ದಿನದ ಸುದ್ದಿ
ನಿರುದ್ಯೋಗಿ ‘ಎಸ್.ಎಂ.ಕೆ’ ಗೆ ಕೆಲ್ಸ ಕೊಡಿ..!
‘17 ಮಂದಿಬುದ್ಧಿವಂತ’ರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಕಿತ್ತುಹಾಕುವ ‘ಪುಣ್ಯ’ದ ಕೆಲಸದಲ್ಲಿ ಎಸ್ಸೆಂರವರು ತಮ್ಮ ಪಾತ್ರವನ್ನು ತಾವೇ ಕೊಂಡಾಡಿದ್ದಾರೆ.ಇವರಈ ಅನುಭವಕ್ಕೆ ಈಗ ಮಹಾರಾಷ್ಟ್ರದಲ್ಲಿ ಬಹಳ ಬೇಡಿಕೆ ಇರಬಹುದು.ಆದರೆಇಲ್ಲಿಕರ್ನಾಟಕದ 17 ಮತಕ್ಷೇತ್ರಗಳಲ್ಲಿ ಮತದಾನಮಾಡಲು ಸಜ್ಜಾಗುತ್ತಿರುವ ಪ್ರಜ್ಞಾವಂತ ಮತದಾರರು ಕೃಷ್ಣರವರ ಮಾತುಗಳಿಂದ ಪ್ರಜ್ಞಾಹೀನರಾಗದೆಜವಾಬ್ದಾರಿಯಿಂದ ಮತದಾನ ಮಾಡಬೇಕೆಂದು ಮನವಿ ಮಾಡುತ್ತೇವೆ.
ಕರ್ನಾಟಕದ 17 ಮಂದಿ ‘ಬುದ್ಧಿವಂತ ಶಾಸಕರ ರಾಜಿನಾಮೆ ಕೊಡಿಸುವುದರಲ್ಲಿ ನನ್ನ ಪಾತ್ರವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.ಇದು ನಿಜವೇ ಆಗಿದ್ದರೆ ಅವರನ್ನು ಬಿಜೆಪಿ ಪಕ್ಷದವರು ತುರ್ತಾಗಿ ಮಹಾರಾಷ್ಟ್ರಕ್ಕೆ ಕಳುಹಿಸುವುದುಒಳ್ಳೆಯದು. ಕಾಂಗ್ರೆಸ್ನಲ್ಲಿದ್ದು ಪಡೆಯ ಬಹುದಾದ ಎಲ್ಲ ಸ್ಥಾನಮಾನ, ಅಧಿಕಾರ ಅಂತಸ್ತು ಪಡೆದುಅವರು ಅವೆಲ್ಲವನ್ನು ಮತ್ತೆ ಎರಡನೇ ಬಾರಿಗೆ ಪಡೆಯಲು ಸಾಧ್ಯವೇ ಎಂದು ಪರೀಕ್ಷೆ ಮಾಡಲುಕಮಲದ ಪಾರ್ಟಿಗೆ ಬಂದಿರುವ ಹಿರಿಯ ರಾಜಕೀಯ ಮುತ್ಸದ್ಧಿಗೆ ಕಂಪೆನಿ ಮಾಲೀಕರಾದ ಮೋದಿಶಾ ರಿಂದ ಇನ್ನೂ ಏನೂ ಸಿಕ್ಕಂತೆ ಕಾಣುವುದಿಲ್ಲ. ಹಾಗಾಗಿ ಕೃಷ್ಣರವರು ಆ ಎರಡು ಹೆಡೆಯನಾಯಕತ್ವದ ಗಮನ ಸೆಳೆಯಲು ಆಗಾಗ ಹೀಗೆ ಅರಚುತ್ತಿರುತ್ತಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ಒಂದು ಪ್ರವೃತ್ತಿ ಆರಂಭವಾಗಿದೆ. ಹಗರಣಗಳಲ್ಲಿ ಹೆಸರು ಪಡೆದಬಿಜೆಪಿಯೇತರ ರಾಜಕಾರಣಿಗಳು ಏಕಾಏಕಿಯಾಗಿ ಬಿಜೆಪಿ ಸೇರುತ್ತಿದ್ದಾರೆ. ಐಟಿ, ಇಡಿ ಇಲಾಖಾದಾಳಿಗಳಿಗೆ ಹೆದರಿ ಅವರು ಹೀಗೆ ಮಾಡುತ್ತಿರಬಹುದೇ ಎಂದು ಜನ ಅನುಮಾನ ಪಡುತ್ತಿದ್ದಾರೆ.ಕೃಷ್ಣಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಯಾಕಿರಬಹುದು ಎಂದು ಪ್ರಶ್ನಿಸುತ್ತಾರೆ.
2018 ರ ಕರ್ನಾಟಕದ ಪರಿಸ್ಥಿತಿ ಈಗ ಮಹಾರಾಷ್ಟ್ರದಲ್ಲಿದೆ. ಅಲ್ಲೊಂದು ಮೈತ್ರಿ ಸರ್ಕಾರಅಧಿಕಾರಕ್ಕೆ ಬಂದಿದೆ. ಎಸ್ಸೆಂ ಕೃಷ್ಣರವರ ವಿಶ್ಲೇಷಣೆ ಪ್ರಕಾರ ನೋಡುವುದಾದರೆ ಮಹಾರಾಷ್ಟ್ರದಲ್ಲೂಕರ್ನಾಟಕದಂತಹ ಅನಿಷ್ಟಪರಿಸ್ಥಿತಿ ನಿರ್ಮಾಣವಾಗಿದೆ. ಪರಸ್ಪರ ದೂಷಣೆ ಮಾಡಿಕೊಂಡಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿವೆ. ದೊಡ್ಡ ಪಕ್ಷವಾಗಿ ಬಿಜೆಪಿಹೊರಹೊಮ್ಮುವಂತಾಗಿದ್ದರೂ ಬಿಜೆಪಿಗೆ ಅಧಿಕಾರ ದಕ್ಕಿಲ್ಲ. ಕೃಷ್ಣರವರ ಪ್ರಕಾರ ಇದೊಂದು ಅನಿಷ್ಟ ಪರಿಸ್ಥಿತಿ!.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಉರಳಿಸುವುದರಲ್ಲಿ ಬಿಜೆಪಿಯ ಪಾತ್ರ ಈಗಾಗಲೇಪ್ರಕಟಗೊಂಡಿದೆ,ಖಾತ್ರಿಯಾಗಿದೆ.ಎಸ್ಸೆಂರವರ ಹೇಳಿಕೆ ಇನ್ನೊಂದು ಬಲವಾದ ಸಾಕ್ಷಿಯನ್ನುಒದಗಿಸಿದೆ. 17 ಮಂದಿಬುದ್ಧಿವಂತರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಕಿತ್ತುಹಾಕುವ‘ಪುಣ್ಯ’ದ ಕೆಲಸದಲ್ಲಿ ಎಸ್ಸೆಂರವರು ತಮ್ಮ ಪಾತ್ರವನ್ನು ತಾವೇ ಕೊಂಡಾಡಿದ್ದಾರೆ. ಹೀಗೆ ಅಕ್ರಮವಾಗಿಸರ್ಕಾರಗಳನ್ನು ಉರುಳಿಸುವುದರಲ್ಲಿ ತಾವು ಪರಿಣಿತರು ಎಂದು ಎಸ್ಸೆಂ ಒಪ್ಪಿಕೊಂಡಿದ್ದಾರೆ. ಇವರಅನುಭವಕ್ಕೆ ಈಗ ಮಹಾರಾಷ್ಟ್ರದಲ್ಲಿ ಬಹಳ ಬೇಡಿಕೆ ಇರಬಹುದು. ಇವರನ್ನು ಬಿಜೆಪಿಯವರುಆದಷ್ಟುಬೇಗ ಮಹಾರಾಷ್ಟ್ರಕ್ಕೆ ರಫ್ತು ಮಾಡುವುದು ಅವರಿಗೂ ಕರ್ನಾಟಕಕ್ಕೂ ಶ್ರೇಯಸ್ಕರ! ಆನಂತರ ಅವರು ‘ಮಹಾರಾಷ್ಟ್ರಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದರಲ್ಲಿ ನನ್ನ ಪಾತ್ರವೂ ಇತ್ತುಎಂದು ಹೆಮ್ಮೆಯಿಂದ ಅಂದುಕೊಳ್ಳಬಹುದು, ಅಲ್ಲವೆ?
ಸರ್ಕಾರಗಳು ಶಾಶ್ವತವಲ್ಲ. ಅವು ಬದಲಾಗುತ್ತವೆ. ಬದಲಾಗುತ್ತಿರಬೇಕು. ಒಂದು ದಮನಕಾರಿಸರ್ಕಾರವನ್ನು ಜನ ಕ್ರಾಂತಿಕಾರಿ ಜನಹೋರಾಟದ ಮೂಲಕ ಪದಚ್ಯುತಗೊಳಿಸುತ್ತವೆ. ಮತದಾನದಮೂಲಕ, ಮತಪತ್ರ ಚಲಾವಣೆಯ ಮೂಲಕ ಸಹ ಒಂದು ಅಧಿಕಾರರೂಢ ಸರ್ಕಾರವನ್ನು ಕೆಳಗಿಳಿಸಲುಸಾಧ್ಯವಿದೆ. ಆದರೆ ಅಕ್ರಮಗಳ ಮೂಲಕ, ಪಿತೂರಿಯ ಮೂಲಕ ಒಂದು ಸರ್ಕಾರ ಬಹುಮತಕಳೆದುಕೊಂಡಂತೆ ಮಾಡುವುದು ಆದರ್ಶವಲ್ಲ. ಎಸ್ಸೆಂರವರು ಮಾನ ಮರ್ಯಾದೆ ಎಲ್ಲವನ್ನು ಬಿಟ್ಟುತನ್ನನ್ನು ತಾನೇ ಈ ದುಷ್ಟಕಾರ್ಯದಲ್ಲಿ ತನ್ನ ಪಾತ್ರವೂ ಇದೆ ಎಂದು ಹೊಗಳಿಕೊಂಡಿದ್ದಾರೆ.
ಎಸ್ಸೆಂ ಕೃಷ್ಣರವರು ಸತ್ಯವನ್ನು ಬಾಯ್ಬಿಟ್ಟು ಹೇಳಿದ್ದನ್ನು ನಾವು ಸ್ವಾಗತಿಸಬಹುದು. ಆದರೆಅವರು ಪ್ರತಿಪಾದಿಸುತ್ತಿರುವ ವಿಚಾರ ಆಕ್ಷೇಪಾರ್ಹವಾಗಿದೆ. ಹಿರಿಯ ರಾಜಕಾರಣಿಯಾಗಿಕಿರಿಯರಿಗೆ ಅವರು ಈ ರೀತಿಯ ಭ್ರಷ್ಟರಾಜಕಾರಣದ ದೀಕ್ಷೆ ನೀಡಬಾರದು. ಬಿಜೆಪಿಯನ್ನು ಅಧಿಕಾರಕ್ಕೆತರಲು ಯಾವ ಅಕ್ರಮ ಮಾರ್ಗವನ್ನೂ ಅನುಸರಿಸಬಹುದೆಂಬ ವಾದವನ್ನು ಅವರು ಬಿಜೆಪಿಗೆಸೇರ್ಪಡೆಯಾದಂದಿನಿಂದ ಮೈಗೂಡಿಸಿಕೊಂಡಂತೆ ಕಾಣುತ್ತದೆ. ದೇಶದ ಸಂವಿಧಾನಕ್ಕೆ ಅವಮಾನಮಾಡುವ ಸರ್ಕಾರವನ್ನು, ದೇಶದಲ್ಲಿ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡಿ ಪ್ರಜೆಗಳ ಐಕ್ಯತೆಯನ್ನುಧ್ವಂಸಗೊಳಿಸುವ ಸರ್ಕಾರವನ್ನು, ಮಹಿಳೆಯರಿಗೆ ರಕ್ಷಣೆ ನೀಡದ ಸರ್ಕಾರವನ್ನು, ದಲಿತರ ಹಕ್ಕುಗಳರಕ್ಷಣೆಗೆ ಗಮನ ನೀಡದ ಸರ್ಕಾರವನ್ನು, ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಪರಕೀಯ ಪ್ರಜ್ಞೆ, ಅವರವಿರುದ್ಧ ದ್ವೇಷವನ್ನು ಬೆಳೆಸುವ ಸರ್ಕಾರವನ್ನು ಕಿತ್ತುಹಾಕಲು ಪ್ರಜೆಗಳಿಗೆ ಹಕ್ಕಿದೆ. ಆದರೆ ‘ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ಚುನಾಯಿತ ಸರಕಾರವನ್ನು ಉರಳಿಸಲು ಕರ್ನಾಟಕದಲ್ಲಿ ಆರಂಭಿಸಿರುವ ಪದ್ಧತಿ ಅತ್ಯಂತ ಅನಿಷ್ಟಪದ್ಧತಿ.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಬಣ್ಣ ಬಯಲಾಗಿದೆ. ಮುಖವಾಡ ಕಳಚಿ ಬಿದ್ದಿದೆ. ಅದರಅಧಿಕಾರದಾಹಕ್ಕೆ ಎಲ್ಲೆ ಇಲ್ಲ ಎಂದು ಸಾಬೀತಾಗಿದೆ. ಅಧಿಕಾರಕ್ಕಾಗಿ ಬಿಜೆಪಿ ಏನು ಬೇಕಾದರೂಮಾಡಲು ಸಿದ್ಧ ಎನ್ನುವುದನ್ನು ಮಹಾರಾಷ್ಟ್ರದಲ್ಲಿ ಅದು ಎಳ್ಳಷ್ಟುಮಾನ ಮರ್ಯಾದೆ ಇಲ್ಲದೆವರ್ತಿಸಿ ಈಗ ಮುಖಭಂಗಕ್ಕೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ದೇಶವಾಸಿಗಳುದೇಶಾದ್ಯಂತ ತಿರಸ್ಕರಿಸುವುದು ದೂರವಿಲ್ಲ.
ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸರ್ಕಾರ ಅದರ ಆಂತರಿಕ ವೈರುಧ್ಯಗಳಕಾರಣದಿಂದ ಬೇಗನೇ ಕುಸಿದು ಬೀಳಬಹುದು. ಆದರೆ ಅದು ಮುಖ್ಯವಲ್ಲ. ಬಿಜೆಪಿ ಎಂಬಕೋಮುವಾದಿ, ಸರ್ವಾಧಿಕಾರಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವುದನ್ನು ಎಲ್ಲ ಪ್ರತಿಪಕ್ಷಗಳು ಒಟ್ಟಾಗಿತಡೆದಿರುವುದು ಗಮನಾರ್ಹವಾಗಿದೆ. ಒಂದು ರಾಷ್ಟ್ರೀಯ ವಿಪತ್ತು ಹರಡುವುದನ್ನು ತಡೆಯಲುಸಾಧ್ಯವಾಗಿರುವುದು ಹೆಮ್ಮೆಯ ವಿಷಯ. ಅದೇ ರೀತಿಯ ಪ್ರಯೋಗ ಆಗಿದ್ದು ಜೆಡಿಎಸ್ ನಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ. ಗಲಭೆಕೋರ ಬಿಜೆಪಿಯನ್ನು ಹೊರಗಿಡಲು ಸಾಧ್ಯವಾಗಿತ್ತು. ಮಹಾರಾಷ್ಟ್ರದಲ್ಲಿಯೂ ಅಂತಹ ಪ್ರಯೋಗ ನಡೆಯಲುಬಿಡಬೇಕು. ಕೃಷ್ಣರವರ ಇಂತಹ ಹೇಳಿಕೆಗಳಿಂದ ಅವರೊಬ್ಬ ಆದರ್ಶ ರಾಜಕಾರಣಿ ಎಂಬ ಹೆಸರುಅವರಿಗೆ ಪ್ರಾಪ್ತ ಆಗಲಾರರು. ಒಂದು ಸರ್ಕಾರವನ್ನು ಬುಡಮೇಲು ಮಾಡುವ ಉದ್ದೇಶದಿಂದಕೆಲವು ಮಂದಿ ಶಾಸಕರನ್ನು ರಾಜಿನಾಮೆ ಕೊಡಿಸಿ, ಜನರ ಮೇಲೆ ಅನಗತ್ಯ
ಉಪಚುನಾವಣೆಗಳನ್ನುಹೇರಿ, ಹಣ ಬಲ, ಜಾತಿ ಬಲ, ತೋಳ್ಬಲ ಬಳಸಿ ಅವರನ್ನು ಗೆಲ್ಲಿಸಿ, ಒಂದು ಪಕ್ಷದ ಸಂಖ್ಯಾಬಲವನ್ನು ಹೆಚ್ಚಿಸಿ, ಒಂದು ಸರ್ಕಾರವನ್ನು ಕೆಡವಿ ಇನ್ನೊಂದು ಸರ್ಕಾರವನ್ನು ಅಧಿಕಾರಕ್ಕೆ ತರುವಪ್ರಯತ್ನವನ್ನು ಯಾರೂ ಬೆಂಬಲಿಸಬಾರದು.
ಮಹಾರಾಷ್ಟ್ರದ ಬೆಳವಣಿಗೆಯಿಂದ ನಾವು ಕರ್ನಾಟಕದ 17 ಮತಕ್ಷೇತ್ರಗಳಲ್ಲಿ ಮತದಾನಮಾಡಲು ಸಜ್ಜಾಗುತ್ತಿರುವ ಪ್ರಜ್ಞಾವಂತ ಮತದಾರರು ಕೃಷ್ಣರವರ ಮಾತುಗಳಿಂದಪ್ರಜ್ಞಾಹೀನರಾಗದೆಜವಾಬ್ದಾರಿಯಿಂದ ಮತದಾನ ಮಾಡಬೇಕೆಂದು ಮನವಿ ಮಾಡುತ್ತೇವೆ.
(ಈ ವಾರದ ಜನಶಕ್ತಿ ಸಂಪಾದಕೀಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ