ದಿನದ ಸುದ್ದಿ
ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ಕುಸಿತ..!?
2011-12 ಹಾಗೂ 2017-18 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು ಉದ್ಯೋಗದ ಪ್ರಮಾಣ ಕುಗ್ಗಿರುವ ಬಗ್ಗೆ ಇತ್ತೀಚೆಗೆ ದೆಹಲಿಯ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಸಸ್ಟೆನೇಬಲ್ ಎಂಪ್ಲಾಯಿಮೆಂಟ್’ ಪ್ರಕಟಿಸಿರುವ ಹಾಗೂ ಸಂತೋಷ ಮೆಹ್ರೋತ್ರಾ ಮತ್ತು ಜಜಾತಿ ಕೆ. ಪರಿದಾ ಬರೆದಿರುವ ಪ್ರಬಂಧದಲ್ಲಿ ಅಭಿಪ್ರಾಯಪಡಲಾಗಿದೆ.
ಸ್ವಾತಂತ್ರ್ಯಾ ನಂತರದ ಭಾರತೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗ ವಲಯ ಇಷ್ಟೊಂದು ಕುಸಿತ ಕಂಡಿದೆ. ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಹಿಮಾಂಶು ಸೇರಿದಂತೆ ಈ ಪ್ರಬಂಧದ ಲೇಖಕರು ಹಾಗೂ ಇತರೆ ಪರಿಣಿತರು ಸಹ ಈ ರೀತಿಯ ಉದ್ಯೋಗ ಕುಸಿತದ ಪ್ರಮಾಣವನ್ನು ಕಂಡುಕೊಂಡಿದ್ದಾರೆ.
ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, “2011-12 ಹಾಗೂ 2017-18ರ ಅವಧಿಯಲ್ಲಿ 9 ದಶಲಕ್ಷ ಗಳಷ್ಟು (90 ಲಕ್ಷ) ಉದ್ಯೋಗದ ಪ್ರಮಾಣ ಕುಗ್ಗಿದೆ. ಇದು ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ’ ಎಂದಿದ್ದಾರೆ.
ಮೆಹ್ರೋತ್ರಾ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರೆ, ಪರಿದಾ ಅವರು ಪಂಜಾಬ್ನ ಕೆಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕರು.
ಈ ಅಧ್ಯಯನದ ಫಲಿತಾಂಶವು, ಪ್ರಧಾನಿ ಅವರ ಅರ್ಥಶಾಸ್ತ್ರ ಸಲಹಾ ಸಮಿತಿಯಿಂದ ಲಾವೀಸ್ ಭಂಡಾರಿ ಹಾಗೂ ಅಮರೇಶ ದುಬೈ ನಡೆಸಿದ ಅಧ್ಯಯನಕ್ಕಿಂತ ಭಿನ್ನವಾಗಿದೆ. ಅವರ ಅಧ್ಯಯನದಂತೆ 2011-12 ಅವಧಿಯಲ್ಲಿ 43.3 ಕೋಟಿ ಇದ್ದ ಉದ್ಯೋಗಗಳು 2017-18ರ ಅವಧಿಯಲ್ಲಿ ಅದು 45.7 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, 2011-12ರ ಅವಧಿಯಲ್ಲಿ 47.4 ಕೋಟಿ ಉದ್ಯೋಗಗಳಿದ್ದು 2017-18ರ ಅವಧಿಯಲ್ಲಿ ಅದು 46.5 ಕೋಟಿಗಿಳಿದಿವೆ. ಅಂದರೆ ಜನಸಂಖ್ಯೆ ಏರುತ್ತಲೇ ಇದ್ದರೆ ಮೊದಲ ಬಾರಿಗೆ ಉದ್ಯೋಗಗಳಲ್ಲಿ ಇಳಿಕೆ ಕಂಡುಬಂದಿದೆ.
ಆಗಸ್ಟ್ 1ರ ಮಿಂಟ್ ಪತ್ರಿಕೆಯಲ್ಲಿ ಹಿಮಾಂಶು ಅಭಿಪ್ರಾಯಪಟ್ಟಿರುವಂತೆ “2011-12ರ ಅವಧಿಯಲ್ಲಿ 472.5 ದಶಲಕ್ಷ ದಷ್ಟು ಉದ್ಯೋಗ ಕುಸಿತ ಕಂಡು ಬಂದಿದೆ. ನಂತರದ 6 ವರ್ಷಗಳ ಅವಧಿಯಲ್ಲಿ 15 ದಶಲಕ್ಷ ಉದ್ಯೋಗಗಳು ಕುಂಠಿತಗೊಂಡಿವೆ. ಅಂದರೆ, 2011-12 ಹಾಗೂ 2017-18ರ ಅವಧಿಯ ಪ್ರತಿ ವರ್ಷದಲ್ಲೂ 26 ಲಕ್ಷದಷ್ಟು ಉದ್ಯೋಗಗಳು ನಷ್ಟ ಹೊಂದುತ್ತಾ ಬಂದಿವೆ.
ಈ ಎರಡೂ ಅಧ್ಯಯನಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. 2004-05, 2011-12 ಹಾಗೂ ಪಿ.ಎಲ್.ಎಫ್.ಎಸ್-2017-18ರ ಅನ್ವಯ ಉದ್ಯೋಗ ಹಾಗೂ ನಿರುದ್ಯೋಗ ಸಮೀಕ್ಷೆಗಾಗಿ “ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗಾನೈಸೆಷನ್’ ನೀಡಿದ ಅಂಕಿ-ಅಂಶಗಳು ಈ ಎರಡೂ ಅಧ್ಯಯನಗಳಿಗೆ ಆಧಾರವಾಗಿವೆ. ಭಂಡಾರಿ ಹಾಗೂ ದುಬೈ ಪ್ರಕಾರ 40 ದಶಲಕ್ಷ ಉದ್ಯೋಗಗಳ ವ್ಯತ್ಯಾಸವಿದೆ. ಆದರೆ, ಮೆಹ್ರೋತ್ರಾ ಹಾಗೂ ಪರಿದಾ ಮತ್ತು ಹಿಮಾಂಶು ನಡೆಸಿದ ಅಧ್ಯಯನಗಳ ಫಲಿತಾಂಶಗಳು ಭಿನ್ನವಾಗಿವೆ. ಏಕೆ ಹೀಗೆ ಎಂಬುದಕ್ಕೆ ಬಹುಶಃ ಎರಡು ಕಾರಣಗಳಿರಬಹುದು.
ಇಡೀ ದೇಶದ ಒಟ್ಟು ಜನಸಂಖ್ಯೆಯನ್ನು ಪರಿಗಣಿಸಿ ಒಟ್ಟು ಉದ್ಯೋಗಗಳ ಸಂಖ್ಯೆಯನ್ನು ಅಂದಾಜಿಸಿರಬಹುದು. ಅತಿ ಹೆಚ್ಚಿನ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳ ಸಂಖ್ಯೆಯನ್ನು ನೀಡುತ್ತದೆ. ಭಂಡಾರಿ ಹಾಗೂ ದುಬೈ ಆವರು 2017-18ರಲ್ಲಿ ಭಾರತದ ಜನಸಂಖ್ಯೆಯನ್ನು 1.36 ಶತಕೋಟಿ ಎಂದು ಪರಿಗಣಿಸಿದ್ದಾರೆ. ಮೆಹ್ರೋತ್ರಾ ಹಾಗೂ ಪರಿದಾ ಅವರು 1.35 ಶತಕೋಟಿ ಎಂದು ಪರಿಗಣಿಸಿದ್ದಾರೆ. 2017-18ರಲ್ಲಿ ವಿಶ್ವಬ್ಯಾಂಕ್ 1.33 ಶತಕೋಟಿ ಎಂದಿದ್ದರೆ, ಹಿಮಾಂಶು-ಸರಕಾರಿ ಅಧಿಕಾರಿಗಳ ಜಿಡಿಪಿ ಅನ್ವಯ-1.31 ಶತಕೋಟಿ ಜನಸಂಖ್ಯೆ ಇದೆ ಎಂದು ಪರಿಗಣಿಸಿದೆ.
ಭಾರತದ ಜನಸಂಖ್ಯೆ ಬಗ್ಗೆ ಇಷ್ಟೊಂದು ಗೊಂದಲಗಳಿವೆ. ಏಕೆಂದರೆ, 2011ರ ಜನಗಣತಿ ಅನ್ವಯ ಇಂದಿಗೂ ಜನಸಂಖ್ಯೆ ಕುರಿತು ನಿಖರ ಮಾಹಿತಿ ನೀಡಿಲ್ಲ. ನಿಯಮದಂತೆ, ಸರ್ಕಾರವು 2016ರಲ್ಲಿಯೇ ಬಿಡುಗಡೆ ಮಾಡಬೇಕಿತ್ತು.
ಭಂಡಾರಿ ಹಾಗೂ ದುಬೈ ಅಧ್ಯಯನದಲ್ಲಿ, ಉದ್ಯೋಗಗಳ ಸಾಧ್ಯತೆಯ ಪ್ರಧಾನ ಮೂಲಾಂಶಗಳನ್ನು ಪರಿಗಣಿಸಿ, ನಂತರದ ಪೂರಕ ಸಾಧ್ಯತೆಗಳ ಮೂಲಗಳನ್ನು ಕಡೆಗಣಿಸಿರುವುದು ಈ ವ್ಯತ್ಯಾಸಗಳಿಗೆ ಕಾರಣ ಇರಬಹುದು. ಅದಲ್ಲದೇ ಅವರಿಬ್ಬರೂ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುವುದರಿಂದ ಅಲ್ಲಿನ ಅಂಕಿ ಸಂಖ್ಯೆಗಳು ಉತ್ರೇಕ್ಷೆಯೂ ಇರಬಹುದೆಂಬ ಆರೋಪ ಸಹ ಕೇಳಿಬಂದಿದೆ.
ಈ ಸರ್ವೇಗಳಲ್ಲಿ ಒಬ್ಬ ವ್ಯಕ್ತಿಯು ವರ್ಷದ 365 ದಿನಗಳಲ್ಲಿ 182 ದಿನ ಕೆಲಸ ಮಾಡಿದರೆ ಆತನನ್ನು ಉದ್ಯೋಗಿ ಎಂದು ಪರಿಗಣಿಸುತ್ತದೆ. ಅಂದರೆ ಆರು ತಿಂಗಳು ಕೆಲಸ ಮಾಡಿ ಇನ್ನು ಆರು ತಿಂಗಳು ಕೆಲಸವಿಲ್ಲದಿದ್ದರೂ ಸಹ ಅವರು ಉದ್ಯೋಗಿಗಳ ಪಟ್ಟಿಗೆ ಸೇರುತ್ತಾರೆ. ಹಾಗಾಗಿ ಮೇಲಿನ ಅರ್ಥಶಾಸ್ತ್ರಜ್ಞರು ಊಹೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಉದ್ಯೋಗ ಕಡಿತವಾಗಿದೆ ಎಂದು ಹಲವಾರು ಜನ ಅಭಿಪ್ರಾಯಪಡುತ್ತಿದ್ದಾರೆ.
ಕೃಪೆ :(ದಿ ಇಂಡಿಯನ್ ಎಕ್ಸ್ಪ್ರೆಸ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು