ದಿನದ ಸುದ್ದಿ
ನೀವ್ ಕಾರಣ ನೀವೇ ಪ್ರೇರಣಾ..!
- ಹ.ರಾ.ಮಹಿಶ
“ಅಕ್ಟೋವರ್ 9″ ಬಹುಜನ ನಾಯಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಪರಿನಿಬ್ಬಾಣ ಹೊಂದಿದ ದುಃಖದ ದಿನ.ಭಾರತದ ಜಾಗೃತಗೊಂಡ ಬಹುಜನ ಸಮಾಜವು ಇತರರನ್ನೂ ಜಾಗೃತಗೊಳಿಸಿತ್ತಾ ಅವರ ಮಾರ್ಗವನ್ನು ಚಾಚೂತಪ್ಪದೆ ಅನುಸರಿಸಿ ನಡೆಯುತ್ತೇವೆಂದು ಶಪಥ ಮಾಡಬೇಕಾದ ಸಂಕಲ್ಪದಿನ.
ಕಳೆದ ಹನ್ನೆರಡು ವರ್ಷಗಳ ಹಿಂದೆ ದಾದಾಸಾಹೇಬರು ದೇಹ ತ್ಯಜಿಸಿದ ಈ ದಿನ ಬಹುಜನ ಚಳವಳಿಯ ಪ್ರಮುಖರು ಮೈಸೂರಿನ ಗಂಗೋತ್ರಿಯ ಗಾಂಧಿಭವನದಲ್ಲಿ ಸೇರಿಕೊಂಡೆವು (ಮಾನ್ಯ ಮಹೇಶಣ್ಣ ಮುಂತಾದವರು ಉತ್ತರಪ್ರದೇಶದ ಲಕ್ನೊ ಗೆ ಹೊರಟರು) ಇನ್ನುಳಿದವರು ಸೇರಿ ಸಂತಾಪ ಸಭೆ ಮಾಡಿದೆವು. ಆಕಾಶವೇ ಕಳಚಿಬಿದ್ದಂತೆ ದಿಕ್ಕುಗಾಣದಂತಾಗಿತ್ತು ಎಲ್ಲರ ಮುಖದಲ್ಲಿಯೂ ದುಗುಡ ದುಃಖ ದುಮ್ಮಾನಗಳು ಮಡುಗಟ್ಟಿತ್ತು.
ಗಾಢಮೌನ ಮೆಲುದನಿಯ ಕಡಿಮೆ ಮಾತುಗಳಲ್ಲೇ ಸಭೆ ಮುಕ್ತಾಯವಾಗಿ ಮುಂದಿನ ಭಾನುವಾರ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಸಂತಾಪ ಸಮಾರಂಭ ಏರ್ಪಡಿಸುವ ಬಗ್ಗೆ ಭಾಗವಹಿಸುವವರ ಬಗ್ಗೆ ಕಾರ್ಯಕ್ರಮದ ರೂಪರೇಷೆಯ ಬಗ್ಗೆ ಚರ್ಚಿಸಲಾಯಿತು.
ಇನ್ನೇನು ಸಭೆ ಮುಗಿಯುವಂತಿತ್ತು… ಹನಸೋಗೆ ಸೋಮಣ್ಣ ಹಿಂದೆಂದಿಗಿಂತ ತುಸು ಹೆಚ್ಚು ಗಂಭೀರವಾಗಿ ಕುಳಿತಿದ್ದರು.. ಕೈಯಲ್ಲೊಂದು ಹಾಡು ಬರೆದ ಹಾಳೆಯಿತ್ತು. ಅವರ ಪಕ್ಕದಲ್ಲೇ ಕುಳಿತಿದ್ದ ನಾನು ಅವರ ಮುಖನೋಡಿ ಸೋಮಣ್ಣ ಹೊಸ ಹಾಡು ಬರ್ದಿದ್ದೀರ ಸಾಹೇಬರ ಕುರಿತು ಎಂದೆ “ತಮಟೆ ತಗೊಳ್ಳಿ ನುಡಿಸಿ ಈಗ ಹಾಡುತ್ತೇನೆ” ಎಂದರು ನಾನು ತಮಟೆಯನ್ನು ಎದೆಗೊರಗಿಸಿಕೊಂಡು ಸಿದ್ದವಾಗಿ ಕೂತು… ಸೋಮಣ್ಣ ಹೊಸ ಹಾಡು ಹಾಡುತ್ತಾರೆ ಎಲ್ಲರೂ ಕೇಳಿಸಿಕೊಂಡು ದನಿಗೂಡಿಸೋಣ ಎಂದು ಸಭೆಗೆ ಹೇಳಿದೆ…. ಎಲ್ಲರೂ ಆ ದುಃಖದಲ್ಲಿಯೂ ಕುತೂಹಲದಿಂದ ಆಲಿಸಲಣಿಯಾಗಿ ಕುಳಿತರು…. ಸೋಮಣ್ಣ ಮೊಟ್ಟಮೊದಲಿಗೆ ಆ ಹಾಡು ಹಾಡಲು ಶುರುಮಾಡಿದರು ನಾನು ಕಣ್ಮುಚ್ಚಿ ದನಿಗೂಡಿಸಿ ತಮಟೆ ನುಡಿಸುತ್ತಾ ಹೋದೆ… ಅಬ್ಬಬ್ಬಾ ಅದೇನು ಸಾಹಿತ್ಯ ಅದೆಂಥ ಪದಜೋಡನೆ ಎಂಥಾ ಭಾವತುಂಬಿದ ರಾಗ ಸೋಮಣ್ಣನ ವಿಶೇಷ ಧನಿಯಲ್ಲಿ…..
” ನೀವ್ ಕಾರಣ ನೀವೇ ಪ್ರೇರಣ…
ಜೈಭೀಮನ ತುಂಬಿ ಮನ
ಮೇಲೇಳಲು ಕೂಡಿ ಬಾಳಲು
ಈ ದೇಶ ನಾವೆ ಆಳಲು…..
ಎಲ್ಲರ ಕಣ್ಣುಗಳೂ ತೇವವಾದವು…. ದನಿ ಜೋರಾಯಿತು..
ನಮನ ಭಾವ ನಮನ ದಾದಾಕಾನ್ಷಿರಾಮಜಿ
ನಮನ ಭೀಮ ನಮನ ದಾದಾಕಾನ್ಷಿರಾಂಜಿ
ನಮನ ಹೃದಯ ನಮನ ದಾದಾ ಕಾನ್ಷಿರಾಮಜಿ…
ಎಲ್ಲರ ದನಿ ತಾರಕಕ್ಕೇರಿ ಹಾಡಿ ಹಾಡಿ ಹಾಡಿ ಇಡೀ ಗಂಗೋತ್ರಿಯೇ ಧ್ಯಾನಸ್ಥವಾದಂತೆ ಅನುರಣಿಸಿತು
ಆ ನಮ್ಮ ಹಾಡಿನ ಕೂಗು ದೂರದ ಉತ್ತರಪ್ರದೇಶದಲ್ಲಿ ತಣ್ಣಗೆ ಮಲಗಿದ್ದ ದಾದಾಸಾಹೇಬರಿಗೂ ಕೇಳಿ… ಅಲ್ಲಿಂದಲೇ ನಮ್ಮ ಕಂಡು ಹತ್ತಿರ ಬಂದು ಮೆಲ್ಲಗೆ ನಮ್ಮೆದೆಯೊಳಗಿಳಿದು ಹೃದಯದ ತುಂಬಿಕೊಂಡಂತೆ ಎದೆಭಾರವಾಯಿತು…
ಈಗಲೂ ದಾದಾಸಾಹೇಬ್ ಕಾನ್ಷಿರಾಂಜಿ ಎಂದರೆ ನೆನಪಾಗೋದು ಸೋಮಣ್ಣ ಬರೆದ “ಭೀಮಬಂದರು ಜೈಭೀಮ ಬಂದರು” ಹಾಗೂ ನೀವ್ ಕಾರಣ ನೀವೇ ಪ್ರೇರಣಾ ಹಾಡುಗಳು…
ಥ್ಯಾಂಕ್ಯು ಸೋ ಮಚ್ ಸೋಮಣ್ಣ… ಜೈ ಭೀಮ್ ನಮೋ ಬುದ್ಧಾಯ..
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243