ದಿನದ ಸುದ್ದಿ
ಬುಡಕಟ್ಟು ಜನಾಂಗದ ಗಟ್ಟಿ ದನಿ : ಸಾಯಿ ಪಲ್ಲವಿ
- ಸಿದ್ದು ಸತ್ಯಣ್ಣನವರ್
ಆಕೆ ‘ಬಡಗ‘ ಎಂಬ ತಮಿಳುನಾಡಿನ ಬುಡಕಟ್ಟು ಜನಾಂಗದ ಕುಡಿ. ದ್ರಾವಿಡತನ ರಕ್ತದಲ್ಲೇ ಇತ್ತು. ಸಿನಿ ರಂಗ ಸೃಷ್ಟಿಸಿದ್ದ ಹಲವು ಸಿದ್ಧ ಮಾದರಿಗಳನ್ನು ಮೀರಿದ ಅಗ್ಗಳಿಕೆ ಸಹ ಆಕೆಯದು. ಹೆಸರು ‘ಸಾಯಿ ಪಲ್ಲವಿ’. ಸದ್ಯ ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ. ಆ ಬೇಡಿಕೆಯನ್ನು ತನ್ನ ಪ್ರಬುದ್ಧತೆ, ,ಪ್ರತಿಭೆ, ನಟನಾ ಕೌಶಲ್ಯತೆಯಿಂದ ಸೃಷ್ಟಿಸಿಕೊಂಡಿರುವಾಕೆ.
ಕೆಲ ದಿನಗಳ ಹಿಂದೆ ಆಕೆ ಕಾಸ್ಮೆಟಿಕ್ ಕಂಪನಿಯೊಂದರ ಎರಡು ಕೋಟಿ ರೂಪಾಯಿ ಜಾಹೀರಾತನ್ನು ತಿರಸ್ಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ಅವಳನ್ನು ಬಲ್ಲ ಕುಟುಂಬ ವರ್ಗ ಮತ್ತು ಸ್ನೇಹಿತ ವಲಯಕ್ಕೆ ಆಶ್ಚರ್ಯಕರ ಸಂಗತಿಯೇನಾಗಿರಲಿಲ್ಲ. ಯಾಕೆಂದರೆ ಸಾಯಿ ಪಲ್ಲವಿಯ ತಂಗಿ ಪೂಜಾ ಮೈ ಬಣ್ಣ ಕಪ್ಪು. ಅವಳು ಸಹ ಹಲವು ಕಂಪೆನಿಯ ಕಾಸ್ಮೆಟಿಕ್ ಪ್ರೋಡಕ್ಟ್ಸ್ ಬಳಸಿದವಳೇ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದನ್ನೇ ಮತ್ತೊಂದು ಬಗೆಯಲ್ಲಿ ಅಂದರೆ ಎರಡು ಕೋಟಿ ಜಾಹೀರಾತು ಏಕೆ ತಿರಸ್ಕರಿಸಿದೀರಿ? ಎಂದು ಸಂದರ್ಶನವೊಂದರಲ್ಲಿ ನಿರೂಪಕಿ ಕೇಳಿದ್ದಳು.
ಕಾಸ್ಮೆಟಿಕ್ಸ್ ಕಂಪನಿಗಳ ವಂಚನೆ ತನ್ನ ತಂಗಿಯ ಮೂಲಕವೇ ಸಾಯಿ ಪಲ್ಲವಿಗೆ ಮನದಟ್ಟಾಗಿತ್ತು. ಆಗ ಅವಳು ಕೊಟ್ಟ ಉತ್ತರ ಹೀಗಿತ್ತು ‘ಬ್ರಿಟಿಷರು ಬೆಳ್ಳಗೆ, ಆಫ್ರಿಕನ್ನರು ಕಪ್ಪಗೆ, ಭಾರತೀಯರು ಕಂದು. ಆಫ್ರಿಕಾದಲ್ಲಿ ನಾವು ಅಲ್ಲಿನ ಕಪ್ಪನೆ ಯುವತಿಯರನ್ನೇ ಸುಂದರಿಯರು ಎನ್ನಬೇಕಾಗುತ್ತದೆ. ಮೈ ಬಣ್ಣ ಎನ್ನುವುದು ಬರೀ ಒಂದು ಭಾವನೆಯಷ್ಟೇ. ನನ್ನ ತಂಗಿಯೇ ಇದ್ದಳಲ್ಲ, ಮನೆಯಲ್ಲಿ. ನಾನು ಹಾಗಾಗಿ ಆ ಜಾಹೀರಾತನ್ನು ಒಪ್ಪಿಕೊಳ್ಳಲಿಲ್ಲ. ದುಡ್ಡಿಗಾಗಿ ನಾನೇಕೆ ಜನರನ್ನು ವಂಚಿಸಲಿ?’ ಎಂದಿದ್ದಳು. ಇದು ಪ್ರಶ್ನೆಯೊಂದಕ್ಕೆ ಸಾಯಿ ಪಲ್ಲವಿಯ ಉತ್ತರವಾದರೂ ಕಪ್ಪು ಬಣ್ಣದ ಬಗ್ಗೆ ತಮಿಳರ ಪ್ರೇಮವನ್ನು ಹೇಳುತ್ತದೆ. (ಪಾ.ರಂಜಿತ್ ನಿರ್ದೇಶನದ ಕಾಲಾ ಸಿನಿಮಾ ಆ ಬಗ್ಗೆ ಖಚಿತವಾಗಿ ಮಾತನಾಡುತ್ತದೆ. ಈ ಪಟ್ಟಿ ಬೆಳೆಸಿದರೆ ಇನ್ನು ಬೆಳೆಯುತ್ತದೆ. ಅದಿಲ್ಲಿ ಅನಗತ್ಯ).
ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ‘ಬಡಗ’ ಎಂಬ ಬುಡಕಟ್ಟು ಜನಾಂಗದ ಹೆಣ್ಣುಮಗಳು ಈ ಸಾಯಿ ಪಲ್ಲವಿ. ಮೆಡಿಕಲ್ ಓದಿದರೂ (ಹಾರ್ಟ್ ಸ್ಪೇಶಲಿಸ್ಟ್) ಪ್ರಾಕ್ಟೀಸಿಗಾಗಿ ಹೆಸರು ನೋಂದಾಯಿಸಿಕೊಂಡಿಲ್ಲ. ತಮಿಳುನಾಡಿನ ಸುಮಾರು 400 ಹಳ್ಳಿಗಳಲ್ಲಿ ಕಂಡು ಬರುವ ಬಡಗ ಜನಾಂಗ ನಮ್ಮಲ್ಲಿ ಕಾಡು ಕುರುಬ, ಜೇನು ಕುರುಬರು ವಾಸಿಸುವಂತೆಯೇ ಕಾಡಿನ ಏರಿಳಿತಗಳ ನಡುವೆ ಹಟ್ಟಿಗಳಲ್ಲಿ ವಾಸಿಸುವವರು. ‘ಬಡಗ’ ಎಂದರೆ ತಮಿಳು ಜನಪದದಲ್ಲಿ ದಕ್ಷಿಣ ಎಂಬರ್ಥವೂ ಉಂಟು.
ನಟಿಯರಲ್ಲಿ ದ್ರಾವಿಡತನದ ಢಾಳ ಛಾಯೆ ನನಗೆ ಎದ್ದು ಕಂಡದ್ದು ‘ಪ್ರೇಮಂ‘ ಎಂಬ ಸಿನೇಮಾದ ಮೂಲಕ ಮೋಡಿ ಮಾಡಿದ ಈ ‘ಮಲರ್‘ ಮೂಲಕ. ವೃತ್ತಿಪರ ನೃತ್ಯಪಟುವಲ್ಲದಿದ್ದರೂ, ಈಕೆ ಅದರಲ್ಲೂ ಯಶಸ್ಸು ಸಾಧಿಸಿದಾಕೆ. ಡ್ಯಾನ್ಸ್ ಬರುತ್ತಿದ್ದ ಕಾರಣಕ್ಕೆ ಮಲಯಾಳಂನ ಎವರ್ ಗ್ರೀನ್ ಹಿಟ್ ಸಿನೆಮಾ ‘ಪ್ರೇಮಂ’ ಚಿತ್ರದಲ್ಲಿ ‘ಮಲರ್’ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದಾಚೆಗೆ ಸಾಯಿ ಪಲ್ಲವಿ ಹೊರಳಿ ನೋಡುವ ಪ್ರಮೇಯಗಳೇ ಎದುರಾಗಲಿಲ್ಲ.
ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದರೂ ಆಕೆಯ ಸ್ಪಷ್ಟ ನಿಲುವು ಸಿನಿಮಾ ರಂಗದ ಬಹುತೇಕರಿಗೆ ಅಪಥ್ಯವೂ ಸಹ. ಅದೇನೂ ಅಂತಹ ಗುಟ್ಟೂ ಅಲ್ಲ. ಹಾಗಂತ ಹಲವು ಒತ್ತಡಗಳ ನಡುವೆಯೂ ಸಾಯಿ ಪಲ್ಲವಿ ಪುರುಷ ಪ್ರೌಢಿಮೆಯ ಸಿನೇಮಾ ಇಂಡಸ್ಟ್ರಿಗಳಲ್ಲಿ ತನ್ನ ನಿಲುವಿಗೆ ಬದ್ಧವಾಗಿರೋದು ಹಲವು ಬಾರಿ ಸುದ್ದಿಯೂ ಆಗಿರುವುದು ಹಳೇ ಸಮಾಚಾರ.
‘ನನ್ನ ತಂಗಿ ಪೂಜಾಳ ಮೈ ಬಣ್ಣ ಕಪ್ಪು. ನನ್ನದು ಬಿಳಿ. ಅದೆಲ್ಲ ಇಲ್ಲಿ ಅನಗತ್ಯ. ಮೈ ಬಣ್ಣ ನನಗೆಂದು ವಿಶೇಷ, ಆಕರ್ಷಕವೆನಿಸಿಲ್ಲ, ಅನಿಸುವುದೂ ಇಲ್ಲ. ಆಫ್ರಿಕನ್ನರ ಮೈ ಬಣ್ಣ ಸಹಜವಾಗಿಯೇ ಕಪ್ಪು. ಕಪ್ಪು ಹುಡುಗಿಯರನ್ನೇ ಅವರು ಸುಂದರಿ ಎಂದು ಕರೆಯಬೇಕು. ಭಾರತದಲ್ಲೂ ಅಷ್ಟೇ’ ಮೇಲೆ ಉಲ್ಲೇಖಿಸಿರುವ ಸಂದರ್ಶನ ಇದೆಯಲ್ಲ, ಅದರಲ್ಲೇ ಮುಂದುವರೆದು ಎರಡನೇ ಬಾರಿ ಇದೇ ಉತ್ತರ ಪುನರುಚ್ಚರಿಸಿದ್ದಳು ಸಾಯಿ ಪಲ್ಲವಿ.
ಬಹುಭಾಷಾ ನಟಿ ಪಾರ್ವತಿ ಮೆನನ್ ಬಿಟ್ಟರೆ ಇಂತಹ ವಿಚಾರಗಳಲ್ಲಿ ತೀರಾ ಇತ್ತೀಚೆಗೆ ಹೀಗೆ ಪುರುಷತ್ವದ ಕಪಾಳಕ್ಕೆ ಹೊಡೆದಂತೆ ನೇರವಾಗಿ ಮಾತನಾಡಿದ್ದು ಸಾಯಿಪಲ್ಲವಿ ಮಾತ್ರ. ಹದಿ ವಯದ ಯುವಕರಂತೂ ಸಾಯಿ ಪಲ್ಲವಿಯ ತೆಲುಗಿನ ‘ಫಿದಾ‘ ಮಲಯಾಳಂನ ‘ಕಾಳಿ‘ ಹಾಗೂ ‘ಅಧಿರನ್‘ ಸಿನಿಮಾಗಳಲ್ಲಿ ಅವಳ ಮುಗ್ಧ, ಮೋಹಕ ನಟನೆಯನ್ನು ಎಂದೂ ಮರೆಯಲಾರರು. ಅದೆಲ್ಲದರಾಚೆಗೆ ಅವಳ ವೈಚಾರಿಕ ನಿಲುವನ್ನು ಸಹ. ಇಂತಹ ಸಾಯಿ ಪಲ್ಲವಿಗೆ ಇಂದು ( ಮೇ 9 ನಿನ್ನೆ ) ಜನ್ಮದಿನ. ಇಂತಹ ನಟಿಯರ ಸಂಖ್ಯೆ ದುಪ್ಪಟ್ಟಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು