಬೇಕಾದ ಕಾಲದಲ್ಲಿದ್ದೇವೆ. ತುಂಬ ಇಂಟರೆಸ್ಟಿಂಗ್ ಅದು. ಮನುಷ್ಯ ಏನೋ ಒಂದು ಕಂಡುಹಿಡ್ಕೋತಾನೆ. ಅದು ಬೇಕಿರಲಿಲ್ಲ ಎನ್ನುವುದು ಕಂಡುಹಿಡಿದ ಮೇಲೆ ಗೊತ್ತಾಗುತ್ತದೆ. ಈ ಎಲ್ಲವೂ ಪ್ರಾಕೃತಿಕ. ಯಾವುದನ್ನೂ ಬೈಯುವುದರಲ್ಲಿ ಅರ್ಥ ಇಲ್ಲ.
ಲವ್ ಅಂದಾಕ್ಷಣ ‘ಪ್ಲಟಾನಿಕ್ ಲವ್’ (ನಿಷ್ಕಾಮ ಪ್ರೇಮ) ಅನ್ನುವ ಪರಿಕಲ್ಪನೆ ಬರುತ್ತದೆ. ಅಂಥ ಪ್ರೇಮ ಯಾವತ್ತೂ ಅಸ್ತಿತ್ವದಲ್ಲಿಯೇ ಇರಲಿಲ್ಲ ಎನ್ನುವವರೂ ಇದ್ದಾರೆ. ಆದರೆ ನನ್ನ ಪ್ರಕಾರ ಪ್ಲಟಾನಿಕ್ ಲವ್ ಎನ್ನುವುದು ಎಲ್ಲ ಕಾಲಕ್ಕೂ ಇತ್ತು; ಈಗಲೂ ಇದೆ. ಪ್ಲಟಾನಿಕ್ ಅಂದಾಕ್ಷಣ ಅದರ ಶಾಬ್ದಿಕ ಅರ್ಥವನ್ನು ಹುಡ್ಕೊಂಡು ಸಾಯೋದು ತುಂಬ ಮೂರ್ಖತನ. ಅದು ಗಂಡುಹೆಣ್ಣಿನ ಮಧ್ಯವೇ ಆಗಬೇಕು ಎಂದಿಲ್ಲ.
‘ನನಗೊಬ್ಬ ಅದ್ಭುತ ಸ್ನೇಹಿತೆ ಇದ್ದಾಳೆ’ ಎಂದು ಯಾರಾದರೂ ಹೇಳಿದರೆ ನಮಗೆ ನಗು ಬರುತ್ತದೆ. ‘ಅವನು ನನಗೆ ಬರೀ ಸ್ನೇಹಿತ’ ಎಂದು ಒಬ್ಬಳು ಹುಡುಗಿ ಹೇಳಿದರೂ ನಮಗೆ ನಗು ಬರುತ್ತದೆ. ಆದರೆ ಆ ನಗು ಬರುವುದು ಮೂರನೆಯವರಿಗೆ. ಅವರಿಬ್ಬರಿಗೆ ಬರಲ್ಲ. ಅವರಿಬ್ಬರಲ್ಲಿ ಇರುವುದು ಅವರಿಬ್ಬರಿಗೇ ಗೊತ್ತು. ಪ್ಲಟಾನಿಕ್ನ ಅರ್ಥ ಅಷ್ಟೆ. ಹಾಗೆ ಎಲ್ಲರಿಗೂ ಏನೋ ಒಂದು ವಿವರಿಸಲಾಗದಂಥ ಸಂಬಂಧಗಳು ಇರುತ್ತವೆ. ಅದನ್ನು ಪರಿಶುದ್ಧ, ಕಲುಷಿತ ಎಂದೆಲ್ಲ ಟ್ಯಾಗ್ಲೈನ್ ಕೊಡಕ್ಕೆ ಆಗಲ್ಲ. ನಿಮಗೆ ಒಂದು ಸಂಸ್ಥೆಯ ಜೊತೆಗೆ, ವಸ್ತುಗಳ ಜೊತೆಗೆ, ಕುರ್ಚಿಯ ಜೊತೆಗೆ ಪ್ಲಟಾನಿಕ್ ಲವ್ ಇರಬಹುದು. ಹಾಗೆಯೇ ಒಂದು ಹೆಣ್ಣಿಗೆ ಗಂಡಿನ ಜೊತೆಗೆ, ಗಂಡಿಗೆ ಹೆಣ್ಣಿನ ಜೊತೆಗೆ ಲವ್ ಇರಬಹುದು. ‘ಅದು’ ಅದೇನಾ ಎಂದರೆ ಹೂ; ‘ಅದಲ್ವಾ’ ಅಂದರೆ ಅಲ್ಲ.
ಪ್ರೇಮ ಅನ್ನುವುದು ಒಂಥರಾ ಅಂತರ್ಗಾಮಿ. ಅದು ಯಾವಾಗಲೂ ಇರುವುದಿಲ್ಲ ನಮಗೆ. ಕಾಮ ದಿನಾ ನಡೆಯಬಹುದು; ಆದರೆ ಪ್ರೇಮ ಪ್ರತಿದಿನ ಪ್ರತಿಕ್ಷಣ ನಡೆಯುತ್ತದೆ ಎನ್ನುವುದು ಸುಳ್ಳು. ಪ್ರೇಮ ಯಾವುದೋ ಘಟನೆಗೆ ಇನ್ಯಾವುದೋ ಭಾವ ತಾಕಿ ಏನೇನೋ ಆಗಿ ಅನಿಸುವುದು. ನಿರ್ದಿಷ್ಟ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಅದನ್ನು. ಕಾಮ ನೋಡಿ, ಕ್ಲೀನ್ ಆಗಿ ಹೇಳಿಬಿಡಬಹುದು. ಕಾಮದ ಅವಧಿ, ಅದು ಘಟಿಸುವುದು, ಅದಕ್ಕಿರುವ ತೂಕ ಎಲ್ಲವನ್ನೂ ಅನುಭವಿಸಬಹುದು. ಆದರೆ ಪ್ರೇಮವೆಂಬುದು ಭಾವ. ಅದು ಯಾವಾಗ ಜಾಗೃತವಾಗುತ್ತದೆ ಹೇಳಲಿಕ್ಕಾಗದು. ‘ಹೆಂಡತಿಯನ್ನು ವಾರಪೂರ್ತಿ ಪ್ರೀತಿಸುತ್ತೇನೆ’ ಎಂದರೆ ‘ಕೆಲಸ ಯಾವಾಗ ಮಾಡ್ತೀರಿ’ ಎಂದು ಕೇಳಬೇಕಾಗುತ್ತದೆ. ಅದೇ ‘ಪ್ರತಿದಿನ ಕಾಮ ನಡೆಯುತ್ತದೆ’ ಎನ್ನುವುದನ್ನು ವಿವರಿಸಬಹುದು. ದಿನವೂ ಪ್ರೀತ್ಸಕ್ಕಾಗಲ್ಲ.
ಪ್ರೇಮ ಮತ್ತು ಕಾಮದ ನಡುವೆ ಬಹುದೊಡ್ಡ ಅಂತರ ಇದೆ ಎಂತಲೂ ತುಂಬ ಜನ ಹೇಳ್ತಾರೆ. ಆದರೆ ಅಂಥ ಅಂತರ ಯಾವಾಗಲಾದ್ರೂ ಇತ್ತಾ ಎನ್ನುವುದೇ ಅನುಮಾನ. ಜಕಣಾಚಾರಿ ಅವರಂಥ ಶಿಲ್ಪಿಗಳೇ ದೇವಸ್ಥಾನದ ಗೋಡೆಯ ಮೇಲೆ ಮಿಥುನ ಶಿಲ್ಪಗಳನ್ನು ಕೆತ್ತಿಟ್ಟರು. ಒಳಗಡೆ ದೇವರು; ಹೊರಗೆ ಮಿಥುನ ಶಿಲ್ಪ. ಇದನ್ನು ಹೇಗೆ ಅರ್ಥೈಸುತ್ತೀರಿ? ಮೊದಲೊಂದು ಕಾಲದಲ್ಲಿ ಮನುಕುಲದಲ್ಲಿ ‘ಪಾಲಿ ಅಮರಿ’ ಸಂಸ್ಕೃತಿ ಇತ್ತಂತೆ. ಪಾಲಿಮರಿ ಎಂದರೆ ಬಹುಮನುಷ್ಯರ ಸಂಬಂಧಗಳು. ಅಲ್ಲಿಂದ ‘ಇದು ನಮ್ಮ ದೇಶ’, ‘ನನ್ನ ಹುಡುಗಿ’, ‘ನನ್ನ ಮನೆ’ ಎಂದೆಲ್ಲ ಒಂದೊಂದೇ ನಿಯಮ ಮಾಡಿಕೊಂಡು ಬಂದ್ವಿ. ಎಲ್ಲ ಸೇರಿ ಮಾಡಿಕೊಂಡ ವ್ಯವಸ್ಥೆ ಇದು. ಇನ್ನೊಂದು ಐನೂರು ವರ್ಷ ಕಳೆದ ಮೇಲೆ ಯಾರೋ ಒಬ್ಬ ‘ಪಾಲಿ ಅಮರಿ’ ವ್ಯವಸ್ಥೆಯೇ ಕರೆಕ್ಟು ಎಂದು ಹೇಳಬಹುದು. ಆಗ ನಾವು ಇರುವುದೂ ಇಲ್ಲ.
–ಯೋಗರಾಜ್ ಭಟ್
ಸಿನೆಮಾ ನಿರ್ದೇಶಕರು
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಕ್ರೀಡೆ
ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು
ಮದ್ಯಾಹ್ನದ ಸುದ್ದಿಮುಖ್ಯಾಂಶಗಳು
- ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
- ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಹಾಲಿವುಡ್ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
- ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
- ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ
ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್
ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?