ದಿನದ ಸುದ್ದಿ
ಉಡುಪಿಯ ಪದ್ಮಪ್ರಿಯಾ ಆತ್ಮಕ್ಕೆ ಶಾಂತಿ ಸಿಕ್ತು..! ಶಾಸಕರ ಪತ್ನಿ ಸಾವಿಗೆ ಕಾರಣವಾದ ಟಿವಿ ಅ್ಯಂಕರ್ ಗೂ ಅದೇ ಗತಿಯಾಯ್ತು..!
- ಪ್ರದೀಪ್ ಕುಮಾರ್, ಪತ್ರಕರ್ತ
ನಿಮಗೆ ಉಡುಪಿ ಪದ್ಮಪ್ರಿಯ ಪ್ರಕರಣ ಮರೆತು ಹೋಗಿರಬಹುದು. ನಾಲ್ಕೈದು ದಿನ ಟಿವಿಯಲ್ಲಿ ಪದ್ಮಪ್ರಿಯಾ ಸಾವಿನ ತರಾವರಿ ಕತೆ ಕೇಳಿ ಖುಷಿಯಲ್ಲೇ ಆಕ್ರೋಶ ವ್ಯಕ್ತಪಡಿಸಿ ಮರೆತಿರಬಹುದು. ಆದ್ರೆ ಪದ್ಮಪ್ರಿಯ ಆತ್ಮ ಮಾತ್ರ ಅದನ್ನು ಮರೆತಿಲ್ಲ. ಪದ್ಮಪ್ರೀಯ ಮತ್ತು ಆಕೆಯ ಗೆಳೆಯನ ಸಂಬಂಧದ ಬಗ್ಗೆ ಕತೆ ಕಟ್ಟಿ ಪದ್ಮಪ್ರೀಯ ಸಾವಿಗೆ ನೇರ ಕಾರಣನಾಗಿದ್ದ ಟಿವಿ ಅ್ಯಂಕರ್ ಗೆ ಇವತ್ತು ಅಂತದ್ದೇ ಅನೈತಿಕ ಸಂಬಂಧದ ಕಾರಣಕ್ಕಾಗಿ ಒದೆ ಬಿದ್ದಿದೆ.
ಅವತ್ತು ಶಾಸಕರ ಜೊತೆಗಿನ ಬದುಕಿನ ನಿರಾಸಕ್ತಿ ತಳೆದು ತನ್ನಷ್ಟಕ್ಕೆ ತಾನಿರ್ತೀನಿ ಅಂತ ಉಡುಪಿಯ ಪದ್ಮಪ್ರೀಯ ದೆಹಲಿಗೆ ಹೋಗಿದ್ದಳು. ಹೇರ್ ಕಟ್ ಮಾಡಿ, ತನ್ನ ಬಟ್ಟೆ, ನಡೆ ನುಡಿಗಳನ್ನು ಬದಲಿಸಿ ಹೊಸ ಬದುಕು ಕಟ್ಟಲು ಆಕೆ ದೆಹಲಿಗೆ ತೆರಳಿ ಐಟಿ ಕಂಪನಿಯಲ್ಲಿ ಕೆಲಸವನ್ನೂ ಹುಡುಕಿದ್ದಳು.
ದೆಹಲಿಯಲ್ಲಿ ಉಳಿದುಕೊಳ್ಳಲು ಮನೆಯೊಂದು ಬೇಕಾಗಿತ್ತು. ಆಗ ಆಕೆಯ ನೆನಪಿಗೆ ಬಂದಿದ್ದು ಬಾಲ್ಯದ ಗೆಳೆಯ ಅತುಲ್ ರಾವ್ ! ಗೆಳೆಯನಿಗೆ ಕರೆ ಮಾಡಿ ದೆಹಲಿಯಲ್ಲಿ ಫ್ಲ್ಯಾಟ್ ಒಂದನ್ನು ಬುಕ್ ಮಾಡಿಸಿಕೊಂಡಿದ್ದಷ್ಟೇ ಆಕೆ ಮಾಡಿದ ತಪ್ಪು. ಫ್ಲ್ಯಾಟ್ ಲೆಡ್ಜರ್ ನಲ್ಲಿ ಅತುಲ್ ರಾವ್ ಸಹಿ ಇತ್ತು. ಆಗ ಎಂಟ್ರಿಯಾಗಿದ್ದೇ ದೆಹಲಿ ಟಿವಿ9 ರಿಪೋರ್ಟರ್ ಶಿವಪ್ರಸಾದ್.
ಬದುಕು ಕಟ್ಟಿಕೊಳ್ಳಲು ದೆಹಲಿಗೆ ಬಂದ ಪದ್ಮಪ್ರಿಯಗೂ ಅತುಲ್ ರಾವ್ ಅನೈತಿಕ ಸಂಬಂಧವಿದೆ ಎಂದು ಟಿವಿ9 ನಲ್ಲಿ ಶಿವಪ್ರಸಾದ್ ಸುದ್ದಿ ಮಾಡಿದ. ಇಬ್ಬರ ಸಂಬಂಧದ ಬಗ್ಗೆ ಕಪೋಲಕಲ್ಪಿತ ಸುದ್ದಿಯನ್ನು ರೋಚಕವಾಗಿ 24 ಗಂಟೆಯೂ ನಿರಂತರ ಪ್ರಸಾರ ಮಾಡಲಾಯ್ತು. ಬದುಕಲು ಬಂದ ಪದ್ಮಪ್ರಿಯ ಟಿವಿ 9 ವರದಿ ನೋಡಿ ನೇಣಿಗೆ ಶರಣಾಗುವ ನಿರ್ಧಾರ ಮಾಡಿದಳು.
ಫ್ಲ್ಯಾಟ್ ನ ಬಾಗಿಲು ಒಡೆದು ಒಳ ಹೋದಾಗ ಪದ್ಮಪ್ರಿಯ ನೇಣಿನಲ್ಲಿದ್ದಳು ಮತ್ತು ಟಿವಿ9 ಆನ್ ಆಗಿತ್ತು. ಇಷ್ಟಕ್ಕೆ ಬಿಡದ ಶಿವಪ್ರಸಾದ್ ಆ ರೂಮಿನಲ್ಲಿದ್ದ ಮಂಚದ ಕೆಳಗೆ ನುಸುಳಿ ಪದ್ಮಪ್ರಿಯಾ ಸಂಬಂಧದ ಬಗ್ಗೆ ಲೈವ್ ಕೊಡಲಾರಂಬಿಸಿದ. ಪದ್ಮಪ್ರಿಯಾ ಸಾವಿಗೆ ಟಿವಿ9 ಶಿವಪ್ರಸಾದನೇ ಕಾರಣ ಎಂದು ಇಡೀ ರಾಜ್ಯ ಮಾತನಾಡಿಕೊಂಡಿತು. ಆದರೆ ಶಿವಪ್ರಸಾದ್ ಮಾತ್ರ ಅದು ತನ್ನ ಜೀವಮಾನದ ಸಾಧನೆ ಅಂದುಕೊಂಡ.
ಅದೇ ಶಿವಪ್ರಸಾದ್ ಇದೀಗ ಟಿವಿ ಚಾನೆಲ್ ಅ್ಯಂಕರ್. ಇವತ್ತು ಮತ್ತೊಬ್ಬರ ಪತ್ನಿ ಜೊತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಹಿಳಾ ಅ್ಯಂಕರ್ ಜೊತೆ ಶಿವಪ್ರಸಾದ್ ಕಾರಿನಲ್ಲಿ ಹೋಗುತ್ತಿದ್ದಾಗ ಸಿನೀಮಿಯ ರೀತಿಯಲ್ಲಿ ಫಾಲೋ ಮಾಡಿಕೊಂಡು ಬಂದ ಗಂಡ ಶ್ರೀಧರ್, ಶಿವಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ. ಇವತ್ತು ಆ ಮಹಿಳಾ ಅ್ಯಂಕರ್ ಬರ್ತ್ ಡೇ ಇತ್ತು. ಹಾಗಾಗಿ ಇಬ್ಬರೂ ಸುತ್ತಾಡುತ್ತಿದ್ದರು.
ಕೊಡಿಗೆಹಳ್ಳಿ ಮೋರ್ ಎದುರು ಶಿವಪ್ರಸಾದ್ ಮತ್ತು ಮಹಿಳಾ ಅ್ಯಂಕರ್ ಜಾಲಿ ರೈಡ್ ನಲ್ಲಿ ಇದ್ದಾಗ ಸಾಫ್ಟ್ ವೇರ್ ಇಂಜಿನಿಯರ್ ಗಂಡ ಕಾರನ್ನು ಅಡ್ಡಗಟ್ಟಿ ಶಿವಪ್ರಸಾದ್ ಗೆ ಹಲ್ಲೆ ಮಾಡಿದ್ದಾನೆ. ಕಾರಿನ ಗಾಜುಪುಡಿ ಗೂಸಾ ನೀಡಿದ್ದಾನೆ. ಶ್ರೀಧರ್ ಹೇಳುವ ಪ್ರಕಾರ, ಅ್ಯಂಕರ್ ಸದಿವಪ್ರಸಾದ್ ನನ್ನ ಜೀವನ ನರಕ ಮಾಡಿದ್ದಾನೆ.
ನನ್ನ ಪತ್ನಿಯನ್ನು ನನ್ನಿಂದ ದೂರ ಮಾಡಿದ್ದಾನೆ. ಹಾಗಾಗಿ, ಇಂದು ರೆಡ್ಹ್ಯಾಂಡ್ ಆಕೆ ಮತ್ತು ಆತನನ್ನು ನಾನು ಹಿಡಿದು ಪೊಲೀಸರಿಗೆ ಕೊಟ್ಟಿದ್ದೇನೆ. ಪೊಲೀಸರ ಬಳಿಯೂ ಹೇಳಿಕೆ ನೀಡಿದ್ದೇನೆ ಎಂದು ಹಲ್ಲೆ ಮಾಡಿರೋ ಆರೋಪ ಹೊತ್ತಿರೋ ಮಹಿಳಾ ಅ್ಯಂಕರ್ ಗಂಡ ಶ್ರೀಧರ್ ಹೇಳುತ್ತಿದ್ದಾನೆ. ಅವತ್ತು ಶಾಸಕರ ಪತ್ನಿ ಪದ್ಮಪ್ರಿಯಾ ತಲೆಗೆ ಅನೈತಿಕ ಸಂಬಂಧ ಕಟ್ಟಿ ಆಕೆಯ ಸಾವಿಗೆ ಕಾರಣವಾದ ಅ್ಯಂಕರ್ ಶಿವಪ್ರಸಾದ್ ಈಗ ಏನನ್ನುತ್ತಾನೆ ?
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
-
ದಿನದ ಸುದ್ದಿ7 days ago
ವಿಶ್ವ ಫ್ಲಂಬರ್ ದಿನಾಚರಣೆ
-
ದಿನದ ಸುದ್ದಿ7 days ago
ಪಿಎಚ್ ಡಿ ; ಅವಧಿ ವಿಸ್ತರಣೆ
-
ದಿನದ ಸುದ್ದಿ7 days ago
ದಾವಣಗೆರೆ ವಿಶ್ವವಿದ್ಯಾಲಯ | 11ನೇ ಘಟಿಕೋತ್ಸವ :ದೀಪ್ತಿಗೆ ಐದು ; ಸಿಂಧುಬಾಯಿಗೆ ಮೂರು ಚಿನ್ನದ ಪದಕ
-
ದಿನದ ಸುದ್ದಿ7 days ago
ದಾವಣಗೆರೆ ವಿವಿ ಘಟಿಕೋತ್ಸವ ; ಮೂವರಿಗೆ ಗೌರವ ಡಾಕ್ಟರೇಟ್
-
ದಿನದ ಸುದ್ದಿ4 days ago
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
-
ದಿನದ ಸುದ್ದಿ6 hours ago
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
-
ದಿನದ ಸುದ್ದಿ6 hours ago
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ