ಸಿನಿ ಸುದ್ದಿ
ಆರೋಗ್ಯಕರ ಜೀವನಕ್ಕಾಗಿ ಮಾಂಸಾಹಾರ ತ್ಯಜಿಸಿದ ಬಾಲಿವುಡ್ ಸೆಲೆಬ್ರಿಟಿಗಳು
ಸುದ್ದಿದಿನ
ಸೆಲೆಬ್ರಿಟಿಗಳು ಫಿಟ್ನೆಸ್ ಕಾಯ್ದುಕೊಳ್ಳಲು ಏನೆಲ್ಲಾ ಮಾಡುತ್ತಾರೆ. ಎಷ್ಟೆಲ್ಲಾ ವರ್ಕೌಟ್ ಮಾಡುತ್ತಾರೆ. ಅದಕ್ಕಾಗಿ ಆಹಾರ ಕ್ರಮವನ್ನು ಬದಲಿಸಿಕೊಳ್ಳುತ್ತಾರೆ. ಆದರೆ, ಕೆಲವು ಸೆಲೆಬ್ರಿಟಿಗಳು ತಮ್ಮ ಸಾಕು ಪ್ರಾಣಿ (ಪಪ್ಪಿ)ಗಳಿಗಾಗಿ ಮಾಂಸಾಹಾರವನ್ನೇ ತ್ಯಜಿಸಿದ್ದಾರೆ. ಯಾರ್ಯಾರು ಈ ಚಾಲೆಂಜ್ ತೆಗೆದುಕೊಂಡಿದ್ದಾರೆ. ನೋಡಿ ಇಲ್ಲಿದೆ ಮಾಹಿತಿ..!?
ಅಮಿರ್ ಖಾನ್:
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್, ಸಸ್ಯಾಹಾರ ಪದ್ಧತಿ ಪಾಲಿಸುತ್ತಿರುವುದಕ್ಕೆ ಅವರ ಹೆಂಡತಿ ಕಿರಣ್ ರಾವ್ ಕಾರಣ ಎನ್ನಬಹುದು. ಏಕೆಂದರೆ ಕಿರಣ್ ಸಹ ಸಸ್ಯಾಹಾರಿ ಆಗಿದ್ದಾರೆ. ಪ್ರಾಣಿಗಳ ಮೆರಲಿನ ಪ್ರೀತಿಯಿಂದ ಅವುಗಳ ಹತ್ಯೆ ಮಾಡುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅವರು ಮನೆಯಲ್ಲಿ ಬಹುತೇಕ ಸಸ್ಯಾಹಾರ ಆಡುಗೆ ಮಾಡುತ್ತಾರೆ. ಅಲ್ಲದೇ ಗಂಡ ಅಮಿರ್ ಖಾನ್ ಗೂ ಇದನ್ನೇ ಪಾಲಿಸುತ್ತಿದ್ದಾರೆ. ಅಮಿರ್ ಖಾನ್ ಮಾಂಸಾಹಾರ ಸೇವನೆಯಿಂದ ಬರುವ ಹದಿನೈದು ಮಾರಣಾಂತಿಕ ಕಾಯಿಲೆಗಳ ಜಾಗೃತಿ ಮೂಡಿಸಿದ್ದಾರೆ.
ಶಾಹಿದ್ ಕಪೂರ್:
ಶಾಹಿದ್ ಕಪೂರ್ ಬಾಳಿನಲ್ಲಿ ಕರೀನಾ ಕಪೂರ್ ಬಂದಾಗಿನಿಂದ ಇಬ್ಬರು ವೆಜ್ ಅಳವಡಿಸಿಕೊಂಡಿದ್ದಾರೆ. ಈಗಲೂ ಸಸ್ಯಾಹಾರವನ್ನು ಬಳಸುತ್ತಿದ್ದಾರೆ. ಶಾಹಿದ್ ಅನೇಕ ಪೆಟಾ ಆಂದೋಲನಗಳಲ್ಲಿ ಭಾಗವಹಿಸುತ್ತಿದ್ದು, ೨೦೧೧ರಲ್ಲಿ “ಏಷ್ಯಾದ ಸೆಕ್ಸೆಯೆಸ್ಟ್ ವೆಜಿಟೇರಿಯನ್ ಮ್ಯಾನ್” ಪ್ರಶಸ್ತಿ ಪಡೆದಿದ್ದಾರೆ. ಪ್ರಾಣಿ ಪ್ರಿಯರಾದ ಶಾಹಿದ್ ಕಪೂರ್ಗೆ ಅವರ ತಂದೆ “ಲೈಫ್ ಇಸ್ ಫೇರ್” ಪುಸ್ತಕ ಕೊಡುಗೆ ನೀಡಿದ್ದಾರೆ. ಇದನ್ನು ಒಂದೇ ಬಾರಿ ಕುಳಿತು ಓದಿ ಮುಗಿಸಿ ನಾನ್ ವೆಜ್ ತ್ಯಜಿಸುವುದಾಗಿ ಪ್ರಮಾಣ ಮಾಡಿಬಿಟ್ಟರು.
ಅಲಿಯಾ ಭಟ್:
ವೆಜಿಟೆರಿಯನ್.ಗೆ ಹೊಸಬಳಾದ ಅಲಿಯಾ ಭಟ್ ಆಹಾರ ಪದ್ಧತಿಯನ್ನು ಸಂತೋಷ ಪಡುತ್ತಿದ್ದಾಳೆ. ಆಕೆಯ ತಂದೆ ಮಹೇಶ್ ಭಟ್ ಕೂಡ ಮಗಳ ಸಸ್ಯಾಹಾರ ಪದ್ಧತಿಯನ್ನು ಸ್ವಾಗತಿಸಿದ್ದಾರೆ
ಸೋನಾಕ್ಷಿ ಸಿನ್ಹಾ:
ಪ್ರಾಣಿ ವಧೆಯನ್ನು ಪ್ರಬಲವಾಗಿ ವಿರೋಧಿಸುವ ಸೋನಾಕ್ಷಿ ಸಿನ್ಹಾ, ಮಾಂಸಾಹಾರ ಸೇವನೆ ತ್ಯಜಿಸಿದ್ದಾರೆ. ಇದು ಅವರ ದೇಹದ ತೂಕ ಇಳಿಸಿಕೊಳ್ಳಲು ಅನುಕೂಲವಾಗಿದೆ. ಅಲ್ಲದೆ ಅವರ ಮೆಟಬಾಲಿಯಿಸಂಗೆ ಸಹಕಾರಿಯಾಗಿದೆ.
ಅನುಷ್ಕಾ ಶರ್ಮಾ:
ಅನುಷ್ಕಾ ಶರ್ಮಾ ಕ್ಯೂಟ್ ಆಗಿ ಕಾಣಲು ಕಾರಣವೆಂದು ಅನೇಕರು ಯೋಚಿಸಿರಬಹುದು. ಇದಕ್ಕೆ ಕಾರಣ ಮಾಂಸಾಹಾರ ತ್ಯಜಿಸಿರುವುದು. ಇದನ್ನು ಸಂದರ್ಶನವೊಂದರಲ್ಲಿ ರಹಸ್ಯ ಬಯಲು ಮಾಡಿದ್ದಾರೆ. ಅನುಷ್ಕಾ ತನ್ನ ಮುದ್ದು ಪಪ್ಪಿಗಾಗಿ ವೆಜ್ ರೂಢಿಸಿಕೊಂಡಿದ್ದಾರೆ. ಮೀಟ್ ಸ್ಮೆಲ್ ಸೋಕಿದರೆ ಹೇಟ್ ಮಾಡುತ್ತಿದ್ದಾರೆ. ಈ ರೀತಿಯ ಲೈಫ್ ಸ್ಟೈಲ್ ಇಷ್ಟ ಪಡುತ್ತಿದ್ದಾರೆ.
ಜಾನ್ ಅಬ್ರಾಹಂ:
ಜಾನ್ ಅಬ್ರಾಹಂ ಬಾಲಿವುಡ್ನ ಫಿಟೆಸ್ಟ್ ಆಕ್ಟರ್. ಅವರು ಫಿಟ್ನೆಸ್ ಕಾಯ್ದುಕೊಳ್ಳಲು ಏನೆಲ್ಲಾ ತಿನ್ನಬಹುದೆಂಬ ನಿಮ್ಮ ತಲೆಯಲ್ಲಿ ಲೆಕ್ಕಾಚಾರ ನಡೆಯುತ್ತಿದ್ದರೆ ಇದು ತಲೆಕೆಳಗಾಗಬಹುದು. ಏಕೆಮ.ದರೆ ಬಹುತೇಕರು ತಿಳಿದಮನತೆ ಮಾಂಸಾಹಾರ ಸೇವನೆಯಿಂದ ಮಾತ್ರ ವರ್ಕೌಟ್ ಸಾಧ್ಯ ಎಂಬುದಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ಮಾಂಸಾಹಾರ ಪ್ರಿಯರಿಗೆ ಜಾನ್ ಅಬ್ರಾಹಂ ಮಾತು ಹೇಳಬಯಸುತ್ತಾರೆ. ಮಾಂಸಾಹಾರ ಇಲ್ಲದೇ ಬಾಡಿ ಬಿಲ್ಡ್ ಮಾಡಬಹುದು. ಇದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ಜಾನ್ ಅಬ್ರಾಹಂ.
ಕಂಗನಾ ರಣಾವತ್:
ಯಾರಿಗೆ ಗೊತ್ತಿಲ್ಲ ಬಾಲಿವುಡ್ನ ಬೋಲ್ಡ್ ಬೆಡಗಿ. ತನ್ನ ಸ್ಟ್ರೇಟ್ ಫಾರ್ವರ್ಡ್ ಲೂಕ್, ಟಾಕ್, ಫಿಸಿಕ್ ಎಂಥವರನ್ನು ಆಕರ್ಷಿಸುತ್ತದೆ. ಕಂಗನಾ ಬೋಲ್ಡ್ ಬ್ಯೂಟಿ ಎಂಥಾ ಆಹಾರ ಸೇವಿಸಬಹುದು ಎಂಬ ಲೆಕ್ಕಾಚಾರಕ್ಕೆ ಸಸ್ಯಾಹಾರ ಎಂಬುದು ಉತ್ತರ ಸಿಗುತ್ತದೆ. ಬಾಲಿವುಡ್ನಲ್ಲಿ ಕಂಡುಕೊಂಡ ಮೇಲೂ ಸಸ್ಯಾಹಾರ ಪಾಲಿಸುತ್ತಿದ್ದಾರೆ. ಇದು ಬೋಲ್ಡ್ ಬ್ಯೂಟಿಯ ರಹಸ್ಯ ರಿವಿಲ್ ಮಾಡಿದ್ದಾರೆ.
ಕ್ರೀಡೆ
ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು
ಮದ್ಯಾಹ್ನದ ಸುದ್ದಿಮುಖ್ಯಾಂಶಗಳು
- ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
- ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಹಾಲಿವುಡ್ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
- ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
- ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ
ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್
ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243