ದಿನದ ಸುದ್ದಿ
ಬೆಂಗಳೂರಿನ ಬಾನಿನಲ್ಲಿ ‘ಆಕಾಶಕಂಪನ’..?
- ನಾಗೇಶ್ ಹೆಗಡೆ
ನನಗೆ ಆ ಸದ್ದು ಕೇಳಲಿಲ್ಲ. ನನ್ನ ಕಿವಿಯಲ್ಲಿ ಇಯರ್ಫೋನ್ ಇತ್ತು. ಯಾವ ಕರೆಯೂ ಬಾರದಂತೆ ಮೊಬೈಲನ್ನು ಏರೋಪ್ಲೇನ್ ಮೋಡ್ನಲ್ಲಿ ಇಟ್ಟುಕೊಂಡು ಸಂಗೀತವನ್ನು ಕೇಳುತ್ತಿದ್ದೆ. ಆದರೆ ಮೂರುಗಂಟೆಗೆ ಮೊಬೈಲನ್ನು ಹೊರಜಗತ್ತಿಗೆ ತೆರೆದಾಗ ‘ಈ ಬೂಮ್ ಸದ್ದು ಕೇಳಿದಿರಾ?’ ಏನು ಕಾರಣ?’ ಅಂತ ಅನೇಕ ಸಂದೇಶಗಳು ಬಂದವು. ಬೆಂಗಳೂರಿನ ಎಲ್ಲ ಸುದ್ದಿ ವಾಹಿನಿಗಳಲ್ಲೂ ಈ ಸದ್ದಿನದ್ದೇ ಸುದ್ದಿ. ವಿಜ್ಞಾನ ನಗರಿ ಎನ್ನಿಸಿಕೊಂಡರೂ ಯಾಕೋ ಯಾವ ತಜ್ಞರೂ ಕಾರಣ ಕೊಡುತ್ತಿಲ್ಲ. ಅದಲ್ಲ, ಇದಲ್ಲ ಎಂಬುದಕ್ಕೆ ಸಾಕಷ್ಟು ಕಾರಣಗಳಿವೆ. ಹಾಗಿದ್ದರೆ ಬೇರೆ ಯಾವುದು ಕಾರಣ?
ಬೇರೆ ಯಾವ ಕಾರಣಗಳೂ ಹೊಳೆಯದಿದ್ದಾಗ ಇಂಥ ಭಾರೀ ಸದ್ದಿಗೆ ‘ಆಕಾಶಕಂಪನ’ವೇ ಕಾರಣ ಎನ್ನಬಹುದು. ನೆಲದ ಮೇಲೆ ಭೂಕಂಪನ ಮತ್ತು ಸಾಗರದಾಳದಲ್ಲಿ ಜಲಕಂಪನ ಆಗುವ ಹಾಗೆ ಬಾನಿನಲ್ಲಿ ಆಕಾಶಕಂಪನ ಆಗುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ.
ಇಂಥ ಆಕಾಶಕಂಪನಕ್ಕೆ ಅನೇಕ ಕಾರಣಗಳನ್ನು ಕೊಡಲಾಗುತ್ತದೆ:-
1. ಉಲ್ಕಾಪಾತ: ಕ್ಷುದ್ರಗ್ರಹ ಅಥವಾ ಅದಕ್ಕೂ ಚಿಕ್ಕ ಆಕಾಶಕಾಯಗಳು ಅತಿ ವೇಗದಲ್ಲಿ ಭೂಮಿಗೆ ಬರುತ್ತಿರುವಾಗ ವಾಯುಮಂಡಲವನ್ನು ಪ್ರವೇಶಿಸುವಾಗ ಸ್ಫೋಟಿಸಿದರೆ ಇಂಥ ಸದ್ದು ಕೇಳುತ್ತದೆ. ಕಣ್ಣಿಗೆ ಏನೂ ಕಾಣುವುದಿಲ್ಲ. ಅದು ಮೂರು ನಾಲ್ಕು ಕಿ.ಮೀ. ಎತ್ತರದಲ್ಲಿ ಸ್ಫೋಟಿಸಿದರೆ ಹೊಗೆ-ಬೂದಿಯೂ ಚದುರಿ ಹೋಗುತ್ತದೆ.
2. ಕೊರೊನಾ (ವೈರಸ್ ಅಲ್ಲ) ಮಾಸ್ ಇಜೆಕ್ಷನ್ CME ಎಂಬ ವಿದ್ಯಮಾನ ಸೂರ್ಯನಲ್ಲಿ ಘಟಿಸಬಹುದು. ನೀರಿನಿಂದ ಹೊರಡುವ ಗುಳ್ಳೆಯ ಹಾಗೆ ಸೂರ್ಯನ ಹೊರವಲಯದಿಂದ ಆಗೊಮ್ಮೆ ಈಗೊಮ್ಮೆ ಪ್ಲಾಸ್ಮಾ ಮೇಘ ಅತಿ ವೇಗದಲ್ಲಿ ಹೊಮ್ಮುತ್ತದೆ (ಇದೂ ವೈರಸ್ಗೆ ಸಂಬಂಧಿಸಿದ ಪ್ಲಾಸ್ಮಾ ಅಲ್ಲ).
ಅದು ತೀರ ದೊಡ್ಡ ಗುಳ್ಳೆಯಾಗಿದ್ದರೆ ಅರ್ಧ ಭೂಮಿಯನ್ನೇ ಆವರಿಸಬಹುದು. ತೀರ ಚಿಕ್ಕ ಗುಳ್ಳೆ ಆಗಿದ್ದರೆ ಚಿಕ್ಕ ಪ್ರದೇಶಕ್ಕೆ ಅಪ್ಪಳಿಸಬಹುದು. ಅದು ಭೂಮಿಯ ವಿದ್ಯುತ್ಕಾಂತೀಯ ವಲಯವನ್ನು ಪ್ರವೇಶ ಮಾಡಿದಾಗ ಸದ್ದು ಹೊಮ್ಮಬಹುದು. ಇದು ಅಪ್ಪಳಿಸಿದಾಗ ಎಲ್ಲ ಬಗೆಯ ವಿದ್ಯುತ್ ಮತ್ತು ವಿದ್ಯುನ್ಮಾನ ಸಲಕರಣೆಗಳೂ ಧ್ವಂಸ ಆಗುತ್ತವೆ ಎಂದು ಕೇಳಿದ್ದೇನೆ. ಇಲ್ಲಿ ಅಂಥದ್ದೇನೂ ಆಗಿಲ್ಲ. ಹಾಗಾಗಿ ನಾವು ಇದನ್ನೂ ಅಲ್ಲಗಳೆಯಬಹುದು.
3. ತುಂಬ ಎತ್ತರದ ವಾಯುಮಂಡಲದಲ್ಲಿ ತೀರಾ ಶಕ್ತಿಶಾಲಿ ಸಿಡಿಲು ಹೊಮ್ಮಿದರೆ ಇಂಥ ಸದ್ದು ಹೊಮ್ಮುತ್ತದೆ. ಆದರೆ ಒಮ್ಮೆ ಮಾತ್ರ ಇದು ಕೇಳಿದೆ. ಆದ್ದರಿಂದ ಅದೂ ನಂಬಲರ್ಹ ಅಲ್ಲ.
ಆಕಾಶಕಂಪನಕ್ಕೆ ಸಂಬಂಧಿಸಿದ, ಆದರೆ ಬೆಂಗಳೂರಿನಲ್ಲಿ ಸಾಕ್ಷ್ಯ ಸಿಗದ ಇತರ ಸಾಧ್ಯತೆ ಏನೆಂದರೆ: (1) ಭೂಗರ್ಭದಿಂದ/ಗಣಿಯಿಂದ ಅಥವಾ ಕೊಳಕು ಸರೋವರದ ತಳದಿಂದ ಮೀಥೇನ್ ಅನಿಲ ಬಿಡುಗಡೆ ಆಗುವುದು; (2) ಸೂಪರ್ ಸಾನಿಕ್ ವಿಮಾನ ಆಕಾಶಕ್ಕೆ ಜಿಗಿದು ತನ್ನ ವೇಗವನ್ನು ಹಠಾತ್ತಾಗಿ ಹೆಚ್ಚಿಸಿಕೊಂಡಾಗ ಹೀಗಾಗುತ್ತದೆ.
ಉಲ್ಕಾಪಾತವೇ ಆಗಿದೆ ಎನ್ನುವುದಾದರೂ ಅದು ಸ್ಫೋಟವಾಗುವುದು ಹೇಗೆ? ಸುಮ್ಮನೇ ಉರಿದು ಬೂದಿಯಾಗಿ ಕಣ್ಮರೆ ಆಗಬೇಕಲ್ಲವೆ? ಸದ್ದು ಹೊಮ್ಮಿಸಲು ಅದೇನು ಹೊರಲೋಕದಿಂದ ಪಟಾಕಿಯೆ? ಇದಕ್ಕೆ ಉತ್ತರ ಹೀಗಿದೆ: ತೀರ ಅಪರೂಪಕ್ಕೆ ಉಲ್ಕೆಯ ಗರ್ಭದಲ್ಲಿ ಅನಿಲ ಅಥವಾ ನೀರಾವಿ ಇದ್ದರೆ ಅದು ಸ್ಫೋಟ ಆಗುತ್ತದೆ. ಆದರೆ ಅಂಥ ಸಾಧ್ಯತೆಯೂ ತೀರ ಅಪರೂಪ.
ವೈಜ್ಞಾನಿಕ ವಿವರಣೆಗೆ ಸಿಗದ ಇಂಥ ಸ್ಫೋಟದ ಸದ್ದು ಕೇಳಿದ್ದಕ್ಕೆ ನಮ್ಮ ರಾಜ್ಯದಲ್ಲೇ ಬೇರೆಬೇರೆ ಜಿಲ್ಲೆಗಳಲ್ಲಿ ಅನೇಕ ಉದಾಹರಣಗಳಿವೆ. ಈಚೆಗೆ ಏಪ್ರಿಲ್ 11ರಂದು ಜಕಾರ್ತಾತದಲ್ಲಿ ಮತ್ತು 23ರಂದು ಮೆಕ್ಸಿಕೋದಲ್ಲಿ ಇಂಥ ಸದ್ದು ಹೊಮ್ಮಿದೆ. ಇತಿಹಾಸದುದ್ದಕ್ಕೂ ಇಂಥ ಘಟನೆಗಳು ಮತ್ತೆಮತ್ತೆ ಘಟಿಸಿವೆ.
ಯಾರಿಗೂ ಯಾವ ವಿಧದಲ್ಲೂ ಅದು ಹಾನಿ ಮಾಡಿಲ್ಲವೆಂದೇ ಪ್ರಾಯಶಃ ವಿಜ್ಞಾನಿಗಳು ಇದನ್ನು ತೀರ ಗಂಭೀರವಾಗಿ ಪರಿಗಣಿಸಿಲ್ಲವೆಂದು ಕಾಣುತ್ತದೆ. ಸದ್ಯಕ್ಕೆ ಸೂರ್ಯನ ಕೊರೊನಾ ಮತ್ತು ಪ್ಲಾಸ್ಮಾ ತಾಡನವೇ ಇದು ಕಾರಣವೆಂದು ಭಾವಿಸಬಹುದು (ಇನ್ನೂ ಉತ್ತಮ, ನಂಬಲರ್ಹ ಕಾರಣಗಳು ಸಿಗುವವರೆಗೂ). ಕೊರೊನಾ ವೈರಸ್ ಮತ್ತು ಪ್ಲಾಸ್ಮಾಕ್ಕೂ ಇದಕ್ಕೂ ಸಂಬಂಧ ಕಲ್ಪಿಸಬೇಡಿ. ಹಾಗೇನಾದರೂ ಅಸಂಬದ್ಧ ಸಂಬಂಧ ಹುಡುಕುವುದೇ ಆದರೆ ಇನ್ನೂ ಉತ್ತಮ ಉದಾಹರಣೆ ಬೇಕೆ?
ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ‘ಅಂಫನ್‘ ಚಂಡಮಾರುತ ಅಪ್ಪಳಿಸಿದ ಕ್ಷಣದಲ್ಲೇ ಇಲ್ಲಿ ಇದು ಸಂಭವಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243