ದಿನದ ಸುದ್ದಿ
ಮುಟ್ಟು ಹುಟ್ಟಿನ ಮೂಲ
ಮೇ 28, ‘ವಿಶ್ವ ಮುಟ್ಟಿನ ನಿರ್ಮೂಲನ ದಿನ’ ಪ್ರಯುಕ್ತ
- ಶಿವಾನಂದ ಕಲಬುರಗಿ
ಹೌದು ನಾನೊಬ್ಬಳು ಹೆಣ್ಣು
ಹೆಣ್ಣು ಮಣ್ಣು ಹೊನ್ನುಗಳ
ಮೇಲೆ ಮನುಷ್ಯನ ಕಣ್ಣು
ಇದರಲ್ಲೇನಿದೆ ಹೊಸತನ ಅಲ್ಲವೇ
ಹೌದು ನಾನೋಬ್ಬಳು ಹೆಣ್ಣು
ನಾನು ನಿಮ್ಮ ಮನೆ ಮನಗಳನ್ನು
ಬೆಳಗುವ ನಿಸ್ವಾರ್ಥದ ಅಪರೂಪದ ಹೆಣ್ಣು
ಹೆಣ್ಣಿನ ಒಡಲನ್ನು ಬಗೆದು ತಿಂದುಂಡು ತೇಗುವ ಗಂಡು
ಹೆಣ್ಣಿನ ಬಸಿರನ್ನು ಸೀಳಿ ಭೂಮಿಗೆ ಬಂದ ಮೇಲೆ
ಹೆಣ್ಣಿನ ಅಂಗಾಂಗಗಳ ಮೇಲೆ ಗಂಡಿನ ಕಣ್ಣು
ಹೌದು ನಾನೋಬ್ಬಳು ಹೆಣ್ಣು
ಮುಟ್ಟಾದವಳೆಂದು ಯಾರು ನನ್ನ ಮುಟ್ಟಲಿಲ್ಲ
ಮುಟ್ಟಿನ ಹನಿ ನಿಂತು ಹೆಣ್ಣು ಗಂಡಿನಲ್ಲಿ ಒಂದಾದಾಗ
ಮುಟ್ಟಿನ ಹೊಲೆಯೊಂದು ಗಟ್ಟಿ ಗೊಂಡು
ಹೌದು ನಾನೋಬ್ಬಳು ಹೆಣ್ಣು
ರಕ್ತದ ಮುದ್ದೆಯನ್ನು ಗರ್ಭದಲ್ಲಿ ಬೆಳೆಸಿಕೊಂಡು
ಮುತ್ತಿನಂತ ಮಗು ಹೆತ್ತು ಕೊಟ್ಟ ಹೆಣ್ಣು ನಾನಲ್ಲವೇ
ಮುಟ್ಟು ಹೇಗೆ ಮೈಲಿಗೆಯಾಗುತ್ತದೆ ನಾಕಾಣೆ
ಹೌದು ನಾನೋಬ್ಬಳು ಹೆಣ್ಣು
ಮುಟ್ಟಾದ ಮೂರು ದಿವಸಕ್ಕೆ ಹುಟ್ಟಿ ಬಂದ ಹೆಣ್ಣು-ಗಂಡು ಶ್ರೇಷ್ಠ-ಕನಿಷ್ಠ ವೆಂಬ ಭಿನ್ನವೇಕೆ
ಮೊಲೆ ಮೇಲಿನ ಮೋಹ ಕಾಮಕ್ಕೆ ಕಾರಣವೇ
ಹೌದು ನಾನೋಬ್ಬಳು ಹೆಣ್ಣು
ರಕ್ತ ಬಸಿದು ಅಮೃತವ ಉಣಿಸಲಿಲ್ಲವೇ
ಹೌದು ನಾನೊಬ್ಬಳು ಕಾಮ ಕೆರಳಿಸುವ ಹೆಣ್ಣು
ಹೆಣ್ಣಿನ ನಿತಂಬಗಳ ಮೇಲೆ ಬಹುತೇಕ ಕಣ್ಣು
ಹೆಣ್ಣಿನ ಎದೆಯಾಳ ಸಿರಿ ನೋಡುವ ಕಣ್ಣು
ಹೆಣ್ಣಿನ ಅಂತರಂಗವು ಯಾವ ಕಣ್ಣಿಗೂ ಕಾಣಲಿಲ್ಲ ಹೌದು ನಾನೋಬ್ಬಳು ಹೆಣ್ಣು
ಹೆಣ್ಣೆಂದರೆ ಮಕ್ಕಳೇರುವ ಯಂತ್ರವಲ್ಲ
ಹೆಣ್ಣು ಜಗದ ಕಣ್ಣು ಹೆಣ್ಣು ಸೃಷ್ಟಿಯ ಕಣ್ಣು
ಮುಟ್ಟು ಮೈಲಿಗೆಯಲ್ಲ ಮುಟ್ಟು ಹುಟ್ಟಿನ ಮೂಲ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243