ಸಿನಿ ಸುದ್ದಿ
“ಗಂಡಸು ಎಂದು ಸಾಬೀತು ಪಡಿಸಲು ಮದ್ಯಪಾನ ಮಾಡಬೇಕಿಲ್ಲ, ಕತ್ತಲೂ ಆಗ ಬೇಕಿಲ್ಲ” : ಕಿಚ್ಚ ಸುದೀಪ್ ಟ್ವೀಟ್

ಸುದ್ದಿದಿನ ಡೆಸ್ಕ್ : ಇನ್ನೇನು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ‘ಪೈಲ್ವಾನ್’ ಸಿನೆಮಾ ಬಿಡುಗಡೆಯ ತಯಾರಿಯಲ್ಲಿದೆ. ಕಲ್ಲಿನಕೋಟೆ ಚಿತ್ರದುರ್ಗದಲ್ಲಿ ಪೈಲ್ವಾನ್ ಚಿತ್ರದ ಕೆಲವು ಹಾಡುಗಳನ್ನು ಚಿತ್ರ ತಂಡ ಬಿಡುಗಡೆ ಸಿದ್ದತೆ ಮಾಡಿಕೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಹಾಡುಗಳನ್ನು ಬಿಡುಗಡೆ ಗೊಳಿಸಲು ಭಾಗವಹಿಸುತ್ತಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ಹಂಚಿಕೊಂಡಿತ್ತು.
ಆದರೆ ಉತ್ತರ ಕರ್ನಾಟಕದಲ್ಲಿ ಎಂದೆಂದೂ ಕಂಡರಿಯದ ಪ್ರವಾಹದಿಂದ ಅಲ್ಲಿನ ಜನತೆ ಸಂಕಷ್ಟದಲ್ಲಿ ಸಿಲುಕಿದರು. ಈ ಕಾರಣದಿಂದಾಗಿ ಪೈಲ್ವಾನ್ ಆಡಿಯೋ ಬಿಡುಗಡೆ ಮುಂದೂಡಲಾಯಿತು.
ಅಂದಹಾಗೆ ಕಿ್ಚ್ಚ್ಚ್ಚಚ್ಚ ಸುದೀಪ್ ಇಂದು ಮಾಡಿರುವ ಟ್ವೀಟ್ ಹಲವು ಅನುಮಾನ ಮತ್ತು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಕಾರಣ ಇಷ್ಟೆ ಅವರು ಮಾಡಿರುವ ಟ್ವೀಟ್, ಹೀಗಿದೆ ” ನಾನು ಎಲ್ಲೋ ಓದಿದ ಸಾಲುಗಳಿವು, ಗಂಡಸು ಎನಿಸಿಕೊಳ್ಳಲು ಮಧ್ಯಪಾನ ಮಾಡಬೇಕಿಲ್ಲ, ಕತ್ತಲು ಆಗಬೇಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಇದು ಯಾರಿಗೆ ಟಾಂಗ್ ಕೊಡಲು ಮಾಡಿದ್ದಾರೆ ಎಂಬುದು ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಹಾಗೆ “ಏನನ್ನೋ ಸಾಬೀತು ಪಡಿಸಲು ನಾನು ಪೈಟ್ ಮಾಡುವುದಿಲ್ಲ, ಯೋಗ್ಯತೆ ಇರುವವರೊಂದಿಗೆ ಅಷ್ಟೆ ನನ್ನ ಪೈಟ್” ಎಂಬ ಪೋಟೋ ಪೋಸ್ಟರ್ ಅನ್ನು ಕೂಡ ಟ್ವೀಟ್ ಮಾಡಿದ್ದಾರೆ.
Read a beautiful line somewhere,,
" Real MEN don't need Alcohol and the sun to set to become a man".
Found it an awesome one.. 🤗👏🏼👏🏼#PailwaanKichcha pic.twitter.com/L6x5Qd7snU— Kichcha Sudeepa (@KicchaSudeep) August 12, 2019
ಸಿನಿ ಸುದ್ದಿ
ನಟನಾಗಲು ಭಿಕ್ಷುಕರಂತೆ ಅಲೆದಾಡಿದ್ದ ಜಗ್ಗೇಶ್ : 38 ವರ್ಷದ ಹಿಂದಿನ ಕಥೆ ಇಲ್ಲಿದೆ..!

ಎಲ್ಲರಂತೆ ಜಗ್ಗೇಶ್ ಸಹ ನಟರಾಗಬೇಕೆಂದು ಆಸೆ, ಕನಸನ್ನು ಹೊತ್ತುಕೊಂಡು ಚಿತ್ರರಂಗಕ್ಕೆ ಬಂದವರು. ಇಂದು ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕ, ನಿರ್ಮಾಪಕ, ವಿತರಕರಾಗಿ ಜನಪ್ರಿಯರಾಗಿರುವ ಅವರು ಸರಿಯಾಗಿ 38 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬರಲು ಭಿಕ್ಷುಕನಂತೆ ಅಲೆದಾಡಿದ್ದರು.
ಮೊನ್ನೆ ದಿನಾಂಕ 17ಕ್ಕೆ ಜಗ್ಗೇಶ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 38 ವರ್ಷ ಕಂಪ್ಲೀಟ್ ಆಯ್ತು. ಆರಂಭದಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತ, ಖಳನಾಗಿ, ಹೀರೋ ಆಗಿ ಮಿಂಚಿದ್ದ ಅವರು ನಂತರ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು.
ಸದ್ಯ ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ ಸಂದರ್ಭದಲ್ಲಿ ಜಗ್ಗೇಶ್ ತಮ್ಮ ಹಳೆಯ ನೆನಪುಗಳನ್ನು ಹಾಗೂ ಅಮ್ಮನ ಪ್ರೋತ್ಸಾಹವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘1980 Nov 17 ‘ಮಾಯಸಂದ್ರ’ ಪಕ್ಕದ ಪುಟ್ಟ ಹಳ್ಳಿ ‘ಆನಡಗು’ ಗ್ರಾಮದ ನಂಜೇಗೌಡರ ಮೊಮ್ಮಗ ಶಿವಲಿಂಗೇಗೌಡರ ಮಗ ಈಶ್ವರಗೌಡನನ್ನು ಒಬ್ಬ BE ಪದವೀಧರನನ್ನಾಗಿ ಮಾಡಬೇಕು ಎಂದು ಬಯಸಿದ್ದರು..! ಆದರೆ ವಿಧಿಲಿಖಿತ ಬೇರೆ ಆಗಿತ್ತು..!
ನನ್ನ ಇವನ ಬೇಟಿಯಾದದ್ದು 1988ರಲ್ಲಿ..ನಂತರ ನಾವಿಬ್ಬರು ಪ್ರತಿ shooting ನಲ್ಲಿ roommate's.. ನಾನು ಇವನಂತೆ ಹೆಚ್ಚು ಸಂಭಾವನೆ
ಪಡೆಯುವ ನಟನಾಗಿ ಇವನಂತೆ dance ಮಾಡಬೇಕೆಂದು ರಾಯರಲ್ಲಿ
ಪ್ರಾರ್ಥಿಸುತ್ತಿದ್ದೆ..ನಮ್ಮ ಕಾಲದ ಚಂದದ ಹೀರೋ ಇವನಾಗಿದ್ದ
ವಯಸ್ಸಲ್ಲಿ ನನಗಿಂತ ಕಿರಿಯ..
ಹುಟ್ಟುಹಬ್ಬದ ಶುಭಾಷಯಗಳು ಮಿತ್ರ..God bless… https://t.co/yIlWpJB7gL— ನವರಸನಾಯಕ ಜಗ್ಗೇಶ್ (@Jaggesh2) December 2, 2019
ಸಿನಿ ಸುದ್ದಿ
ವಿಡಿಯೋ | ‘ಒಡೆಯ’ ನ ಖಡಕ್ ಟ್ರೈಲರ್ ರಿಲೀಸ್ : ಮಿಸ್ ಮಾಡ್ದೆ ನೋಡಿ

ಸುದ್ದಿದಿನ ಡೆಸ್ಕ್ : ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಬಹುನಿರೀಕ್ಷಿತ ಈ ಸಿನೆಮಾ ಟ್ರೇಲರ್ ಭರ್ಜರಿಯಾಗಿದ್ದು, ಹಳ್ಳಿಸೊಗಡಿನ ಸಿನೆಮಾವಾಗಿದೆ.
ಟ್ರೇಲರ್ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಡಿ ಬಾಸ್ ಅಭಿಮಾನಿಗಳಿಗೆ ಟ್ರೈಲರ್ ನಿರಾಸೆಯಂತೂ ಮೂಡಿಸಿಲ್ಲ. ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡಿದ್ದು, ಎಂ.ಡಿ.ಶ್ರೀಧರ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಸಿನೆಮಾದ ತಾರಾಬಳಗದಲ್ಲಿ ಸಾಧುಕೂಕಿಲ, ದೇವರಾಜ್, ಚಿಕ್ಕಣ್ಣ, ಕಾಮಿಡಿ ಕಿಲಾಡಿ ನಯನ ಇತರರು ಅಭಿನಯಿಸಿದ್ದಾರೆ.
ಟ್ರೈಲರ್ ನೋಡಿ
ನಮ್ಮ ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಚಿತ್ರದ ಟ್ರೈಲರ್ ನಿಮ್ಮ ಮಡಿಲಿಗೆ ಅರ್ಪಿಸಿದ್ದೇವೆ 😊
ನೋಡಿ ಹರಸಿ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಸದಾ ಆಭಾರಿ
– ನಿಮ್ಮ ದಾಸ ದರ್ಶನ್ https://t.co/Nah4buljGI#Odeya pic.twitter.com/5CzrwxkFBa— Darshan Thoogudeepa (@dasadarshan) December 1, 2019
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಸಿನಿ ಸುದ್ದಿ
‘ಜೂನಿಯರ್ ರಾಜ್ ಕುಮಾರ್’ ಜಯಕುಮಾರ್ ಆಸ್ಪತ್ರೆ ಖರ್ಚಿಗೆ ನೆರವಾಗಿ ; ಪತ್ನಿ ಪದ್ಮಾವತಿ ಅಳಲು

ಅವರೊಬ್ಬ ರಂಗಭೂಮಿಯ ಅಭಿಜಾತ ಕಲಾವಿದ. ಅವರೊಳಗೆ ವರನಟ ಡಾ. ರಾಜಕುಮಾರ್ ಅವರ ಪರಕಾಯ ಪ್ರವೇಶ. ಮತ್ತೆ ಮತ್ತೆ ರಾಜಕುಮಾರ್ ನಮ್ಮೆದುರು ಪ್ರತ್ಯಕ್ಷವಾಗಿಸುವ ಅಭಿನಯ ಚತುರತೆ ಅವರದು. ನಾಟಕ ಯಾವುದೇ ಇರಲಿ ಈ ಕಲಾವಿದನಿಗೆ ಹೀರೋ ಪಾತ್ರ ಮುಡಿಪು. ಅಲ್ಲಿ ಡಾ. ರಾಜ್ ಛಾಪು. ನೋಡಲು ವರನಟನ ತದ್ರೂಪು. ಹಾಗೆಂದು ಅನುಕರಣೀಯ ಪ್ರತಿಭೆ ಮಾತ್ರವಲ್ಲ, ಅವರೊಬ್ಬ ಅಪ್ರತಿಮನಟ. ಹೆಸರು ಜಯಕುಮಾರ್, ಊರು ಕೊಡಗನೂರು.
ಗುಬ್ಬಿ ಕಂಪನಿ ಸೇರಿದಂತೆ ಗುಡಗೇರಿ, ಕುಮಾರಸ್ವಾಮಿ, ಚಿಂದೋಡಿ… ಹೀಗೆ ಇಪ್ಪತ್ತಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ಕಳೆದ ಐವತ್ತು ವರ್ಷಗಳ ಕಾಲ ವೃತ್ತಿ ರಂಗಭೂಮಿಯ ನಿರಂತರ ರಂಗಸೇವೆ. ಈಗ್ಗೆ ತಿಂಗಳ ಹಿಂದೆಯಷ್ಟೇ ಕಲಬುರ್ಗಿಯಲ್ಲಿ ಖಾಯಂ ಮೊಕ್ಕಾಂ ಮಾಡಿರುವ ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುತ್ತಿರುವಾಗ ಲಘು ಹೃದಯಾಘಾತ. ಸಕ್ಕರೆ ಕಾಯಿಲೆ ಆತನನ್ನು ಯಾಮಾರಿಸಿದೆ. ಎರಡನೇ ಬಾರಿಗೆ ಆದಾಗ, ಸೂಕ್ಷ್ಮವಾಗಿ ತಿಳಿದು ದಾವಣಗೆರೆಗೆ ಧಾವಿಸಿ ತಜ್ಞ ವೈದ್ಯಕೀಯ ಚಿಕಿತ್ಸೆ ಪಡೆದು ಹೃದಯ ನಾಳಗಳಿಗೆ ಎರಡು ಸ್ಟಂಟ್ ಅಳವಡಿಕೆ. ಆ ಸಂದರ್ಭದಲ್ಲಿ ಶಿವಸಂಚಾರದ ಶ್ರೀ ಪಂಡಿತಾರಾಧ್ಯಶ್ರೀಗಳು ಸಂಬಂಧಿಸಿದ ವೈದ್ಯರಿಗೆ ಫೋನ್ ಮೂಲಕ ಹೇಳಿ ನೆರವಾದರು. ಇನ್ನೇನು ಮನೆಗೆ ಕಳಿಸಬೇಕೆನ್ನುವಾಗ ಎರಡೂ ಕಿಡ್ನಿಗಳು ಕೈ ಕೊಡುವ ಸೂಚನೆಗಳು ಎದುರಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರೋಗಿಯ ಸ್ಥಳಾಂತರ.
ಕಳೆದ ಹದಿನೈದು ದಿನಗಳಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖ ಆಗುವ ಎಲ್ಲ ಲಕ್ಷಣಗಳಿವೆ ಎಂದು ತಜ್ಞ ವೈದ್ಯರ ಅಂಬೋಣ. ಹೆಲ್ತ್ ಕಾರ್ಡಿನ ಸೌಲಭ್ಯಗಳು ಹೃದಯದ ರಕ್ತನಾಳಗಳಿಗೆ ಅಳವಡಿಸಿದ ಸ್ಟಂಟಗಳಿಗೆ ಕೊನೆಗೊಂಡಿತು. ಈಗ ಮಣಿಪಾಲ್ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ಚಿಕಿತ್ಸೆಗೂ ಹಣ ಕಟ್ಟಲೇ ಬೇಕಿದೆ. ಒಂದು ಲಕ್ಷ ರುಪಾಯಿ ಮಿಕ್ಕ ಖರ್ಚು. ಕಲಾವಿದ ಜಯಕುಮಾರರ ಬಳಿ ಇರುವ ಹಣವೆಲ್ಲ ಖರ್ಚಾಗಿದೆ. ಆಸ್ಪತ್ರೆಯಲ್ಲಿರುವ ಜಯಕುಮಾರರ ಜತೆ ಅವರ ಪತ್ನಿ ಪದ್ಮಾವತಿ ಮಗ ಮಾರುತಿ ಇದ್ದಾರೆ.
ಶಿವಣ್ಣನ ಜನುಮದ ಜೋಡಿ ಸೇರಿದಂತೆ, ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್ ಅಂತಹ ಹೆಸರಾಂತ ನಟರ ಜತೆ, (ಬರಗೂರರ ನಾಕೈದು ಚಿತ್ರ ) ನೂರೈವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಜಯಕುಮಾರ ನಟಿಸಿದ್ದಾರೆ. ಆತ ಅಭಿನಯಿಸಿದ ಕಿರುತೆರೆ ದಾರಾವಾಹಿಗಳು ಲೆಕ್ಕವಿಲ್ಲದಷ್ಟು. ಅಷ್ಟೇ ಪ್ರಮಾಣದ ವೃತ್ತಿ ರಂಗನಾಟಕಗಳು. ಹೀಗೆ ಅವಿರತವಾಗಿ ದುಡಿದ ಬಣ್ಣದಜೀವ ಹಾಸಿಗೆ ಹಿಡಿದಿದೆ. ಈಗ ಅಕ್ಷರಶಃ ಸಂಕಷ್ಟದಲ್ಲಿರುವ ಕೊಡಗನೂರು ಜಯಕುಮಾರರ ನೆರವಿಗಾಗಿ ಅವರ ಪತ್ನಿ ಶ್ರೀಮತಿ ಪದ್ಮಾವತಿ ಹಾಗೂ ಅವರ ಮಗ ಮಾರುತಿ ಮನವಿ ಮಾಡಿಕೊಂಡಿದ್ದಾರೆ.
ಜಯಕುಮಾರ್ ಅವರ ಬ್ಯಾಂಕ್ ಖಾತೆ ವಿವರ ಹೀಗಿದೆ
ಸಿಂಡಿಕೇಟ್ ಬ್ಯಾಂಕ್
ಮಲ್ಲೇಶ್ವರಮ್
ಕೆ.ಸಿ. ಜನರಲ್ ಆಸ್ಪತ್ರೆ ಶಾಖೆ :ಬೆಂ.
A/C : 04492010022368
IFSC code : SYNB 0000449
ಕಲಾವಿದನ ನೆರವಿನ ನಿರೀಕ್ಷೆ ಯಲ್ಲಿ
ಪದ್ಮಾವತಿ w/o ಜಯಕುಮಾರ
ಮಣಿಪಾಲ್ ಆಸ್ಪತ್ರೆ, ಮಣಿಪಾಲ್
ಮೊ: 99023 89044
-
ದಿನದ ಸುದ್ದಿ3 days ago
ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್ ಆದ ಆರೋಪಿಯ ಪತ್ನಿ
-
ಬಹಿರಂಗ2 days ago
ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ‘ಪ್ರಿಯಾಂಕ’
-
ಲೈಫ್ ಸ್ಟೈಲ್7 days ago
ನೀಲಿ ನಾಲಿಗೆ ರೋಗ ಮತ್ತು ಚಿಕಿತ್ಸಾ ವಿಧಾನ
-
ರಾಜಕೀಯ6 days ago
ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್
-
ಬಹಿರಂಗ5 days ago
ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿ ಅಂಬೇಡ್ಕರ್
-
ಸಿನಿ ಸುದ್ದಿ6 days ago
ನಟನಾಗಲು ಭಿಕ್ಷುಕರಂತೆ ಅಲೆದಾಡಿದ್ದ ಜಗ್ಗೇಶ್ : 38 ವರ್ಷದ ಹಿಂದಿನ ಕಥೆ ಇಲ್ಲಿದೆ..!
-
ನೆಲದನಿ6 days ago
ಹೊಲಯರು-ಮಾದರು ನಾಗರಿಕರೇ..?
-
ರಾಜಕೀಯ6 days ago
ಅನರ್ಹರನ್ನು ತಿರಸ್ಕರಿಸಿ, ತಕ್ಕ ಪಾಠ ಕಲಿಸಿ : ಮತದಾರರಿಗೆ ಸಿದ್ದರಾಮಯ್ಯ ಮನವಿ