ಸಿನಿ ಸುದ್ದಿ
ಹುಚ್ಚಾ ವೆಂಕಟ್ ರಂಪಾಟ ; ಓದಿ ಈ ಸುದ್ದಿ..!

ಸುದ್ದಿದಿನ, ಬೆಂಗಳೂರು : ಹುಚ್ಚ ವೆಂಕಟ್ ರಂಪಾಟ ಹಿನ್ನಲೆ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಪ್ರತ್ಯೇಕ್ಷವಾದ್ದಾನೆ ಹುಚ್ಚ ವೆಂಕಟ್. ಯಾವ ಪೊಲೀಸ್ ಠಾಣೆಯಲ್ಲಿ ನನ್ನ ಕಂಪ್ಲೇಟ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿರುವ ವೆಂಕಟ್. ಹೀಗಾಗಿ ಕಮೀಷನರ್ ಗೆ ದೂರು ನೀಡಲು ಬಂದಿರುವುದಾಗಿ ಹೇಳುತ್ತಿದ್ದಾನೆ.
ಹುಚ್ಚಾ ವೆಂಕಟ್ ರಂಪಾಟ
ಇತ್ತೀಚಿಗೆ ನಡು ರಸ್ತೆಯಲ್ಲಿ ಕುಡಿದು.. ತೂರಾಡಿದ ಹುಚ್ಚಾ ವೆಂಕಟ್ ನ ರಂಪಾಟವನ್ನು ನೋಡಲು ಮುಗಿಬಿದ್ದಿದ್ದರು ಸ್ಥಳೀಯರು. ಬೆಂಗಳೂರಿನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಕುಡಿದು ರಂಪಾಟ ಮಾಡಿದ್ದ. ಅಂದು ಮಟ..ಮಟ..ಮಧ್ಯಾಹ್ನ ಕಂಠ ಪೂರ್ತಿ ಕುಡಿದು ಓಡಾಡಿದ್ದ ನಟ ಹುಚ್ಚ ವೆಂಕಟ್. ನಂತರ ಉಲ್ಲಾಳದ ಬಾರ್ ವೊಂದಲ್ಲಿ ಕುಡಿದು ಹೊರ ಬರುತ್ತಿದ್ದಂತೆ ಬೇಕರಿ ಸಿಬ್ಬಂಧಿ ಜೊತೆ ಗಲಾಟೆ ನಡೆಸಿ ಹಲ್ಲೆ ಮಾಡಿದ್ದ. ಹುಚ್ಚ ವೆಂಕಟ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು ಅಲ್ಲಿನ ಯುವಕರು.
ಈ ಸಂಬಂಧ ಬಳಿಕ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ಎನ್ ಸಿ ಆರ್ ದಾಖಲಿಸಿದ್ದರು. ಬಳಿಕ ಎಚ್ಚರಿಕೆ ಕೊಟ್ಟು ವೆಂಕಟ್ ನನ್ನು ಬಿಟ್ಟು ಕಳಿಸಿದ್ದರು ಪೊಲೀಸರು. ಆದರೆ, ಈಗ ಕಮೀಷನರ್ ಕಚೇರಿಗೆ ದೂರು ನೀಡಲು ಬಂದಿರುವುದಾಗಿ ಹೇಳುತ್ತಿದ್ದಾನೆ ವೆಂಕಟ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಸಿನಿ ಸುದ್ದಿ
ಹುಟ್ಟು ಹಬ್ಬ | ‘ಮಾರ್ಚ್1ಕ್ಕೆ ಯಜಮಾನ ಬರ್ತಾನೆ, ಅವ್ನೇ ಎಲ್ಲಾ ಹೇಳ್ತಾನೆ’ ಅಂದ್ರು ಡಿ ಬಾಸ್..! ವಿಡಿಯೋ ನೋಡಿ

ಸುದ್ದಿದಿನ, ಬೆಂಗಳೂರು : ಕೈ ನೋವಿದ್ರೂ ಅಭಿಮಾನಿಗಳಿಗೆ ಕೈ ಕುಲುಕಿದ ದರ್ಶನ್ ಅವರು ಅಭಿಮಾನಿಗಳ ಅಭಿಮಾನದ ಮುಂದೆ ಕೈ ನೋವೆಲ್ಲಾ ಏನೂ ಇಲ್ಲ. ಕಳೆದ ವರ್ಷ ರಾಶಿ ರಾಶಿ ಹಾರ,ಕೇಕ್ ವೇಸ್ಟ್ ಆಗಿ ಬಂದು ಬೀಳ್ತಿತ್ತು, ಹಾಗಾಗಿ ಈ ಬಾರಿ ನನ್ನಿಂದ ಸಹಾಯ ಆಗ್ಲಿ ಅಂತ ದವಸ ಧಾನ್ಯಗಳನ್ನು ತರುವಂತೆ ವಿನಂತಿ ಮಾಡಿದ್ದೆ ಎಂದರು.
ಇಂದು ಹುಟ್ಟು ಹಬ್ಬ ಆಚರಿಸಿಕೊಂಡ ದರ್ಶನ್ ಅವರು, ಮಾರ್ಚ್1 ರಂದು ಯಜಮಾನ ಬರ್ತಾನೆ ಅವ್ನೇ ಎಲ್ಲಾ ಹೇಳ್ತಾನೆ. ಸಿನಿಮಾ ಇಂಡಸ್ಟ್ರಿ ಯಾರಪ್ಪನ ಸ್ವತ್ತೂ ಅಲ್ಲ. ಹೊಸಬರು ಬರ್ಬೇಕಲ್ಲಾ, ಬಂದು ಬೆಳೀಬೇಕಲ್ವಾ? ಯಾರೇ ಹೊಸಬರು ಬಂದು ಕೇಳಿಕೊಂಡ್ರೂ ನಾನು ಸಪೋರ್ಟ್ ಮಾಡ್ತೀನಿ.ಉಡುಗೊರೆ ರೂಪದಲ್ಲಿ ಪ್ರಾಣಿ ಪಕ್ಷಿಗಳನ್ನ ಕೊಡುತ್ತಿರೋ ಅಭಿಮಾನಿಗಳು.ಇಂತಹ ಉಡುಗೊರೆಗಳನ್ನು ಫಾರ್ಮ್ ಹೌಸ್ಗೆ ಕಳುಹಿಸುವೆ.ಸ್ನೇಹಿತರು ಇಷ್ಟ ಪಟ್ಟು ಅವುಗಳನ್ನು ಸಾಕಲು ತೆಗೆದುಕೊಂಡು ಹೋಗ್ತಾರೆ ಎಂದು ಹೇಳಿದರು.
ಈ ವರ್ಷ 3 ಸಿನಿಮಾ ರಿಲೀಸಾಗಲಿವೆ ಯಜಮಾನ, ಒಡೆಯ,ಕುರುಕ್ಷೇತ್ರ ರಿಲೀಸಾಗಲಿರುವ ಸಿನೆಮಾಗಳು.ಗ್ರಾಫಿಕ್ಸ್ ನಿಂದಾಗಿ ಕುರುಕ್ಷೇತ್ರ ತಡವಾಗಿದೆ ಅಷ್ಟೆ.ಒಂದೂವರೆ ವರ್ಷದಿಂದ ಸುಮ್ಮನಿದ್ನಲ್ಲಾ ಹಾಗಾಗಿ ಒಟ್ಟಿಗೆ ಸಿನಿಮಾಗಳು ಬರ್ತಿದೆ.ಅಭಿಷೇಕ್ ಗೆ ಆಲ್ ದಿ ಬೆಸ್ಟ್ ಹೇಳ್ತೀನಿ, ಅವನೂ ಸಿನಿಮಾ ಇಂಡಸ್ಟ್ರಿ ಗೆ ಬರ್ಬೇಕು.ಮಂಡ್ಯ ಯೋಧನ ಜೊತೆಗೆ ಬೇರೆ ಯೋಧರು ಸಹ ಅಗಲಿದ್ದಾರೆ
ಮನಸಿಗೆ ತುಂಬಾ ದುಃಖ ತಂದಿದೆ.
ಇನ್ಮುಂದೆ ವ್ಯಾಲೆಂಟೈನ್ಸ್ ಡೇನ ಡಾರ್ಕ್ ಡೇ ಅಂತ ಆಚರಿಸ್ಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಡಿ ಬಾಸ್ ಹುಟ್ಟು ಹಬ್ಬದ ವಿಡಿಯೋ ನೋಡಿ
ಪ್ರತಿನಿತ್ಯ ನನ್ನ ನಿವಾಸದ ಮುಂದೆ ಅಭಿಮಾನಿಗಳ ಜಾತ್ರೆಯೇ ಇರುತ್ತದೆ.ಬರ್ತಡೇ ಹೊರತು ಪಡಿಸಿ ಪ್ರತೀದಿನ ಸಾವಿರಾರು ಅಭಿಮಾನಿಗಳು ಬರ್ತಾರೆ.ಪ್ರತಿದಿನ ಅಭಿಮಾನಿಗಳಿಗಾಗೇ ಅರ್ಧ ಗಂಟೆ ಮೀಸಲಿಟ್ಟಿದ್ದೇನೆ.ಶೂಟಿಂಗ್ ಹೋಗೋಕು ಮುಂಚೆ ಅಭಿಮಾನಿಗಳಿಗೆ ಗಳನ್ನ ಭೇಟಿ ಮಾಡಿಯೇ ಹೋಗೋದು ಎಂದರು ದರ್ಶನ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಪ್ರಕಾಶ್ ರೈ,ಯಶ್,ದರ್ಶನ್ ರಿಂದ ಹುತ್ಮಾತ ಯೋಧರಿಗೆ ನಮನ

ಸುದ್ದಿದಿನ ಬೆಂಗಳೂರು : ಶ್ರೀನಗರದ ಪುಲ್ವಾಮಾ ದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಸುಮಾರು 48 ಕ್ಕೂ ಹೆಚ್ಚು ಭಾರತೀಯ ಯೋಧರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪಾಕಿಸ್ತಾನದ ಉಗ್ರಗಾಮಿಗಳ ಹಾಗೂ ಅಲ್ಲಿನ ಸರ್ಕಾರಕ್ಕೆ ಜನತೆ ಛೀಮಾರಿ ಹಾಕುತ್ತಿದ್ದಾರೆ.
ಕರ್ನಾಟಕದ ಚಲನಚಿತ್ರ ವಲಯದಲ್ಲೂ ಯೋಧರಿಗೆ ನಮನ ಹಾಗೂ ಕುಟುಂಬದವರಿಗೆ ಆತ್ಮ ಸ್ಥೈರ್ಯ ತುಂಬುವ ಮಾತುಗಳು ಕೇಳಿಬಂದಿವೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಕಾಶ್ ರೈ, ಯಶ್ ಅವರು ಯೋಧರಿಗೆ ನಮನ ಸಲ್ಲಿಸಿದ್ದಾರೆ.
ವೀರ ಯೋಧರ ಬಲಿದಾನಕ್ಕೆ .. ಅವರ ತ್ಯಾಗಕ್ಕೆ ನನ್ನ ಭಾವಪೂರ್ಣ ನಮನಗಳು.. ಅವರ ತ್ಯಾಗಕ್ಕೆ ತಕ್ಕ ನ್ಯಾಯ ಸಿಗಬೇಕೆಂದು ಆಶಿಸುತ್ತೇನೆ.. ನಮ್ಮ…
Posted by Yash on Friday, 15 February 2019
Extremely sad to hear about #PulwamaTerrorAttack news yesterday. Prayers are with those brave Soldiers & their Families. May those Brave souls R.I.P.
Terrorism poses a severe threat to Mankind. It should be completely rooted out from the society.
— Darshan Thoogudeepa (@dasadarshan) February 15, 2019
Shocked.. saddened by #PulawamaTerrorAttack … let’s stand by the families of our soldiers.. plsss this is not the time to politicise a tragedy n start a blame game .. but it is time GOVERNMENT n the CIVIL SOCIETY to be united and assertively find a solution .. Jai hind
— Prakash Raj (@prakashraaj) February 14, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಸಿನಿ ಸುದ್ದಿ
ವಿಡಿಯೋ | ‘ಬೆಲ್ ಬಾಟಮ್’ ರಿಲೀಸ್ ಗೆ ಕ್ಷಣಗಣನೆ : ನೋಡಲು ಮರೆಯದಿರಿ ; ಮರೆತು ನಿರಾಶರಾಗದಿರಿ..!

ಸುದ್ದಿದಿನ ಡೆಸ್ಕ್ : ಕಚಗುಳಿ ಟ್ರೈಲರ್ ಹಾಗು ಕನ್ನಡದ ಮಟ್ಟಿಗೆ ವಿಶೇಷ ಎನಿಸುವ ಪೋಸ್ಟರುಗಳ ಮೂಲಕ ಸುದ್ದಿ ಮಾಡುತ್ತಿರುವ “ಬೆಲ್ ಬಾಟಂ” ಸಿನೆಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.
ಒಲವೇ ಮಂದಾರ ದಂತಹ ಸಿನೆಮಾ ಕೊಟ್ಟ ಜಯತೀರ್ಥ ನಿರ್ದೇಶನದ ಈ ಸಿನೆಮಾದಲ್ಲಿ ರಿಷಭ್ ಶೆಟ್ಟಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕ ನಟನ ಪಾತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯ, ಯೋಗರಾಜ್ ಭಟ್ರು ಹಾಗು ಪ್ರಮೋದ್ ಶೆಟ್ರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿಡಿಯೋ ಲಿಂಕ್
https://m.facebook.com/story.php?story_fbid=2116184485132943&id=100002242350557
ಸುದ್ದಿದಿನ.ಕಾಂ|ವಾಟ್ಸಾಪ್|9986715401
-
ಬಹಿರಂಗ5 days ago
ಜಾತಿ ಪದ್ದತಿ : ಎಲ್ಲರೂ ಓದಲೇ ಬೇಕಾದ ಡಾ. ಅಂಬೇಡ್ಕರ್ ಅವರ ಬರಹ..!
-
ಲೈಫ್ ಸ್ಟೈಲ್5 days ago
ವೀರ್ಯಾಣು ವೃದ್ಧಿಸೋ ‘ಮಾವಿನ ಹಣ್ಣಿನ’ ಉಪಯೋಗಗಳಿಷ್ಟು..!
-
ಬಹಿರಂಗ4 days ago
‘ಹಿಂದೂ ಸಮಾಜ’ ವೆಂಬುದು ‘ಮಿಥ್ಯ ಪದ’ : ಡಾ.ಬಿ.ಆರ್.ಅಂಬೇಡ್ಕರ್ ಅವರ ಈ ಬರಹ ನಿಮಗಾಗಿ..!
-
ದಿನದ ಸುದ್ದಿ5 days ago
’42 ಪಿಡಿಓ’ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ‘ದಲಿತ ಸೇನೆ’ಯಿಂದ ಪ್ರತಿಭಟನೆ
-
ಬಹಿರಂಗ4 days ago
‘ಧ್ರುವ್’ ಎಂಬ ಮಾಧ್ಯಮದ ‘ಧ್ರುವ ತಾರೆ’..!
-
ದಿನದ ಸುದ್ದಿ3 days ago
30 ಸಿ ಆರ್ ಪಿ ಎಫ್ ಯೋಧರ ಬಲಿಪಡೆದ ಉಗ್ರ
-
ದಿನದ ಸುದ್ದಿ7 days ago
ಯಡಿಯೂರಪ್ಪ ನುಡಿದಂತೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ : ಸಿದ್ದರಾಮಯ್ಯ
-
ಬಹಿರಂಗ3 days ago
ಆದಿವಾಸಿ ಬುಡಕಟ್ಟು ಜನಾಂಗ ಅಪರಾಧಿಗಳಾಗಿ ಬದುಕುತ್ತಿವೆ ; ಇದನ್ನು ಕಂಡು ಹಿಂದೂ ಜನಾಂಗ ನಾಚಿಕೆಯಿಲ್ಲದೆ ಬದುಕುತ್ತಿದೆ : ಡಾ.ಬಿ.ಆರ್.ಅಂಬೇಡ್ಕರ್ ರ ಈ ಬರಹ ಓದಿ