ದಿನದ ಸುದ್ದಿ
ಕೊರೋನಾ ಭಯಬಿಡಿ, ಶಿಕ್ಷಣದ ಕಡೆಗೆ ನಡಿ
- ಹೆಚ್.ಎಂ.ಸಂತೋಷ್,ಎಐವೈಎಫ್, ರಾಜ್ಯ ಕಾರ್ಯದರ್ಶಿ, ಹರಪನಹಳ್ಳಿ
ಕೊರೋನ ಸೋಂಕಿನ ಭಯದಿಂದಲೇ ಬದುಕುವ ಬದಲು, ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಬದುಕಲು ಮುಂದಾಗಬೇಕೆಂಬ ಆಲೋಚನೆಗಳು ಈಗ ಸಮುದಾಯದಲ್ಲಿ ಮೂಡುತ್ತಿವೆ. ಸರಕಾರವೂ ಕೂಡ ಕರೋನದೊಂದಿಗೆ ಬದುಕುವುದನ್ನು ಕಲಿಯಬೇಕು ಎಂಬುದನ್ನು ಹೇಳುತ್ತಿದೆ.ಈ ಹಿನ್ನಲೆಯಲ್ಲಿ ದೇಶದ ಆರ್ಥಿಕ ಚಟುವಟಿಕೆ ಪುನ್ಸಶ್ಚೇನ ನೀಡುವ ಕಾರ್ಯವೂ ಆರಂಭವಾಗಿದೆ.
ಹಂತ, ಹಂತವಾಗಿ ಎಲ್ಲಾ ರಂಗಗಳಲ್ಲೂ ಸಡಿಲಿಕೆ ಕಂಡುಬರುತ್ತಿದೆ. ಇದೆ ಸಂದರ್ಭದಲ್ಲಿ ಶಿಕ್ಷಣ ಚಟುವಟಿಕೆ ನಡೆಸಬೇಕೆ?, ಬೇಡವೇ? ಎಂಬ ಪ್ರಶ್ನೆಗಳು ಸರಕಾರಕ್ಕೂ, ಪೋಷಕರಲ್ಲಿ ಮೂಡಿಬರುತ್ತಿದೆ.
ಕರೋನ ಸೋಂಕಿನ ಕಾರಣದಿಂದ ಈಗಾಲೇ ಪ್ರರೀಕ್ಷೆಗಳನ್ನು ಎದುರಿಸದೆ ಮಕ್ಕಳು ಮುಂದಿನ ಹಂತಕ್ಕೆ ತಲುಪಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳ ಪುನರ್ ಆರಂಭವು ಉಳಿದ ಕ್ಷೇತ್ರದಂತೆ ಸರಳವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದೇನೋ ನಿಜ ಆದರೆ ಆರಂಭಿಸದಿರಲು ಆಗುವುದಿಲ್ಲ.
ಕೆಲವರು ಸಧ್ಯ ಶೈಕ್ಷಣಿಕ ಚಟುವಟಿಕೆ ಆರಂಭಿಸದಿರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಪೋಷಕರು ಬಹಳ ಗೊಂದಲಕ್ಕೆ ಒಳಗಾಗಿದ್ದಾರೆ. ಶಾಲೆ-ಕಾಲೇಜುಗಳು ಪ್ರಾರಂಭವಾದರೆ ಎಲ್ಲಿ ಮಕ್ಕಳಿಗೆ ಸೋಂಕು ಹರಡಿಬಿಡುತ್ತೋ ಅನ್ನೋ ಭಯವಿದ್ದರು, ಆರಂಭವಾಗದಿದ್ದರೆ ಮಕ್ಕಳ ಭವಿಷ್ಯದ ಏನಾಗುತ್ತೋ ಅನ್ನೋ ಚಿಂತೆಯೂ ಅವರಲ್ಲಿ ಕಾಡುತ್ತಿದೆ.
ಇಂದು ಶಿಕ್ಷಣದ ವಿಚಾರಕ್ಕೆ ಹಲವಾರು ಅಭಿಪ್ರಾಯಗಳು ಬರತೊಡಗಿವೆ. ಅದರಲ್ಲಿ ಶೈಕ್ಷಣಿಕ ವರ್ಷದ ಕಡಿತಗೊಳಿಸುವೆ, ವಾರ್ಷಿಕ ಪಠ್ಯಗಳ ಕಡಿತಗೊಳಿಸುವಿಕೆ ಮಾಡಬೇಕು ಎಂಬುದು ಒಂದಾದರೆ, ಕೆಲವರು ಆನ್ಲೈನ್ ತರಗತಿಯ ಮೂಲಕ ತರಗತಿಗಳನ್ನು ಪ್ರಾರಂಭಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ.
ಇವುಗಳಲ್ಲಿ ಯಾವುದು ಮಕ್ಕಳ ಭವಿಷ್ಯವನ್ನು ರೂಪಿಸಲು ಉತ್ತಮ ಎಂಬುದರ ಕುರಿತುಯಾರಲ್ಲೂ ಸ್ಪಷ್ಟತೆ ಇಲ್ಲ. ಶೈಕ್ಷಣಿಕ ಅವಧಿಯ ಕಡಿತಗೊಳಿಸುವುದು ಮತ್ತು ಪಠ್ಯಕ್ರಮ ಕಡಿತಗೊಳಿಸುವುದು ಹೆಚ್ಚು ಸೂಕ್ತವಲ್ಲ, ಜೂನ್ ತಿಂಗಳ ಆರಂಭದಲ್ಲೆ ಶೈಕ್ಷಣಿಕ ಆರಂಭವಾಗಬೇಕಿತ್ತು ಆದರೆ ಇನ್ನೂ ಆರಂಭಿಸಿಲ್ಲ, ಆರಂಭಿಸುವ ಚರ್ಚೆಗಳು ಇನ್ನೂ ನಡೆಯುತ್ತಿವೆ.
ಶಾಲೆ- ಕಾಲೇಜು ಆರಂಭ ತಡವಾದಷ್ಟು ಮಕ್ಕಳ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅನುಕೂಲಸ್ಥ ವಿದ್ಯಾವಂತ ಪೋಷಕರು ತಮ್ಮ ಮಕ್ಕಳ ಕಲಿಕೆಯನ್ನು ಸ್ವತಹ ತಾವೇ ಹೇಳಿಕೊಡುವ ಅಥವಾ ಇನ್ಯಾವುದೋ ಮಾರ್ಗದಲ್ಲಿ ಕಲಿಸುತ್ತಿರುತ್ತಾರೆ.
ಆದರೆ ದುಡಿಯುವ ವರ್ಗದವರ ಮಕ್ಕಳ ಸ್ಥಿತಿ ಹೀಗಿರಿರಲು ಸಾಧ್ಯವೇ ಇಲ್ಲ. ಈ ಮಕ್ಕಳು ಶಾಲೆಗಳ ಪ್ರಾರಂಭ ತಡವಾದಷ್ಟು ಕಲಿಕೆಯ ಮೇಲೆ ನಿರಾಸಕ್ತರಾಗುವುದೆ ಹೆಚ್ಚು. ಇನ್ನು ಶೈಕ್ಷಣಿಕ ಚಟುವಟಿಕೆ ತಡವಾಗಿ ಆರಂಭಿಸಿದಾಗ ಶಿಕ್ಷಕರು ನೇರವಾಗಿ ಮಕ್ಕಳಿಗೆ ನೂತನ ತರಗತಿಯ ಪಠ್ಯ ಚಟುವಟಿಕೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ.
ಈಗಾಲೇ ಮಕ್ಕಳು ಬಹುದಿನಗಳಿಂದ ಕಲಿಕಾ ಚಟುವಟಿಕೆಗಳಿಂದ ದೂರ ಉಳಿದಿರುವುದರಿಂದ ಹಿಂದಿನ ತರಗತಿಯ ಕಲಿಕೆಯ ಫಲಗಳನ್ನು ಅರಿಯದೆ, ನೇರವಾಗಿ ಹೊಸ ವಿಷಯಗಳ ಕಲಿಕೆಗೆ ತೊಡಗಿಸುವುದು ಸೂಕ್ತವಲ್ಲ.
ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಶೈಕ್ಷಣಿಕ ಚಟುವಟಿಕೆಗೆ ಪ್ರಾರಂಭದ ಕುರಿತು ಚರ್ಚಿಸುವು ಸೂಕ್ತವಾಗುತ್ತದೆ. ಆನ್ಲೈನ್ ತರಗತಿಗಳ ಬಗ್ಗೆ ದೊಡ್ಡ ಮಟ್ಟದ ಅಭಿಪ್ರಾಯ ಬರುತ್ತಿದೆ.
ಇಂದಿನ ಮಾಧ್ಯಮಗಳಲ್ಲಿ ಆನ್ಲೈನ್ ಕಲಿಕೆಯನ್ನು ಬಿಂಬಿಸುತ್ತಿರುವುದನ್ನು ನೋಡಿದರೆ, ಈ ಪರಿಸ್ಥಿತಿಯಲ್ಲಿ ಇದೆ ಪರ್ಯಾಯ ಎಂಬ ಅಭಿಪ್ರಾಯ ಮೂಡದಿರಲು ಸಾಧ್ಯವಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಬೋಧನೆ ಮತ್ತು ಕಲಿಕೆ ಎಂದರೆ ಯಾಂತ್ರಿಕ ಪ್ರಕ್ರಿಯೆ ಅಲ್ಲ. ಮಕ್ಕಳು ನೇರ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಕಲಿಯೂವುದಕ್ಕೂ, ಶಿಕ್ಷಕರ ಮೇಲ್ವಿಚಾರಣೆ ಇಲ್ಲದೆ ಕಲಿಯುವುದಕ್ಕೂ ವ್ಯಾತ್ಯಾಸವಿದೆ.
ಈ ರೀತಿ ಕಲಿಕೆಗಳು ದೊಡ್ಡ ಹಂತದ ತರಗತಿಗಳಿಗೆ ಅಂದರೆ ಕಲಿಕೆಯಲ್ಲಿ ಸ್ವ ಆಸಕ್ತಿ ವಹಿಸುವ ಹಂತದವರಿಗೆ ಉತ್ತಮವೇ ಹೊರತು, ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ತರಗತಿಗಳಿಗೆ ಉತ್ತಮ ಕಲಿಕಾ ವಿಧಾನವಲ್ಲ. ಅಲ್ಲದೆ ತಂತ್ರಜ್ಞಾನವನ್ನು ಅನುಸರಿಸುವಷ್ಟು ಮಟ್ಟಿಗೆ ನಮ್ಮ ದೇಶದ ಸಮಾಜಿಕ ಮತ್ತು ಆರ್ಥಿಕ ಪರಿಸ್ಥಿಗಳು ಇವೆಯೇ? ಎಂಬುದನ್ನು ಗಮನಿಸಬೇಕು.
ಇಂದಿಗೂ ಶಾಲೆಗಳು ಉನ್ನತಿಕರಣ ಗೊಳ್ಳದಿರುವಾಗ, ಆನ್ಲೈನ್ ತರಗತಿ ಪ್ರಸ್ತಾಪ ಹಾಸ್ಯಾಸ್ಪದವಾಗುತ್ತದೆ.
ಇನ್ನೂ ಶಾಲೆಗಳು ಪ್ರಾರಂಭವಾದರೆ, ಮಕ್ಕಳು ಶಾಲೆಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಷ್ಟು ಪರಿಸರ ಇದೆಯೇ? ವರ್ಗಕೋಣೆಗಳು ಅಂತರ ಕಾಯ್ದುಕೊಂಡು ಕಲಿಕೆಗೆ ಪ್ರೋತ್ಸಾಹ ನೀಡಬಲ್ಲವೇ? ಅಂತರ ಕಾಯ್ದುಕೊಳ್ಳುವಷ್ಟು ಮಕ್ಕಳ – ಶಿಕ್ಷಕರ ಅನುಪಾತ ನಿರ್ಮಿಸಲು ಸಾಧ್ಯವೇ? ಮಕ್ಕಳು ದೈಹಿಕ ಅಂತರ ಕಾಯ್ದುಕೊಳ್ಳುವಷ್ಟು ಜಾಗೃತರಾಗಿರುತ್ತಾರೆಯೇ?
ಊಟ, ಆಟ, ಪಾಠಗಳಲ್ಲಿ ಸದಾ ಅಂತರ ಕಾಯ್ದುಕೊಳ್ಳುವಂತೆ ಮಕ್ಕಳನ್ನು ಗಮನಿಸುತ್ತಿರಲು ಸಾಧ್ಯವೇ? ಶಾಲೆಯಅವಧಿ ಮುಗಿದ ಬಳಿಕ ಮಕ್ಕಳು ಮನೆಗೆ ತೆರಳುವಾಗಲೂ ಈ ಇದೆ ಕ್ರಮಗಳನ್ನು ಅನುಸರಿಸುತ್ತಾರೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಶೈಕ್ಷಣಿಕ ಚಟುವಟಿಕೆ ಆರಂಭ ಮಾಡಲು ಸಾಧ್ಯವಿದೆ.
ಹಾಗಾದರೆ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಏನೂ ಮಾಡಬಹುದು.
ಮೊದಲು ಸರಕಾರ ಈ ಸಮಸ್ಯೆಯ ಪರಿಹಾರಕ್ಕೆ ಬಹುದೊಡ್ಡ ಮಾನವ ಶಕ್ತಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು.ಈಗಿರುವ ಶಿಕ್ಷಕರು ಮತ್ತು ಶಾಲೆಗಳ ಸಂಖ್ಯೆಗಳಿಂದ ದೈಹಿಕ ಅಂತರ ಕಾಯ್ದುಕೊಳ್ಳುವಷ್ಟರ ಮಟ್ಟಿಗೆ ವಾತವಾರಣ ಇಲ್ಲ ಎಂಬುದಂತು ಸತ್ಯ. ಸರಕಾರವು ಪ್ರಾಥಮಿಕ ಹಂತದ ಮಕ್ಕಳಿಗೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ 15:1 ಮಾತ್ರ ಇರುವಂತೆ, ಮಾಧ್ಯಮಿಕ ಹಂತಗಳಲ್ಲಿ ಗರಿಷ್ಟ ವೆಂದರೂ 25:1 ಅನುಪಾತದಂತೆ ನೋಡಿಕೊಳ್ಳಬೇಕು.
ಇದರಲ್ಲಿ ಎರಡು ಸಮಸ್ಯೆಗಳು ಉದ್ಬವಿಸುತ್ತವೆ ಮೊದಲನೆಯದು ಶಿಕ್ಷಕರು, ಎರಡನೆಯದು ವರ್ಗಕೋಣೆಗಳು. ಇವುಗಳನ್ನು ಹೇಗೆ ಸೃಷ್ಟಿಸುಬೇಕು?, ಎಂಬುದು ಸರಕಾರಕ್ಕೆ ಸವಾಲು ಎದುರಾಗುತ್ತದೆ.
ಮೊದಲನೆಯದು ಶಿಕ್ಷಕರ ಸಮಸ್ಯೆಗೆ ಸಂಬಂಧಿಸಿದಂತೆ ಸರಕಾರವು ಈಗಾಗಲೇ ಶಿಕ್ಷಕ ತರಬೇತಿ ಪೂರ್ಣಗೊಳಿಸಿದ ಡಿ.ಇಡಿ ಮತ್ತು ಬಿ.ಇಡಿ ನಿರುದ್ಯೋಗಿ ಯುವಕರನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳವುದು ಉತ್ತಮ.
ಈಗಾಗಲೇ ಕೆಲವರು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಹೊರಗಿದ್ದಾರೆ. ಸರಕಾರ ಇವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೀವನ ನಿರ್ವಹಣೆಗೆ ಸಹಾಯವಾಗುಂತಹ ಯೋಜನೆ ರೂಪಿಸಿದರೆ ಸಧ್ಯದ ಸಂದರ್ಭಕ್ಕೆ ಎದುರಾಗುವ ಮಾನವ ಸಂಪನೂಲ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
ಎರಡನೇ ಸಮಸ್ಯೆ ಕಟ್ಟಡದ ಸಮಸ್ಯೆ, ಕಿರಿಯ ಪ್ರಾಥಮಿಕ ತರಗತಿಯ ಮಕ್ಕಳು ಅಂದರೆ 1 ರಿಂದ 4ನೇ ತರಗತಿಯ ಮಕ್ಕಳಿಗೆ ಅವರ ಮನೆಯ ಸುತ್ತು ಮುತ್ತಲಿರುವ ನೆರಳಿರುವ ಪ್ರದೇಶದಲ್ಲಿ ಸ್ವಚ್ಚತೆಗೆ ಮಹತ್ವ ನೀಡಿರುವ ಸ್ಥಳದಲ್ಲಿ ಕಲಿಸುವ ಕಾರ್ಯ ಆರಂಭಿಸಬಹುದು. ಇದು ಸೂಕ್ತವಲ್ಲದಿದ್ದರು ಇಂದು ಶಾಲೆಗಳನ್ನು ಪ್ರಾರಂಭವೇ ಮಾಡದಿರವುದರ ಬದಲು ಶೈಕ್ಷಣಿಕ ಚಟುವಟಿಕೆಯ ಪ್ರಾರಂಭಕ್ಕೆ ಬದಾರಿಯಾಗುತ್ತದೆ.
ಇನ್ನೂ ಉನ್ನತ ಹಂತದ ಮಕ್ಕಳಿಗೆ ಖಾಲಿ ಉಳಿದ ತರಗತಿಗಳನ್ನು ಸೇರಿಸಿ ಮಕ್ಕಳ ಸಂಖ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ತರಗತಿಗಳನ್ನು ಪ್ರಾರಂಭಿಸಬಹುದು. ಹೈಸ್ಕೂಲ್ ಮತ್ತು ಕಾಲೇಜ್ ಮಕ್ಕಳಲ್ಲಿ ಜಾಗೃತಿ ಇರುವುದರಿಂದ ಬೋಧಕರೆ ಎಚ್ಚರಿಸುತ್ತ ತರಗತಿಗಳನ್ನು ಆರಂಭಿಸಬಹುದು.
ಶಿಕ್ಷಣ ಕೇಂದ್ರಗಳು ಸ್ವಚ್ಚವಾಗಿರುವಂತೆ ಇತರೆ ಮುನ್ನಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು, ಜೊತೆಗೆ ಎಚ್ಚರ ತಪ್ಪಂದತೆ ಜಾಗೃತಿ ವಹಿಸಿದರೆ ಸಾಕಾಗುತ್ತದೆ. ಕರೋನದ ಭಯದಿಂದಲೇ ನಾವು ಮಕ್ಕಳ ಭವಿಷ್ಯವನ್ನು ಕುಟಿಂತಗೊಳಿಸುವ ಬದಲು ಪರ್ಯಾಯ ಮಾರ್ಗದೆಡೆಗೆ ಸಾಗುವುದು ಉತ್ತಮ. ಎಚ್ಚರಿಕೆಯ ಕ್ರಮಗಳಿಂದ ಮಕ್ಕಳ ಹಕ್ಕುಗಳನ್ನು ಒದಗಿಸಲು ಅವಕಾಶವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ