ದಿನದ ಸುದ್ದಿ
ಮೋದಿ ಸರ್ಕಾರದ ಮುಂದಿರುವ ಸವಾಲುಗಳು…!
ಸ್ನೇಹಿತರೆ,
ಕೇಂದ್ರದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದ್ದು ಆಯ್ತು ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು ಆಯಿತು. ಆದರೆ ಈ ಸರ್ಕಾರದ ಮುಂದಿರುವ ಸವಾಲುಗಳು ಆದರೂ ಏನು ಅನುವ ಬಗ್ಗೆ ಒಂದು ಸರಿ ಗಮನ ಹರಿಸೋಣ. ಅಂದಹಾಗೆ ಈ ವಿಷಯವನ್ನು ಓದುವಾಗ ನಿಮ್ಮ ಮನಸ್ಸು ಒಳಗಿನ ರಾಗದ್ವೇಷ ಭಕ್ತಿಭಾವಗಳನ್ನು ಒಂದು ಸ್ವಲ್ಪ ಪಕ್ಕಕ್ಕಿಟ್ಟು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತ ಓದಿರಿ ಹಾಗು ಮಾಡೋದಕ್ಕೆ ಸಾಧ್ಯ ಆಗದೇ ಇದ್ದರೆ ದಯವಿಟ್ಟು ಈ ವಿಷಯವನ್ನು ಓದುವುದಕ್ಕೆ ಹೋಗಬೇಡಿ.
ಮೋದಿ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೇರಿದ ನಂತರ ಜನರ ನಿರೀಕ್ಷೆಗಳು ಹೆಚ್ಚಾಗಿವೆ ಭಾರತದಲ್ಲಿನ ಎಲ್ಲಾ ಸಮಸ್ಯೆಗಳನ್ನು ಮೋದಿ ನಿವಾರಿಸಿ ಬಿಡುತ್ತಾರೆ ಅನ್ನೋ ಆಸೆ ನಿರೀಕ್ಷೆ ಕೋಟಿ ಕೋಟಿ ಜನರ ಮನಸ್ಸಲ್ಲಿದೆ.
ರಾಮಮಂದಿರ ನಿರ್ಮಾಣ, ಆರ್ಟಿಕಲ್ ತ್ರೀ ಸೆವೆಂಟಿ, ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರದ ನಿರ್ಮಾಣ, ಇವತ್ತು ಭಾರತ ಸರ್ಕಾರದ ಮುಂದಿನ ಆದ್ಯತೆಗಳೇನು ಮೋದಿ ಸಚಿವ ಸಂಪುಟದ ಎದುರು ಸವಾಲುಗಳೇನು ಅನ್ನೋದಷ್ಟೇ ನಾವು ಗಮನಿಸಿದರೆ ಮೊಟ್ಟಮೊದಲನೆಯದಾಗಿ ಮತ್ತು ಭಯಾನಕವಾಗಿ ಈ ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ!
ಮುಂದಿನ 20 20 ರ ಹೊತ್ತಿಗೆ ಭಾರತದಲ್ಲಿನ ನಿರುದ್ಯೋಗಿಗಳ ಸಂಖ್ಯೆ 44% ಏರುತದ್ದೆ, ಇದು ವಿದ್ಯಾವಂತ ನಿರುದ್ಯೋಗಿಗಳ ಕಥೆ ಇನ್ನು ಗ್ರಾಮೀಣ ಭಾಗದಿಂದ ವಲಸೆ ಬರುತ್ತಿರುವ ಕೃಷಿ ನಿರಾಶ್ರಿತರನ್ನು ಸೇರಿಸಿಲ್ಲ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಸರ್ಕಾರದ ಮುಂದಿರುವ ಚಾಲೆಂಜ್ ಗಳು ಅಂದರೆ ಗ್ರಾಮೀಣ ವಲಸೆಯನ್ನು ತಡೆದು ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕೆ ಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಜೊತೆಗೆ ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ತಗ್ಗಿಸಿ ಜಿಡಿಪಿಯನ್ನು ಹೆಚ್ಚಿಸಬೇಕು. ಜವಾಬ್ದಾರಿ ಸರ್ಕಾರದ ಮೇಲಿದೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿದು ಹೋಗುತ್ತಿರುವುದು ನಮಗೂ ತಡೆಯಬೇಕಿದೆ .
ಇವತ್ತಿನವರೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಆದರೆ ಈ ಕೂಡಲೇ ಸರಿಪಡಿಸಬೇಕಿದೆ. ಭಾರತ ಕೃಷಿ ಪ್ರಧಾನ ದೇಶ ಆದರೆ ದುರಂತ ಅಂದ್ರೆ ಇಲ್ಲಿ ಅನ್ನ ಕೊಡುವ ರೈತನಿಗೆ ಹೊಟ್ಟೆ ತುಂಬಾ ಊಟ ಸಿಗದ ಪರಿಸ್ಥಿತಿ. ಇದು ಬಿಜೆಪಿ ಸರ್ಕಾರದ ವಿಷಯಕ್ಕೆ ಬರೋದಾದ್ರೆ, ಶ್ರೀಮಂತರು ಹಾಗೂ ಉದ್ಯಮಿಗಳ ಸರ್ಕಾರ ಅನ್ನೋ ಆರೋಪವೂ ಇದೆ.
ಮುಂದಿನ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರದ ಚೇತರಿಕೆಗೆ ಆದ್ಯತೆಯನ್ನು ಕೊಡಬೇಕು ಅದು ವರ್ಷಕ್ಕೆ rs.6000 ಕೊಡುವುದರಿಂದ ಅಥವಾ ಸಾಲಮನ್ನಾ ಮಾಡುವ ಘೋಷಣೆಗಳಿಂದ ಕೃಷಿಕ್ಷೇತ್ರ ಸುಧಾರಣೆ ಆಗೋದಿಲ್ಲ. ರೈತರಿಗೆ ಕರೆಂಟು ನೀರು ಸೂಕ್ತ ಬೆಳೆ ಕುರಿತಾದ ಮಾಹಿತಿ ತಂತ್ರಜ್ಞಾನ ಕೊಡಬೇಕಾಗಿದೆ .
ಕೃಷಿ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳು ಬೆಲೆ ನಿಯಂತ್ರಣ ಕೃಷಿ-ಆಧಾರಿತ ಉದ್ದಿಮೆಗಳು ಹೀಗೆ ಇನ್ನೇನೋ ಆಗಬೇಕಿದೆ. ಇವತ್ತು ಸೇನೆಯನ್ನು ಬಲಪಡಿಸಲು ಬೇಕಾಗಿರುವುದು ,ಭಾರತದಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಘಟಕಗಳು ಸ್ಥಾಪನೆಗೊಳ್ಳಬೇಕಿದೆ. ಆ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುತ್ತೆ ಸಾಕಷ್ಟು ಚಿಕ್ಕ ಕೈಗಾರಿಕೆಗಳು ಹುಟ್ಟುವುದಕ್ಕೆ ಸಾಧ್ಯವಾಗುತ್ತೆ ನಿರುದ್ಯೋಗ ನಿವಾರಣೆಗೆ ಕೂಡ ಆಗುತ್ತೆ ಹಾಗೆ ಪೆಟ್ರೋಲಿಯಂ ಮೇಲಿನ ಅತಿಯಾದ ಆಮದು ಮಾಡುವುದನ್ನು ನಿಲ್ಲಿಸಿ
ಪರ್ಯಾಯ ಮಾರ್ಗ ಹುಡುಕ ಬೇಕಾದ ಅನಿವಾರ್ಯತೆ ಕೂಡ ಸರ್ಕಾರದ ಮೇಲಿದೆ.
ಆಂತರಿಕ ಭದ್ರತೆ ಹಾಗೂ ಬಾಹ್ಯ ಶಕ್ತಿಗಳ ನಿಯಂತ್ರಣ ಭಯೋತ್ಪಾದನೆ ನಿರ್ಮೂಲನೆ ಬಡತನದ ವಿರುದ್ಧ ಹೋರಾಟ ಕಡಿಮೆ ಏನು ?
ಅಮೇರಿಕಾ ಮೊನ್ನೆ ತಾನೇ ಭಾರತವನ್ನು ಅಭಿವೃದ್ಧಿ ರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಿದೆ.
ಆದರಿಂದ ಭಾರತ ಅಮೇರಿಕಾದಿಂದ ಆಮದು ಮಾಡುತಿದ್ದ ಸುಮಾರು ೨೦೦೦ ವಸ್ತುಗಳ ಮೇಲೆ ತೆರಿಗೆ ಬೀಳಲಿದೆ, ಇದರಿಂದ ಭಾರತಕ್ಕೆ ಆಗುವ ನಷ್ಟ ಕಡಿಮೆ ಏನಿಲ್ಲ .
ನಾವು ಗಮನಿಸಿದರೆ ಭಾರತ ವಿದೇಶಾಂಗ ನೀತಿಯನ್ನು ರೂಪಿಸುವಾಗ ಎಚ್ಚರಿಕೆವಹಿಸಬೇಕಾಗಿದೆ ಅನ್ನೋದು ಸ್ಪಷ್ಟ. ಚೀನಾ ಹಾಗೂ ಪಾಕಿಸ್ತಾನಗಳ ಕಂಟ್ರೋಲ್ ಮಾಡಿದ ಮೋದಿ ಸರ್ಕಾರ ಈ ಬಾರಿನೂ ಅಷ್ಟೇ ಪ್ರಭಾವಿಯಾಗಿ ಚೀನಾ ಅನ್ನೋ ಶತ್ರುವನ್ನು ನಿಯಂತ್ರಿಸುತ್ತಾ ಅದನ್ನು ಮಾಡೋದಕ್ಕೆ ಅಮೆರಿಕಾದ ಬೆಂಬಲ ಬೇಕೇ ಬೇಕು ಅಂತ ಸ್ನೇಹವನ್ನ ಕಳೆದುಕೊಳ್ಳುವುದಕ್ಕೆ ಆಗೋದಿಲ್ಲ.
ಈಗಾಗಲೇ ಒಂದು ಸಮಸ್ಯೆ ಶುರುವಾಗಿದೆ,
ದೊಡ್ಡಣ್ಣನ ಸ್ನೇಹ ವಹಿಸುವುದಕ್ಕೆ ಭಾರತ ತನ್ನ ಹಳೆಯ ಮಿತ್ರ ದೇಶ ಇರಾನ್ ಜೊತೆಗಿನ ಪೆಟ್ರೋಲಿಯಂ ವ್ಯವಹಾರವನ್ನು ನಿಲ್ಲಿಸಿದೆ.
ಇದೀಗ ಭಾರತ ತನ್ನ ವಿದೇಶ ವ್ಯವಹಾರವನ್ನು ಯೋಚಿಸಿ ಹೆಜ್ಜೆಯಿಡ ಬೇಕಾಗಿದೆ.
ಈಗ ನಾವು ಕಾದು ನೋಡಬೇಕಿದೆ ರಾಮಮಂದಿರ ಅದನ್ನ ನ್ಯಾಯಾಲಯ ನಿರ್ಧಾರ ಮಾಡುತ್ತೆ ,ಆರ್ಟಿಕಲ್ 370, ಸಮಾನ ನಾಗರಿಕ ಸಂಹಿತೆ ಇದೆಲ್ಲ ಬಿಜೆಪಿಗೆ ಮತ ತಂದುಕೊಟ್ಟ ಅಂಶಗಳಾಗಿವೆ. ನಿರುದ್ಯೋಗ ಹಣದುಬ್ಬರ ಆರ್ಥಿಕ ಅಭಿವೃದ್ಧಿ ಇವುಗಳಿಗೆ ಹೋಲಿಸಿದರೆ ಮೋದಿ ಸರ್ಕಾರದ ಆದ್ಯತೆ ಸಶಕ್ತ ಭಾರತದ ನಿರ್ಮಾಣಕ್ಕಾಗಿ ಒಂದಾಗಿದೆ.
ಇದು ಮೋದಿ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳು. ಇವೆಲ್ಲವನ್ನ ನರೇಂದ್ರ ಮೋದಿಯವರ ಸಚಿವ ಸಂಪುಟ ಹೇಗೆ ನಿಭಾಯಿಸುತ್ತದೆ ಎಂದು ಕಾದುನೋಡಬೇಕು.
ಜೈ ಹಿಂದ್ ಜೈ ಕರ್ನಾಟಕ
–ಮನನ್ ಜೈನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು