Connect with us

ದಿನದ ಸುದ್ದಿ

ಮೈಸೂರು ಭಾಗದ ಜನಪದರು ಹೇಳುವಂತೆ ‘ನವರಾತ್ರಿ ಆಯುಧ ಪೂಜೆ ದಸರಾ ಗುಪ್ತ ಹಿನ್ನಲೆ’..!

Published

on

  • ಹ.ರಾ.ಮಹಿಶ

ರ್ಯ ವೈದಿಕ ಬ್ರಾಹ್ಮಣ ಪುರುಷರು ನಡೆಸುತ್ತಿದ್ದ “ಗೋಯಜ್ಞ”ಗಳಿಂದ ಬೇಸಾಯ ಯೋಗ್ಯವಾಗಿರುತ್ತಿದ್ದ ಸಾವಿರಾರು ಗೋವುಗಳು ನಿತ್ಯವೂ ಬಲಿಯಾಗುತ್ತಿದ್ದವು..! ಎಷ್ಟೆಂದರೆ ಬರುಬರುತ್ತಾ ಹೊಲಗದ್ದೆಗಳಲ್ಲಿ ಒಕ್ಕಲುತನ ಮಾಡುವ ಒಕ್ಕಲಿಗ ರೈತರಿಗೆ ಉಳಲು ಬಿತ್ತಲು ಮತ್ತು ಗಾಡಿಗೆ ಕಟ್ಟಲು ದನಗಳೇ ಸಿಗದಷ್ಟು ಗೋವುಗಳನ್ನು ಯಜ್ಞದ ಹೆಸರಿನಲ್ಲಿ ತಿಂದುಹಾಕುತ್ತಿದ್ದರು..! ಒಕ್ಕಲಿಗರು ತಮ್ಮ ರಾಜನಾದ ಮಹಿಶನಿಗೆ ಈ ಕುರಿತು ದೂರನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡರು. ರೈತಪರನಾದ ಮಹಿಶಮಹಾರಾಜರು ಪ್ರಾಣಿಗಳ ಮಾರಣಹೋಮವಾಗುತ್ತಿದ್ದ ಯಜ್ಞಯಾಗಗಳನ್ನು ನಿಷೇಧಿಸಿದರು. ಮತ್ತು ಬ್ರಾಹ್ಮಣಪುರುಷರು ಹೊಟ್ಟೆಪಾಡಿಗಾಗಿ ಬೇರೇನಾದರೂ ನ್ಯಾಯಯುತವಾದ ಮಾರ್ಗದಿಂದ ದುಡಿದು ತಿನ್ನುವಂತೆ ಅಪ್ಪಣೆ ಹೊರಡಿಸಿದರು. ನಾಡಿನರೈತರು ಸಮಾಧಾಮದಿಂದ ನಿಟ್ಟುಸಿರು ಬಿಟ್ಟರು..!

ಮುಗ್ಧಜನರ ಮೆದುಳಿಗೆ ಮೌಢ್ಯ ತುಂಬಿ ತೊಟ್ಟು ಬೆವರುಸುರಿಸದೆ ನಿರಾಯಾಸವಾಗಿ ಬದುಕಿಕೊಂಡಿದ್ದ ಆರ್ಯವೈದಿಕ ಬ್ರಾಹ್ಮಣ ಪುರುಷರು ಇದರಿಂದ ಕುದಿಕುದಿದುಕುಪಿತಗೊಂಡರು..! ತಮ್ಮ ಹೊಟ್ಟೆಯ ಮೇಲೆ ಹೊಡೆದ ಮಹಿಶಾಸುರ ಮಹಾರಾಜನನ್ನು ಕೊಲ್ಲಲು ತೀರ್ಮಾನಿಸಿದರು..! ಸ್ವತಃ ಮಹಾಶೂರಧೀರ ಮಹಾಧೈತ್ಯದಾನವನಾದ ಮತ್ತು ಸದಾ ಅಂಗರಕ್ಷಕರೊಂದಿಗಿರುವ ಮಹಾರಾಜರನ್ನು ಕೊಲ್ಲುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ. ಅಗ್ರಹಾರದೊಳಗೆ ಒಂಭತ್ತು ರಾತ್ರಿಗಳು ರಾಜನನ್ನು ಶಕ್ತಿಯಿಂದಲ್ಲದೆ ಯುಕ್ತಿಯಿಂದ ಕೊಲ್ಲುವುದು ಹೇಗೆಂದು ಗುಪ್ತಸಭೆ ಚರ್ಚೆಗಳು ನಡೆದವು ಅದರ ನೆನಪಿಗೇ ಇಂದು ನವರಾತ್ರಿ(ಒಂಭತ್ತು ರಾತ್ರಿ) ಆಚರಣೆ..!!

ಮಹಿಶಾಸುರನ ಕುಟುಂಬಕ್ಕೆ ನಂಬುಗೆಯ ಆಪ್ತಳಾಗಿದ್ದ ಚಾಮುಂಡಿ ಎಂಬ ಮಹಿಳೆಯಿಂದ‌ ಅಂಗರಕ್ಷರಿಲ್ಲದ ಬೆಳಗಿನ ಸೂರ್ಯನಮಸ್ಕಾರದ ವೇಳೆ ಹಾಲಿಗೆ ಮತ್ತು ಬರುವ ವಿಷಬೆರೆಸಿ ಕುಡಿಸುವಂತೆಯೂ‌ ಹಿಂದಿನರಾತ್ರಿಯೇ ನದೀತೀರದಲ್ಲಿ‌ ಕತ್ತಲಿನಲ್ಲಿ ಸುತ್ತಲೂ ಬಗೆಬಗೆ ಆಯುಧಸಮೇತ ಅವಿತು ಕೂತು ಮೂರ್ಛೆಗೊಂಡ ಮಹಿಷನನ್ನು ಕೊಚ್ಚಿ ಕೊಲ್ಲುವಂತೆಯೂ ಈ ಮಹಾಕಾರ್ಯಕ್ಕಾಗಿ ಚಾಮುಂಡಿಯನ್ನು ದೇವತೆಯಂತೆ ಬಿಂಬಿಸಿ ರಾಣಿಯಾಗಿ ಮಾಡುವುದಾಗಿಯೂ ಗುಪ್ತ ಒಪ್ಪಂದವಾಯಿತು..! ಹಾಗಾಗಿ ಆ ಹಿಂದಿನ ರಾತ್ರಿಯೇ ಅಗ್ರಹಾರದಲ್ಲಿದ್ದ ಬ್ರಾಹ್ಮಣರ ಮನೆಯ ಆಯುಧಗಳು ಮಹಿಶಾಸುರನನ್ನು ಕೊಲ್ಲಲು ಪೂರಕವಾಗಿ ಪೂಜೆಗೊಳಗಾದವು..! ಅದರ ನೆನಪಿಗೇ “ಆಯುಧಪೂಜೆ” ಆಚರಣೆ..!!

ಬ್ರಾಹ್ಮಣರ ಮತ್ತು ಚಾಮುಂಡಿ ನಡುವಿನ ಗುಪ್ತಯೋಜನೆಯಂತೆ ಮರುದಿನ ಮುಂಜಾನೆಯೇ ಮಹಿಷಾಸುರಮಹಾರಾಜರನ್ನು ಮೋಸದಿಂದ ಕ್ರೂರವಾಗಿ ಕೊಲ್ಲಲಾಯಿತು..! ರೈತರು ಜನಸಾಮಾನ್ಯ ಪ್ರಜೆಗಳು ತಮ್ಮ ಪ್ರಜಾಪಿತರಾಜರನ್ನು ಕಳೆದುಕೊಂಡು ಅನಾಥರಾದರು..!
ಬ್ರಾಹ್ಮಣರು ವಿಜಯ ಸಾಧಿಸಿದರು. ಆ ಹತ್ತನೇ(ದಶ)ದಿನದ ವಿಜಯ ನೆನಪೇ ಮೈಸೂರು ‘ದಸ’ರಾ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.

ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ

Published

on

ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. www.eci.gov.in/candidate-politicalparty ವೆಬ್‌ಸೈಟ್‌ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.

ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು.

ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್‌ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ

Published

on

ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.

ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.

ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ

ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ. ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು...

ದಿನದ ಸುದ್ದಿ1 day ago

ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ

ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. www.eci.gov.in/candidate-politicalparty...

ದಿನದ ಸುದ್ದಿ5 days ago

ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ

ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ...

ದಿನದ ಸುದ್ದಿ1 week ago

ದಾವಣಗೆರೆ ವಿವಿ ಘಟಿಕೋತ್ಸವ ; ಮೂವರಿಗೆ ಗೌರವ ಡಾಕ್ಟರೇಟ್

ಸುದ್ದಿದಿನ, ದಾವಣಗೆರೆ : ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಶಿವರಾಜ ಪಾಟೀಲ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ...

ದಿನದ ಸುದ್ದಿ1 week ago

ದಾವಣಗೆರೆ ವಿಶ್ವವಿದ್ಯಾಲಯ | 11ನೇ ಘಟಿಕೋತ್ಸವ :ದೀಪ್ತಿಗೆ ಐದು ; ಸಿಂಧುಬಾಯಿಗೆ ಮೂರು ಚಿನ್ನದ ಪದಕ

ಸುದ್ದಿದಿನ,ದಾವಣಗೆರೆ: ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 14,357ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾಲಯದ ಹನ್ನೊಂದನೇ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ. 45ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರೆ, 64 ಸಂಶೋಧನಾ ವಿದ್ಯಾರ್ಥಿಗಳು...

ದಿನದ ಸುದ್ದಿ1 week ago

ಪಿಎಚ್ ಡಿ ; ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಪ್ರಸಕ್ತ ಸಾಲಿನ ಪಿಹೆಚ್‍ಡಿ ಸಂಶೋಧನಾ ಸ್ಥಾನಗಳಿಗೆ ಅರ್ಜಿಯನ್ನು ಸಲ್ಲಿಸಲು ಮಾ.19 ರವರೆಗೆ ಅವಧಿ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವ ವಿದ್ಯಾನಿಲಯದ ವೆಬ್‍ಸೈಟ್...

ದಿನದ ಸುದ್ದಿ1 week ago

ವಿಶ್ವ ಫ್ಲಂಬರ್ ದಿನಾಚರಣೆ

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕಾವೇರಿ ಮಾತಾ ಪ್ಲಂಬರ್ಸ್ ಕಾರ್ಮಿಕರ ಸಂಘದಿಂದ ಸಂಘದ ಕಚೇರಿಯಲ್ಲಿ ವಿಶ್ವ ಪ್ಲಂಬರ್ ದಿನಾಚರಣೆ ಹಾಗೂ ವಿಶ್ವ ಜಲ ಸಂಗ್ರಹಣಾ ದಿನವನ್ನು ಸರಳವಾಗಿ ಆಚರಿಸಲಾಯಿತು. ಈ...

ದಿನದ ಸುದ್ದಿ1 week ago

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು...

ಕ್ರೀಡೆ1 week ago

ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು

ಮದ್ಯಾಹ್ನದ ಸುದ್ದಿಮುಖ್ಯಾಂಶಗಳು ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ....

ದಿನದ ಸುದ್ದಿ1 week ago

ನರೇಂದ್ರ ಮೋದಿ ಹರಿಯಾಣದ ಗುರುಗ್ರಾಮಕ್ಕೆ ಭೇಟಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಸುದ್ದಿದಿನ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ...

Trending