ದಿನದ ಸುದ್ದಿ
ಜೆಎನ್ಯು ಸಮಸ್ಯೆ ಎಡ- ಬಲಗಳ ಪ್ರಶ್ನೆಯೇ..?
- ಜಿ.ಎನ್. ನಾಗರಾಜ್
ಜೆಎನ್ಯು ಸಮಸ್ಯೆ ಎಡ- ಬಲಗಳ ಪ್ರಶ್ನೆಯೇ..? ಹಾಗೆಂದು ಬಿಜೆಪಿಯ ಮತ್ತು ಬಿಜೆಪಿ ಪರ ಮಾಧ್ಯಮಗಳು ಬೊಬ್ಬಿರಿಯುತ್ತಿವೆ.ಎಬಿವಿಪಿಯೂ ಸೇರಿ ಎಲ್ಲ ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟವಾಗಿದ್ದದ್ದು ಇದ್ದಕ್ಕಿದ್ದಂತೆ ಎಡ- ಬಲವಾಗಿ ತಿರುಗಿದ್ದು ಹೇಗೆ, ತಿರುಗಿಸಿದ್ದು ಯಾರು ?
ಜಗಕ್ಕೆಲ್ಲಾ ತಿಳಿದಂತೆ ಇತ್ತೀಚಿನ ಜೆಎನ್ಯುವನ್ನು ಭಾರತದ 40 ಕೇಂದ್ರ ವಿವಿಗಳಲ್ಲಿ ಉಳಿದೆಲ್ಲ ಕೇಂದ್ರ ವಿವಿಗಳಿಗಿಂತ ಅತಿ ಹೆಚ್ಚಿನ ಫೀ ನೀಡಬೇಕಾದ ವಿವಿಯಾಗಿ ಕೇಂದ್ರ ಸರ್ಕಾರ ಮಾಡಹೊರಟಿತು. ಈ ಫೀ ಬೇರೆಲ್ಲ ವಿವಿಗಳಲ್ಲಿ ವರ್ಷಕ್ಕೆ 14,000 ರೂ ನಿಂದ 35,000ರೂ ವರೆಗಿದೆ. ಆದರೆ ಜೆಎನ್ಯು ಫೀ ಏರಿಕೆ ಅದನ್ನು 27, 000- 32,000 ದಿಂದ 55,000-65,000 ಕ್ಕೆ ಏರಿಸ ಹೊರಟಿತು.
ಬಿಹಾರ,ಅಸ್ಸಾಂ,ಜಾರ್ಕಂಡ್ ಮೊದಲಾದ ಅತ್ಯಂತ ಹಿಂದುಳಿದ ಪ್ರದೇಶದ ಬಡ ವಿದ್ಯಾರ್ಥಿಗಳು ಶೇ.40 ರಷ್ಟು ಇರುವ ಈ ವಿವಿಯಲ್ಲಿ ಬಡವರು ವಿದ್ಯಾಭ್ಯಾಸವನ್ನು ಬಿಡಬೇಕಾದ ಪರಿಸ್ಥಿತಿಯಲ್ಲಿ ಅಲ್ಲಿಯ ವಿದ್ಯಾರ್ಥಿ ಸಂಘ ಎಲ್ಲ ವಿದ್ಯಾರ್ಥಿಗಳ ಜೊತೆ ವಿವರವಾಗಿ ಪ್ರತಿ ಹಾಸ್ಟೆಲ್ಗಳಲ್ಲಿ ಚರ್ಚಿಸಿ ಎಲ್ಲ ಬಣ್ಣದ ವಿದ್ಯಾರ್ಥಿ ಸಂಘಗಳು ಸೇರಿ ಈ ಫೀ ಏರಿಕೆ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿತು.
ಎಬಿವಿಪಿ ಕೂಡಾ ಇದನ್ನು ವಿರೋಧಿಸಲಾಗದೆ ಒಟ್ಟಿಗೆ ಸೇರಿತು. ವಿಸಿಗೆ ಮನವಿ, ಚರ್ಚಿಸಲು ವಿನಂತಿ , ವಿವಿಯೊಳಗೆ ಧರಣಿ, ತರಗತಿ ಬಹಿಷ್ಕಾರ ಇತ್ಯಾದಿ ಹಲವು ಹಂತಗಳನ್ನು ದಾಟಿ ವಿವಿಯ ಹೊರಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಮುಂದೆ ಹಲವು ಹೋರಾಟ ನಡೆಯಿತು. ಈ ಹಂತದಲ್ಲಿ ಎಬಿವಿಪಿ ಈ ಹೋರಾಟವನ್ನು ವಿಭಜಿಸಲು ಪ್ರಯತ್ನಿಸಿ ವಿಫಲವಾಗಿ ಹೊರನಡೆಯಿತು.
ಆದರೆ ವಿದ್ಯಾರ್ಥಿಗಳ ತೀವ್ರ
ಹೋರಾಟದಿಂದಾಗಿ ಕೆಲ ರಿಯಾಯಿತಿಯನ್ನು ಸರ್ಕಾರ ಘೋಷಿಸಿತು. ಆದರೆ ಅದರಲ್ಲಿ ಹಲವು if’s and but’s ಸೇರಿಸಿ ವಿದ್ಯಾರ್ಥಿಗಳ ಅದರ ನಿಜ ಪ್ರಯೋಜನ ದಕ್ಕದಂತೆ ಆಜ್ಞೆ ಹೊರಡಿಸಿತು. ಅಸಗ ಮತ್ತೆ ವಿದ್ಯಾರ್ಥಿಗಳೆಲ್ಲರ ಸಭೆ ಸೇರಿ ಚರ್ಚಿಸಿ ಫೀ ಏರಿಕೆ ಮತ್ತು ಇತರ ನಿಯಮಗಳನ್ನು ಹಿಂತೆಗೆದುಕೊಳ್ಳುವವರಿಗೂ ಹೋರಾಟ ಮುಂದುವರೆಸಬೇಕೆಂದು ತೀರ್ಮಾನಿಸಲಾಯಿತು. ಕಡಿಮೆ ವಿದ್ಯಾರ್ಥಿಗಳ ಬೆಂಬಲವುಳ್ಳ ಎಬಿವಿಪಿ ಹೊರತು ಪಡಿಸಿ ಉಳಿದೆಲ್ಲರೂ ಹೋರಾಟ ಮುಂದುವರೆಸಿದ್ದಾರೆ.
ಇಂತಹ ಹೋರಾಟ ಫೀ ಹೆಚ್ಚಿಸಿದ ಐಐಟಿ ಮತ್ತಿತರ ಸಂಸ್ಥೆಗಳಲ್ಲೂ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದಾರೆ. ಹಿಂದುಳಿದ ಪ್ರದೇಶಗಳ ಬಡ ವಿದ್ಯಾರ್ಥಿಗಳ ಶಿಕ್ಷಣ ವಂಚನೆಗೆ ಕಾರಣವಾಗುವ ಫೀ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎನ್ನುವ ಎಲ್ಲ ವಿದ್ಯಾರ್ಥಿಗಳ ಹೋರಾಟವನ್ನು ಎಡ ಬಲ ರಾಜಕೀಯ ಎಂಬ ರೂಪ ಕೊಟ್ಟು ವಿದ್ಯಾರ್ಥಿಗಳಿಗೆ ಮಸಿ ಬಳಿಯುವ ಕೆಲಸವನ್ನು ಈಗ ಎಬಿವಿಪಿ, ಮಾಧ್ಯಮ ಮತ್ತು ಪೋಲೀಸರ ಮೂಲಕ ಆರೆಸ್ಸೆಸ್ ಮತ್ತು ಬಿಜೆಪಿ ಮಾಡುತ್ತಿದೆ.
ಈ ಹೋರಾಟ ಕೇವಲ ಜೆಎನ್ಯು ವಿದ್ಯಾರ್ಥಿಗಳದೆಂದು ,ಎಡಪಂಥೀಯವೆಂದು ಸರ್ಕಾರ ವಿರೂಪಗೊಳಿಸುತ್ತಿರುವುದರ ಉದ್ದೇಶವೆಂದರೆ ಮುಂದೆ ಭಾರತದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ , ಕೇಂದ್ರ ವಿವಿಗಳಲ್ಲಿನ ಫೀ ಏರಿಕೆಗೆ ಇದು ಟೆಸ್ಟಿಂಗ್ ಡೋಸ್ ಅಷ್ಟೇ. ಇದು ಇಂದು ದೇಶದೆಲ್ಲ ವಿವಿ ವಿದ್ಯಾರ್ಥಿಗಳ ಪರವಾಗಿ ಜೆಎನ್ಯು ವಿದ್ಯಾರ್ಥಿಗಳ ಹೋರಾಟವಷ್ಟೇ.
ಆದ್ದರಿಂದಲೇ ಎಲ್ಲ ವಿವಿಗಳಲ್ಲಿಯೂ ಪಂಥಗಳನ್ನು ಮೀರಿ ಜನ ಬೆಂಬಲವನ್ನು ಪಡೆದುಕೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243