ದಿನದ ಸುದ್ದಿ
ಉಡುಪಿಯ ಪದ್ಮಪ್ರಿಯಾ ಆತ್ಮಕ್ಕೆ ಶಾಂತಿ ಸಿಕ್ತು..! ಶಾಸಕರ ಪತ್ನಿ ಸಾವಿಗೆ ಕಾರಣವಾದ ಟಿವಿ ಅ್ಯಂಕರ್ ಗೂ ಅದೇ ಗತಿಯಾಯ್ತು..!
- ಪ್ರದೀಪ್ ಕುಮಾರ್, ಪತ್ರಕರ್ತ
ನಿಮಗೆ ಉಡುಪಿ ಪದ್ಮಪ್ರಿಯ ಪ್ರಕರಣ ಮರೆತು ಹೋಗಿರಬಹುದು. ನಾಲ್ಕೈದು ದಿನ ಟಿವಿಯಲ್ಲಿ ಪದ್ಮಪ್ರಿಯಾ ಸಾವಿನ ತರಾವರಿ ಕತೆ ಕೇಳಿ ಖುಷಿಯಲ್ಲೇ ಆಕ್ರೋಶ ವ್ಯಕ್ತಪಡಿಸಿ ಮರೆತಿರಬಹುದು. ಆದ್ರೆ ಪದ್ಮಪ್ರಿಯ ಆತ್ಮ ಮಾತ್ರ ಅದನ್ನು ಮರೆತಿಲ್ಲ. ಪದ್ಮಪ್ರೀಯ ಮತ್ತು ಆಕೆಯ ಗೆಳೆಯನ ಸಂಬಂಧದ ಬಗ್ಗೆ ಕತೆ ಕಟ್ಟಿ ಪದ್ಮಪ್ರೀಯ ಸಾವಿಗೆ ನೇರ ಕಾರಣನಾಗಿದ್ದ ಟಿವಿ ಅ್ಯಂಕರ್ ಗೆ ಇವತ್ತು ಅಂತದ್ದೇ ಅನೈತಿಕ ಸಂಬಂಧದ ಕಾರಣಕ್ಕಾಗಿ ಒದೆ ಬಿದ್ದಿದೆ.
ಅವತ್ತು ಶಾಸಕರ ಜೊತೆಗಿನ ಬದುಕಿನ ನಿರಾಸಕ್ತಿ ತಳೆದು ತನ್ನಷ್ಟಕ್ಕೆ ತಾನಿರ್ತೀನಿ ಅಂತ ಉಡುಪಿಯ ಪದ್ಮಪ್ರೀಯ ದೆಹಲಿಗೆ ಹೋಗಿದ್ದಳು. ಹೇರ್ ಕಟ್ ಮಾಡಿ, ತನ್ನ ಬಟ್ಟೆ, ನಡೆ ನುಡಿಗಳನ್ನು ಬದಲಿಸಿ ಹೊಸ ಬದುಕು ಕಟ್ಟಲು ಆಕೆ ದೆಹಲಿಗೆ ತೆರಳಿ ಐಟಿ ಕಂಪನಿಯಲ್ಲಿ ಕೆಲಸವನ್ನೂ ಹುಡುಕಿದ್ದಳು.
ದೆಹಲಿಯಲ್ಲಿ ಉಳಿದುಕೊಳ್ಳಲು ಮನೆಯೊಂದು ಬೇಕಾಗಿತ್ತು. ಆಗ ಆಕೆಯ ನೆನಪಿಗೆ ಬಂದಿದ್ದು ಬಾಲ್ಯದ ಗೆಳೆಯ ಅತುಲ್ ರಾವ್ ! ಗೆಳೆಯನಿಗೆ ಕರೆ ಮಾಡಿ ದೆಹಲಿಯಲ್ಲಿ ಫ್ಲ್ಯಾಟ್ ಒಂದನ್ನು ಬುಕ್ ಮಾಡಿಸಿಕೊಂಡಿದ್ದಷ್ಟೇ ಆಕೆ ಮಾಡಿದ ತಪ್ಪು. ಫ್ಲ್ಯಾಟ್ ಲೆಡ್ಜರ್ ನಲ್ಲಿ ಅತುಲ್ ರಾವ್ ಸಹಿ ಇತ್ತು. ಆಗ ಎಂಟ್ರಿಯಾಗಿದ್ದೇ ದೆಹಲಿ ಟಿವಿ9 ರಿಪೋರ್ಟರ್ ಶಿವಪ್ರಸಾದ್.
ಬದುಕು ಕಟ್ಟಿಕೊಳ್ಳಲು ದೆಹಲಿಗೆ ಬಂದ ಪದ್ಮಪ್ರಿಯಗೂ ಅತುಲ್ ರಾವ್ ಅನೈತಿಕ ಸಂಬಂಧವಿದೆ ಎಂದು ಟಿವಿ9 ನಲ್ಲಿ ಶಿವಪ್ರಸಾದ್ ಸುದ್ದಿ ಮಾಡಿದ. ಇಬ್ಬರ ಸಂಬಂಧದ ಬಗ್ಗೆ ಕಪೋಲಕಲ್ಪಿತ ಸುದ್ದಿಯನ್ನು ರೋಚಕವಾಗಿ 24 ಗಂಟೆಯೂ ನಿರಂತರ ಪ್ರಸಾರ ಮಾಡಲಾಯ್ತು. ಬದುಕಲು ಬಂದ ಪದ್ಮಪ್ರಿಯ ಟಿವಿ 9 ವರದಿ ನೋಡಿ ನೇಣಿಗೆ ಶರಣಾಗುವ ನಿರ್ಧಾರ ಮಾಡಿದಳು.
ಫ್ಲ್ಯಾಟ್ ನ ಬಾಗಿಲು ಒಡೆದು ಒಳ ಹೋದಾಗ ಪದ್ಮಪ್ರಿಯ ನೇಣಿನಲ್ಲಿದ್ದಳು ಮತ್ತು ಟಿವಿ9 ಆನ್ ಆಗಿತ್ತು. ಇಷ್ಟಕ್ಕೆ ಬಿಡದ ಶಿವಪ್ರಸಾದ್ ಆ ರೂಮಿನಲ್ಲಿದ್ದ ಮಂಚದ ಕೆಳಗೆ ನುಸುಳಿ ಪದ್ಮಪ್ರಿಯಾ ಸಂಬಂಧದ ಬಗ್ಗೆ ಲೈವ್ ಕೊಡಲಾರಂಬಿಸಿದ. ಪದ್ಮಪ್ರಿಯಾ ಸಾವಿಗೆ ಟಿವಿ9 ಶಿವಪ್ರಸಾದನೇ ಕಾರಣ ಎಂದು ಇಡೀ ರಾಜ್ಯ ಮಾತನಾಡಿಕೊಂಡಿತು. ಆದರೆ ಶಿವಪ್ರಸಾದ್ ಮಾತ್ರ ಅದು ತನ್ನ ಜೀವಮಾನದ ಸಾಧನೆ ಅಂದುಕೊಂಡ.
ಅದೇ ಶಿವಪ್ರಸಾದ್ ಇದೀಗ ಟಿವಿ ಚಾನೆಲ್ ಅ್ಯಂಕರ್. ಇವತ್ತು ಮತ್ತೊಬ್ಬರ ಪತ್ನಿ ಜೊತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಹಿಳಾ ಅ್ಯಂಕರ್ ಜೊತೆ ಶಿವಪ್ರಸಾದ್ ಕಾರಿನಲ್ಲಿ ಹೋಗುತ್ತಿದ್ದಾಗ ಸಿನೀಮಿಯ ರೀತಿಯಲ್ಲಿ ಫಾಲೋ ಮಾಡಿಕೊಂಡು ಬಂದ ಗಂಡ ಶ್ರೀಧರ್, ಶಿವಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ. ಇವತ್ತು ಆ ಮಹಿಳಾ ಅ್ಯಂಕರ್ ಬರ್ತ್ ಡೇ ಇತ್ತು. ಹಾಗಾಗಿ ಇಬ್ಬರೂ ಸುತ್ತಾಡುತ್ತಿದ್ದರು.
ಕೊಡಿಗೆಹಳ್ಳಿ ಮೋರ್ ಎದುರು ಶಿವಪ್ರಸಾದ್ ಮತ್ತು ಮಹಿಳಾ ಅ್ಯಂಕರ್ ಜಾಲಿ ರೈಡ್ ನಲ್ಲಿ ಇದ್ದಾಗ ಸಾಫ್ಟ್ ವೇರ್ ಇಂಜಿನಿಯರ್ ಗಂಡ ಕಾರನ್ನು ಅಡ್ಡಗಟ್ಟಿ ಶಿವಪ್ರಸಾದ್ ಗೆ ಹಲ್ಲೆ ಮಾಡಿದ್ದಾನೆ. ಕಾರಿನ ಗಾಜುಪುಡಿ ಗೂಸಾ ನೀಡಿದ್ದಾನೆ. ಶ್ರೀಧರ್ ಹೇಳುವ ಪ್ರಕಾರ, ಅ್ಯಂಕರ್ ಸದಿವಪ್ರಸಾದ್ ನನ್ನ ಜೀವನ ನರಕ ಮಾಡಿದ್ದಾನೆ.
ನನ್ನ ಪತ್ನಿಯನ್ನು ನನ್ನಿಂದ ದೂರ ಮಾಡಿದ್ದಾನೆ. ಹಾಗಾಗಿ, ಇಂದು ರೆಡ್ಹ್ಯಾಂಡ್ ಆಕೆ ಮತ್ತು ಆತನನ್ನು ನಾನು ಹಿಡಿದು ಪೊಲೀಸರಿಗೆ ಕೊಟ್ಟಿದ್ದೇನೆ. ಪೊಲೀಸರ ಬಳಿಯೂ ಹೇಳಿಕೆ ನೀಡಿದ್ದೇನೆ ಎಂದು ಹಲ್ಲೆ ಮಾಡಿರೋ ಆರೋಪ ಹೊತ್ತಿರೋ ಮಹಿಳಾ ಅ್ಯಂಕರ್ ಗಂಡ ಶ್ರೀಧರ್ ಹೇಳುತ್ತಿದ್ದಾನೆ. ಅವತ್ತು ಶಾಸಕರ ಪತ್ನಿ ಪದ್ಮಪ್ರಿಯಾ ತಲೆಗೆ ಅನೈತಿಕ ಸಂಬಂಧ ಕಟ್ಟಿ ಆಕೆಯ ಸಾವಿಗೆ ಕಾರಣವಾದ ಅ್ಯಂಕರ್ ಶಿವಪ್ರಸಾದ್ ಈಗ ಏನನ್ನುತ್ತಾನೆ ?
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?